Latest Updates
-
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ಹೊಟ್ಟೆ ತಳಮಳ ಆದ್ರೆ ಹೀಗೆ ಮಾಡಿ...

ಹೊಟ್ಟೆ ತಳಮಳಗೊಂಡರೆ ಏನು ಮಾಡಬೇಕು?
1. ಸಕ್ಕರೆ ಉಪ್ಪಿನ ನೀರು: ಹೊಟ್ಟೆ ಕೆಟ್ಟಿದಂತೆ ಕಂಡರೆ ಮೊದಲು ಒಂದು ಗ್ಲಾಸ್ ಬಿಸಿ ನೀರಿಗೆ ಉಪ್ಪು ಸಕ್ಕರೆ ಮಿಶ್ರಣ ಮಾಡಿ ಕುಡಿಯಿರಿ. ಇದು ಸುಸ್ತಾಗುವುದನ್ನು ತಡೆಯುತ್ತದೆ. ಮಸಾಲೆ ರಹಿತ ಆಹಾರ ಮತ್ತು ಎಳನೀರನ್ನು ಈ ಸಮಯದಲ್ಲಿ ಸೇವಿಸಬೇಕು.
2. ಮಜ್ಜಿಗೆ, ಮೆಂತ್ಯೆ: ಮಜ್ಜಿಗೆಯೊಂದಿಗೆ ಮೆಂತ್ಯೆಕಾಳನ್ನು ಬೆರೆಸಿ ಸೇವಿಸಿದರೆ ಭೇದಿ ಬೇಗನೆ ನಿಯಂತ್ರಣಕ್ಕೆ ಬರುತ್ತದೆ. ಮಜ್ಜಿಗೆಯನ್ನು 3 ಬಾರಿ ಕುಡಿಯಿರಿ.
3. ಗ್ರೀನ್, ಬ್ಲಾಕ್ ಟೀ: ಗ್ರೀನ್ ಅಥವಾ ಬ್ಲಾಕ್ ಟೀ ಸೇವನೆಯಿಂದಲೂ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ. ಇದು ದೇಹಕ್ಕೆ ಶಕ್ತಿ ನೀಡಿ, ದೇಹದಲ್ಲಿನ ವಿಷಕಾರಿ ಅಂಶವನ್ನು ಹೊರಗೆ ಹಾಕುತ್ತದೆ.
4. ನಿಂಬೆ, ಕಿತ್ತಳೆ ಜ್ಯೂಸ್: ಕಿತ್ತಳೆ ಜ್ಯೂಸ್ ಈ ಸಮಯಕ್ಕೆ ತುಂಬಾ ಒಳ್ಳೆಯದು. ನಿಂಬೆಜ್ಯೂಸ್ ಕೂಡ ಉತ್ತಮ ಪರಿಹಾರ.
5. ಬೆಳ್ಳುಳ್ಳಿ: ಬೆಳ್ಳುಳ್ಳಿ ಪೇಸ್ಟ್ ಹೊಟ್ಟೆಯಲ್ಲಿನ ಕ್ರಿಮಿ ಕೀಟಾಣುಗಳನ್ನು ಕೊಂದು ಹೊಟ್ಟೆ ಇನ್ನಿತರ ಅಲರ್ಜಿಗೆ ಒಳಗಾಗುವುದನ್ನು ತಪ್ಪಿಸುತ್ತದೆ.
6. ಹಾಗಲಕಾಯಿ: ಹಾಗಲಕಾಯಿ ರಸ ಅನೇಕ ಕಾಯಿಲೆಗಳಿಗೆ ಒಳ್ಳೆ ಮದ್ದು. ಇಂತಹ ಸಮಯದಲ್ಲಿ ಸೇವಿಸಿದರೆ ದಾಹವನ್ನು ನೀಗಿಸುವುದಲ್ಲದೆ ದೇಹ ಇನ್ನಷ್ಟು ಸೋಂಕಿಗೆ ಒಳಗಾಗುವುದನ್ನು ತಡೆಯುತ್ತದೆ.
7. ನೀರು: ತಣ್ಣನೆಯ ನೀರನ್ನು ಕುಡಿಯುವುದು ಮತ್ತು ತಿನ್ನುವ ಆಹಾರದಲ್ಲಿ ಸಮತೋಲನ ಕಾಪಾಡಿಕೊಳ್ಳುವುದೂ ಈ ಸಮಯದಲ್ಲಿ ಅಷ್ಟೇ ಮುಖ್ಯವಾಗುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications









