Just In
- 1 hr ago ವರ್ಷದ ಮೊದಲ ಸೂರ್ಯಗ್ರಹಣ ಏಪ್ರಿಲ್ನಲ್ಲಿ ಯಾವಾಗ ಸಂಭವಿಸಲಿದೆ? ಇದರ ಸೂತಕ ಭಾರತಕ್ಕಿದೆಯೇ?
- 2 hrs ago ಬೆಂಗಳೂರಿಗರೇ... ನೀರಿನ ಕೊರತೆ ತಪ್ಪಿಸಲು ಈ ಟ್ರಿಕ್ಸ್ ಹಾಗೂ ಟಿಪ್ಸ್ ತುಂಬಾನೇ ಪ್ರಯೋಜನಕಾರಿಯಾಗಿದೆ ನೋಡಿ
- 3 hrs ago ದಿನ ಭವಿಷ್ಯ ಮಾರ್ಚ್ 28: ಗುರುವಾರದ ಈ ದಿನ ದ್ವಾದಶ ರಾಶಿಗಳಿಗೆ ಹೇಗಿರಲಿದೆ?
- 4 hrs ago ಶುಕ್ರ ಮೀನ ರಾಶಿಗೆ ಸಂಚರಿಸಿದಾಗ ಈ 5 ರಾಶಿಗಳ ಮೇಲೆ ಬೀರಲಿದೆ ಒಳ್ಳೆಯ ಪ್ರಭಾವ
Don't Miss
- Sports SRH vs MI IPL Match: ಹೈಲೈಟ್ಸ್ ನಂತೆ ಕಂಡ ಲೈವ್ ಮ್ಯಾಚ್: ಮುತ್ತಿನ ನಗರಿಯಲ್ಲಿ ಆರ್ಭಟಿಸಿ ಇತಿಹಾಸದ ಪುಟ ಸೇರಿದ SRH
- News Chitradurga Lok Sabha Constituency: ಚಿತ್ರದುರ್ಗ ಬಿಜೆಪಿ ಅಭ್ಯರ್ಥಿ ರಾಜಕೀಯ ಹಿನ್ನೆಲೆ ತಿಳಿಯಿರಿ-ಮಾಹಿತಿ, ವಿವರ
- Movies ಪುಷ್ಪ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಕಿರುತೆರೆ ನಟಿ ಅಮೂಲ್ಯ ಬೋಲ್ಡ್ ಫೋಟೋಶೂಟ್ ಹೇಗಿದೆ ನೋಡಿ!
- Finance ಐಟಿಆರ್ ಸಲ್ಲಿಸಿದ್ದರೂ, ಆದಾಯ ತೆರಿಗೆ ಇಲಾಖೆಯಿಂದ ನಿಮಗೆ ಇಮೇಲ್ ಬಂದಿದೆಯೇ?
- Automobiles ಜಿಮ್ನಿಗೆ ಸೆಡ್ಡು ಹೊಡೆಯಲು ಎಂಜಿ ಮಾಸ್ಟರ್ ಪ್ಲಾನ್: ಸದ್ಯದಲ್ಲೇ ಕಾಮೆಟ್ ಆಧರಿಸಿ 5 ಡೋರ್ ಕಾರು ಭಾರತಕ್ಕೆ?
- Technology ರೆಡ್ಮಿಯ ಈ ಮೊಬೈಲ್ಗೆ ಇರುವ ಬಿಗ್ ಆಫರ್ ತಿಳಿದ್ರೆ, ಖಂಡಿತಾ ವಾವ್ ಅಂತೀರಾ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಷಾಯ ಅಡ್ಡಪರಿಣಾಮಗಳು ಹಾಗೂ ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು?
ಕೊರೊನಾವೈರಸ್ ಬಂದಾಗಿನಿಂದ ಕಷಾಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ಸಿಕ್ಕಿದೆ. ಪ್ರತಿಯೊಬ್ಬರು ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಕಷಾಯ ಮಾಡಿ ಕುಡಿಯುತ್ತಿದ್ದಾರೆ. ಇನ್ನು ಅನೇಕ ಆಯುರ್ವೇದ ಕಂಒನಿಗಳು ಕೂಡ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಕಷಾಯಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿವೆ.
ಕಷಾಯ ಆರೋಗ್ಯಕ್ಕೆ ಒಳ್ಳೆಯದೇ, ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುವುದು ಕೂಡ ಹೌದು. ಆದರೆ ಈ ಕಷಾಯ ಹೇಗೆ ತೆಗೆದುಕೊಳ್ಳಬೇಕು, ಹೆಚ್ಚು ತೆಗೆದುಕೊಳ್ಳುವುದರಿಂದ ಉಂಟಾಗುವ ಅಡ್ಡಪರಿಣಾಮಗಳೇನು ಎಂಬುವುದರ ಬಗ್ಗೆ ಅನೇಕರಿಗೆ ಗೊತ್ತಿಲ್ಲ. ಈ ಹಿಂದಿನ ಲೇಖನದಲ್ಲಿ ಯಾವ ಶರೀರದ ಗುಣದವರಿಗೆ ಯಾವಾಗ ಕಷಾಯ ಕುಡಿಯಬೇಕು ಎಂಬ ಮಾಹಿತಿ ನೀಡಿದ್ದೆವು. ಈ ಲೇಖನದಲ್ಲಿ ಕಷಾಯ ಹೆಚ್ಚಾಗಿ ಕುಡಿದರೆ ಶರೀರದ ಮೇಲಾಗುವ ಅಡ್ಡಪರಿಣಾಮಗಳೇನು ಎಂಬುವುದರ ಬಗ್ಗೆ ಮಾಹಿತಿ ನೀಡಿದ್ದೇವೆ ನೋಡಿ:
ಕಷಾಯ ಹೆಚ್ಚು ಕುಡಿದರೂ ಆರೋಗ್ಯ ಹಾಳಾಗುವುದು
ಹೆಚ್ಚಾದರೆ ಅಮೃತವೂ ವಿಷ ಎಂಬಂತೆ ಕಷಾಯ ಆರೋಗ್ಯಕ್ಕೆ ತುಂಬಾ ಒಳ್ಳೆಯದೇ ಆಗಿದ್ದರೂ, ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುವುದಾದರೂ ಅತಿಯಾಗಿ ಕುಡಿದರೆ ಅಡ್ಡ ಪರಿಣಾಮ ಉಂಟಾಗುವ ಸಾಧ್ಯತೆ ಇದೆ. ಕಷಾಯದಲ್ಲಿ ಬಳಸುವ ಸವ್ತುಗಳು ದೇಹದಲ್ಲಿನ ಉಷ್ಣಾಂಶ ಹೆಚ್ಚು ಮಾಡುತ್ತದೆ ಹಾಗೂ ಈ ಸಮಸ್ಯೆಗಳು ಕಂಡು ಬರಬಹುದು.
- ದೇಹದಲ್ಲಿ ಉಷ್ಣಾಂಶ ಹೆಚ್ಚಾಗಿ ಬಾಯಲ್ಲಿ ಗುಳ್ಳೆಗಳು ಏಳುವುದು
- ಮೂಗಿನಲ್ಲಿ ರಕ್ತ ಸೋರುವುದು
- ಅಸಿಡಿಟಿ ಸಮಸ್ಯೆ ಹೆಚ್ಚಾಗುವುದು
- ಮಲವಿಸರ್ಜನೆಗೆ ಕಷ್ಟವಾಗುವುದು
- ಮೂತ್ರ ಮಾಡುವಾಗ ಉರಿ
- ಅಜೀರ್ಣ ಸಮಸ್ಯೆ
ಕಷಾಯ ಕುಡಿಯುವುದರಿಂದ ಮೂಗಿನಿಂದ ರಕ್ತ ಸೋರುವುದು ಏಕೆ?
ಕಷಾಯ ಮಾಡುವಾಗ ಅಶ್ವಗಂಧ, ಏಲಕ್ಕಿ, ಚಕ್ಕೆ, ತುಳಸಿ, ಶುಂಠಿ, ಜೇನು ಈ ರೀತಿಯ ವಸ್ತುಗಳನ್ನು ಬಳಸಿ ತಯಾರಿಸಲಾಗುವುದು. ಇವೆಲ್ಲಾ ದೇಹದಲ್ಲಿ ಉಷ್ಣಾಂಶ ಹೆಚ್ಚು ಮಾಡುತ್ತದೆ. ಈ ಕಾರಣದಿಂದಾಗಿ ಮೂಗಿನಲ್ಲಿ ರಕ್ತ ಸೋರುವುದು. ಇನ್ನು ಅಸಿಡಿಟಿ ಸಮಸ್ಯೆ ಹೆಚ್ಚಾಗಲು ಇದು ಪ್ರಮುಖ ಕಾರಣವಾಗಿದೆ.
ವಾತ ಹಾಗೂ ಪಿತ್ತ ದೋಷ ಇರುವವರು ಕಷಾಯ ತೆಗೆದುಕೊಳ್ಳುವಾಗ ಎಚ್ಚರ
ವಾತ ಹಾಗೂ ಪಿತ್ತ ದೋಷ ಇರುವವರು ಸಂಜೆ ಹೊತ್ತಿನಲ್ಲಿ ಕಷಾಯ ಕುಡಿಯುವುದು ಒಳ್ಳೆಯದು. ಇನ್ನು ತುಂಬಾ ಬಿಸಿ ಕುಡಿಯಬೇಡಿ. ದಿನದಲ್ಲಿ ಒಂದು ಲೋಟ ಕಷಾಯ ಕುಡಿದರೆ ಸಾಕು. ಇನ್ನು ಏನಾದರೂ ಕೆಮ್ಮು, ಶೀತ ಇಂತಹ ಲಕ್ಷಣಗಳು ಕಂಡು ಬಂದರೆ ಮಾತ್ರ ಕಷಾಯ ತೆಗೆದುಕೊಳ್ಳಿ. ಇಲ್ಲದಿದ್ದರೆ ವಾರದಲ್ಲಿ ಒಂದು ಎರಡು ಬಾರಿ ತೆಗೆದುಕೊಂಡರೆ ಸಾಕು, ಪ್ರತಿದಿನ ತೆಗೆದುಕೊಳ್ಳುವುದು ಬೇಕಾಗಿಲ್ಲ.
ಕಷಾಯ ಮಾಡುವ ಸಾಮಗ್ರಿ
ಕಷಾಯ ಮಾಡುವಚಾಗ ಕೆಲವರು ಅದಕ್ಕೆ ಬಳಸುವ ಸಾಮಗ್ರಿ ಎಷ್ಟು ಪ್ರಮಾಣದಲ್ಲಿ ಬಳಸಬೇಕೆಂದು ಗಮನ ಕೊಡುವುದೇ ಇಲ್ಲ. 10 ಎಲೆ ತುಳಸಿ ಹಾಕುವಲ್ಲಿ ಒಂದು ಹಿಡಿಯಷ್ಟು ತುಳಸಿ, ಅಧಿಕ ಶುಂಠಿ, ಕಾಳು ಮೆಣಸು ಎಲ್ಲಾ ಹಾಕಿ ತಯಾರಿಸುತ್ತಾರೆ. ಇದರಿಂದ ದೇಹದಲ್ಲಿ ಉಷ್ಣಾಂಶ ತುಂಬಾ ಹೆಚ್ಚಾಗುವುದು. ಆದ್ದರಿಂದ ಕಷಾಯಕ್ಕೆ ಬಳಸುವ ಸಾಮಗ್ರಿ ಮಿತಿಯಲ್ಲಿ ಬಳಸಿ ತಯಾರಿಸಿ.
ಇನ್ನು ಕೆಲವೊಂದು ಸಾಮಗ್ರಿ ನಿಮ್ಮ ಶರೀರಕ್ಕೆ ಆಗಿ ಬರುವುದಿಲ್ಲ, ಅಂತಹ ವಸ್ತುಗಳನ್ನು ಕಷಾಯದಲ್ಲಿ ಬಳಸಬೇಡಿ.
ಎಷ್ಟು ಪ್ರಮಾಣದಲ್ಲಿ ಕಷಾಯ ತೆಗೆದುಕೊಳ್ಳುವುದು ಒಳ್ಳೆಯದು?
ದಿನದಲ್ಲಿ 15-30mlಕಷಾಯ ತೆಗೆದುಕೊಳ್ಳಬಹುದು ಎಂದು ಆಯುರ್ವೇದ ವೈದ್ಯರು ಸಲಹೆ ನೀಡುತ್ತಾರೆ. ಇನ್ನು ಕಷಾಯವನ್ನು ಜೇನು ಅಥವಾ ಬೆಲ್ಲ ಹಾಕಿ ಸೇವಿಸಿ
ಇತರ ಔಷಧಿ ತೆಗೆದುಕೊಳ್ಳುತ್ತಿದ್ದರೆ ವೈದ್ಯರ ಸಲಹೆ ಕೇಳಿ
ನೀವು ಅಲೋಪತಿ ಔಷಧಿ ತೆಗೆದುಕೊಳ್ಳುತ್ತಿದ್ದರೆ ನೀವು ವೈದ್ಯರ ಸಲಹೆ ಪಡೆದ ಬಳಿಕವಷ್ಟೇ ಕಷಾಯ ತೆಗೆದುಕೊಳ್ಳಿ. ಮೊದಲು ಔಷಧಿ ತೆಗೆದುಕೊಂಡು ಒಂದು ಗಮಟೆಯ ಬಳಿಕ ಕಷಾಯ ತೆಗೆದುಕೊಳ್ಳಿ. ಇನ್ನು ಮಧುಮೇಹಿಗಳು ಕಷಾಯ ತೆಗೆದುಕೊಳ್ಳುವುದಾದರೆ ವೈದ್ಯರ ಸಲಹೆ ಪಡೆಯದೆ ತೆಗೆದುಕೊಳ್ಳಲು ಹೋಗಲೇಬಾರದು.