Latest Updates
-
ಮದುವೆಗೆ ಮುನ್ನ ಎಚ್ಚರ: ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ವರದಕ್ಷಿಣೆ ಮತ್ತು ಉಡುಗೊರೆಗಳ ನಡುವಿನ ವ್ಯತ್ಯಾಸವೇನು? -
ಬೆಂಗಳೂರಿನಲ್ಲಿ ಮಳೆ ಬಿಡುವು: ನಿಮ್ಮ ಬಾಲ್ಕನಿ ಗಾರ್ಡನ್ ಗಿಡಗಳನ್ನು ರಕ್ಷಿಸಲು ಈ ಸರಳ ಟಿಪ್ಸ್ ಪಾಲಿಸಿ -
ಟೊಮೆಟೊ, ಶುಂಠಿ ಬೆಲೆ ಏರಿಕೆ: ಅಡುಗೆ ಮನೆ ಬಜೆಟ್ ಉಳಿಸಲು ಇಲ್ಲಿದೆ ಸ್ಮಾರ್ಟ್ ಟಿಪ್ಸ್! -
2026ರಲ್ಲಿ ಚಿನ್ನದ ಆಭರಣ: ತೂಕದಲ್ಲಿ ಕಡಿಮೆ ಖರೀದಿ, ಖರ್ಚಿ ನಲ್ಲಿ ಹೆಚ್ಚು — ಕುಟುಂಬಗಳ ಖರೀ ದಿ ಹೇಗೆ ಬದಲಾಗುತ್ತಿದೆ? -
ನಥಿಂಗ್ ಫೋನ್ (4b) RCB ಎಡಿಷನ್ ಸೇಲ್ ಶುರು: ಫ್ಯಾನ್ಸ್ ಮಿಸ್ ಮಾಡ್ಬೇಡಿ, ಇಂದೇ ಖರೀದಿಸಿ! -
ಆಷಾಢ ಅಮಾವಾಸ್ಯೆ: ಉಪವಾಸದ ದಿನ ಸುಸ್ತಾಗದಂತೆ ಇರಲು ಈ 7 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮಳೆಗಾಲದ ಮದುವೆ: ನಿಮ್ಮ ಸಂಭ್ರಮಕ್ಕೆ ಅಡ್ಡಿಯಾಗದಂತೆ ಪ್ಲಾನ್ ಮಾಡುವುದು ಹೇಗೆ? -
ಮುಂಗಾರು ಮಳೆ: ನಿಮ್ಮ ಬಾಲ್ಕನಿ ಮತ್ತು ಎಸಿ ಸುರಕ್ಷಿತವೇ? ಈ 10 ನಿಮಿಷದ ಕೆಲಸ ಜೀವ ಉಳಿಸಬಹುದು! -
ಮಳೆಗಾಲದಲ್ಲಿ ಆರೋಗ್ಯದ ರಕ್ಷಣೆ: ಕೇವಲ 20 ರೂಪಾಯಿಯಲ್ಲಿ ಸಿಗುವ ಈ ಆಹಾರಗಳು ನಿಮ್ಮನ್ನು ರೋಗಗಳಿಂದ ಕಾಪಾಡುತ್ತವೆ! -
ಪುರಿ ರಥಯಾತ್ರೆ 2026: ಭಕ್ತರೇ ಎಚ್ಚರ! ಸುಗಮ ದರ್ಶನಕ್ಕೆ ಇಲ್ಲಿವೆ ಪ್ರಮುಖ ಟಿಪ್ಸ್
ಬಿಳಿ ಕಾಳುಮೆಣಸಿನಲ್ಲಿರುವ ಆರೋಗ್ಯಕರ ಗುಣಗಳಿವು
ನೀವು ಬಿಳಿ ಕಾಳು ಮೆಣಸು ಹಾಗೂ ಕಪ್ಪು ಕಾಳು ಮೆಣಸನ್ನು ಅಡುಗೆಗೆ ಬಳಸುತ್ತಾ ಇರಬಹುದು. ರೆಸ್ಟೂರೆಂಟ್ಗಳಲ್ಲಿ ಪಾಸ್ತಾ, ಮ್ಯಾಸ್ ಮಾಡಿ ಆಲೂಗಡ್ಡೆ, ಸಲಾಡ್ ಹೀಗೆ ತೆಳು ಬಣ್ಣದ ಅಡುಗೆಗೆ ಬಿಳಿ ಕಾಳು ಮೆಣಸನ್ನು ಬಳಸುತ್ತಾರೆ. ಬಿಳಿ ಬಣ್ಣದ ಹಾಗೂ ಕಪ್ಪು ಬಣ್ಣದ ಕಾಳು ಮಣಸು ಅಡುಗೆಗೆ ಹಾಕುವ ರುಚಿಯಲ್ಲಿ ಸ್ವಲ್ಪ ಭಿನ್ನವಾಗಿರುವುದರಿಂದ ನಮಗೆ ಯಾವ ರುಚಿ ಬೇಕೋ ಆ ರುಚಿಗೆ ತಕ್ಕ ಕಾಳು ಮೆಣಸಿನಲ್ಲಿ ಬಿಳಿ ಅಥವಾ ಕಪ್ಪು ಮೆಣಸನ್ನು ಬಳಸುತ್ತೇವೆ.

ಕಪ್ಪು ಹಾಗೂ ಬಿಳಿ ಮೆಣಸನ್ನು ತಯಾರಿಸುವ ವಿಧಾನದಲ್ಲಿ ಸ್ವಲ್ಪ ವ್ಯತ್ಯಾಸವಿದೆ. ಬಲಿತ ಕಾಳು ಮೆಣಸನ್ನು ಸಿಪ್ಪೆ ಸಹಿತ ಒಣಗಿಸಿದರೆ ಅದು ಕಪ್ಪು ಕಾಳು ಮೆಣಸು ಆಗುತ್ತದೆ, ಅದೇ ಸಿಪ್ಪೆ ಸುಲಿದು ಒಣಗಿಸಿದರೆ ಅದು ಬಿಳಿ ಕಾಳು ಮೆಣಸು ಆಗುತ್ತದೆ.
ಬಿಳಿ ಮೆಣಸನ್ನು ಮೊದಲು ಫ್ರೆಂಚ್ ಅಡುಗೆಗಳಲ್ಲಿ ಬಳಸಲಾಗುತ್ತಿತ್ತು, ನಂತರ ಚೈನೀಸ್ ಅಡುಗೆಗಳಲ್ಲಿ ಬಳಸುತ್ತಿದ್ದರು, ಇದೀಗ ಭಾರತೀಯರ ಅಡುಗೆಯಲ್ಲಿ ಕೂಡ ಬಿಳಿ ಮೆಣಸು ಬಳಸಲಾಗುವುದು. ಇಲ್ಲಿ ನಾವು ಬಿಳಿ ಕಾಳು ಮೆಣಸಿನಲ್ಲಿರುವ ಪೋಷಕಾಂಶಗಳು ಹಾಗೂ ಆರೋಗ್ಯಕರ ಗುಣಗಳ ಬಗ್ಗೆ ಹೇಳಿದ್ದೇವೆ ನೋಡಿ:

1.ನೋವು ಕಡಿಮೆ ಮಾಡುವಲ್ಲಿ ಸಹಕಾರಿ
ಅಧ್ಯಯನ ಪ್ರಕಾರ ಬಿಳಿ ಕಾಳು ಮೆಣಸಿನಲ್ಲಿ ಫೀನೊಲಿಕ್ ಅಂಶ ಇರುವುದರಿಂದ ಉರಿಯೂತದ ವಿರುದ್ಧ ಕೆಲಸ ಮಾಡುತ್ತದೆ. ಇದು ದೇಹದಲ್ಲಿದ್ದ ನೋವು ಕಡಿಮೆ ಮಾಡುವಲ್ಲಿ ಸಹಕಾರಿಯಾಗಿದೆ. ಮೈ ಕೈ ನೋವು ಇದ್ದಾಗ ಸೂಪ್ಗೆ ಕಾಳು ಮೆಣಸಿನ ಪುಡಿ ಹಾಕಿ ಕುಡಿದರೆ ಒಳ್ಳೆಯದು.

ಸಂಧಿವಾತ, ಉಸಿರಾಟದ ತೊಂದರೆ ಕಡಿಮೆ ಮಾಡುತ್ತದೆ
2. ಸಂಧಿವಾತಕಡಿಮೆ ಮಾಡುತ್ತದೆ
ವಯಸ್ಸಾದಂತೆ ಕಾಡುವ ಸಂಧಿವಾತ ನೋವು ಕಡಿಮೆ ಮಾಡಲು ಅಡುಗೆಗೆ ಬಿಳಿ ಕಾಳು ಮೆಣಸು ಬಳಸುವುದು ಒಳ್ಳೆಯದು. ಇದರಲ್ಲಿರುವ ಉರಿಯೂತ ಕಡಿಮೆ ಮಾಡುವ ಗುಣ ಮಂಡಿ, ಮೊಣಕೈ, ಮೊಣಕಾಲು ಮುಂತಾದ ಕಡೆಗಳಲ್ಲಿ ಕಂಡು ಬರುವ ನೋವು ಕಡಿಮೆ ಮಾಡಲು ಸಹಕಾರಿಯಾಗಿದೆ.
3. ಉಸಿರಾಟದ ತೊಂದರೆ ಕಡಿಮೆ ಮಾಡುತ್ತದೆ
ದೇಹದಲ್ಲಿ ತಂಪು ಹೆಚ್ಚಾದಾಗ ಉಸಿರಾಟದ ತೊಂದರೆ ಹೆಚ್ಚಾಗುವುದು. ಉಸಿರಾಟದ ತೊಂದರೆ ಚಳಿಗಾಲ ಹಾಗೂ ಮಳೆಗಾಲದಲ್ಲಿ ಹೆಚ್ಚಾಗುವುದು. ಈ ಸಮಯದಲ್ಲಿ ಅಡುಗೆಯಲ್ಲಿ ಕಾಳು ಮೆಣಸು ಹಾಕಿ ಬಳಸುವುದರಿಂದ ಶೀತ, ಕೆಮ್ಮು, ಅಸ್ತಮಾ ಮುಂತಾದ ತೊಂದರೆ ಉಂಟಾಗದಂತೆ ತಡೆಯುತ್ತದೆ.

ತಲೆನೋವು, ರಕ್ತದೊತ್ತಡ ಕಡಿಮೆ ಮಾಡುತ್ತದೆ
5. ತಲೆನೋವು ಕಡಿಮೆ ಮಾಡುತ್ತದೆ
ಈ ಸಂಬಾರ ಪದಾರ್ಥದಲ್ಲಿರುವ ಪೈಪರೈನ್ ಎಂಬ ಅಂಶ ತಲೆನೋವು ಹಾಗೂ ಮೈಗ್ರೇನ್ ನೋವು ಕಡಿಮೆ ಮಾಡುವಲ್ಲಿ ಸಹಕಾರಿಯಾಗಿದೆ.
6. ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ
ಕಾಳು ಮೆಣಸಿನಲ್ಲಿರುವ ಪೈಪರೈನ್ ಹಾಗೂ ಫ್ಲೇವೋನಾಯ್ಡ್ ಅಂಶ ಇರುವುದರಿಂದ ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇಡುವಲ್ಲಿ ಸಹಕಾರಿಯಾಗಿದೆ.

ಮಾನಸಿಕ ಒತ್ತಡ, ಮಧುಮೇಹ ನಿಯಂತ್ರಿಸುತ್ತದೆ
7.ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ
ಇದರಲ್ಲಿರುವ ಆ್ಯಂಟಿ ಆಕ್ಸಿಡೆಂಟ್ ಅಂಶ ಮಾನಸಿಕ ಒತ್ತಡವನ್ನು ಕಡಿಮೆ ಮಾಡುವ ಗುಣವನ್ನು ಹೊಂದಿದೆ.
8. ಮಧುಮೇಹಿಗಳಿಗೆ ಒಳ್ಳೆಯದು
ಅಡುಗೆಗೆ ಕಾಳು ಮೆಣಸು ಹಾಕಿ ತಿನ್ನುವುದರಿಂದ ದೇಹದಲ್ಲಿ ಸಕ್ಕರೆಯಂಶ ಕಡಿಮೆ ಮಾಡಿ ಮಧುಮೇಹವನ್ನು ನಿಯಂತ್ರಣದಲ್ಲಿಡಬಹುದು.



Click it and Unblock the Notifications