Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬಿಳಿ ಕಾಳುಮೆಣಸಿನಲ್ಲಿರುವ ಆರೋಗ್ಯಕರ ಗುಣಗಳಿವು
ನೀವು ಬಿಳಿ ಕಾಳು ಮೆಣಸು ಹಾಗೂ ಕಪ್ಪು ಕಾಳು ಮೆಣಸನ್ನು ಅಡುಗೆಗೆ ಬಳಸುತ್ತಾ ಇರಬಹುದು. ರೆಸ್ಟೂರೆಂಟ್ಗಳಲ್ಲಿ ಪಾಸ್ತಾ, ಮ್ಯಾಸ್ ಮಾಡಿ ಆಲೂಗಡ್ಡೆ, ಸಲಾಡ್ ಹೀಗೆ ತೆಳು ಬಣ್ಣದ ಅಡುಗೆಗೆ ಬಿಳಿ ಕಾಳು ಮೆಣಸನ್ನು ಬಳಸುತ್ತಾರೆ. ಬಿಳಿ ಬಣ್ಣದ ಹಾಗೂ ಕಪ್ಪು ಬಣ್ಣದ ಕಾಳು ಮಣಸು ಅಡುಗೆಗೆ ಹಾಕುವ ರುಚಿಯಲ್ಲಿ ಸ್ವಲ್ಪ ಭಿನ್ನವಾಗಿರುವುದರಿಂದ ನಮಗೆ ಯಾವ ರುಚಿ ಬೇಕೋ ಆ ರುಚಿಗೆ ತಕ್ಕ ಕಾಳು ಮೆಣಸಿನಲ್ಲಿ ಬಿಳಿ ಅಥವಾ ಕಪ್ಪು ಮೆಣಸನ್ನು ಬಳಸುತ್ತೇವೆ.

ಕಪ್ಪು ಹಾಗೂ ಬಿಳಿ ಮೆಣಸನ್ನು ತಯಾರಿಸುವ ವಿಧಾನದಲ್ಲಿ ಸ್ವಲ್ಪ ವ್ಯತ್ಯಾಸವಿದೆ. ಬಲಿತ ಕಾಳು ಮೆಣಸನ್ನು ಸಿಪ್ಪೆ ಸಹಿತ ಒಣಗಿಸಿದರೆ ಅದು ಕಪ್ಪು ಕಾಳು ಮೆಣಸು ಆಗುತ್ತದೆ, ಅದೇ ಸಿಪ್ಪೆ ಸುಲಿದು ಒಣಗಿಸಿದರೆ ಅದು ಬಿಳಿ ಕಾಳು ಮೆಣಸು ಆಗುತ್ತದೆ.
ಬಿಳಿ ಮೆಣಸನ್ನು ಮೊದಲು ಫ್ರೆಂಚ್ ಅಡುಗೆಗಳಲ್ಲಿ ಬಳಸಲಾಗುತ್ತಿತ್ತು, ನಂತರ ಚೈನೀಸ್ ಅಡುಗೆಗಳಲ್ಲಿ ಬಳಸುತ್ತಿದ್ದರು, ಇದೀಗ ಭಾರತೀಯರ ಅಡುಗೆಯಲ್ಲಿ ಕೂಡ ಬಿಳಿ ಮೆಣಸು ಬಳಸಲಾಗುವುದು. ಇಲ್ಲಿ ನಾವು ಬಿಳಿ ಕಾಳು ಮೆಣಸಿನಲ್ಲಿರುವ ಪೋಷಕಾಂಶಗಳು ಹಾಗೂ ಆರೋಗ್ಯಕರ ಗುಣಗಳ ಬಗ್ಗೆ ಹೇಳಿದ್ದೇವೆ ನೋಡಿ:

1.ನೋವು ಕಡಿಮೆ ಮಾಡುವಲ್ಲಿ ಸಹಕಾರಿ
ಅಧ್ಯಯನ ಪ್ರಕಾರ ಬಿಳಿ ಕಾಳು ಮೆಣಸಿನಲ್ಲಿ ಫೀನೊಲಿಕ್ ಅಂಶ ಇರುವುದರಿಂದ ಉರಿಯೂತದ ವಿರುದ್ಧ ಕೆಲಸ ಮಾಡುತ್ತದೆ. ಇದು ದೇಹದಲ್ಲಿದ್ದ ನೋವು ಕಡಿಮೆ ಮಾಡುವಲ್ಲಿ ಸಹಕಾರಿಯಾಗಿದೆ. ಮೈ ಕೈ ನೋವು ಇದ್ದಾಗ ಸೂಪ್ಗೆ ಕಾಳು ಮೆಣಸಿನ ಪುಡಿ ಹಾಕಿ ಕುಡಿದರೆ ಒಳ್ಳೆಯದು.

ಸಂಧಿವಾತ, ಉಸಿರಾಟದ ತೊಂದರೆ ಕಡಿಮೆ ಮಾಡುತ್ತದೆ
2. ಸಂಧಿವಾತಕಡಿಮೆ ಮಾಡುತ್ತದೆ
ವಯಸ್ಸಾದಂತೆ ಕಾಡುವ ಸಂಧಿವಾತ ನೋವು ಕಡಿಮೆ ಮಾಡಲು ಅಡುಗೆಗೆ ಬಿಳಿ ಕಾಳು ಮೆಣಸು ಬಳಸುವುದು ಒಳ್ಳೆಯದು. ಇದರಲ್ಲಿರುವ ಉರಿಯೂತ ಕಡಿಮೆ ಮಾಡುವ ಗುಣ ಮಂಡಿ, ಮೊಣಕೈ, ಮೊಣಕಾಲು ಮುಂತಾದ ಕಡೆಗಳಲ್ಲಿ ಕಂಡು ಬರುವ ನೋವು ಕಡಿಮೆ ಮಾಡಲು ಸಹಕಾರಿಯಾಗಿದೆ.
3. ಉಸಿರಾಟದ ತೊಂದರೆ ಕಡಿಮೆ ಮಾಡುತ್ತದೆ
ದೇಹದಲ್ಲಿ ತಂಪು ಹೆಚ್ಚಾದಾಗ ಉಸಿರಾಟದ ತೊಂದರೆ ಹೆಚ್ಚಾಗುವುದು. ಉಸಿರಾಟದ ತೊಂದರೆ ಚಳಿಗಾಲ ಹಾಗೂ ಮಳೆಗಾಲದಲ್ಲಿ ಹೆಚ್ಚಾಗುವುದು. ಈ ಸಮಯದಲ್ಲಿ ಅಡುಗೆಯಲ್ಲಿ ಕಾಳು ಮೆಣಸು ಹಾಕಿ ಬಳಸುವುದರಿಂದ ಶೀತ, ಕೆಮ್ಮು, ಅಸ್ತಮಾ ಮುಂತಾದ ತೊಂದರೆ ಉಂಟಾಗದಂತೆ ತಡೆಯುತ್ತದೆ.

ತಲೆನೋವು, ರಕ್ತದೊತ್ತಡ ಕಡಿಮೆ ಮಾಡುತ್ತದೆ
5. ತಲೆನೋವು ಕಡಿಮೆ ಮಾಡುತ್ತದೆ
ಈ ಸಂಬಾರ ಪದಾರ್ಥದಲ್ಲಿರುವ ಪೈಪರೈನ್ ಎಂಬ ಅಂಶ ತಲೆನೋವು ಹಾಗೂ ಮೈಗ್ರೇನ್ ನೋವು ಕಡಿಮೆ ಮಾಡುವಲ್ಲಿ ಸಹಕಾರಿಯಾಗಿದೆ.
6. ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ
ಕಾಳು ಮೆಣಸಿನಲ್ಲಿರುವ ಪೈಪರೈನ್ ಹಾಗೂ ಫ್ಲೇವೋನಾಯ್ಡ್ ಅಂಶ ಇರುವುದರಿಂದ ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇಡುವಲ್ಲಿ ಸಹಕಾರಿಯಾಗಿದೆ.

ಮಾನಸಿಕ ಒತ್ತಡ, ಮಧುಮೇಹ ನಿಯಂತ್ರಿಸುತ್ತದೆ
7.ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ
ಇದರಲ್ಲಿರುವ ಆ್ಯಂಟಿ ಆಕ್ಸಿಡೆಂಟ್ ಅಂಶ ಮಾನಸಿಕ ಒತ್ತಡವನ್ನು ಕಡಿಮೆ ಮಾಡುವ ಗುಣವನ್ನು ಹೊಂದಿದೆ.
8. ಮಧುಮೇಹಿಗಳಿಗೆ ಒಳ್ಳೆಯದು
ಅಡುಗೆಗೆ ಕಾಳು ಮೆಣಸು ಹಾಕಿ ತಿನ್ನುವುದರಿಂದ ದೇಹದಲ್ಲಿ ಸಕ್ಕರೆಯಂಶ ಕಡಿಮೆ ಮಾಡಿ ಮಧುಮೇಹವನ್ನು ನಿಯಂತ್ರಣದಲ್ಲಿಡಬಹುದು.



Click it and Unblock the Notifications