Just In
- 4 hrs ago ಹೋಟೆಲ್ ರುಚಿಯ ಪನೀರ್ ಪೆಪ್ಪರ್ ಫ್ರೈ ಮನೆಯಲ್ಲೇ ಮಾಡಿ..! 10 ನಿಮಿಷದಲ್ಲಿ ರೆಡಿ..!
- 12 hrs ago ಮೀನ ರಾಶಿಯಲ್ಲಿ ರಾಹು-ಮಂಗಳ ಯುತಿಯಿಂದ ಅಂಗಾರಕ ಯೋಗ: 12 ರಾಶಿಗಳ ಮೇಲಿರಲಿದೆ ಈ ನಕರಾತ್ಮಕ ಪರಿಣಾ
- 13 hrs ago ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- 14 hrs ago ಪುರುಷರಲ್ಲಿ ಹೆಚ್ಚಾಗುತ್ತಿದೆ ಬಂಜೆತನ: ಪುರುಷರು ಈ ಆಹಾರ ಸೇವಿಸಿದರೆ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚುವುದು
Don't Miss
- Finance ಬೆಂಗಳೂರು, ನೋಯ್ಡಾ, ಪುಣೆಯಲ್ಲಿ ಶೀಘ್ರದಲ್ಲೇ ಹೊಸ ಆಪಲ್ ಸ್ಟೋರ್ ಪ್ರಾರಂಭ
- News Dr.Rajkumar: ಹುಟ್ಟೂರಲ್ಲಿ ಮುತ್ತುರಾಜಣ್ಣನ ನೆನಪುಗಳು ನೂರಾರು.. ನಿಮಗೆ ಗೊತ್ತಿರದ ಕುತೂಹಲಕಾರಿ ಸಂಗತಿಗಳು ಇಲ್ಲಿವೆ
- Technology ಈ ಹೊಸ 5G ಫೋನ್ ಖರೀದಿಸಿದರೆ, ವಿವೋ ಕಂಪನಿಯ ಇಯರ್ಫೋನ್ ಉಚಿತ!
- Automobiles ನಟಿ ಶಿಲ್ಪಾ ಶೆಟ್ಟಿಗೆ ಮತ್ತೊಂದು ಸಮಸ್ಯೆ ತಂದಿಟ್ಟ ಪತಿ: ಐಷಾರಾಮಿ ಕಾರುಗಳು ಸೀಜ್!
- Sports 2025ರ ಚಾಂಪಿಯನ್ಸ್ ಟ್ರೋಫಿಗಾಗಿ ಭಾರತ ತಂಡ ಪಾಕಿಸ್ತಾನಕ್ಕೆ ಪ್ರಯಾಣಿಸಲಿದೆಯೇ?; ಬಿಸಿಸಿಐ ಹೇಳಿದ್ದೇನು?
- Movies ಅದ್ಧೂರಿ 'ರಾಮಾಯಣ' ಚಿತ್ರದ ಬಗ್ಗೆ ರಾಕಿಂಗ್ ಸ್ಟಾರ್ ಯಶ್ ಮೊದಲ ಮಾತು
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಧುಮೇಹಿಗಳು ಪ್ರತಿದಿನವೂ ಮಾಡಲೇಬೇಕಾದ ಈ 10 ಕೆಲಸಗಳು
ಮನುಷ್ಯನಿಗೆ ಬರುವ ಇತರೆ ಕಾಯಿಲೆಗಳಂತೆ ಮಧುಮೇಹ ಕೂಡ ಒಂದು . ಆದರೆ ಒಮ್ಮೆ ಶುಗರ್ ಫ್ಯಾಕ್ಟರಿ ಓನರ್ ಆದ ತಕ್ಷಣ ಜೀವನವೇ ಮುಗಿಯಿತು ಎನ್ನುವ ಲೆಕ್ಕಾಚಾರ ಮಾತ್ರ ಬೇಡ. ಎಲ್ಲರಿಗೂ ಗೊತ್ತು . ಒಮ್ಮೆ ಮಧುಮೇಹ ದೇಹಕ್ಕೆ ಅಂಟಿಕೊಂಡರೆ ಅದನ್ನು ನಿಯಂತ್ರಿಸಲು ಏನೆಲ್ಲಾ ಹರಸಾಹಸ ಪಡಬೇಕೆಂದು . ಹಾಗೆಂದು ಅದರ ಬಗ್ಗೆಯೇ ಯೋಚಿಸಿ ಚಿಂತಿಸಿ ನಮ್ಮ ಮಾನಸಿಕ ಆರೋಗ್ಯವನ್ನೂ ಹಾಳು ಮಾಡಿಕೊಂಡು ದೇಹಕ್ಕೆ ಇತರೆ ರೋಗಗಳನ್ನೇಕೆ ತರಿಸಿಕೊಳ್ಳಬೇಕು .ಇದು ನಿಜಕ್ಕೂ ಸಮಂಜಸವೇ !!! "ಚಿಂತೆಯೇ ಚಿತೆಗೆ ದೂಡುತ್ತದೆ " ಎಂಬ ಮಾತಿಲ್ಲವೇ? ಹಾಗಿದ್ದ ಮೇಲೆ ಬೇರೇನು ಮಾಡಬೇಕು . ಏನು ಅನುಸರಿಸಿದರೆ ಉತ್ತಮ . ಈ ಎಲ್ಲಾ ಪ್ರಶ್ನೆಗಳಿಗೂ ನಮ್ಮ ಉತ್ತರ ಇಲ್ಲಿದೆ .
ಮಧುಮೇಹ ನಿಯಂತ್ರಣಕ್ಕೆ ಮುಖ್ಯವಾಗಿ ಬೇಕಾಗಿರುವುದು ನೀವು ಅನುಸರಿಸುವ ನಿಮ್ಮ ದೈನಂದಿನ ಜೀವನ ಶೈಲಿ . ಅಂದರೆ ಬೆಳಗ್ಗೆ ಎದ್ದು ವಾಕಿಂಗ್ ಹೋಗುವುದು , ಪ್ರತಿನಿತ್ಯ ದೈಹಿಕ ವ್ಯಾಯಾಮ ಮಾಡುವುದು , ತಿನ್ನುವ ಆಹಾರದಲ್ಲಿ ಸಮತೋಲನ ಕಾಯ್ದುಕೊಳ್ಳುವುದು , ತಪ್ಪದೆ ವೈದ್ಯರು ಕೊಟ್ಟಿರುವ ಔಷಧಗಳನ್ನು ತೆಗೆದುಕೊಳ್ಳುವುದು , ಮನೆಯವರಿಂದ ಹಾಗು ಸ್ನೇಹಿತರಿಂದ ಒಳ್ಳೆಯ ಸಲಹೆ ಬೆಂಬಲ ಪಡೆಯುವುದು . ಇದರ ಜೊತೆಗೆ ನಾವು ಇಲ್ಲಿ ತಿಳಿಸಿರುವ ಕೆಲವೊಂದು ಸಲಹೆಗಳನ್ನು ಅನುಸರಿಸುವುದರಿಂದ ನಿಮ್ಮ ಮಧುಮೇಹ ನಿಮ್ಮನ್ನು ಕಂಡಾಗಲೆಲ್ಲಾ ಸ್ವಲ್ಪ ದೂರವೇ ಉಳಿಯುತ್ತದೆ .
1 . ನಿಮ್ಮ ಬ್ಲಡ್ - ಶುಗರ್ ಲೆವೆಲ್ ನ ಮೇಲೆ ಸದಾ ಒಂದು ಕಣ್ಣಿಡಿ
ನೀವು ನಿಮ್ಮ ಮಧುಮೇಹವನ್ನು ನಿಯಂತ್ರಣ ಮಾಡಲೇಬೇಕೆಂದು ಪಣತೊಟ್ಟ ಮೇಲೆ ಮೊಟ್ಟ ಮೊದಲು ಮಾಡಬೇಕಾದ ಕೆಲಸವೆಂದರೆ ನಿಮ್ಮ ರಕ್ತದಲ್ಲಿನ ಈಗಿರುವ ಸಕ್ಕರೆ ಅಂಶವನ್ನು " ಗ್ಲುಕೋಮೀಟರ್ " ಎಂಬ ಸಾಧನದಿಂದ ಕಂಡು ಹಿಡಿಯುವುದು . ಈ ಸಾಧನದಿಂದ ನೀವೇ ಬೇಕಾದರೂ ಮನೆಯಲ್ಲಿಯೇ ಪರೀಕ್ಷಿಸಿಕೊಳ್ಳಬಹುದು ಅಥವಾ ಹತ್ತಿರದ ಯಾವುದಾದರೂ ಒಂದು ಕ್ಲಿನಿಕ್ ನಲ್ಲಿ ವೈದ್ಯರಿಂದ ಚೆಕ್ ಮಾಡಿಸಬಹುದು . ನಿಮಗೆ ನಿಮ್ಮ ದೇಹದಲ್ಲಿ ಮಧುಮೇಹ ನಿಜಕ್ಕೂ ಯಾವ ಮಟ್ಟಕ್ಕಿದೆ ಎಂದು ತಿಳಿಯಬೇಕಾದರೆ ಬೆಳಗಿನ ಉಪಹಾರದ ಮುಂಚೆ ಮತ್ತು ಉಪಹಾರದ ನಂತರ ಎರಡು ಗಂಟೆ ಬಿಟ್ಟು ಪರೀಕ್ಷಿಸಿ . ಹೀಗೆ ಎರಡರಿಂದ ಮೂರು ದಿನ ಮಾಡಿ .
ಬ್ಲಡ್ - ಶುಗರ್ ನ ಮಟ್ಟ :
* ಉಪಹಾರದ ಮುಂಚೆ :: 95 ಎಂಜಿ/ಡಿಎಲ್ ಗಿಂತ ಕಡಿಮೆ .
* ಉಪಹಾರದ ನಂತರ :: 120 ಎಂಜಿ/ಡಿಎಲ್ ಗಿಂತ ಕಡಿಮೆ ಇದ್ದರೆ ನೀವು ನಾರ್ಮಲ್ ಎಂದು ಅರ್ಥ .
ಮನೆಯಲ್ಲೇ ಶುಗರ್ ಚೆಕ್ ಮಾಡುವ ವಿಧಾನ :
ಮಧುಮೇಹ ಪರೀಕ್ಷಿಸುವ ಗ್ಲುಕೋಮೀಟರ್ ಕಿಟ್ ದುಬಾರಿಯೇನಲ್ಲ . ನಿಮ್ಮ ಹತ್ತಿರದ ಯಾವುದಾದರೂ ಮೆಡಿಕಲ್ ಶಾಪ್ ನಲ್ಲಿ ಅಥವಾ ಈಗಿನ ಕಾಲದಲ್ಲಂತೂ ಆನ್ಲೈನ್ ನಲ್ಲಿ ಸುಲಭವಾಗಿ ಲಭ್ಯವಿದೆ . ಆ ಕಿಟ್ ನಲ್ಲಿ ಗ್ಲುಕೋಮೀಟರ್ , ಟೆಸ್ಟ್ ಸ್ಟ್ರಿಪ್ಗಳು , ಬೆರಳಿಗೆ ರಕ್ತಕ್ಕಾಗಿ ಚುಚ್ಚುವ ಸೂಜಿಗಳು ಇರುತ್ತವೆ . ಒಮ್ಮೆ ಈ ಕಿಟ್ ಖರೀದಿಸಿದರೆ ಸಾಕು . ಸೂಜಿ ಚುಚ್ಚಿ ನಿಮ್ಮ ಬೆರಳಿನಿಂದ ಒಂದು ತೊಟ್ಟು ರಕ್ತವನ್ನು ಟೆಸ್ಟ್ ಸ್ಟ್ರಿಪ್ ನ ಮೇಲೆ ಹಾಕಿ ಅದನ್ನು ಗ್ಲುಕೋಮೀಟರ್ ಗೆ ಸೇರಿಸಿದರೆ ಸಾಕು . ಕೆಲವೇ ಸೆಕೆಂಡ್ ಗಳಲ್ಲಿ ಫಲಿತಾಂಶ ನಿಮ್ಮ ಕಣ್ಣ ಮುಂದೆ ಬರುತ್ತದೆ .
2 . ಬೆಳಗ್ಗೆ ಎದ್ದು ವಾಕಿಂಗ್ ಹೋಗುವುದು
ನಿತ್ಯ ನಿಯಮಿತ ವ್ಯಾಯಾಮ ನಿಮ್ಮ ಸಕ್ಕರೆ ಖಾಯಿಲೆಯನ್ನು ನಿಯಂತ್ರಣದಲ್ಲಿಡುವುದರ ಜೊತೆಗೆ ನಿಮ್ಮ ರಕ್ತದಲ್ಲಿನ ಸಕ್ಕರೆ ಅಂಶವನ್ನೂ ಕಡಿಮೆ ಮಾಡುತ್ತದೆ . ನಿಮ್ಮ ದೇಹದಲ್ಲಿನ ಇನ್ಸುಲಿನ್ ರಕ್ತದಲ್ಲಿನ ಸಕ್ಕರೆ ಅಂಶವನ್ನು ಹೀರಿ ಅದನ್ನು ದೇಹದ ಚಟುವಟಿಕೆಗಾಗಿ ಅವಶ್ಯಕತೆಯಿರುವ ಶಕ್ತಿಯಾಗಿ ಮಾರ್ಪಾಡು ಮಾಡುತ್ತದೆ . ನೀವು ಮಾಡುವ ವಾಕಿಂಗ್ , ವ್ಯಾಯಾಮ ನಿಮ್ಮ ದೇಹದಲ್ಲಿನ ಇನ್ಸುಲಿನ್ ಅಂಶವನ್ನು ಹೆಚ್ಚುಮಾಡುತ್ತದೆ ಮತ್ತು ಇನ್ಸುಲಿನ್ ಇಲ್ಲದೆಯೂ ನಿಮ್ಮ ದೇಹದ ಮಾಂಸಖಂಡಗಳು ಸಕ್ಕರೆ ಅಂಶವನ್ನು ಹೀರಿ ಅದನ್ನು ಶಕ್ತಿಯಾಗಿ ಪರಿವರ್ತಿಸಲು ಸಹಾಯ ಮಾಡುತ್ತದೆ .
ಇನ್ನು ವಾಕಿಂಗ್ ವಿಷಯಕ್ಕೆ ಬರುವುದಾದರೆ 2005 ನೇ ಇಸವಿಯಲ್ಲಿ ಪ್ರಕಟಗೊಂಡ " ಡಯಾಬಿಟಿಸ್ ಕೇರ್ ರಿಪೋರ್ಟ್ " ನ ಪ್ರಕಾರ ಬ್ರಿಸ್ಕ್ ವಾಕಿಂಗ್ ಎನ್ನುವುದು ಮಧುಮೇಹಿಗಳಿಗೆ ಹೇಳಿ ಮಾಡಿಸಿದ ವ್ಯಾಯಾಮ ಇದ್ದಂತೆ . 2012 ನೇ ಇಸವಿಯಲ್ಲಿ ಪ್ರಕಟಗೊಂಡ " ಡಯಾಬಿಟಿಸ್ ರಿಪೋರ್ಟ್ " ನಲ್ಲಿ ೧೨ ಮಂದಿ ಟೈಪ್ - 1 ಮಧುಮೇಹಿ ರೋಗಿಗಳನ್ನು ಸುಮಾರು 88 ಗಂಟೆಗಳ ಕಾಲ ಪರೀಕ್ಷೆಗೆ ಒಳಪಡಿಸಲಾಯಿತು . ಅವರೆಲ್ಲರೂ ಊಟವಾದ ನಂತರ ಮಾಡಿದ ವ್ಯಾಯಾಮ ಮತ್ತು ವಾಕಿಂಗ್ ಅವರ ಸಕ್ಕರೆ ಅಂಶವನ್ನು ಗಣನೀಯವಾಗಿ ಕಡಿಮೆ ಮಾಡಿತ್ತು. ಆದ್ದರಿಂದಲೇ ತಜ್ಞರು ಹೇಳುವ ಪ್ರಕಾರ ಮಧುಮೇಹಿಗಳು ವಾರದಲ್ಲಿ ಕನಿಷ್ಠ ಪಕ್ಷ 5 ದಿನವಾದರೂ ಸುಮಾರು ಅರ್ಧ ಗಂಟೆಗಳ ಕಾಲ ವಾಕಿಂಗ್ ಮತ್ತು ವ್ಯಾಯಾಮ ಮಾಡಲೇಬೇಕು .
Most Read: ಒಂದು ವೇಳೆ ನಿಮಗೆ ಟೈಪ್-2 ಮಧುಮೇಹವಿದ್ದರೆ ಅನಾನಸ್ ಹಣ್ಣು ತಿನ್ನಬಹುದೇ?
3 . ಬಾಯಿಯ ಮತ್ತು ವಸಡಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದು :
ಪ್ರತಿಯೊಬ್ಬರಿಗೂ ಬಾಯಿಯ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ . ಅದರಲ್ಲೂ ಮಧುಮೇಹಿಗಳಿಗೆ ಇನ್ನೂ ಮುಖ್ಯ . ಏಕೆಂದರೆ ಮಧುಮೇಹ ಬಾಯಿಯ ಆರೋಗ್ಯವನ್ನು ಬಹಳಷ್ಟು ಹಾಳುಮಾಡುತ್ತದೆ . ಹಲ್ಲಿನ ವಸಡಿಗೆ ಸಂಬಂಧಿತ ಹೈಪರ್ಪ್ಲಾಸಿಯಾ ಮತ್ತು ಪೆರಿಯೊರಾಟಿಸ್ (ಪೈರೋರಿಯಾ) , ದಂತ ಕ್ಷಯ , ಕ್ಯಾಂಡಿಡಿಯಾಸಿಸ್ , ಬಾಯಿ ಒಣಗುವುದು ( ಝೀರೋಸ್ಟೋಮಿಯಾ ) ಮತ್ತು ಉಸಿರಾಡಿದರೆ ದುರ್ನಾತ ಬರುವುದು ಇವೆಲ್ಲ ಮಧುಮೇಹದಿಂದ ಉಂಟಾಗುವ ಲಕ್ಷಣಗಳು. ಅಮೇರಿಕನ್ ಡಯಾಬಿಟಿಸ್ ಅಸೋಸಿಯೇಷನ್ ಹೇಳುವ ಪ್ರಕಾರ ಮಧುಮೇಹಿಗಳಲ್ಲಿ ಸುಮಾರು ಜನರು ಮೇಲ್ಕಂಡ ಎಲ್ಲಾ ರೀತಿಯ ವಸಡಿನ ಸಮಸ್ಯೆ ಎದುರಿಸುತ್ತಿದ್ದಾರೆ .
2012 ನೇ ಇಸವಿಯ " ಇಂಟರ್ನ್ಯಾಷನಲ್ ಜರ್ನಲ್ ಆಫ್ ಪ್ರಿವೆಂಟಿವ್ ಮೆಡಿಸಿನ್ " ನ ವರದಿಯಲ್ಲಿ ಕೂಡ ಮಧುಮೇಹಿಗಳು ಬಾಯಿಯ ಮತ್ತು ವಸಡಿನ ಆರೋಗ್ಯದ ಕಡೆಗೆ ವಿಶೇಷ ಗಮನ ಕೊಡಬೇಕೆಂದೂ ಮತ್ತು ಇದಕ್ಕಾಗಿ ವೈದ್ಯರಿಂದ ಸೂಕ್ತ ಸಲಹೆಗಳನ್ನು ಕಾಲಕಾಲಕ್ಕೆ ಪಡೆಯಬೇಕೆಂದೂ ಹೇಳಿದೆ. ಬಾಯಿಯ ಆರೋಗ್ಯ ಕಾಪಾಡಲು ನಮ್ಮ ಪ್ರಾಚೀನ ಪದ್ಧತಿಯೊಂದು ತುಂಬಾ ನಂಬಿಕಾರ್ಹವಾಗಿದೆ . ಇದಕ್ಕೆ ಸಾಕ್ಷಿ ಎಂಬಂತೆ " ಜರ್ನಲ್ ಆಫ್ ಟ್ರೆಡಿಷನಲ್ ಅಂಡ್ ಕಾಂಪ್ಲಿಮೆಂಟರಿ ಮೆಡಿಸಿನ್ " ನ 2017 ನೇ ವರದಿಯಲ್ಲಿ ವರ್ಜಿನ್ ತೆಂಗಿನ ಎಣ್ಣೆಯಲ್ಲಿ ಮಾಡುವ ಈ ಒಂದು ವಿಧಾನ ಬಾಯಿಯ ಆರೋಗ್ಯಕ್ಕಷ್ಟೇ ಅಲ್ಲದೆ ಇಡೀ ದೇಹದ ಆರೋಗ್ಯಕ್ಕೂ ಬಹಳ ಸಹಕಾರಿಯಾಗಿದೆ.
ಅದು ಹೇಗೆಂದರೆ,
* ಒಂದು ಟೀ ಚಮಚದಷ್ಟು ವರ್ಜಿನ್ ತೆಂಗಿನ ಎಣ್ಣೆಯನ್ನು ಬಾಯಿಯಲ್ಲಿ ಹಾಕಿಕೊಳ್ಳಬೇಕು .
* ಸುಮಾರು 20 ನಿಮಿಷಗಳ ಕಾಲ ಅದನ್ನು ಬಾಯಿಯೊಳಗೆ ಸುರಳಿಯಾಕಾರದಂತೆ ಸುತ್ತಿಸುತ್ತಿರಬೇಕು .
* ನಂತರ ಅದನ್ನು ಆಚೆ ಉಗಿದು ಹಲ್ಲುಜ್ಜಿ ಬಾಯಿ ತೊಳೆದುಕೊಳ್ಳಬೇಕು .
* ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಈ ರೀತಿ ಮಾಡಬೇಕು .
ವಿ . ಸೂಚನೆ : ದಯವಿಟ್ಟು ಬಾಯಿಯಲ್ಲಿ ವರ್ಜಿನ್ ತೆಂಗಿನ ಎಣ್ಣೆ ಹಾಕಿಕೊಂಡು ಬಾಯಿ ಮುಕ್ಕಳಿಸಬೇಡಿ ಮತ್ತು ನುಂಗಬೇಡಿ .
4 . ದಿನನಿತ್ಯ ತೆಂಗಿನ ಎಣ್ಣೆ ಬಳಸಿ
ಯಾರು ಮಧುಮೇಹದಿಂದ ಬಳಲುತ್ತಿರುವರೋ ಅವರು ತಮ್ಮ ದಿನನಿತ್ಯದ ಅಡುಗೆಯಲ್ಲಿ ಅಥವಾ ಬಳಕೆಯಲ್ಲಿ ಒಂದರಿಂದ ಎರಡು ಚಮಚದಷ್ಟು ತೆಂಗಿನ ಎಣ್ಣೆಯನ್ನು ಬಳಸುವುದು ಸೂಕ್ತ . ಏಕೆಂದರೆ ತೆಂಗಿನ ಎಣ್ಣೆ ರಕ್ತದಲ್ಲಿನ ಸಕ್ಕರೆ ಅಂಶವನ್ನು ಕಡಿಮೆ ಮಾಡುತ್ತದೆ ಮತ್ತು ಇನ್ಸುಲಿನ್ ಉತ್ಪತ್ತಿಯನ್ನು ಜಾಸ್ತಿ ಮಾಡುತ್ತದೆ ಜೊತೆಗೆ ಟೈಪ್ - 2 ಮಧುಮೇಹಕ್ಕೆ ಇದು ರಾಮ ಬಾಣ .2009 ರ ವರದಿಯ ಪ್ರಕಾರ ತೆಂಗಿನ ಎಣ್ಣೆ ಬೊಜ್ಜನ್ನೂ ಕರಗಿಸುತ್ತದೆ ಮತ್ತು ಇನ್ಸುಲಿನ್ ಪ್ರತಿರೋಧದ ಜೊತೆ ಹೋರಾಡುತ್ತದೆ .ಭಾರತೀಯ ಜರ್ನಲ್ ಆಫ್ ಫಾರ್ಮಾಕಾಲಜಿ ಯಾ 2010 ರ ವರದಿಯ ಪ್ರಕಾರ ತೆಂಗಿನ ಎಣ್ಣೆಯಲ್ಲಿ ಅಡಗಿರುವ " ಲಾರಿಕ್ ಆಸಿಡ್ " ನ ಅಂಶ ಮಧುಮೇಹ ದಿಂದ ಉಂಟಾಗುವ ಡಿಸ್ಲಿಪಿಡೆಮಿಯಾವನ್ನು ತಡೆಗಟ್ಟುತ್ತದೆ .
ಆದರೂ ಒಂದು ಎಚ್ಚರಿಕೆಯ ಮಾತೆಂದರೆ ಮಧುಮೇಹದ ಜೊತೆಗೆ ಹೃದಯ ಸಂಬಂಧಿ ರೋಗವಿರುವವರು ತೆಂಗಿನ ಎಣ್ಣೆಯನ್ನು ನಿಯಮಿತವಾಗಿ ಬಳಸಬೇಕು ಇಲ್ಲವೆಂದರೆ ಹೃದಯಾಘಾತವಾಗುವ ಸಂಭವ ಹೆಚ್ಚಿರುತ್ತದೆ.
Most Read: ಡಯಾಬಿಟಿಸ್ ಸಮಸ್ಯೆ ಇದ್ದವರು ಮೊಟ್ಟೆ ತಿನ್ನಬಹುದೇ? ಇದರಿಂದ ಏನಾದರೂ ಸಮಸ್ಯೆಗಳಿವೆಯೇ?
5 . ನೀರಿನ ಜೊತೆ ನಿಂಬೆ ರಸ ಸೇವಿಸಿ
" ಅಮೆರಿಕನ್ ಡಯಾಬಿಟಿಸ್ ಅಸೋಸಿಯೇಷನ್ " ನ ಪ್ರಕಾರ ನಿಂಬೆ ಮಧುಮೇಹಿಗಳಿಗೆ ಸೈನಿಕನಿದ್ದಂತೆ . ಏಕೆಂದರೆ ನಿಂಬೆಯಲ್ಲಿರುವ ವಿಟಮಿನ್ - ಸಿ ಒಂದು ಪ್ರಬಲ ಆಂಟಿಆಕ್ಸಿಡೆಂಟ್ ಆಗಿದ್ದು ದೇಹದಲ್ಲಿನ ಫ್ರೀ ರಾಡಿಕಲ್ ಅನ್ನು ಕಡಿಮೆ ಮಾಡುತ್ತವೆ . ಫ್ರೀ ರಾಡಿಕಲ್ ಗಳು ದೇಹದಲ್ಲಿನ ಜೀವಕೋಶಗಳನ್ನು ನಾಶಪಡಿಸಿ ಬ್ಲಡ್ ಶುಗರ್ ಅಂಶವನ್ನು ಜಾಸ್ತಿ ಮಾಡುತ್ತವೆ . ಉಗುರು ಬೆಚ್ಚಗಿನ ನೀರಿಗೆ ಅರ್ಧ ನಿಂಬೆ ಹಣ್ಣಿನ ರಸವನ್ನು ಹಿಂಡಿ ನಿಮಗೆ ಬೇಕೆಂದರೆ ಸ್ವಲ್ಪ ಜೇನುತುಪ್ಪವನ್ನು ಸೇರಿಸಿ ಬೆಳಗಿನ ಖಾಲಿ ಹೊಟ್ಟೆಯಲ್ಲಿ ಪ್ರತಿದಿನ ಕುಡಿಯುವುದನ್ನು ರೂಡಿ ಮಾಡಿಕೊಳ್ಳಿ .
6 . ದಾಲ್ಚಿನ್ನಿ ಚಹಾ ಮಧುಮೇಹ ಕಹಾ?
ದಾಲ್ಚಿನ್ನಿಯಲ್ಲಿ ಅಡಕವಾಗಿರುವ ಅನೇಕ ಅಂಶಗಳು ನಿಮ್ಮ ದೇಹದಲ್ಲಿ ಗ್ಲುಕೋಸ್ ಮೆಟಬಾಲಿಸಂ ಅನ್ನು ಹೆಚ್ಚಿಸಿ ಇನ್ಸುಲಿನ್ ಗೆ ಸಹಕಾರಿಯಾಗಿ ನಿಮ್ಮ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಸಾಮಾನ್ಯ ಮಟ್ಟಕ್ಕೆ ಕೊಂಡೊಯ್ಯುತ್ತದೆ . ಒಂದು ಸಾಮಾನ್ಯ ಗಾತ್ರದ ದಾಲ್ಚಿನ್ನಿ ಚಕ್ಕೆಯನ್ನು ಸುಮಾರು ಹತ್ತು ನಿಮಿಷದಷ್ಟು ಬಿಸಿ ನೀರಿನಲ್ಲಿ ಕುದಿಸಿ ಶೋಧಿಸಿ ಪ್ರತಿದಿನ ಒಂದು ಬಾರಿ ಕುಡಿಯುವ ಅಭ್ಯಾಸ ಮಾಡಿಕೊಂಡರೆ ಮಧುಮೇಹದ ಸುಳಿವೇ ಇರುವುದಿಲ್ಲ .
7 . ಹಾಗಲಕಾಯಿ ರಸ ಕುಡಿಯಲು ಮಾತ್ರ ಕಹಿ ಆದರೆ ಫಲಿತಾಂಶ ಎಂದಿಗೂ ಸಿಹಿ
ಹಾಗಲಕಾಯಿ ಎಂದರೆ ಮಾರುದ್ದ ಓಡುವವರಿದ್ದಾರೆ . ಅಂತವರಿಗೆ ನಮ್ಮದೊಂದು ಕಿವಿ ಮಾತು . ಹಾಗಲಕಾಯಿ ರಸ ಅಥವಾ ಹಾಗಲಕಾಯಿ ಜ್ಯೂಸು ಪ್ರತಿದಿನ ಕುಡಿಯುವ ಅಭ್ಯಾಸವಿಟ್ಟುಕೊಂಡಿರುವವರಿಗೆ ಕೇವಲ ಮಧುಮೇಹ ಮಾತ್ರವಲ್ಲ ಬೇರೆ ಯಾವ ಖಾಯಿಲೆಯೂ ಹತ್ತಿರ ಬರುವುದಕ್ಕೆ ಹಿಂದೆ ಮುಂದೆ ನೋಡುತ್ತದೆ . ಮಧುಮೇಹದ ವಿರುದ್ಧ ಹಾಗಲಕಾಯಿಯಲ್ಲಿರುವ ಚರಾಂಟಿನ್, ವಸಿನ್ ಮತ್ತು ಪಾಲಿಪೆಪ್ಟೈಡ್-ಪಿ ಎಂಬ ಅಂಶಗಳು ಬಹಳ ಸಲೀಸಾಗಿ ಮತ್ತು ಪರಿಣಾಮಕಾರಿಯಾಗಿ ಹೋರಾಡುತ್ತವೆ . ಮನುಷ್ಯನ ದೇಹದಲ್ಲಿರುವ ಪ್ಯಾಂಕ್ರಿಯಾಸ್ ನಲ್ಲಿ ಇನ್ಸುಲಿನ್ ಉತ್ಪತ್ತಿಗಾಗಿ ಬಹಳ ಶ್ರಮಿಸಿ ಟೈಪ್ 1 ಮತ್ತು ಟೈಪ್ 2 ಡಯಾಬಿಟಿಸ್ ಎರಡಕ್ಕೂ ತಡೆಗೋಡೆಯಾಗುತ್ತದೆ ಈ ಹಾಗಲಕಾಯಿ . ಆದ್ದರಿಂದ ದಿನನಿತ್ಯ 1 / 2 - 1 ಕಪ್ ಹಾಗಲಕಾಯಿ ಜ್ಯೂಸು ಕುಡಿಯುವುದನ್ನು ರೂಡಿಸಿಕೊಳ್ಳಿ .
8 . ವೈದ್ಯರು ನಿಮ್ಮನ್ನು ಪರೀಕ್ಷೆಗೊಳಪಡಿಸಿ ನಿಮಗೆ ನಿಗದಿ ಪಡಿಸಿರುವ ಔಷಧಗಳನ್ನು ಚಾಚೂ ತಪ್ಪದೆ ತೆಗೆದುಕೊಳ್ಳಿ
ನಿಮ್ಮ ಮಧುಮೇಹದ ನಿಯಂತ್ರಣಕ್ಕೆ ನಿಮಗೆ ದೈಹಿಕ ವ್ಯಾಯಾಮ ಮತ್ತು ವಾಕಿಂಗ್ ಎಷ್ಟು ಮುಖ್ಯವೋ ನಿಮಗೆ ವೈದ್ಯರು ನೀಡಿರುವ ಮಾತ್ರೆಗಳು ಟಾನಿಕ್ ಅಷ್ಟೇ ಮುಖ್ಯ . ಬರೀ ದೈಹಿಕ ವ್ಯಾಯಾಮದಿಂದಲೇ ಮಧುಮೇಹವನ್ನು ನಿಯಂತ್ರಿಸಬಹುದು ಎಂಬುದು ಸುಳ್ಳು . ಪ್ರತಿದಿವೂ ಔಷಧಗಳನ್ನು ತೆಗೆದುಕೊಳ್ಳುವುದನ್ನು ಮರೆಯಬಾರದು . ಹಾಗೆಯೇ ವೈದ್ಯರೇನಾದರೂ ವಿಟಮಿನ್ ಗಳು , ಇನ್ಸುಲಿನ್ ಇಂಜೆಕ್ಷನ್ ಅಥವಾ ಅದಕ್ಕೆ ಪೂರಕವಾದ ಓರಲ್ ಇನ್ಸುಲಿನ್ ಶಿಫಾರಸ್ಸು ಮಾಡಿದ್ದರೆ , ಅದನ್ನೂ ಯಾವುದೇ ನಿರ್ಲಕ್ಷ್ಯವಿಲ್ಲದೆ ತೆಗೆದುಕೊಳ್ಳುವುದು ಕಡ್ಡಾಯ .
9 . ನಿಮ್ಮ ಪಾದಗಳನ್ನು ಪ್ರತಿದಿನ ಗಮನಿಸಿ
ಮಧುಮೇಹವಿರುವವರು ತಮ್ಮ ಆರೋಗ್ಯದ ಜೊತೆಗೆ ತಮ್ಮ ಕಾಲುಗಳ ಅದರಲ್ಲೂ ಅವರ ಪಾದಗಳ ಕಡೆ ಹೆಚ್ಚು ಗಮನ ವಹಿಸಬೇಕಾಗುತ್ತದೆ . ಏಕೆಂದರೆ ಬೇರೆ ಜನರಿಗೆ ಹೋಲಿಸಿದರೆ ಮಧುಮೇಹ ಇರುವವರು ಕಾಲುಗಳ ಸಮಸ್ಯೆಯನ್ನು ಬಹಳ ಎದುರಿಸುತ್ತಾರೆ . 2009 ನೇ ಡಯಾಬಿಟಿಕ್ ಮೆಡಿಸಿನ್ ವರದಿಯ ಪ್ರಕಾರ ಮಧುಮೇಹ ಇರುವವರಿಗೆ ನರಗಳ ಮತ್ತು ಚರ್ಮದಲ್ಲಿ ರಕ್ತ ಸಂಚಾರದ ನಾಳಗಳ ಸಮಸ್ಯೆಗಳು ಜೊತೆಗೆ ಅಂಟಿಕೊಂಡಿರುತ್ತವೆ . ಇನ್ನು ಕಾಲುಗಳ ವಿಷಯದಲ್ಲಿ ಏನಾದರೂ ನಿರ್ಲಕ್ಷ್ಯ ವಹಿಸಿದರಂತೂ ಅಪಾಯ ಕಟ್ಟಿಟ್ಟ ಬುತ್ತಿ . ಪ್ರತಿದಿನ ಸಂಜೆ ಊಟಕ್ಕೆ ಮುಂಚೆ ಕಾಲು ತೊಳೆಯುವಾಗ ಕಾಲುಗಳನ್ನು ಸೂಕ್ಷ್ಮವಾಗಿ ಗಮನಿಸಿ . ಅಲ್ಲಿ ಏನಾದರೂ ಹುಣ್ಣುಗಳು , ಕೆಂಪು ಗುಳ್ಳೆಗಳು ಅಥವಾ ನೀವೇ ಯಾವುದಾದರೂ ಕೆಲಸ ಮಾಡಲು ಹೋಗಿ ಮೂಗೇಟು ಮಾಡಿಕೊಂಡಿದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ . ಏಕೆಂದರೆ ಮಧುಮೇಹ ಇರುವವರಿಗೆ ಗಾಯಗಳು ಬೇಗ ಮಾಗುವುದಿಲ್ಲ ಎಂಬ ಮಾತಿದೆ .
10 . ನೀವು ಹೊರಗೆ ಹೋದಾಗ ನಿಮ್ಮದೇ ನೀರಿನ ಬಾಟಲಿ ಮತ್ತು ಊಟದ ಬುತ್ತಿ ಕೊಂಡೊಯ್ಯಿರಿ
ಮೇಲೆ ತಿಳಿಸಿದ ಎಲ್ಲ ಅಂಶಗಳ ಜೊತೆಗೆ ಮಧುಮೇಹಿಗಳು ತಮ್ಮ ಆಹಾರ ಪದ್ದತಿಯ ಬಗ್ಗೆಯೂ ವಿಶೇಷ ಗಮನ ವಹಿಸಬೇಕಾಗಿರುವುದು ಅತ್ಯಗತ್ಯ . ಹೊರಗಡೆ ಎಲ್ಲಾದರೂ ಹೋದರೆ ನಿಮ್ಮ ಜೊತೆಯಲ್ಲೇ ಒಂದು ಶುದ್ಧ ಕುಡಿಯುವ ನೀರಿನ ಬಾಟಲಿ ಮತ್ತು ನಿಮಗೆ ವೈದ್ಯರು ನಿಗದಿಪಡಿಸಿದ ಆಹಾರವನ್ನು ತೆಗೆದುಕೊಂಡು ಹೋಗುವುದು ಸೂಕ್ತ . ಆಗ ಅಲ್ಲಿ ಒಂದು ವೇಳೆ ಬಾಯಾರಿಕೆಯಾಗಿ ರಸ್ತೆ ಬದಿಯಲ್ಲೋ ಅಥವಾ ಯಾವುದಾದರೂ ಬೇಕರಿಯಲ್ಲೋ ಸಿಗುವ ತಂಪು ಪಾನೀಯದ ಮೊರೆ ಹೋಗಿ ಮಧುಮೇಹವನ್ನು ಇನ್ನಷ್ಟು ಜಾಸ್ತಿ ಮಾಡಿಕೊಳ್ಳುವ ಪ್ರಮೇಯ ಬರುವುದಿಲ್ಲ .
ಡಯಾಬಿಟಿಸ್ ಇರುವವರು ಹೆಚ್ಚು ನೀರು ಕುಡಿಯಬೇಕೆಂದು ವೈದ್ಯರು ಹೇಳುತ್ತಾರೆ . ಮಧುಮೇಹಿಗಳು ಎಷ್ಟು ನೀರು ಕುಡಿಯುತ್ತಾರೋ ಅಷ್ಟೂ ಒಳ್ಳೆಯದೇ . ಆಗಾಗ್ಗೆ ನೀರು ಕುಡಿಯಲು ನಿಮಗೆ ನೆನಪಿಸುವಂತೆ ನಿಮ್ಮ ಮೊಬೈಲ್ ನಲ್ಲಿ ರಿಮೈಂಡರ್ ಅನ್ನು ಸೆಟ್ ಮಾಡಿಕೊಳ್ಳಿ ಇಷ್ಟೆಲ್ಲಾ ಅಂಶಗಳನ್ನು ನೀವು ನಿಮ್ಮ ಆತ್ಮಬಲದಿಂದ ಪಾಲಿಸಿದ್ದೇ ಆದರೆ ಮಧುಮೇಹ ನಿಮ್ಮ ಪಾಲಿಗೆ ಒಂದು ರೋಗವೇ ಅಲ್ಲ .
Most Read: ಬಾಟಲಿ ನೀರು ನಲ್ಲಿ ನೀರಿಗಿಂತಲೂ ಹೆಚ್ಚು ಅಪಾಯಕಾರಿ!
" ಸರ್ವೇಜನಃ ಸುಖಿನೋ ಭವಂತು "