Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಕೂದಲುದುರುವ ಸಮಸ್ಯೆಗೆ-ಈರುಳ್ಳಿಯೇ ಸಮರ್ಥ ಮನೆಮದ್ದು
ನಮ್ಮ ಶರೀರದ ಮೇಲಿನ ಕೂದಲು ಒಂದು ವಿಚಿತ್ರ ಆಗರ. ನಮ್ಮ ತಲೆಯಲ್ಲಿ ಗರಿಷ್ಠವಾಗಿರುವ ಕೂದಲ ಸಹಿತ ಇಡಿಯ ಶರೀರದ ಕೂದಲು ಸತತವಾಗಿ ಉದುರುತ್ತಾ, ಉದುರಿದ ಬುಡದಲ್ಲಿ ಹೊಸ ಕೂದಲು ಹುಟ್ಟುತ್ತಾ ಇರುತ್ತದೆ. ಹೊರಚರ್ಮದ ಪದರದ ಜೀವಕೋಶಗಳೂ ಸತ್ತು ಹೊಸ ಜೀವಕೋಶಗಳು ಹುಟ್ಟುತ್ತಾ ಇರುತ್ತವೆ.

ಆದರೆ ಪುರುಷರಿಗೆ ಮಾತ್ರ ತಲೆಗೂದಲು ಉದುರಿ ಬಕ್ಕತಲೆಯಾಗುವುದು ಏಕೆ ಎಂಬುದು ಇಂದಿಗೂ ಬಿಡಿಸಲಾರದ ರಹಸ್ಯ. ಸಾಮಾನ್ಯವಾಗಿ ಎಲ್ಲರ ತಲೆಯಿಂದ ದಿನಕ್ಕೆ ಐವತ್ತರಿಂದ ನೂರು ಕೂದಲು ಹುಟ್ಟುತ್ತವೆ ಮತ್ತು ಅಷ್ಟೇ ಸಂಖ್ಯೆಯ ಕೂದಲು ಹುಟ್ಟಿದರೆ ಮಾತ್ರ ತಲೆಗೂದಲು ಇದ್ದಂತೆಯೇ ಇರುತ್ತದೆ. ಸೊಂಪಾದ ಕೂದಲು ಪಡೆಯಲು ಈರುಳ್ಳಿ ಜ್ಯೂಸ್ ಬಳಸಿ
ಒಂದು ವೇಳೆ ಈ ಸಂಖ್ಯೆ ಹೆಚ್ಚಿದರೆ ಅಥವಾ ಉದುರಿದಷ್ಟು ಪ್ರಮಾಣದಲ್ಲಿ ಹುಟ್ಟದೇ ಇದ್ದರೆ ಬಕ್ಕತಲೆ ಆವರಿಸುತ್ತಾ ಹೋಗುತ್ತದೆ. ಇದಕ್ಕೆ alopecia ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ಪುರುಷರು ಮೂವತ್ತರ ಗಡಿ ದಾಟುತ್ತಿದ್ದಂತೆಯೇ ಈ ಸ್ಥಿತಿ ಪ್ರಾರಂಭವಾಗುತ್ತದೆ. ಹೆಚ್ಚಾಗಿ ಈ ಸ್ಥಿತಿ ಅನುವಂಶಿಕವಾಗಿದ್ದರೂ ಇದು ಪ್ರಾರಂಭವಾಗುವ ಕಾಲವನ್ನು ನಮ್ಮ ಅನಾರೋಗ್ಯಕರ ಆಹಾರಕ್ರಮ, ಒತ್ತಡ, ಹಾರ್ಮೋನುಗಳ ಬದಲಾವಣೆ ಮೊದಲಾದವು ಬೇಗನೇ ಆಹ್ವಾನಿಸಬಹುದು.
ತಲೆಗೂದಲು ಉದುರಲು ಗಂಧಕದ ಕೊರತೆ ಪ್ರಮುಖ ಕಾರಣವಾಗಿದೆ. ನಮ್ಮ ಈರುಳ್ಳಿಗೆ ಘಾಟು ಬರಲು ಕಾರಣವಾಗಿರುವ ಗಂಧಕ ನಮ್ಮ ಕೂದಲು ಉದುರುವುದನ್ನು ತಡೆಯಲೂ ಬಳಕೆಯಾಗುತ್ತದೆ. ಅಲ್ಲದೇ ಉದುರಿದ ಬುಡದಲ್ಲಿ ಹೊಸ ಕೂದಲು ಹುಟ್ಟಲೂ ನೆರವಾಗುತ್ತದೆ. ಗಂಧಕದ ಇರುವಿಕೆಯಿಂದ ಚರ್ಮದ ಬುಡದಲ್ಲಿ ಕೊಲ್ಯಾಜೆನ್ ಎಂಬ ಪೋಷಕಾಂಶ ಉತ್ಪತ್ತಿಯಾಗಿ ಕೂದಲು ದೃಢವಾಗಲು ಮತ್ತು ಬೆಳೆಯಲು ನೆರವಾಗುತ್ತದೆ. ಬನ್ನಿ, ಈರುಳ್ಳಿ ನಮ್ಮ ಕೂದಲಿಗೆ ಹೇಗೆ ಉಪಕಾರಿಯಾಗಬಹುದು ಎಂಬುದನ್ನು ನೋಡೋಣ: ಕೂದಲು ಉದುರುವಿಕೆಗೆ ಈರುಳ್ಳಿ ರಸದ ಚಮತ್ಕಾರ
* ಈರುಳ್ಳಿಯಲ್ಲಿರುವ ಪೋಷಕಾಂಶಗಳು ವಿಶೇಷವಾಗಿ ಕೂದಲ ಬುಡಕ್ಕೆ ಹೆಚ್ಚಿನ ಪೋಷಣೆ ನೀಡಿ ಕೂದಲ ಬುಡ ಕಳೆದುಕೊಂಡಿದ್ದ ಅಂಶಗಳನ್ನು ಮತ್ತೆ ಪಡೆದುಕೊಳ್ಳಲು ನೆರವಾಗುತ್ತದೆ.
* ಕೂದಲ ಬುಡವನ್ನು ಕೊಂಚ ಈರುಳ್ಳಿಯ ಹಸಿ ಭಾಗದಿಂದ ಮಸಾಜ್ ಮಾಡಿದಾಗ ಕೂದಲ ಬುಡದಲ್ಲಿ ರಕ್ತಸಂಚಾರ ಹೆಚ್ಚುವ ಮೂಲಕ ಇನ್ನಷ್ಟು ದೃಢಗೊಳ್ಳುತ್ತದೆ.
* ಈರುಳ್ಳಿಯಲ್ಲಿರುವ ಗಂಧಕ ಕೂದಲನ್ನು ದೃಢಗೊಳಿಸಿ ತೆಳುವಾಗುವುದು, ತುದಿ ಸೀಳುವುದು ಮೊದಲಾದವುಗಳನ್ನು ಕಡಿಮೆ ಮಾಡುತ್ತದೆ. ಈಗ ಕೆಲವು ಈರುಳ್ಳಿಯನ್ನು ಬಳಸುವ ಕೂದಲ ಲೇಪಗಳನ್ನು ನೋಡೋಣ
ಈರುಳ್ಳಿ ರಸದ ಸರಳ ವಿಧಾನ
*ಒಂದು ದೊಡ್ಡ ಗಾತ್ರದ ಈರುಳ್ಳಿಯನ್ನು ಚಿಕ್ಕದಾಗಿ ಹೆಚ್ಚಿ ಮಿಕ್ಸಿಯಲ್ಲಿ ಚಿಕ್ಕದಾಗಿ ಕಡೆದು ಹಿಂಡಿ ರಸ ಸಂಗ್ರಹಿಸಿ.
*ಈ ರಸವನ್ನು ಬೆರಳುಗಳ ತುದಿಗಳ ಮೂಲಕ ಕೂದಲ ಬುಡಕ್ಕೆ ನಯವಾದ ಮಸಾಜ್ ಮೂಲಕ ಹಚ್ಚಿ ಸುಮಾರು ಹದಿನೈದು ನಿಮಿಷ ಹಾಗೇ ಬಿಡಿ. ಬಳಿಕ ಸೌಮ್ಯ ಶಾಂಪೂ ಉಪಯೋಗಿಸಿ ಕೂದಲನ್ನು ತೊಳೆದುಕೊಳ್ಳಿ. ಕೂದಲಿಗೆ ಈರುಳ್ಳಿ ರಸ-ಸ್ಟೆಪ್ ಬೈ ಸ್ಟೆಪ್ ಟಿಪ್ಸ್
ಈರುಳ್ಳಿ ಮತ್ತು ಜೇನಿನ ಲೇಪನ
ಕೂದಲ ಪೋಷಣೆಗೆ ಈರುಳ್ಳಿಯ ಜೊತೆಗೆ ಜೇನು ಸಹಾ ಉತ್ತಮವಾದ ತೇವಕಾರಕವಾಗಿದೆ. ಇವುಗಳ ಜೊತೆ ಕೂದಲ ಆರೋಗ್ಯವನ್ನು ವೃದ್ಧಿಸುವುದರ ಜೊತೆಗೇ ಕೂದಲು ಉದುರುವುದನ್ನೂ ನಿಲ್ಲಿಸುತ್ತದೆ. ಇದಕ್ಕಾಗಿ ಸುಮಾರು ಕಾಲು ಕಪ್ ಆದರೂ ಈರುಳ್ಳಿಯ ರಸವನ್ನು ಸಂಗ್ರಹಿಸಬೇಕು.
*ಬಳಿಕ ಇದಕ್ಕೆ ಒಂದು ದೊಡ್ಡಚಮಚ ಜೇನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
*ಈ ಮಿಶ್ರಣವನ್ನು ಕೂದಲಿಗೆ ಹಚ್ಚಿ ಮಸಾಜ್ ಮಾಡಿ ಕೊಂಚ ಹೊತ್ತಿನ ಬಳಿಕ ಸೌಮ್ಯ ಶಾಂಪೂ ಬಳಸಿ ತೊಳೆದುಕೊಳ್ಳಿ.
*ಒಂದು ವೇಳೆ ಈ ಮಿಶ್ರಣ ಉಳಿದರೆ ಇದನ್ನು ಕುಡಿಯುವ ಮೂಲಕ ದೇಹದ ಒಳಗಿನಿಂದಲೂ ಹೆಚ್ಚಿನ ಪೋಷಣೆ ನೀಡಬಹುದು.



Click it and Unblock the Notifications




