Latest Updates
-
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ! -
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್!
ಕೂದಲುದುರುವ ಸಮಸ್ಯೆಗೆ-ಈರುಳ್ಳಿಯೇ ಸಮರ್ಥ ಮನೆಮದ್ದು
ನಮ್ಮ ಶರೀರದ ಮೇಲಿನ ಕೂದಲು ಒಂದು ವಿಚಿತ್ರ ಆಗರ. ನಮ್ಮ ತಲೆಯಲ್ಲಿ ಗರಿಷ್ಠವಾಗಿರುವ ಕೂದಲ ಸಹಿತ ಇಡಿಯ ಶರೀರದ ಕೂದಲು ಸತತವಾಗಿ ಉದುರುತ್ತಾ, ಉದುರಿದ ಬುಡದಲ್ಲಿ ಹೊಸ ಕೂದಲು ಹುಟ್ಟುತ್ತಾ ಇರುತ್ತದೆ. ಹೊರಚರ್ಮದ ಪದರದ ಜೀವಕೋಶಗಳೂ ಸತ್ತು ಹೊಸ ಜೀವಕೋಶಗಳು ಹುಟ್ಟುತ್ತಾ ಇರುತ್ತವೆ.

ಆದರೆ ಪುರುಷರಿಗೆ ಮಾತ್ರ ತಲೆಗೂದಲು ಉದುರಿ ಬಕ್ಕತಲೆಯಾಗುವುದು ಏಕೆ ಎಂಬುದು ಇಂದಿಗೂ ಬಿಡಿಸಲಾರದ ರಹಸ್ಯ. ಸಾಮಾನ್ಯವಾಗಿ ಎಲ್ಲರ ತಲೆಯಿಂದ ದಿನಕ್ಕೆ ಐವತ್ತರಿಂದ ನೂರು ಕೂದಲು ಹುಟ್ಟುತ್ತವೆ ಮತ್ತು ಅಷ್ಟೇ ಸಂಖ್ಯೆಯ ಕೂದಲು ಹುಟ್ಟಿದರೆ ಮಾತ್ರ ತಲೆಗೂದಲು ಇದ್ದಂತೆಯೇ ಇರುತ್ತದೆ. ಸೊಂಪಾದ ಕೂದಲು ಪಡೆಯಲು ಈರುಳ್ಳಿ ಜ್ಯೂಸ್ ಬಳಸಿ
ಒಂದು ವೇಳೆ ಈ ಸಂಖ್ಯೆ ಹೆಚ್ಚಿದರೆ ಅಥವಾ ಉದುರಿದಷ್ಟು ಪ್ರಮಾಣದಲ್ಲಿ ಹುಟ್ಟದೇ ಇದ್ದರೆ ಬಕ್ಕತಲೆ ಆವರಿಸುತ್ತಾ ಹೋಗುತ್ತದೆ. ಇದಕ್ಕೆ alopecia ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ಪುರುಷರು ಮೂವತ್ತರ ಗಡಿ ದಾಟುತ್ತಿದ್ದಂತೆಯೇ ಈ ಸ್ಥಿತಿ ಪ್ರಾರಂಭವಾಗುತ್ತದೆ. ಹೆಚ್ಚಾಗಿ ಈ ಸ್ಥಿತಿ ಅನುವಂಶಿಕವಾಗಿದ್ದರೂ ಇದು ಪ್ರಾರಂಭವಾಗುವ ಕಾಲವನ್ನು ನಮ್ಮ ಅನಾರೋಗ್ಯಕರ ಆಹಾರಕ್ರಮ, ಒತ್ತಡ, ಹಾರ್ಮೋನುಗಳ ಬದಲಾವಣೆ ಮೊದಲಾದವು ಬೇಗನೇ ಆಹ್ವಾನಿಸಬಹುದು.
ತಲೆಗೂದಲು ಉದುರಲು ಗಂಧಕದ ಕೊರತೆ ಪ್ರಮುಖ ಕಾರಣವಾಗಿದೆ. ನಮ್ಮ ಈರುಳ್ಳಿಗೆ ಘಾಟು ಬರಲು ಕಾರಣವಾಗಿರುವ ಗಂಧಕ ನಮ್ಮ ಕೂದಲು ಉದುರುವುದನ್ನು ತಡೆಯಲೂ ಬಳಕೆಯಾಗುತ್ತದೆ. ಅಲ್ಲದೇ ಉದುರಿದ ಬುಡದಲ್ಲಿ ಹೊಸ ಕೂದಲು ಹುಟ್ಟಲೂ ನೆರವಾಗುತ್ತದೆ. ಗಂಧಕದ ಇರುವಿಕೆಯಿಂದ ಚರ್ಮದ ಬುಡದಲ್ಲಿ ಕೊಲ್ಯಾಜೆನ್ ಎಂಬ ಪೋಷಕಾಂಶ ಉತ್ಪತ್ತಿಯಾಗಿ ಕೂದಲು ದೃಢವಾಗಲು ಮತ್ತು ಬೆಳೆಯಲು ನೆರವಾಗುತ್ತದೆ. ಬನ್ನಿ, ಈರುಳ್ಳಿ ನಮ್ಮ ಕೂದಲಿಗೆ ಹೇಗೆ ಉಪಕಾರಿಯಾಗಬಹುದು ಎಂಬುದನ್ನು ನೋಡೋಣ: ಕೂದಲು ಉದುರುವಿಕೆಗೆ ಈರುಳ್ಳಿ ರಸದ ಚಮತ್ಕಾರ
* ಈರುಳ್ಳಿಯಲ್ಲಿರುವ ಪೋಷಕಾಂಶಗಳು ವಿಶೇಷವಾಗಿ ಕೂದಲ ಬುಡಕ್ಕೆ ಹೆಚ್ಚಿನ ಪೋಷಣೆ ನೀಡಿ ಕೂದಲ ಬುಡ ಕಳೆದುಕೊಂಡಿದ್ದ ಅಂಶಗಳನ್ನು ಮತ್ತೆ ಪಡೆದುಕೊಳ್ಳಲು ನೆರವಾಗುತ್ತದೆ.
* ಕೂದಲ ಬುಡವನ್ನು ಕೊಂಚ ಈರುಳ್ಳಿಯ ಹಸಿ ಭಾಗದಿಂದ ಮಸಾಜ್ ಮಾಡಿದಾಗ ಕೂದಲ ಬುಡದಲ್ಲಿ ರಕ್ತಸಂಚಾರ ಹೆಚ್ಚುವ ಮೂಲಕ ಇನ್ನಷ್ಟು ದೃಢಗೊಳ್ಳುತ್ತದೆ.
* ಈರುಳ್ಳಿಯಲ್ಲಿರುವ ಗಂಧಕ ಕೂದಲನ್ನು ದೃಢಗೊಳಿಸಿ ತೆಳುವಾಗುವುದು, ತುದಿ ಸೀಳುವುದು ಮೊದಲಾದವುಗಳನ್ನು ಕಡಿಮೆ ಮಾಡುತ್ತದೆ. ಈಗ ಕೆಲವು ಈರುಳ್ಳಿಯನ್ನು ಬಳಸುವ ಕೂದಲ ಲೇಪಗಳನ್ನು ನೋಡೋಣ
ಈರುಳ್ಳಿ ರಸದ ಸರಳ ವಿಧಾನ
*ಒಂದು ದೊಡ್ಡ ಗಾತ್ರದ ಈರುಳ್ಳಿಯನ್ನು ಚಿಕ್ಕದಾಗಿ ಹೆಚ್ಚಿ ಮಿಕ್ಸಿಯಲ್ಲಿ ಚಿಕ್ಕದಾಗಿ ಕಡೆದು ಹಿಂಡಿ ರಸ ಸಂಗ್ರಹಿಸಿ.
*ಈ ರಸವನ್ನು ಬೆರಳುಗಳ ತುದಿಗಳ ಮೂಲಕ ಕೂದಲ ಬುಡಕ್ಕೆ ನಯವಾದ ಮಸಾಜ್ ಮೂಲಕ ಹಚ್ಚಿ ಸುಮಾರು ಹದಿನೈದು ನಿಮಿಷ ಹಾಗೇ ಬಿಡಿ. ಬಳಿಕ ಸೌಮ್ಯ ಶಾಂಪೂ ಉಪಯೋಗಿಸಿ ಕೂದಲನ್ನು ತೊಳೆದುಕೊಳ್ಳಿ. ಕೂದಲಿಗೆ ಈರುಳ್ಳಿ ರಸ-ಸ್ಟೆಪ್ ಬೈ ಸ್ಟೆಪ್ ಟಿಪ್ಸ್
ಈರುಳ್ಳಿ ಮತ್ತು ಜೇನಿನ ಲೇಪನ
ಕೂದಲ ಪೋಷಣೆಗೆ ಈರುಳ್ಳಿಯ ಜೊತೆಗೆ ಜೇನು ಸಹಾ ಉತ್ತಮವಾದ ತೇವಕಾರಕವಾಗಿದೆ. ಇವುಗಳ ಜೊತೆ ಕೂದಲ ಆರೋಗ್ಯವನ್ನು ವೃದ್ಧಿಸುವುದರ ಜೊತೆಗೇ ಕೂದಲು ಉದುರುವುದನ್ನೂ ನಿಲ್ಲಿಸುತ್ತದೆ. ಇದಕ್ಕಾಗಿ ಸುಮಾರು ಕಾಲು ಕಪ್ ಆದರೂ ಈರುಳ್ಳಿಯ ರಸವನ್ನು ಸಂಗ್ರಹಿಸಬೇಕು.
*ಬಳಿಕ ಇದಕ್ಕೆ ಒಂದು ದೊಡ್ಡಚಮಚ ಜೇನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
*ಈ ಮಿಶ್ರಣವನ್ನು ಕೂದಲಿಗೆ ಹಚ್ಚಿ ಮಸಾಜ್ ಮಾಡಿ ಕೊಂಚ ಹೊತ್ತಿನ ಬಳಿಕ ಸೌಮ್ಯ ಶಾಂಪೂ ಬಳಸಿ ತೊಳೆದುಕೊಳ್ಳಿ.
*ಒಂದು ವೇಳೆ ಈ ಮಿಶ್ರಣ ಉಳಿದರೆ ಇದನ್ನು ಕುಡಿಯುವ ಮೂಲಕ ದೇಹದ ಒಳಗಿನಿಂದಲೂ ಹೆಚ್ಚಿನ ಪೋಷಣೆ ನೀಡಬಹುದು.



Click it and Unblock the Notifications



