Just In
- 1 hr ago ಹೋಟೆಲ್ ರುಚಿಯ ಪನೀರ್ ಪೆಪ್ಪರ್ ಫ್ರೈ ಮನೆಯಲ್ಲೇ ಮಾಡಿ..! 10 ನಿಮಿಷದಲ್ಲಿ ರೆಡಿ..!
- 10 hrs ago ಮೀನ ರಾಶಿಯಲ್ಲಿ ರಾಹು-ಮಂಗಳ ಯುತಿಯಿಂದ ಅಂಗಾರಕ ಯೋಗ: 12 ರಾಶಿಗಳ ಮೇಲಿರಲಿದೆ ಈ ನಕರಾತ್ಮಕ ಪರಿಣಾ
- 11 hrs ago ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- 11 hrs ago ಪುರುಷರಲ್ಲಿ ಹೆಚ್ಚಾಗುತ್ತಿದೆ ಬಂಜೆತನ: ಪುರುಷರು ಈ ಆಹಾರ ಸೇವಿಸಿದರೆ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚುವುದು
Don't Miss
- News Gold Rates Today: ನಿನ್ನೆಗಿಂತ ಕೊಂಚ ಇಳಿಕೆಯಾದ ಚಿನ್ನದ ಬೆಲೆ, ಯಾವ ನಗರದಲ್ಲಿ ಎಷ್ಟು?
- Finance ನೂಡಲ್ಸ್ ಪ್ಯಾಕೆಟ್ ಒಳಗಿತ್ತು ವಜ್ರಗಳ ರಾಶಿ, ಬರೋಬ್ಬರಿ 6.46 ಕೋಟಿ ರೂ. ಮೌಲ್ಯದ ಚಿನ್ನ, ಡೈಮಂಡ್ ವಶ!
- Technology ಇಂದು ವಿವೋ T3x 5G ಸ್ಮಾರ್ಟ್ಫೋನ್ ಫಸ್ಟ್ ಸೇಲ್; ಬೆಲೆ 13,499ರೂ.!
- Automobiles Triber: 7 ಜನ ಹೋಗಬಹುದಾದ ರೆನಾಲ್ಟ್ ಟ್ರೈಬರ್ ಖರೀದಿಸಬೇಕೇ.. ಆನ್-ರೋಡ್ ಬೆಲೆ ಎಷ್ಟು, EMI ಏನು?
- Sports CSK vs LSG IPL 2024: ಐಪಿಎಲ್ನಲ್ಲಿ ಈ ದಾಖಲೆ ಮಾಡಿದ ಮೊದಲ ಸಿಎಸ್ಕೆ ನಾಯಕ ರುತುರಾಜ್ ಗಾಯಕ್ವಾಡ್
- Movies 'KGF-2' ಚಿತ್ರದಿಂದ ಸಿಕ್ಕಿದ್ದು 200 ಕೋಟಿ ರೂ.; 'ಟಾಕ್ಸಿಕ್', 'ರಾಮಾಯಣ'ಕ್ಕೆ ಯಶ್ 50-50 ಡೀಲ್!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕೂದಲುದುರುವ ಸಮಸ್ಯೆಗೆ-ಈರುಳ್ಳಿಯೇ ಸಮರ್ಥ ಮನೆಮದ್ದು
ನಮ್ಮ ಶರೀರದ ಮೇಲಿನ ಕೂದಲು ಒಂದು ವಿಚಿತ್ರ ಆಗರ. ನಮ್ಮ ತಲೆಯಲ್ಲಿ ಗರಿಷ್ಠವಾಗಿರುವ ಕೂದಲ ಸಹಿತ ಇಡಿಯ ಶರೀರದ ಕೂದಲು ಸತತವಾಗಿ ಉದುರುತ್ತಾ, ಉದುರಿದ ಬುಡದಲ್ಲಿ ಹೊಸ ಕೂದಲು ಹುಟ್ಟುತ್ತಾ ಇರುತ್ತದೆ. ಹೊರಚರ್ಮದ ಪದರದ ಜೀವಕೋಶಗಳೂ ಸತ್ತು ಹೊಸ ಜೀವಕೋಶಗಳು ಹುಟ್ಟುತ್ತಾ ಇರುತ್ತವೆ.
ಆದರೆ ಪುರುಷರಿಗೆ ಮಾತ್ರ ತಲೆಗೂದಲು ಉದುರಿ ಬಕ್ಕತಲೆಯಾಗುವುದು ಏಕೆ ಎಂಬುದು ಇಂದಿಗೂ ಬಿಡಿಸಲಾರದ ರಹಸ್ಯ. ಸಾಮಾನ್ಯವಾಗಿ ಎಲ್ಲರ ತಲೆಯಿಂದ ದಿನಕ್ಕೆ ಐವತ್ತರಿಂದ ನೂರು ಕೂದಲು ಹುಟ್ಟುತ್ತವೆ ಮತ್ತು ಅಷ್ಟೇ ಸಂಖ್ಯೆಯ ಕೂದಲು ಹುಟ್ಟಿದರೆ ಮಾತ್ರ ತಲೆಗೂದಲು ಇದ್ದಂತೆಯೇ ಇರುತ್ತದೆ. ಸೊಂಪಾದ ಕೂದಲು ಪಡೆಯಲು ಈರುಳ್ಳಿ ಜ್ಯೂಸ್ ಬಳಸಿ
ಒಂದು ವೇಳೆ ಈ ಸಂಖ್ಯೆ ಹೆಚ್ಚಿದರೆ ಅಥವಾ ಉದುರಿದಷ್ಟು ಪ್ರಮಾಣದಲ್ಲಿ ಹುಟ್ಟದೇ ಇದ್ದರೆ ಬಕ್ಕತಲೆ ಆವರಿಸುತ್ತಾ ಹೋಗುತ್ತದೆ. ಇದಕ್ಕೆ alopecia ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ಪುರುಷರು ಮೂವತ್ತರ ಗಡಿ ದಾಟುತ್ತಿದ್ದಂತೆಯೇ ಈ ಸ್ಥಿತಿ ಪ್ರಾರಂಭವಾಗುತ್ತದೆ. ಹೆಚ್ಚಾಗಿ ಈ ಸ್ಥಿತಿ ಅನುವಂಶಿಕವಾಗಿದ್ದರೂ ಇದು ಪ್ರಾರಂಭವಾಗುವ ಕಾಲವನ್ನು ನಮ್ಮ ಅನಾರೋಗ್ಯಕರ ಆಹಾರಕ್ರಮ, ಒತ್ತಡ, ಹಾರ್ಮೋನುಗಳ ಬದಲಾವಣೆ ಮೊದಲಾದವು ಬೇಗನೇ ಆಹ್ವಾನಿಸಬಹುದು.
ತಲೆಗೂದಲು ಉದುರಲು ಗಂಧಕದ ಕೊರತೆ ಪ್ರಮುಖ ಕಾರಣವಾಗಿದೆ. ನಮ್ಮ ಈರುಳ್ಳಿಗೆ ಘಾಟು ಬರಲು ಕಾರಣವಾಗಿರುವ ಗಂಧಕ ನಮ್ಮ ಕೂದಲು ಉದುರುವುದನ್ನು ತಡೆಯಲೂ ಬಳಕೆಯಾಗುತ್ತದೆ. ಅಲ್ಲದೇ ಉದುರಿದ ಬುಡದಲ್ಲಿ ಹೊಸ ಕೂದಲು ಹುಟ್ಟಲೂ ನೆರವಾಗುತ್ತದೆ. ಗಂಧಕದ ಇರುವಿಕೆಯಿಂದ ಚರ್ಮದ ಬುಡದಲ್ಲಿ ಕೊಲ್ಯಾಜೆನ್ ಎಂಬ ಪೋಷಕಾಂಶ ಉತ್ಪತ್ತಿಯಾಗಿ ಕೂದಲು ದೃಢವಾಗಲು ಮತ್ತು ಬೆಳೆಯಲು ನೆರವಾಗುತ್ತದೆ. ಬನ್ನಿ, ಈರುಳ್ಳಿ ನಮ್ಮ ಕೂದಲಿಗೆ ಹೇಗೆ ಉಪಕಾರಿಯಾಗಬಹುದು ಎಂಬುದನ್ನು ನೋಡೋಣ: ಕೂದಲು ಉದುರುವಿಕೆಗೆ ಈರುಳ್ಳಿ ರಸದ ಚಮತ್ಕಾರ
* ಈರುಳ್ಳಿಯಲ್ಲಿರುವ ಪೋಷಕಾಂಶಗಳು ವಿಶೇಷವಾಗಿ ಕೂದಲ ಬುಡಕ್ಕೆ ಹೆಚ್ಚಿನ ಪೋಷಣೆ ನೀಡಿ ಕೂದಲ ಬುಡ ಕಳೆದುಕೊಂಡಿದ್ದ ಅಂಶಗಳನ್ನು ಮತ್ತೆ ಪಡೆದುಕೊಳ್ಳಲು ನೆರವಾಗುತ್ತದೆ.
* ಕೂದಲ ಬುಡವನ್ನು ಕೊಂಚ ಈರುಳ್ಳಿಯ ಹಸಿ ಭಾಗದಿಂದ ಮಸಾಜ್ ಮಾಡಿದಾಗ ಕೂದಲ ಬುಡದಲ್ಲಿ ರಕ್ತಸಂಚಾರ ಹೆಚ್ಚುವ ಮೂಲಕ ಇನ್ನಷ್ಟು ದೃಢಗೊಳ್ಳುತ್ತದೆ.
* ಈರುಳ್ಳಿಯಲ್ಲಿರುವ ಗಂಧಕ ಕೂದಲನ್ನು ದೃಢಗೊಳಿಸಿ ತೆಳುವಾಗುವುದು, ತುದಿ ಸೀಳುವುದು ಮೊದಲಾದವುಗಳನ್ನು ಕಡಿಮೆ ಮಾಡುತ್ತದೆ. ಈಗ ಕೆಲವು ಈರುಳ್ಳಿಯನ್ನು ಬಳಸುವ ಕೂದಲ ಲೇಪಗಳನ್ನು ನೋಡೋಣ
ಈರುಳ್ಳಿ
ರಸದ
ಸರಳ
ವಿಧಾನ
*ಒಂದು
ದೊಡ್ಡ
ಗಾತ್ರದ
ಈರುಳ್ಳಿಯನ್ನು
ಚಿಕ್ಕದಾಗಿ
ಹೆಚ್ಚಿ
ಮಿಕ್ಸಿಯಲ್ಲಿ
ಚಿಕ್ಕದಾಗಿ
ಕಡೆದು
ಹಿಂಡಿ
ರಸ
ಸಂಗ್ರಹಿಸಿ.
*ಈ
ರಸವನ್ನು
ಬೆರಳುಗಳ
ತುದಿಗಳ
ಮೂಲಕ
ಕೂದಲ
ಬುಡಕ್ಕೆ
ನಯವಾದ
ಮಸಾಜ್
ಮೂಲಕ
ಹಚ್ಚಿ
ಸುಮಾರು
ಹದಿನೈದು
ನಿಮಿಷ
ಹಾಗೇ
ಬಿಡಿ.
ಬಳಿಕ
ಸೌಮ್ಯ
ಶಾಂಪೂ
ಉಪಯೋಗಿಸಿ
ಕೂದಲನ್ನು
ತೊಳೆದುಕೊಳ್ಳಿ.
ಕೂದಲಿಗೆ
ಈರುಳ್ಳಿ
ರಸ-ಸ್ಟೆಪ್
ಬೈ
ಸ್ಟೆಪ್
ಟಿಪ್ಸ್
ಈರುಳ್ಳಿ
ಮತ್ತು
ಜೇನಿನ
ಲೇಪನ
ಕೂದಲ
ಪೋಷಣೆಗೆ
ಈರುಳ್ಳಿಯ
ಜೊತೆಗೆ
ಜೇನು
ಸಹಾ
ಉತ್ತಮವಾದ
ತೇವಕಾರಕವಾಗಿದೆ.
ಇವುಗಳ
ಜೊತೆ
ಕೂದಲ
ಆರೋಗ್ಯವನ್ನು
ವೃದ್ಧಿಸುವುದರ
ಜೊತೆಗೇ
ಕೂದಲು
ಉದುರುವುದನ್ನೂ
ನಿಲ್ಲಿಸುತ್ತದೆ.
ಇದಕ್ಕಾಗಿ
ಸುಮಾರು
ಕಾಲು
ಕಪ್
ಆದರೂ
ಈರುಳ್ಳಿಯ
ರಸವನ್ನು
ಸಂಗ್ರಹಿಸಬೇಕು.
*ಬಳಿಕ
ಇದಕ್ಕೆ
ಒಂದು
ದೊಡ್ಡಚಮಚ
ಜೇನು
ಸೇರಿಸಿ
ಚೆನ್ನಾಗಿ
ಮಿಶ್ರಣ
ಮಾಡಿ.
*ಈ
ಮಿಶ್ರಣವನ್ನು
ಕೂದಲಿಗೆ
ಹಚ್ಚಿ
ಮಸಾಜ್
ಮಾಡಿ
ಕೊಂಚ
ಹೊತ್ತಿನ
ಬಳಿಕ
ಸೌಮ್ಯ
ಶಾಂಪೂ
ಬಳಸಿ
ತೊಳೆದುಕೊಳ್ಳಿ.
*ಒಂದು
ವೇಳೆ
ಈ
ಮಿಶ್ರಣ
ಉಳಿದರೆ
ಇದನ್ನು
ಕುಡಿಯುವ
ಮೂಲಕ
ದೇಹದ
ಒಳಗಿನಿಂದಲೂ
ಹೆಚ್ಚಿನ
ಪೋಷಣೆ
ನೀಡಬಹುದು.