Latest Updates
-
ಬೆಂಗಳೂರಿನಲ್ಲಿ 'ಫ್ರೀಡಂ ಫ್ರಮ್ ವೇಸ್ಟ್': ದಂಡದಿಂದ ಪಾರಾಗಲು ಆಗಸ್ಟ್ 15ರೊಳಗೆ ಈ ಕೆಲಸ ಮಾಡಿ! -
8,000mAh ಬ್ಯಾಟರಿಯ ರೆಡ್ಮಿ ನೋಟ್ 17 ಲಾಂಚ್: ಖರೀದಿಸುವ ಮುನ್ನ ನೀವು ತಿಳಿಯಲೇಬೇಕಾದ ಪ್ರಮುಖ ವಿಷಯಗಳಿವು! -
ಬಾಣಂತಿಯರಿಗೆ ಬೆಂಬಲ: ತಾಯಿಯ ಆರೋಗ್ಯಕ್ಕೆ ತಂದೆಯ ಸಣ್ಣ ಸಹಾಯ ಎಷ್ಟು ಮುಖ್ಯ? -
8,000mAh ಬ್ಯಾಟರಿಯ POCO M8 Power ಲಾಂಚ್: ಈ ಫೋನ್ ಖರೀದಿಸುವ ಮುನ್ನ ನೀವು ತಿಳಿಯಲೇಬೇಕಾದ ವಿಷಯಗಳಿವು! -
ರಾಷ್ಟ್ರೀಯ ಮೂಳೆ ಮತ್ತು ಕೀಲು ದಿನ: ಬೆನ್ನು ಮತ್ತು ಮೊಣಕಾಲು ನೋವಿಗೆ ಈ 10 ನಿಮಿಷದ ವ್ಯಾಯಾಮವೇ ಮದ್ದು! -
ಫ್ರೆಂಡ್ಶಿಪ್ ಡೇ ವಿಶ್ ಮಾಡೋಕೆ ಮರೆತಿದ್ದೀರಾ? ನಿಮ್ಮ ಸ್ನೇಹಿತರ ಮನ ಗೆಲ್ಲಲು ಇಲ್ಲಿದೆ ಸಿಂಪಲ್ ಟಿಪ್ಸ್! -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: 999 ರೂ. ಒಳಗಿನ ಬೆಸ್ಟ್ ಡೀಲ್ಗಳು ಮತ್ತು ಶಾಪಿಂಗ್ ಟಿಪ್ಸ್! -
ಶ್ರಾವಣ ಸೋಮವಾರದ ಉಪವಾಸ: ಆಫೀಸ್ ಕೆಲಸದ ನಡುವೆಯೂ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಸರಳ ಟಿಪ್ಸ್! -
ಟಾಟಾ ಮುಂಬೈ ಮ್ಯಾರಥಾನ್ 2027: ನೋಂದಣಿಗೆ ಸಿದ್ಧರಾಗಿ, ಓಟಗಾರರಿಗೆ ಇಲ್ಲಿದೆ ಮಹತ್ವದ ಸಲಹೆಗಳು! -
ಆರ್ಬಿಐ ಸಭೆಗೂ ಮುನ್ನ ದಂಪತಿಗಳಿಗೆ ಎಚ್ಚರಿಕೆ: ಇಂದೇ ಈ 30 ನಿಮಿಷದ ಫೈನಾನ್ಶಿಯಲ್ ಟೆಸ್ಟ್ ಮಾಡಿ!
ಫೇಸ್ಬುಕ್ಕಲ್ಲಿ ಕಾವಿ ತೊಟ್ಟ ನೆಟ್-ಸ್ಯಾವಿ ಸ್ವಾಮೀಜಿಗಳು

ಮರೆತೇಹೋಗಿದ್ದ ಚಡ್ಡಿ ಗೆಳೆಯರು ಅಚಾನಕ್ಕಾಗಿ ಸಿಗುತ್ತಾರೆ. ಎಂದೂ ಭೇಟಿಯಾಗಿರದ ಎರಡು ಜೀವಗಳು ಫೇಸ್ಬುಕ್ ಮುಖಾಂತರ ಒಂದಾಗಿರುತ್ತವೆ. ಎರಡು ದೇಹ ಒಂದು ಜೀವ ಎಂಬಂತಿದ್ದ ಜೋಡಿಗಳ ರಹಸ್ಯಗಳೆಲ್ಲ ಇಲ್ಲಿ ಬಯಲಾಗಿವೆ, ವಿಚ್ಛೇದನಗಳಾಗಿವೆ.
ಒಟ್ಟಿನಲ್ಲಿ, ಒಂದು ಪುಟ್ಟ ಜಗತ್ತೇ ಇಲ್ಲಿ ಮನೆಮಾಡಿಕೊಂಡಿದೆ. ನೆಟ್ ಜೊತೆ ಕೊಂಡಿಹಾಕಿಕೊಂಡಿರುವ ಮನುಜರ ಅರ್ಧ ಜೀವನ ಇಲ್ಲೇ ಕಳೆದುಹೋಗಿರುತ್ತದೆ. ಇಲ್ಲಿ ಉಚ್ಚ ನೀಚ, ಮೇಲು ಕೀಳು, ಬಡವ ಬಲ್ಲಿದ, ಮಾನವ ದಾನವ, ಆ ಜಾತಿ ಈ ಜಾತಿ ಎಂಬ ತಾರತಮ್ಯವಿಲ್ಲ.
ಇಲ್ಲಿನ ಜನರದ್ದು ಒಂದು ಜಾತಿ, ಒಂದೇ ಕುಲ. ಅದು ಇಂಟರ್ನೆಟ್ಟಿಗರ ಕುಲ. ಕೀಬೋರ್ಡ್ ಕುಟ್ಟಲು ಕಲಿತ ಮಕ್ಕಳು ಸೇರಿಕೊಂಡಿದ್ದಾರೆ. ಕೊನೆಯ ಸಂದೇಶ ಟೈಪಿಸಿ ಪ್ರಾಣ ಬಿಟ್ಟವರಿದ್ದಾರೆ. ತೋಚಿದ್ದನ್ನು ಬರೆಯಲು ಮತ್ತು ಬರೆದಿದ್ದನ್ನು ಇತರರಿಗೆ ತಲುಪಿಸಲು ದಕ್ಕಿರುವ ಅದ್ಭುತವಾದ ವೇದಿಕೆ.
ಇದೇ ವೇದಿಕೆಗೆ ನಮ್ಮ ಕನ್ನಡ ನಾಡಿನ ಅನೇಕ ಮಠಗಳ ಸ್ವಾಮೀಜಿಗಳು ಬಂದು ಸೇರಿಕೊಂಡಿದ್ದಾರೆ. ಇಡೀ ಜಗತ್ತಿನ ಮಾನವ ಕುಲವನ್ನು ನೆಟ್ ಚಟುವಟಿಕೆಗಳು ಮುಖಾಂತರ ತಲುಪುತ್ತಿದ್ದಾರೆ. ಫೇಸ್ಬುಕ್ ಖಾತೆಯನ್ನು ಅವರೇ ಸೃಷ್ಟಿಸಿದ್ದಾರೋ, ಅವರ ಭಕ್ತಾದಿಗಳು ಸೃಷ್ಟಿಸಿದ್ದಾರೋ...
ಅಂತೂ ಫೇಸ್ಬುಕ್ನಲ್ಲಿ ಸ್ವಾಮೀಜಿಗಳೇನಕರು ಮಠ, ಅನುಭವ ಮಂಟಪವನ್ನು ಕಟ್ಟಿಕೊಂಡಿದ್ದಾರೆ. ಇಂತಿರುವ ಕಾವಿ ತೊಟ್ಟ ನೆಟ್-ಸ್ಯಾವಿ ಸ್ವಾಮೀಜಿಗಳ ಫೇಸ್ ಬುಕ್ ತಾಣವನ್ನು ಪರಿಚಯಿಸುವ ಸರಣಿ ಲೇಖನ ಆರಂಭವಾಗಲಿದೆ, ನಿರೀಕ್ಷಿಸಿ.



Click it and Unblock the Notifications