Latest Updates
-
ಅಕ್ಷಯ ತೃತೀಯ: ಮದುವೆ ಮತ್ತು ಚಿನ್ನದ ಖರೀದಿಗೆ ಹೀಗೆ ಪ್ಲಾನ್ ಮಾಡಿ -
ಮನೆಯನ್ನು ತಂಪಾಗಿಡಲು ಹೀಟ್ವೇವ್ ಸಮಯದಲ್ಲಿ ಈ ಟ್ರಿಕ್ಸ್ ಫಾಲೋ ಮಾಡಿ -
ಮಾವಿನ ಹಣ್ಣು ಖರೀದಿಸುವ ಮುನ್ನ ಈ ತಪ್ಪು ಮಾಡಬೇಡಿ! -
ಅಕ್ಷಯ ತೃತೀಯ ಚಿನ್ನದ ಖರೀದಿ: ಈ ಆಫರ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಯಲ್ಲೂ ಫಿಟ್ ಆಗಿರಲು ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಷಯ ತೃತೀಯ: ಸಾಲದ ಸುಳಿಯಿಲ್ಲದೆ ಚಿನ್ನ ಖರೀದಿಸುವುದು ಹೇಗೆ? -
ಬಿಸಿಲಿನ ತಾಪ: ನಿಮ್ಮ ಮನೆಯನ್ನು ತಂಪಾಗಿಡಲು ಅದ್ಭುತ ಟಿಪ್ಸ್ -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ತಂಪು ಆಹಾರಗಳೇ ಮದ್ದು -
ಹಬ್ಬದ ಸೀರೆ ಫ್ಯಾಷನ್: ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಬಿಸಿಗಾಳಿ ಎಚ್ಚರಿಕೆ: ಸುಡುವ ಬಿಸಿಲಿನಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ಫೇಸ್ಬುಕ್ಕಲ್ಲಿ ಕಾವಿ ತೊಟ್ಟ ನೆಟ್-ಸ್ಯಾವಿ ಸ್ವಾಮೀಜಿಗಳು

ಮರೆತೇಹೋಗಿದ್ದ ಚಡ್ಡಿ ಗೆಳೆಯರು ಅಚಾನಕ್ಕಾಗಿ ಸಿಗುತ್ತಾರೆ. ಎಂದೂ ಭೇಟಿಯಾಗಿರದ ಎರಡು ಜೀವಗಳು ಫೇಸ್ಬುಕ್ ಮುಖಾಂತರ ಒಂದಾಗಿರುತ್ತವೆ. ಎರಡು ದೇಹ ಒಂದು ಜೀವ ಎಂಬಂತಿದ್ದ ಜೋಡಿಗಳ ರಹಸ್ಯಗಳೆಲ್ಲ ಇಲ್ಲಿ ಬಯಲಾಗಿವೆ, ವಿಚ್ಛೇದನಗಳಾಗಿವೆ.
ಒಟ್ಟಿನಲ್ಲಿ, ಒಂದು ಪುಟ್ಟ ಜಗತ್ತೇ ಇಲ್ಲಿ ಮನೆಮಾಡಿಕೊಂಡಿದೆ. ನೆಟ್ ಜೊತೆ ಕೊಂಡಿಹಾಕಿಕೊಂಡಿರುವ ಮನುಜರ ಅರ್ಧ ಜೀವನ ಇಲ್ಲೇ ಕಳೆದುಹೋಗಿರುತ್ತದೆ. ಇಲ್ಲಿ ಉಚ್ಚ ನೀಚ, ಮೇಲು ಕೀಳು, ಬಡವ ಬಲ್ಲಿದ, ಮಾನವ ದಾನವ, ಆ ಜಾತಿ ಈ ಜಾತಿ ಎಂಬ ತಾರತಮ್ಯವಿಲ್ಲ.
ಇಲ್ಲಿನ ಜನರದ್ದು ಒಂದು ಜಾತಿ, ಒಂದೇ ಕುಲ. ಅದು ಇಂಟರ್ನೆಟ್ಟಿಗರ ಕುಲ. ಕೀಬೋರ್ಡ್ ಕುಟ್ಟಲು ಕಲಿತ ಮಕ್ಕಳು ಸೇರಿಕೊಂಡಿದ್ದಾರೆ. ಕೊನೆಯ ಸಂದೇಶ ಟೈಪಿಸಿ ಪ್ರಾಣ ಬಿಟ್ಟವರಿದ್ದಾರೆ. ತೋಚಿದ್ದನ್ನು ಬರೆಯಲು ಮತ್ತು ಬರೆದಿದ್ದನ್ನು ಇತರರಿಗೆ ತಲುಪಿಸಲು ದಕ್ಕಿರುವ ಅದ್ಭುತವಾದ ವೇದಿಕೆ.
ಇದೇ ವೇದಿಕೆಗೆ ನಮ್ಮ ಕನ್ನಡ ನಾಡಿನ ಅನೇಕ ಮಠಗಳ ಸ್ವಾಮೀಜಿಗಳು ಬಂದು ಸೇರಿಕೊಂಡಿದ್ದಾರೆ. ಇಡೀ ಜಗತ್ತಿನ ಮಾನವ ಕುಲವನ್ನು ನೆಟ್ ಚಟುವಟಿಕೆಗಳು ಮುಖಾಂತರ ತಲುಪುತ್ತಿದ್ದಾರೆ. ಫೇಸ್ಬುಕ್ ಖಾತೆಯನ್ನು ಅವರೇ ಸೃಷ್ಟಿಸಿದ್ದಾರೋ, ಅವರ ಭಕ್ತಾದಿಗಳು ಸೃಷ್ಟಿಸಿದ್ದಾರೋ...
ಅಂತೂ ಫೇಸ್ಬುಕ್ನಲ್ಲಿ ಸ್ವಾಮೀಜಿಗಳೇನಕರು ಮಠ, ಅನುಭವ ಮಂಟಪವನ್ನು ಕಟ್ಟಿಕೊಂಡಿದ್ದಾರೆ. ಇಂತಿರುವ ಕಾವಿ ತೊಟ್ಟ ನೆಟ್-ಸ್ಯಾವಿ ಸ್ವಾಮೀಜಿಗಳ ಫೇಸ್ ಬುಕ್ ತಾಣವನ್ನು ಪರಿಚಯಿಸುವ ಸರಣಿ ಲೇಖನ ಆರಂಭವಾಗಲಿದೆ, ನಿರೀಕ್ಷಿಸಿ.



Click it and Unblock the Notifications











