Latest Updates
-
ಬೆಂಗಳೂರಿನಲ್ಲಿ ಇಂದೇ ವಿದ್ಯುತ್ ಕಡಿತ: ನಿಮ್ಮ ಎಲೆಕ್ಟ್ರಾನಿಕ್ ಉಪಕರಣಗಳನ್ನು ಸುರಕ್ಷಿತವಾಗಿಡುವುದು ಹೇಗೆ? -
ಕರ್ಕ ಸಂಕ್ರಾಂತಿ ವಿಶೇಷ: ಮಳೆಗಾಲದಲ್ಲಿ ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಜಗನ್ನಾಥ ರಥಯಾತ್ರೆ 2026: ಸಂಚಾರ ಮಾರ್ಗ ಬದಲಾವಣೆ, ಭಕ್ತರಿಗಾಗಿ ಇಲ್ಲಿದೆ ಮಹತ್ವದ ಮಾಹಿತಿ! -
ನೀಟ್ ಪರೀಕ್ಷೆಯ ಆತಂಕವೇ? ಈ 6 ನಿಮಿಷದ ವ್ಯಾಯಾಮ ನಿಮ್ಮ ಒತ್ತಡವನ್ನು ಮರೆಸುತ್ತದೆ! -
ಮಧ್ಯಪ್ರದೇಶ UCC: ಲಿವ್-ಇನ್ ಜೋಡಿಗಳಿಗೆ ಕಡ್ಡಾಯ ನೋಂದಣಿ, ನಿಯಮ ಮೀರಿದರೆ ಕಾದಿದೆ ಸಂಕಷ್ಟ! -
ಹಾಲಿನಲ್ಲಿ ವಿಷಕಾರಿ ಕಲಬೆರಕೆ ಪತ್ತೆ: ನಿಮ್ಮ ಮನೆಯ ಹಾಲಿನ ಸುರಕ್ಷತೆ ಪರೀಕ್ಷಿಸುವುದು ಹೇಗೆ? -
ಬೆಂಗಳೂರಿನಲ್ಲಿ 12 ಗಂಟೆಗಳ ಕಾಲ ನೀರಿನ ಕಡಿತ: ನಾಳೆ ನೀರು ಉಳಿಸಲು ಈ ಟಿಪ್ಸ್ ಫಾಲೋ ಮಾಡಿ! -
ಮಳೆಗಾಲದಲ್ಲಿ ಜಿಮ್ಗೆ ಹೋಗಲು ಸಾಧ್ಯವಿಲ್ಲವೇ? ಮನೆಯಲ್ಲೇ ಫಿಟ್ ಆಗಿರಲು 8 ನಿಮಿಷದ ಈ ವರ್ಕೌಟ್ ಟ್ರೈ ಮಾಡಿ! -
ಮದುವೆಗೆ ಮುನ್ನ ಎಚ್ಚರ: ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ವರದಕ್ಷಿಣೆ ಮತ್ತು ಉಡುಗೊರೆಗಳ ನಡುವಿನ ವ್ಯತ್ಯಾಸವೇನು? -
ಬೆಂಗಳೂರಿನಲ್ಲಿ ಮಳೆ ಬಿಡುವು: ನಿಮ್ಮ ಬಾಲ್ಕನಿ ಗಾರ್ಡನ್ ಗಿಡಗಳನ್ನು ರಕ್ಷಿಸಲು ಈ ಸರಳ ಟಿಪ್ಸ್ ಪಾಲಿಸಿ
ಫೇಸ್ಬುಕ್ಕಲ್ಲಿ ಕಾವಿ ತೊಟ್ಟ ನೆಟ್-ಸ್ಯಾವಿ ಸ್ವಾಮೀಜಿಗಳು

ಮರೆತೇಹೋಗಿದ್ದ ಚಡ್ಡಿ ಗೆಳೆಯರು ಅಚಾನಕ್ಕಾಗಿ ಸಿಗುತ್ತಾರೆ. ಎಂದೂ ಭೇಟಿಯಾಗಿರದ ಎರಡು ಜೀವಗಳು ಫೇಸ್ಬುಕ್ ಮುಖಾಂತರ ಒಂದಾಗಿರುತ್ತವೆ. ಎರಡು ದೇಹ ಒಂದು ಜೀವ ಎಂಬಂತಿದ್ದ ಜೋಡಿಗಳ ರಹಸ್ಯಗಳೆಲ್ಲ ಇಲ್ಲಿ ಬಯಲಾಗಿವೆ, ವಿಚ್ಛೇದನಗಳಾಗಿವೆ.
ಒಟ್ಟಿನಲ್ಲಿ, ಒಂದು ಪುಟ್ಟ ಜಗತ್ತೇ ಇಲ್ಲಿ ಮನೆಮಾಡಿಕೊಂಡಿದೆ. ನೆಟ್ ಜೊತೆ ಕೊಂಡಿಹಾಕಿಕೊಂಡಿರುವ ಮನುಜರ ಅರ್ಧ ಜೀವನ ಇಲ್ಲೇ ಕಳೆದುಹೋಗಿರುತ್ತದೆ. ಇಲ್ಲಿ ಉಚ್ಚ ನೀಚ, ಮೇಲು ಕೀಳು, ಬಡವ ಬಲ್ಲಿದ, ಮಾನವ ದಾನವ, ಆ ಜಾತಿ ಈ ಜಾತಿ ಎಂಬ ತಾರತಮ್ಯವಿಲ್ಲ.
ಇಲ್ಲಿನ ಜನರದ್ದು ಒಂದು ಜಾತಿ, ಒಂದೇ ಕುಲ. ಅದು ಇಂಟರ್ನೆಟ್ಟಿಗರ ಕುಲ. ಕೀಬೋರ್ಡ್ ಕುಟ್ಟಲು ಕಲಿತ ಮಕ್ಕಳು ಸೇರಿಕೊಂಡಿದ್ದಾರೆ. ಕೊನೆಯ ಸಂದೇಶ ಟೈಪಿಸಿ ಪ್ರಾಣ ಬಿಟ್ಟವರಿದ್ದಾರೆ. ತೋಚಿದ್ದನ್ನು ಬರೆಯಲು ಮತ್ತು ಬರೆದಿದ್ದನ್ನು ಇತರರಿಗೆ ತಲುಪಿಸಲು ದಕ್ಕಿರುವ ಅದ್ಭುತವಾದ ವೇದಿಕೆ.
ಇದೇ ವೇದಿಕೆಗೆ ನಮ್ಮ ಕನ್ನಡ ನಾಡಿನ ಅನೇಕ ಮಠಗಳ ಸ್ವಾಮೀಜಿಗಳು ಬಂದು ಸೇರಿಕೊಂಡಿದ್ದಾರೆ. ಇಡೀ ಜಗತ್ತಿನ ಮಾನವ ಕುಲವನ್ನು ನೆಟ್ ಚಟುವಟಿಕೆಗಳು ಮುಖಾಂತರ ತಲುಪುತ್ತಿದ್ದಾರೆ. ಫೇಸ್ಬುಕ್ ಖಾತೆಯನ್ನು ಅವರೇ ಸೃಷ್ಟಿಸಿದ್ದಾರೋ, ಅವರ ಭಕ್ತಾದಿಗಳು ಸೃಷ್ಟಿಸಿದ್ದಾರೋ...
ಅಂತೂ ಫೇಸ್ಬುಕ್ನಲ್ಲಿ ಸ್ವಾಮೀಜಿಗಳೇನಕರು ಮಠ, ಅನುಭವ ಮಂಟಪವನ್ನು ಕಟ್ಟಿಕೊಂಡಿದ್ದಾರೆ. ಇಂತಿರುವ ಕಾವಿ ತೊಟ್ಟ ನೆಟ್-ಸ್ಯಾವಿ ಸ್ವಾಮೀಜಿಗಳ ಫೇಸ್ ಬುಕ್ ತಾಣವನ್ನು ಪರಿಚಯಿಸುವ ಸರಣಿ ಲೇಖನ ಆರಂಭವಾಗಲಿದೆ, ನಿರೀಕ್ಷಿಸಿ.



Click it and Unblock the Notifications