Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಫೇಸ್ಬುಕ್ಕಲ್ಲಿ ಕಾವಿ ತೊಟ್ಟ ನೆಟ್-ಸ್ಯಾವಿ ಸ್ವಾಮೀಜಿಗಳು

ಮರೆತೇಹೋಗಿದ್ದ ಚಡ್ಡಿ ಗೆಳೆಯರು ಅಚಾನಕ್ಕಾಗಿ ಸಿಗುತ್ತಾರೆ. ಎಂದೂ ಭೇಟಿಯಾಗಿರದ ಎರಡು ಜೀವಗಳು ಫೇಸ್ಬುಕ್ ಮುಖಾಂತರ ಒಂದಾಗಿರುತ್ತವೆ. ಎರಡು ದೇಹ ಒಂದು ಜೀವ ಎಂಬಂತಿದ್ದ ಜೋಡಿಗಳ ರಹಸ್ಯಗಳೆಲ್ಲ ಇಲ್ಲಿ ಬಯಲಾಗಿವೆ, ವಿಚ್ಛೇದನಗಳಾಗಿವೆ.
ಒಟ್ಟಿನಲ್ಲಿ, ಒಂದು ಪುಟ್ಟ ಜಗತ್ತೇ ಇಲ್ಲಿ ಮನೆಮಾಡಿಕೊಂಡಿದೆ. ನೆಟ್ ಜೊತೆ ಕೊಂಡಿಹಾಕಿಕೊಂಡಿರುವ ಮನುಜರ ಅರ್ಧ ಜೀವನ ಇಲ್ಲೇ ಕಳೆದುಹೋಗಿರುತ್ತದೆ. ಇಲ್ಲಿ ಉಚ್ಚ ನೀಚ, ಮೇಲು ಕೀಳು, ಬಡವ ಬಲ್ಲಿದ, ಮಾನವ ದಾನವ, ಆ ಜಾತಿ ಈ ಜಾತಿ ಎಂಬ ತಾರತಮ್ಯವಿಲ್ಲ.
ಇಲ್ಲಿನ ಜನರದ್ದು ಒಂದು ಜಾತಿ, ಒಂದೇ ಕುಲ. ಅದು ಇಂಟರ್ನೆಟ್ಟಿಗರ ಕುಲ. ಕೀಬೋರ್ಡ್ ಕುಟ್ಟಲು ಕಲಿತ ಮಕ್ಕಳು ಸೇರಿಕೊಂಡಿದ್ದಾರೆ. ಕೊನೆಯ ಸಂದೇಶ ಟೈಪಿಸಿ ಪ್ರಾಣ ಬಿಟ್ಟವರಿದ್ದಾರೆ. ತೋಚಿದ್ದನ್ನು ಬರೆಯಲು ಮತ್ತು ಬರೆದಿದ್ದನ್ನು ಇತರರಿಗೆ ತಲುಪಿಸಲು ದಕ್ಕಿರುವ ಅದ್ಭುತವಾದ ವೇದಿಕೆ.
ಇದೇ ವೇದಿಕೆಗೆ ನಮ್ಮ ಕನ್ನಡ ನಾಡಿನ ಅನೇಕ ಮಠಗಳ ಸ್ವಾಮೀಜಿಗಳು ಬಂದು ಸೇರಿಕೊಂಡಿದ್ದಾರೆ. ಇಡೀ ಜಗತ್ತಿನ ಮಾನವ ಕುಲವನ್ನು ನೆಟ್ ಚಟುವಟಿಕೆಗಳು ಮುಖಾಂತರ ತಲುಪುತ್ತಿದ್ದಾರೆ. ಫೇಸ್ಬುಕ್ ಖಾತೆಯನ್ನು ಅವರೇ ಸೃಷ್ಟಿಸಿದ್ದಾರೋ, ಅವರ ಭಕ್ತಾದಿಗಳು ಸೃಷ್ಟಿಸಿದ್ದಾರೋ...
ಅಂತೂ ಫೇಸ್ಬುಕ್ನಲ್ಲಿ ಸ್ವಾಮೀಜಿಗಳೇನಕರು ಮಠ, ಅನುಭವ ಮಂಟಪವನ್ನು ಕಟ್ಟಿಕೊಂಡಿದ್ದಾರೆ. ಇಂತಿರುವ ಕಾವಿ ತೊಟ್ಟ ನೆಟ್-ಸ್ಯಾವಿ ಸ್ವಾಮೀಜಿಗಳ ಫೇಸ್ ಬುಕ್ ತಾಣವನ್ನು ಪರಿಚಯಿಸುವ ಸರಣಿ ಲೇಖನ ಆರಂಭವಾಗಲಿದೆ, ನಿರೀಕ್ಷಿಸಿ.



Click it and Unblock the Notifications
