Latest Updates
-
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ -
ಬಿಸಿಲ ಬೇಗೆಯಿಂದ ಪಾರಾಗಲು ಮನೆಯನ್ನು ತಂಪಾಗಿರಿಸುವ ಅದ್ಭುತ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ಈ ಪಾನೀಯಗಳೇ ಮದ್ದು! -
ಬಿಸಿಲ ಬೇಗೆಯಿಂದ ಪಾರಾಗಲು ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ -
ಬಿಸಿಲ ಬೇಗೆಯಿಂದ ಪಾರಾಗಲು ನಿಮ್ಮ ವ್ಯಾಯಾಮದ ಸಮಯ ಬದಲಾಯಿಸಿ
ಫೇಸ್ ಬುಕ್ ನಲ್ಲಿ ಸ್ವಾಮೀಜಿ : ವಿಶ್ವೇಶವಾಣಿಯೇ ಸರ್ವೋತ್ತಮ

ಆದರೆ, ಫೇಸ್ ಬುಕ್ ತಾಣದಲ್ಲಿ ಪಾದಾರ್ಪಣ ಮಾಡಿರುವ ಸ್ವಾಮೀಜಿಗಳಲ್ಲೆಲ್ಲ ಪೇಜಾವರ ಶ್ರೀಗಳಾದ ವಿಶ್ವೇಶತೀರ್ಥ ಸ್ವಾಮಿಜಿ ಅವರ ಕುರಿತು ಆರಂಭಿಸಲಾಗಿರುವ 'ವಿಶ್ವೇಶವಾಣಿ' ಫೇಸ್ ಬುಕ್ ವೇದಿಕೆ ಸರ್ವೋತ್ತಮ ಎಂಬುದನ್ನು ಯಾರೂ ಅಲ್ಲಗಳೆಯಲಾರರು. ವಿಶ್ವೇಶವಾಣಿ ಎಂಬ ಅಂತರ್ಜಾಲ ತಾಣ ರಚಿಸಿರುವ ಗುಬ್ಬಿ ದೇಹದ ಸ್ವಾಮೀಜಿಗಳು ಅಪಾರ ಪ್ರಮಾಣದ ಫೇಸ್ ಬುಕ್ ನಲ್ಲಿಯೂ ಭಕ್ತಾದಿಗಳನ್ನು ಗಳಿಸಿದ್ದಾರೆ ಎಂಬುದಕ್ಕೆ ಈ ತಾಣವೇ ಸಾಕ್ಷಿ.
ಕೆಲ ಸ್ವಾಮೀಜಿಗಳು ನಾವೂ ನೆಟ್ಟಲ್ಲಿ ಇದ್ದೇವೆ ಎಂಬುದನ್ನು ತೋರಿಸಿಕೊಳ್ಳಲಿಕ್ಕೆ ಕಾವಿ ಧರಿಸಿದ ಫೋಟೋವೊಂದನ್ನು ಹಾಕಿಕೊಂಡು ಸರ್ವರ್ ನೀಡಿರುವ ಫ್ರೀ ಸ್ಪೇಸನ್ನು ತುಂಬಿಕೊಂಡಿದ್ದಾರೆ. ಆದರೆ ಅದೇ ಜಾಗದ ಮುಖಾಂತರ ಯಾವ ರೀತಿಯಲ್ಲಿ ಜನಸಾಮಾನ್ಯರನ್ನು ತಲುಪುತ್ತಾರೆ ಮತ್ತು ಸಮಾಜದ ಮೇಲೆ ಎಂತಹ ಪ್ರಭಾವವನ್ನು ಬೀರುತ್ತಾರೆ ಎಂಬುದು ಮುಖ್ಯ. ತಮ್ಮ ಸುತ್ತ ಏನೇ ವಿವಾದಗಳು ಸುತ್ತಿಕೊಂಡಿದ್ದರೂ ಜನರನ್ನು ತಲುಪುವ ವಿಭಿನ್ನ ಸ್ವಾಮೀಜಿಗಳಲ್ಲಿ ಪೇಜಾವರ ಶ್ರೀಗಳು ಭಿನ್ನರಾಗಿ ನಿಲ್ಲುತ್ತಾರೆ.
ಶ್ರೀ ವಿಶ್ವೇಶ ತೀರ್ಥರ ಹೆಸರಲ್ಲಿ ಇರುವ 'ವಿಶ್ವೇಶವಾಣಿ' ಫೇಸ್ ಬುಕ್ ವೇದಿಕೆ ಸುಮಾರು ಒಂದೂವರೆ ಸಾವಿರ ಜನರನ್ನು ನೇರವಾಗಿ ತಲುಪುತ್ತಿದೆ. ಅಲ್ಲಿ ನಾಡಿನಾದ್ಯಂತ ನಡೆಯುವ ಕಾರ್ಯಕ್ರಮಗಳು, ವಿಭಿನ್ನ ಮತ್ತು ಅಪರೂಪದ ಭಾವಚಿತ್ರಗಳು, ಸ್ವಾಮೀಜಿಗಳ ಸಂದೇಶಗಳು, ಆಡಿಯೋ, ವಿಡಿಯೋಗಳು ನೇರವಾಗಿ ಈ ಜಾಲತಾಣದ ಸದಸ್ಯರಾಗಿರುವ ಜನರ ಈಮೇಲ್ ಬಾಕ್ಸಿಗೆ ತಲುಪುತ್ತವೆ.
ಇಲ್ಲಿ ಎಂತಹ ಸಂದೇಶಗಳು ರವಾನೆಯಾಗುತ್ತವೆ ಎಂಬುದಕ್ಕಿಂತ ಎಂತೆಂತಹ ಮಾಹಿತಿಗಳು ಜನರನ್ನು ತಲುಪುತ್ತವೆ ಎಂಬುದು ಮುಖ್ಯ. ಧಾರ್ಮಿಕ ಸಂದೇಶಗಳು ಮಾತ್ರವಲ್ಲ ಕಂಪ್ಯೂಟರನ್ನು ಗೋಳಾಡಿಸುವ ವೈರಸ್ ಗಳ ಬಗ್ಗೆ ಕೂಡ ಮಾಹಿತಿ ಜನರನ್ನು ಸೇರುತ್ತವೆ. ಈ ದೃಷ್ಟಿಯಿಂದ ಈ ಜಾಲತಾಣ ಇಷ್ಟವಿದ್ದವರಿಗೆ ಹಿಂಬಾಲಿಸಲು ಯೋಗ್ಯ. ಮಾಧ್ವರೇ ಪಾಲಿಸುವ ನಂಬಿಕೆಗಳು, ಅಪನಂಬಿಕೆಗಳು, ಮೂಢನಂಬಿಕೆಗಳ ಬಗ್ಗೆ ಇಲ್ಲಿ ಮುಕ್ತವಾಗಿ ಚರ್ಚಿಸಬಹುದು.



Click it and Unblock the Notifications











