Just In
- 31 min ago ಗುರು ಸಂಚಾರ 2024: ಕನ್ಯಾ ರಾಶಿಯಲ್ಲಿ 12 ತಿಂಗಳು ಗುರುವಿನ ಪ್ರಭಾವ ಹೇಗಿರಲಿದೆ?
- 9 hrs ago ವಾರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಈ 7 ದಿನಗಳು ನಿಮಗೆ ಹೇಗಿರಲಿದೆ?
- 10 hrs ago ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- 11 hrs ago ಪರಿಸರ ದಿನ: ಇಂದು ನೀವು ಹೀಗೆ ಮಾಡಿದರೆ ಮುಂದಿನ ಪೀಳಿಗೆಗೆ ನೀಡುವ ದೊಡ್ಡ ಆಸ್ತಿ
Don't Miss
- Movies Amruthadhaare ; ಪಾರ್ಥ ಮತ್ತು ಅಪೇಕ್ಷಾ ಪ್ರೀತಿ, ಕೆಂಡಾಮಂಡಲಗೊಂಡ ಶಕುಂತಲಾ..!
- News 5 ವರ್ಷಗಳಲ್ಲಿ ಕರ್ನಾಟಕ ಸಂಸದರ ಸಾಧನೆ ಏನು? ಅಧ್ಯಯನ ಹೇಳೋದೇನು?
- Sports ಟಿ20 ವಿಶ್ವಕಪ್ಗೆ ಭಾರತ ತಂಡದಲ್ಲಿ ಕೆಎಲ್ ರಾಹುಲ್ಗೆ ಸ್ಥಾನ?; ರಾಬಿನ್ ಉತ್ತಪ್ಪ ಹೇಳಿದ್ದೇನು?
- Technology ಆನ್ಲೈನ್ ಶಾಪಿಂಗ್ ಮಾಡಲು ಇಲ್ಲಿವೇ ನೋಡಿ ಬೆಸ್ಟ್ ವೆಬ್ಸೈಟ್ಗಳು!
- Automobiles Hyundai: ಹಳೆಯ ಹ್ಯುಂಡೈ ಕ್ರೆಟಾವನ್ನು ಮರೆತುಬಿಡಿ... ಹೊಸ ಕ್ರೆಟಾ ಈಗ ಮತ್ತಷ್ಟು ಪ್ರೀಮಿಯಂ SUV
- Finance ಸಂಸ್ಥೆಯ ಎಲ್ಲ 30,000 ಉದ್ಯೋಗಿಗಳಿಗೆ ವರ್ಕ್ ಫಮ್ ಹೋಂ ನೀಡಿದ ಟೆಕ್ ಕಂಪೆನಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಫೇಸ್ ಬುಕ್ ನಲ್ಲಿ ಸ್ವಾಮೀಜಿ : ವಿಶ್ವೇಶವಾಣಿಯೇ ಸರ್ವೋತ್ತಮ
ಆದರೆ, ಫೇಸ್ ಬುಕ್ ತಾಣದಲ್ಲಿ ಪಾದಾರ್ಪಣ ಮಾಡಿರುವ ಸ್ವಾಮೀಜಿಗಳಲ್ಲೆಲ್ಲ ಪೇಜಾವರ ಶ್ರೀಗಳಾದ ವಿಶ್ವೇಶತೀರ್ಥ ಸ್ವಾಮಿಜಿ ಅವರ ಕುರಿತು ಆರಂಭಿಸಲಾಗಿರುವ 'ವಿಶ್ವೇಶವಾಣಿ' ಫೇಸ್ ಬುಕ್ ವೇದಿಕೆ ಸರ್ವೋತ್ತಮ ಎಂಬುದನ್ನು ಯಾರೂ ಅಲ್ಲಗಳೆಯಲಾರರು. ವಿಶ್ವೇಶವಾಣಿ ಎಂಬ ಅಂತರ್ಜಾಲ ತಾಣ ರಚಿಸಿರುವ ಗುಬ್ಬಿ ದೇಹದ ಸ್ವಾಮೀಜಿಗಳು ಅಪಾರ ಪ್ರಮಾಣದ ಫೇಸ್ ಬುಕ್ ನಲ್ಲಿಯೂ ಭಕ್ತಾದಿಗಳನ್ನು ಗಳಿಸಿದ್ದಾರೆ ಎಂಬುದಕ್ಕೆ ಈ ತಾಣವೇ ಸಾಕ್ಷಿ.
ಕೆಲ ಸ್ವಾಮೀಜಿಗಳು ನಾವೂ ನೆಟ್ಟಲ್ಲಿ ಇದ್ದೇವೆ ಎಂಬುದನ್ನು ತೋರಿಸಿಕೊಳ್ಳಲಿಕ್ಕೆ ಕಾವಿ ಧರಿಸಿದ ಫೋಟೋವೊಂದನ್ನು ಹಾಕಿಕೊಂಡು ಸರ್ವರ್ ನೀಡಿರುವ ಫ್ರೀ ಸ್ಪೇಸನ್ನು ತುಂಬಿಕೊಂಡಿದ್ದಾರೆ. ಆದರೆ ಅದೇ ಜಾಗದ ಮುಖಾಂತರ ಯಾವ ರೀತಿಯಲ್ಲಿ ಜನಸಾಮಾನ್ಯರನ್ನು ತಲುಪುತ್ತಾರೆ ಮತ್ತು ಸಮಾಜದ ಮೇಲೆ ಎಂತಹ ಪ್ರಭಾವವನ್ನು ಬೀರುತ್ತಾರೆ ಎಂಬುದು ಮುಖ್ಯ. ತಮ್ಮ ಸುತ್ತ ಏನೇ ವಿವಾದಗಳು ಸುತ್ತಿಕೊಂಡಿದ್ದರೂ ಜನರನ್ನು ತಲುಪುವ ವಿಭಿನ್ನ ಸ್ವಾಮೀಜಿಗಳಲ್ಲಿ ಪೇಜಾವರ ಶ್ರೀಗಳು ಭಿನ್ನರಾಗಿ ನಿಲ್ಲುತ್ತಾರೆ.
ಶ್ರೀ ವಿಶ್ವೇಶ ತೀರ್ಥರ ಹೆಸರಲ್ಲಿ ಇರುವ 'ವಿಶ್ವೇಶವಾಣಿ' ಫೇಸ್ ಬುಕ್ ವೇದಿಕೆ ಸುಮಾರು ಒಂದೂವರೆ ಸಾವಿರ ಜನರನ್ನು ನೇರವಾಗಿ ತಲುಪುತ್ತಿದೆ. ಅಲ್ಲಿ ನಾಡಿನಾದ್ಯಂತ ನಡೆಯುವ ಕಾರ್ಯಕ್ರಮಗಳು, ವಿಭಿನ್ನ ಮತ್ತು ಅಪರೂಪದ ಭಾವಚಿತ್ರಗಳು, ಸ್ವಾಮೀಜಿಗಳ ಸಂದೇಶಗಳು, ಆಡಿಯೋ, ವಿಡಿಯೋಗಳು ನೇರವಾಗಿ ಈ ಜಾಲತಾಣದ ಸದಸ್ಯರಾಗಿರುವ ಜನರ ಈಮೇಲ್ ಬಾಕ್ಸಿಗೆ ತಲುಪುತ್ತವೆ.
ಇಲ್ಲಿ ಎಂತಹ ಸಂದೇಶಗಳು ರವಾನೆಯಾಗುತ್ತವೆ ಎಂಬುದಕ್ಕಿಂತ ಎಂತೆಂತಹ ಮಾಹಿತಿಗಳು ಜನರನ್ನು ತಲುಪುತ್ತವೆ ಎಂಬುದು ಮುಖ್ಯ. ಧಾರ್ಮಿಕ ಸಂದೇಶಗಳು ಮಾತ್ರವಲ್ಲ ಕಂಪ್ಯೂಟರನ್ನು ಗೋಳಾಡಿಸುವ ವೈರಸ್ ಗಳ ಬಗ್ಗೆ ಕೂಡ ಮಾಹಿತಿ ಜನರನ್ನು ಸೇರುತ್ತವೆ. ಈ ದೃಷ್ಟಿಯಿಂದ ಈ ಜಾಲತಾಣ ಇಷ್ಟವಿದ್ದವರಿಗೆ ಹಿಂಬಾಲಿಸಲು ಯೋಗ್ಯ. ಮಾಧ್ವರೇ ಪಾಲಿಸುವ ನಂಬಿಕೆಗಳು, ಅಪನಂಬಿಕೆಗಳು, ಮೂಢನಂಬಿಕೆಗಳ ಬಗ್ಗೆ ಇಲ್ಲಿ ಮುಕ್ತವಾಗಿ ಚರ್ಚಿಸಬಹುದು.