Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಫೇಸ್ ಬುಕ್ ನಲ್ಲಿ ಸ್ವಾಮೀಜಿ : ವಿಶ್ವೇಶವಾಣಿಯೇ ಸರ್ವೋತ್ತಮ

ಆದರೆ, ಫೇಸ್ ಬುಕ್ ತಾಣದಲ್ಲಿ ಪಾದಾರ್ಪಣ ಮಾಡಿರುವ ಸ್ವಾಮೀಜಿಗಳಲ್ಲೆಲ್ಲ ಪೇಜಾವರ ಶ್ರೀಗಳಾದ ವಿಶ್ವೇಶತೀರ್ಥ ಸ್ವಾಮಿಜಿ ಅವರ ಕುರಿತು ಆರಂಭಿಸಲಾಗಿರುವ 'ವಿಶ್ವೇಶವಾಣಿ' ಫೇಸ್ ಬುಕ್ ವೇದಿಕೆ ಸರ್ವೋತ್ತಮ ಎಂಬುದನ್ನು ಯಾರೂ ಅಲ್ಲಗಳೆಯಲಾರರು. ವಿಶ್ವೇಶವಾಣಿ ಎಂಬ ಅಂತರ್ಜಾಲ ತಾಣ ರಚಿಸಿರುವ ಗುಬ್ಬಿ ದೇಹದ ಸ್ವಾಮೀಜಿಗಳು ಅಪಾರ ಪ್ರಮಾಣದ ಫೇಸ್ ಬುಕ್ ನಲ್ಲಿಯೂ ಭಕ್ತಾದಿಗಳನ್ನು ಗಳಿಸಿದ್ದಾರೆ ಎಂಬುದಕ್ಕೆ ಈ ತಾಣವೇ ಸಾಕ್ಷಿ.
ಕೆಲ ಸ್ವಾಮೀಜಿಗಳು ನಾವೂ ನೆಟ್ಟಲ್ಲಿ ಇದ್ದೇವೆ ಎಂಬುದನ್ನು ತೋರಿಸಿಕೊಳ್ಳಲಿಕ್ಕೆ ಕಾವಿ ಧರಿಸಿದ ಫೋಟೋವೊಂದನ್ನು ಹಾಕಿಕೊಂಡು ಸರ್ವರ್ ನೀಡಿರುವ ಫ್ರೀ ಸ್ಪೇಸನ್ನು ತುಂಬಿಕೊಂಡಿದ್ದಾರೆ. ಆದರೆ ಅದೇ ಜಾಗದ ಮುಖಾಂತರ ಯಾವ ರೀತಿಯಲ್ಲಿ ಜನಸಾಮಾನ್ಯರನ್ನು ತಲುಪುತ್ತಾರೆ ಮತ್ತು ಸಮಾಜದ ಮೇಲೆ ಎಂತಹ ಪ್ರಭಾವವನ್ನು ಬೀರುತ್ತಾರೆ ಎಂಬುದು ಮುಖ್ಯ. ತಮ್ಮ ಸುತ್ತ ಏನೇ ವಿವಾದಗಳು ಸುತ್ತಿಕೊಂಡಿದ್ದರೂ ಜನರನ್ನು ತಲುಪುವ ವಿಭಿನ್ನ ಸ್ವಾಮೀಜಿಗಳಲ್ಲಿ ಪೇಜಾವರ ಶ್ರೀಗಳು ಭಿನ್ನರಾಗಿ ನಿಲ್ಲುತ್ತಾರೆ.
ಶ್ರೀ ವಿಶ್ವೇಶ ತೀರ್ಥರ ಹೆಸರಲ್ಲಿ ಇರುವ 'ವಿಶ್ವೇಶವಾಣಿ' ಫೇಸ್ ಬುಕ್ ವೇದಿಕೆ ಸುಮಾರು ಒಂದೂವರೆ ಸಾವಿರ ಜನರನ್ನು ನೇರವಾಗಿ ತಲುಪುತ್ತಿದೆ. ಅಲ್ಲಿ ನಾಡಿನಾದ್ಯಂತ ನಡೆಯುವ ಕಾರ್ಯಕ್ರಮಗಳು, ವಿಭಿನ್ನ ಮತ್ತು ಅಪರೂಪದ ಭಾವಚಿತ್ರಗಳು, ಸ್ವಾಮೀಜಿಗಳ ಸಂದೇಶಗಳು, ಆಡಿಯೋ, ವಿಡಿಯೋಗಳು ನೇರವಾಗಿ ಈ ಜಾಲತಾಣದ ಸದಸ್ಯರಾಗಿರುವ ಜನರ ಈಮೇಲ್ ಬಾಕ್ಸಿಗೆ ತಲುಪುತ್ತವೆ.
ಇಲ್ಲಿ ಎಂತಹ ಸಂದೇಶಗಳು ರವಾನೆಯಾಗುತ್ತವೆ ಎಂಬುದಕ್ಕಿಂತ ಎಂತೆಂತಹ ಮಾಹಿತಿಗಳು ಜನರನ್ನು ತಲುಪುತ್ತವೆ ಎಂಬುದು ಮುಖ್ಯ. ಧಾರ್ಮಿಕ ಸಂದೇಶಗಳು ಮಾತ್ರವಲ್ಲ ಕಂಪ್ಯೂಟರನ್ನು ಗೋಳಾಡಿಸುವ ವೈರಸ್ ಗಳ ಬಗ್ಗೆ ಕೂಡ ಮಾಹಿತಿ ಜನರನ್ನು ಸೇರುತ್ತವೆ. ಈ ದೃಷ್ಟಿಯಿಂದ ಈ ಜಾಲತಾಣ ಇಷ್ಟವಿದ್ದವರಿಗೆ ಹಿಂಬಾಲಿಸಲು ಯೋಗ್ಯ. ಮಾಧ್ವರೇ ಪಾಲಿಸುವ ನಂಬಿಕೆಗಳು, ಅಪನಂಬಿಕೆಗಳು, ಮೂಢನಂಬಿಕೆಗಳ ಬಗ್ಗೆ ಇಲ್ಲಿ ಮುಕ್ತವಾಗಿ ಚರ್ಚಿಸಬಹುದು.



Click it and Unblock the Notifications
