Latest Updates
-
ಬಿಸಿಲಿನ ಬೇಗೆಗೆ ದಂಪತಿಗಳ ನಡುವೆ ಜಗಳವೇ? ಈ ಸಣ್ಣ ಬದಲಾವಣೆಗಳು ನಿಮ್ಮ ಸಂಬಂಧವನ್ನು ಬಿರುಕಿನಿಂದ ಕಾಪಾಡುತ್ತವೆ! -
ಉತ್ತರ ಭಾರತದಲ್ಲಿ ಸುಡುವ ಬಿಸಿಲು: ಮನೆಯನ್ನು ತಂಪಾಗಿಡಲು ಮತ್ತು ಗಿಡಗಳನ್ನು ಬಚಾವ್ ಮಾಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಲ ಬೇಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರಗಳೇ ನಿಮಗೆ ರಾಮಬಾಣ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಈ ಸಿಂಪಲ್ ಟಿಪ್ಸ್ ಪಾಲಿಸಿದ್ರೆ ಬೇಸಿಗೆಯಲ್ಲೂ ನೀವು ಕೂಲ್ ಆಗಿರಬಹುದು! -
ಬಿಸಿಲ ಬೇಗೆಯಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ನಿಮ್ಮ ಹೃದಯದ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಎಚ್ಚರ! -
ಬಿಸಿಲಿನ ತಾಪಕ್ಕೆ ದಂಪತಿಗಳ ನಡುವೆ ಜಗಳವೇ? ಸಂಬಂಧ ಗಟ್ಟಿಯಾಗಿರಲು ಇಲ್ಲಿವೆ ನೋಡಿ ಸರಳ ಉಪಾಯಗಳು -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ವಿದ್ಯುತ್ ಬಿಲ್ ಇಲ್ಲದೆ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲ ಬೇಗೆಗೆ ರೆಡ್ ಅಲರ್ಟ್: ಹೀಟ್ ಸ್ಟ್ರೋಕ್ನಿಂದ ಪಾರಾಗಲು ಈ ಮನೆಮದ್ದುಗಳನ್ನು ಇಂದೇ ಟ್ರೈ ಮಾಡಿ! -
ಮಳೆಗಾಲದಲ್ಲಿ ಸ್ಟೈಲಿಶ್ ಆಗಿ ಕಾಣಬೇಕಾ? ಈ ಸಿಂಪಲ್ ಟಿಪ್ಸ್ ನಿಮ್ಮನ್ನು ಮಳೆಗಾಲದ ಫ್ಯಾಷನ್ ಐಕಾನ್ ಮಾಡೋದು ಗ್ಯಾರಂಟಿ! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಆರೋಗ್ಯಕ್ಕೆ ಕುತ್ತು ತಪ್ಪಿದ್ದಲ್ಲ!
ಫೇಸ್ ಬುಕ್ ನಲ್ಲಿ ಸ್ವಾಮೀಜಿ : ವಿಶ್ವೇಶವಾಣಿಯೇ ಸರ್ವೋತ್ತಮ

ಆದರೆ, ಫೇಸ್ ಬುಕ್ ತಾಣದಲ್ಲಿ ಪಾದಾರ್ಪಣ ಮಾಡಿರುವ ಸ್ವಾಮೀಜಿಗಳಲ್ಲೆಲ್ಲ ಪೇಜಾವರ ಶ್ರೀಗಳಾದ ವಿಶ್ವೇಶತೀರ್ಥ ಸ್ವಾಮಿಜಿ ಅವರ ಕುರಿತು ಆರಂಭಿಸಲಾಗಿರುವ 'ವಿಶ್ವೇಶವಾಣಿ' ಫೇಸ್ ಬುಕ್ ವೇದಿಕೆ ಸರ್ವೋತ್ತಮ ಎಂಬುದನ್ನು ಯಾರೂ ಅಲ್ಲಗಳೆಯಲಾರರು. ವಿಶ್ವೇಶವಾಣಿ ಎಂಬ ಅಂತರ್ಜಾಲ ತಾಣ ರಚಿಸಿರುವ ಗುಬ್ಬಿ ದೇಹದ ಸ್ವಾಮೀಜಿಗಳು ಅಪಾರ ಪ್ರಮಾಣದ ಫೇಸ್ ಬುಕ್ ನಲ್ಲಿಯೂ ಭಕ್ತಾದಿಗಳನ್ನು ಗಳಿಸಿದ್ದಾರೆ ಎಂಬುದಕ್ಕೆ ಈ ತಾಣವೇ ಸಾಕ್ಷಿ.
ಕೆಲ ಸ್ವಾಮೀಜಿಗಳು ನಾವೂ ನೆಟ್ಟಲ್ಲಿ ಇದ್ದೇವೆ ಎಂಬುದನ್ನು ತೋರಿಸಿಕೊಳ್ಳಲಿಕ್ಕೆ ಕಾವಿ ಧರಿಸಿದ ಫೋಟೋವೊಂದನ್ನು ಹಾಕಿಕೊಂಡು ಸರ್ವರ್ ನೀಡಿರುವ ಫ್ರೀ ಸ್ಪೇಸನ್ನು ತುಂಬಿಕೊಂಡಿದ್ದಾರೆ. ಆದರೆ ಅದೇ ಜಾಗದ ಮುಖಾಂತರ ಯಾವ ರೀತಿಯಲ್ಲಿ ಜನಸಾಮಾನ್ಯರನ್ನು ತಲುಪುತ್ತಾರೆ ಮತ್ತು ಸಮಾಜದ ಮೇಲೆ ಎಂತಹ ಪ್ರಭಾವವನ್ನು ಬೀರುತ್ತಾರೆ ಎಂಬುದು ಮುಖ್ಯ. ತಮ್ಮ ಸುತ್ತ ಏನೇ ವಿವಾದಗಳು ಸುತ್ತಿಕೊಂಡಿದ್ದರೂ ಜನರನ್ನು ತಲುಪುವ ವಿಭಿನ್ನ ಸ್ವಾಮೀಜಿಗಳಲ್ಲಿ ಪೇಜಾವರ ಶ್ರೀಗಳು ಭಿನ್ನರಾಗಿ ನಿಲ್ಲುತ್ತಾರೆ.
ಶ್ರೀ ವಿಶ್ವೇಶ ತೀರ್ಥರ ಹೆಸರಲ್ಲಿ ಇರುವ 'ವಿಶ್ವೇಶವಾಣಿ' ಫೇಸ್ ಬುಕ್ ವೇದಿಕೆ ಸುಮಾರು ಒಂದೂವರೆ ಸಾವಿರ ಜನರನ್ನು ನೇರವಾಗಿ ತಲುಪುತ್ತಿದೆ. ಅಲ್ಲಿ ನಾಡಿನಾದ್ಯಂತ ನಡೆಯುವ ಕಾರ್ಯಕ್ರಮಗಳು, ವಿಭಿನ್ನ ಮತ್ತು ಅಪರೂಪದ ಭಾವಚಿತ್ರಗಳು, ಸ್ವಾಮೀಜಿಗಳ ಸಂದೇಶಗಳು, ಆಡಿಯೋ, ವಿಡಿಯೋಗಳು ನೇರವಾಗಿ ಈ ಜಾಲತಾಣದ ಸದಸ್ಯರಾಗಿರುವ ಜನರ ಈಮೇಲ್ ಬಾಕ್ಸಿಗೆ ತಲುಪುತ್ತವೆ.
ಇಲ್ಲಿ ಎಂತಹ ಸಂದೇಶಗಳು ರವಾನೆಯಾಗುತ್ತವೆ ಎಂಬುದಕ್ಕಿಂತ ಎಂತೆಂತಹ ಮಾಹಿತಿಗಳು ಜನರನ್ನು ತಲುಪುತ್ತವೆ ಎಂಬುದು ಮುಖ್ಯ. ಧಾರ್ಮಿಕ ಸಂದೇಶಗಳು ಮಾತ್ರವಲ್ಲ ಕಂಪ್ಯೂಟರನ್ನು ಗೋಳಾಡಿಸುವ ವೈರಸ್ ಗಳ ಬಗ್ಗೆ ಕೂಡ ಮಾಹಿತಿ ಜನರನ್ನು ಸೇರುತ್ತವೆ. ಈ ದೃಷ್ಟಿಯಿಂದ ಈ ಜಾಲತಾಣ ಇಷ್ಟವಿದ್ದವರಿಗೆ ಹಿಂಬಾಲಿಸಲು ಯೋಗ್ಯ. ಮಾಧ್ವರೇ ಪಾಲಿಸುವ ನಂಬಿಕೆಗಳು, ಅಪನಂಬಿಕೆಗಳು, ಮೂಢನಂಬಿಕೆಗಳ ಬಗ್ಗೆ ಇಲ್ಲಿ ಮುಕ್ತವಾಗಿ ಚರ್ಚಿಸಬಹುದು.



Click it and Unblock the Notifications