Latest Updates
-
ಅಮೆಜಾನ್ ಸೇಲ್ ಶುರು: ನಿಮ್ಮ ಬಾಲ್ಕನಿಯನ್ನು ಸುಂದರ ತೋಟವನ್ನಾಗಿಸಲು ಮಿಸ್ ಮಾಡ್ಬೇಡಿ ಈ ಬೆಸ್ಟ್ ಡೀಲ್ಸ್! -
ಬಿಸಿಲ ಧಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಪಾನೀಯಗಳೇ ಮದ್ದು! -
ಅಮ್ಮನಿಗೆ ಕೊನೆಯ ನಿಮಿಷದಲ್ಲಿ ಗಿಫ್ಟ್ ಕೊಡಬೇಕಾ? ಈ ಟ್ರಿಕ್ಸ್ ಫಾಲೋ ಮಾಡಿ, ಅಮ್ಮನ ಮುಖದಲ್ಲಿ ನಗು ಮೂಡಿಸಿ! -
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು! -
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ! -
ಮದರ್ಸ್ ಡೇ 2026: ಅಮ್ಮನಿಗೆ ಸರ್ಪ್ರೈಸ್ ನೀಡಲು ಈ ವೈರಲ್ ಟ್ರೆಂಡ್ಸ್ ಫಾಲೋ ಮಾಡಿ, ಮಿಸ್ ಮಾಡ್ಬೇಡಿ! -
ಅಮ್ಮನಿಗೆ ಈ ಬಾರಿ ವಿಶೇಷ ಉಡುಗೊರೆ: ತಾಯಂದಿರ ದಿನದಂದು 20 ನಿಮಿಷದ ಯೋಗದ ಮ್ಯಾಜಿಕ್! -
ದೆಹಲಿ ಮಳೆಯಲ್ಲಿ ಮದುವೆ ಸಂಭ್ರಮಕ್ಕೆ ಅಡ್ಡಿಯೇ? ಈ ಸಣ್ಣ ಬದಲಾವಣೆಗಳು ನಿಮ್ಮ ಮದುವೆಯನ್ನು ಉಳಿಸುತ್ತವೆ!
ಹೊಡೆಯೋ ಗಂಡ ಅಳೋ ಹೆಂಡತಿ ಎದ್ದು ಕುಣಿಯೋ ಸಮಾಜ

ಇತ್ತ, ಕೌಟುಂಬಿಕ ಹಿಂಸೆ, ದೌರ್ಜನ್ಯ, ಕಾನೂನನ್ನು ಕೈಗೆತ್ತಿಕೊಂಡ ಆರೋಪದ ಮೇಲೆ ನಟನನ್ನು ಪೊಲೀಸರು ಬಂಧಿಸುತ್ತಾರೆ. ವಿಚಾರಣೆ ವೇಳೆ ಆತ ತಾನು ಯಕ್ಕಾ ಮಕ್ಕಾ ಮದ್ಯಪಾನ ಮಾಡಿದುದಾಗಿಯೂ, ಕುಡಿದ ಅಮಲಿನಲ್ಲಿ ಚಪ್ಪಲಿಯಿಂದ ಹೆಂಡತಿಯನ್ನು ಹೊಡೆದುದಾಗಿಯೂ ತಪ್ಪೊಪ್ಪಿಕೊಳ್ಳುತ್ತಾನೆ.
ಈ ಗಂಡ ಹೆಂಡತಿಯ ನಡುವಿನ ಮನಸ್ತಾಪ ಏಕಾಏಕಿ ಉಂಟಾದುದಲ್ಲ. ಕಳೆದ ಒಂದು ವರ್ಷದಿಂದ ನಿತ್ಯ ಜಗಳ ಕದನ ಇತ್ತು, ಇಂದು ಅದು ಪ್ರಕೋಪಕ್ಕೆ ಹೋಯಿತು ಅಷ್ಟೇ ಎಂದು ನಟನ ಅತ್ತೆ ಪೊಲೀಸರಿಗೆ ಹೇಳಿಕೆ ಕೊಡುತ್ತಾರೆ. ಹೆಂಡತಿ ಬರೆದ ದೂರು ಐದು ಪುಟಗಳಷ್ಟಿರುತ್ತದೆ.
ಇಷ್ಟಕ್ಕೂ ಸಂಸಾರದಲ್ಲಿ ಮನಸ್ತಾಪ ಯಾಕೆ ಬಂತು, ಅದಕ್ಕೆ ಹಿನ್ನೆಲೆ ಏನು. ಮನಸ್ತಾಪ ಇದ್ದರೆ ಅದಕ್ಕೆ ಪರಿಹಾರ ಹಿಂಸೆನಾ. ಇದೊಂದೂ ಅರ್ಥವಾಗದ ಸ್ಥಿತಿಯಲ್ಲಿರುವಾಗ ನಟನ ಸಂಸಾರವನ್ನು ಮತ್ತೆ ಸರಿದಾರಿಗೆ ತರುವ ಜವಾಬ್ದಾರಿಯನ್ನು ಸಮಾಜ ತನ್ನ ಹೆಗಲ ಮೇಲೆ ಎಳೆದುಕೊಳ್ಳುತ್ತದೆ.
ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಹಿಳೆಯ ಮನವೊಲಿಸಿ ಗಂಡನ ಮೇಲೆ ಕೊಟ್ಟ ದೂರನ್ನು ವಾಪಸ್ಸು ಪಡೆಯುವಂತೆ ಗಣ್ಯರು ಮನವೊಲಿಸುತ್ತಾರೆ. ಮತ್ತೆ ತಪ್ಪು ಮಾಡುವುದಿಲ್ಲ ಎಂದು ನಟರಾಜ ಬರವಣಿಗೆಯಲ್ಲಿ ಕೊಟ್ಟರೆ ಮಾತ್ರ ಕೇಸ್ ವಾಪಸ್ ಎಂದು ಹೆಂಡತಿ ಮತ್ತು ಅತ್ತೆ ಹಠ ಹಿಡಿಯುತ್ತಾರೆ.
ಗಂಡ ಹೆಂಡತಿ ನಡುವೆ ಪ್ಯಾಚ್ ಅಪ್ ಮಾಡುವ ಕೆಲಸದಲ್ಲಿ ಉದ್ಯಮದ ಗಣ್ಯರು ನಿರತರಾಗುತ್ತಾರೆ. ತಮ್ಮ ಆರಾಧ್ಯ ದೇವನನ್ನು ಬಂಧಿಸಿರುವುದರ ವಿರುದ್ಧ ಅವನ ಅಭಿಮಾನಿ ಸಮೂಹ ಸಿಟ್ಟಾಗುತ್ತದೆ. ಪೊಲೀಸ್ ಠಾಣೆಗೆ ಮುತ್ತಿಗೆ ಹಾಕುತ್ತದೆ. ಬಸ್ಸಿಗೆ ಕಲ್ಲು ತೂರುತ್ತದೆ. ಟಿವಿ ಚಾನಲ್ಲಿನವರ ಕ್ಯಾಮರಾಗಳು ಪುಡಿಪುಡಿ ಮಾಡುತ್ತಾರೆ.
ಈ ಮಧ್ಯೆ ಮಹಿಳಾ ಆಯೋಗವೂ ತನ್ನ ಮೂಗು ತೂರಿಸುವ ಜವಾಬ್ದಾರಿಯನ್ನು ನಿರ್ವಹಿಸುತ್ತದೆ. ಅದೆಲ್ಲ ನಿಮಗೆ ಟಿವಿಗಳಲ್ಲಿ ಕಾಣಸಿಗುತ್ತದೆ. ಮುಂದೇನು ಮುಂದೇನು ಎಂದು ಜನ ಕಾತರದಿಂದ ಕಾಯುತ್ತಿರುತ್ತಾರೆ.
ಇವಿಷ್ಟೂ ಒಂದು ಶುಕ್ರವಾರ ಬೆಳಗ್ಗೆ ನಡೆಯುವ ಕರ್ನಾಟಕದ ಬ್ರೇಕಿಂಗ್ ಸುದ್ದಿಗಳೆಂದು ಮಾಧ್ಯಮಗಳು ಓತಪ್ರೋತವಾಗಿ ವರದಿ, ಸುದ್ದಿಬಿಂಬ, ಸಂದರ್ಶನ, ಚಕ್ರಗೋಷ್ಠಿಗಳನ್ನು ನಡೆಸುತ್ತವೆ. ಬರೆದದ್ದನ್ನೇ ಬರೆಯುತ್ತಾರೆ, ಓದಿದ್ದನ್ನೇ ಓದುತ್ತಾರೆ.
ನಟ ಮತ್ತು ಆತನ ಹೆಂಡತಿಯ ನಡುವಿನ ಮನಸ್ತಾಪಕ್ಕೆ ನಿಜವಾದ ಕಾರಣಗಳೇನು ಎನ್ನುವುದು ಕಡೆಗೂ ಬಹಿರಂಗವಾಗುವುದಿಲ್ಲ. ಸೆಲೆಬ್ರಿಟಿ ನಟನ ನೆರವಿಗೆ ಸಮಾಜ ಧಾವಿಸುತ್ತದೆ. ಹೆಣ್ಣು ಕರಳು ಮತ್ತೆ ಹೇಗೋ ಹೊಂದಿಕೊಂಡು ಬಾಳುವ ಹಾದಿ ಹಿಡಿಯಲು ಹವಣಿಸುತ್ತದೆ.
ಇದೇ ಟೈಪ್ ಪ್ರಕರಣಗಳು ನಾಗರಿಕತೆಯ ಉದ್ದಕ್ಕೂ ನಡೆಯುತ್ತಾ ಬರುತ್ತವೆ. ಓಪಿಎಚ್ ರಸ್ತೆಯ ಓರ್ವ ಕುಡುಕ ಬಡಗಿ ಆತನ ಹೆಂಡತಿಗೆ ಹೊಡೆದುದು ಕಂಪ್ಲೇಟ್ ಆದರೆ ಆತ ಅಂದರ್ ಆಗುತ್ತಾನೆ. ಗಂಡನ ಕಣ್ತಪ್ಪಸಿ ಕಳ್ಳಾಟ ಆಡುವ ಮಾವಳ್ಳಿಯ ಮಳ್ಳಿ ಎದೆ ಎತ್ತಿಕೊಂಡು ತಿರುಗುತ್ತಾಳೆ. ಅವಳ ವಿರುದ್ಧ ಕೇಸು ಹಾಕಲೊಲ್ಲದ ಗಂಡ ಜೀವನದಲ್ಲಿ ಮೊದಲ ಬಾರಿಗೆ ಬಾರಿನ ಕಡೆ ನಡೆದು ಹೋಗುತ್ತಾನೆ.



Click it and Unblock the Notifications