Just In
- 8 hrs ago ವೃಷಭ ರಾಶಿಗೆ ಗುರು ಸಂಚಾರ: ಗುರು ನಿಮ್ಮ ಲಗ್ನ ಮನೆಯಲ್ಲಿ ಇರುವುದರಿಂದ ಇದರ ಪ್ರಭಾವ ಹೇಗಿರಲಿದೆ?
- 9 hrs ago ವೃಷಭ ರಾಶಿಗೆ ದೇವಗುರುವಿನ ಸಂಚಾರ: ಮೇಷ ರಾಶಿಗಳಿಗೆ ಇದರ ಪ್ರಭಾವ ಹೇಗಿರಲಿದೆ?
- 9 hrs ago ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- 11 hrs ago ದಿನ ಭವಿಷ್ಯ ಏಪ್ರಿಲ್ 19: ಶುಕ್ರವಾರದ ಈ ಶುಭ ದಿನ ನಿಮ್ಮ ರಾಶಿಗೆ ಹೇಗಿರಲಿದೆ?
Don't Miss
- News ಹಳೇ ಹುಲಿ ಪಿಸಿ ಮೋಹನ್ ಎದುರು ಮನ್ಸೂರ್ ಅಲಿ ಖಾನ್ ಕಣಕ್ಕೆ; ಮತ್ತೊಮ್ಮೆ ಇತಿಹಾಸ ಬರೆಯುತ್ತಾರಾ ಬಿಜೆಪಿ ಕಲಿ?
- Finance ಜಗತ್ತಿಗೆ ಭಾರತವೇ ಬಾಸ್, ಅಂತಾರಾಷ್ಟ್ರೀಯ ಹಣಕಾಸು ನಿಧಿ ಹೇಳಿದ್ದು ಏನು?
- Movies 'ಮಾರ್ಟಿನ್' ಚಿತ್ರದ ನಿರ್ಮಾಪಕ- ನಿರ್ದೇಶಕರ ಮಧ್ಯೆ ಕಿರಿಕ್: ಕೊನೆಗೂ ಸಿಕ್ತು ಸ್ಪಷ್ಟನೆ
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹೊಡೆಯೋ ಗಂಡ ಅಳೋ ಹೆಂಡತಿ ಎದ್ದು ಕುಣಿಯೋ ಸಮಾಜ
ಇತ್ತ, ಕೌಟುಂಬಿಕ ಹಿಂಸೆ, ದೌರ್ಜನ್ಯ, ಕಾನೂನನ್ನು ಕೈಗೆತ್ತಿಕೊಂಡ ಆರೋಪದ ಮೇಲೆ ನಟನನ್ನು ಪೊಲೀಸರು ಬಂಧಿಸುತ್ತಾರೆ. ವಿಚಾರಣೆ ವೇಳೆ ಆತ ತಾನು ಯಕ್ಕಾ ಮಕ್ಕಾ ಮದ್ಯಪಾನ ಮಾಡಿದುದಾಗಿಯೂ, ಕುಡಿದ ಅಮಲಿನಲ್ಲಿ ಚಪ್ಪಲಿಯಿಂದ ಹೆಂಡತಿಯನ್ನು ಹೊಡೆದುದಾಗಿಯೂ ತಪ್ಪೊಪ್ಪಿಕೊಳ್ಳುತ್ತಾನೆ.
ಈ ಗಂಡ ಹೆಂಡತಿಯ ನಡುವಿನ ಮನಸ್ತಾಪ ಏಕಾಏಕಿ ಉಂಟಾದುದಲ್ಲ. ಕಳೆದ ಒಂದು ವರ್ಷದಿಂದ ನಿತ್ಯ ಜಗಳ ಕದನ ಇತ್ತು, ಇಂದು ಅದು ಪ್ರಕೋಪಕ್ಕೆ ಹೋಯಿತು ಅಷ್ಟೇ ಎಂದು ನಟನ ಅತ್ತೆ ಪೊಲೀಸರಿಗೆ ಹೇಳಿಕೆ ಕೊಡುತ್ತಾರೆ. ಹೆಂಡತಿ ಬರೆದ ದೂರು ಐದು ಪುಟಗಳಷ್ಟಿರುತ್ತದೆ.
ಇಷ್ಟಕ್ಕೂ ಸಂಸಾರದಲ್ಲಿ ಮನಸ್ತಾಪ ಯಾಕೆ ಬಂತು, ಅದಕ್ಕೆ ಹಿನ್ನೆಲೆ ಏನು. ಮನಸ್ತಾಪ ಇದ್ದರೆ ಅದಕ್ಕೆ ಪರಿಹಾರ ಹಿಂಸೆನಾ. ಇದೊಂದೂ ಅರ್ಥವಾಗದ ಸ್ಥಿತಿಯಲ್ಲಿರುವಾಗ ನಟನ ಸಂಸಾರವನ್ನು ಮತ್ತೆ ಸರಿದಾರಿಗೆ ತರುವ ಜವಾಬ್ದಾರಿಯನ್ನು ಸಮಾಜ ತನ್ನ ಹೆಗಲ ಮೇಲೆ ಎಳೆದುಕೊಳ್ಳುತ್ತದೆ.
ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಹಿಳೆಯ ಮನವೊಲಿಸಿ ಗಂಡನ ಮೇಲೆ ಕೊಟ್ಟ ದೂರನ್ನು ವಾಪಸ್ಸು ಪಡೆಯುವಂತೆ ಗಣ್ಯರು ಮನವೊಲಿಸುತ್ತಾರೆ. ಮತ್ತೆ ತಪ್ಪು ಮಾಡುವುದಿಲ್ಲ ಎಂದು ನಟರಾಜ ಬರವಣಿಗೆಯಲ್ಲಿ ಕೊಟ್ಟರೆ ಮಾತ್ರ ಕೇಸ್ ವಾಪಸ್ ಎಂದು ಹೆಂಡತಿ ಮತ್ತು ಅತ್ತೆ ಹಠ ಹಿಡಿಯುತ್ತಾರೆ.
ಗಂಡ ಹೆಂಡತಿ ನಡುವೆ ಪ್ಯಾಚ್ ಅಪ್ ಮಾಡುವ ಕೆಲಸದಲ್ಲಿ ಉದ್ಯಮದ ಗಣ್ಯರು ನಿರತರಾಗುತ್ತಾರೆ. ತಮ್ಮ ಆರಾಧ್ಯ ದೇವನನ್ನು ಬಂಧಿಸಿರುವುದರ ವಿರುದ್ಧ ಅವನ ಅಭಿಮಾನಿ ಸಮೂಹ ಸಿಟ್ಟಾಗುತ್ತದೆ. ಪೊಲೀಸ್ ಠಾಣೆಗೆ ಮುತ್ತಿಗೆ ಹಾಕುತ್ತದೆ. ಬಸ್ಸಿಗೆ ಕಲ್ಲು ತೂರುತ್ತದೆ. ಟಿವಿ ಚಾನಲ್ಲಿನವರ ಕ್ಯಾಮರಾಗಳು ಪುಡಿಪುಡಿ ಮಾಡುತ್ತಾರೆ.
ಈ ಮಧ್ಯೆ ಮಹಿಳಾ ಆಯೋಗವೂ ತನ್ನ ಮೂಗು ತೂರಿಸುವ ಜವಾಬ್ದಾರಿಯನ್ನು ನಿರ್ವಹಿಸುತ್ತದೆ. ಅದೆಲ್ಲ ನಿಮಗೆ ಟಿವಿಗಳಲ್ಲಿ ಕಾಣಸಿಗುತ್ತದೆ. ಮುಂದೇನು ಮುಂದೇನು ಎಂದು ಜನ ಕಾತರದಿಂದ ಕಾಯುತ್ತಿರುತ್ತಾರೆ.
ಇವಿಷ್ಟೂ ಒಂದು ಶುಕ್ರವಾರ ಬೆಳಗ್ಗೆ ನಡೆಯುವ ಕರ್ನಾಟಕದ ಬ್ರೇಕಿಂಗ್ ಸುದ್ದಿಗಳೆಂದು ಮಾಧ್ಯಮಗಳು ಓತಪ್ರೋತವಾಗಿ ವರದಿ, ಸುದ್ದಿಬಿಂಬ, ಸಂದರ್ಶನ, ಚಕ್ರಗೋಷ್ಠಿಗಳನ್ನು ನಡೆಸುತ್ತವೆ. ಬರೆದದ್ದನ್ನೇ ಬರೆಯುತ್ತಾರೆ, ಓದಿದ್ದನ್ನೇ ಓದುತ್ತಾರೆ.
ನಟ ಮತ್ತು ಆತನ ಹೆಂಡತಿಯ ನಡುವಿನ ಮನಸ್ತಾಪಕ್ಕೆ ನಿಜವಾದ ಕಾರಣಗಳೇನು ಎನ್ನುವುದು ಕಡೆಗೂ ಬಹಿರಂಗವಾಗುವುದಿಲ್ಲ. ಸೆಲೆಬ್ರಿಟಿ ನಟನ ನೆರವಿಗೆ ಸಮಾಜ ಧಾವಿಸುತ್ತದೆ. ಹೆಣ್ಣು ಕರಳು ಮತ್ತೆ ಹೇಗೋ ಹೊಂದಿಕೊಂಡು ಬಾಳುವ ಹಾದಿ ಹಿಡಿಯಲು ಹವಣಿಸುತ್ತದೆ.
ಇದೇ ಟೈಪ್ ಪ್ರಕರಣಗಳು ನಾಗರಿಕತೆಯ ಉದ್ದಕ್ಕೂ ನಡೆಯುತ್ತಾ ಬರುತ್ತವೆ. ಓಪಿಎಚ್ ರಸ್ತೆಯ ಓರ್ವ ಕುಡುಕ ಬಡಗಿ ಆತನ ಹೆಂಡತಿಗೆ ಹೊಡೆದುದು ಕಂಪ್ಲೇಟ್ ಆದರೆ ಆತ ಅಂದರ್ ಆಗುತ್ತಾನೆ. ಗಂಡನ ಕಣ್ತಪ್ಪಸಿ ಕಳ್ಳಾಟ ಆಡುವ ಮಾವಳ್ಳಿಯ ಮಳ್ಳಿ ಎದೆ ಎತ್ತಿಕೊಂಡು ತಿರುಗುತ್ತಾಳೆ. ಅವಳ ವಿರುದ್ಧ ಕೇಸು ಹಾಕಲೊಲ್ಲದ ಗಂಡ ಜೀವನದಲ್ಲಿ ಮೊದಲ ಬಾರಿಗೆ ಬಾರಿನ ಕಡೆ ನಡೆದು ಹೋಗುತ್ತಾನೆ.