Latest Updates
-
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು! -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆಯ ಮಳೆನೀರು ಕೊಯ್ಲು ವ್ಯವಸ್ಥೆ ಹಾಳಾಗದಂತೆ ತಡೆಯುವುದು ಹೇಗೆ? -
ಮಳೆಗಾಲದಲ್ಲಿ ಮಕ್ಕಳ ಲಂಚ್ಬಾಕ್ಸ್ ಸುರಕ್ಷತೆ: ಆರೋಗ್ಯಕರ ಮತ್ತು ಹೈ-ಪ್ರೋಟೀನ್ ಆಹಾರದ ಟಿಪ್ಸ್ -
ಮುಂಬೈನಲ್ಲಿ ಭಾರೀ ಮಳೆ: ಇಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ, ಪೋಷಕರು ಗಮನಿಸಿ! -
ಕರಾವಳಿ ರೆಡ್ ಅಲರ್ಟ್: ಮನೆಯಲ್ಲೇ ಸುರಕ್ಷಿತವಾಗಿ ಫಿಟ್ ಆಗಿರಲು ಈ 12 ನಿಮಿಷಗಳ ವರ್ಕೌಟ್ ಟ್ರೈ ಮಾಡಿ! -
ಪುಣೆಯಲ್ಲಿ ಮಳೆ ರಜೆ: ವರ್ಕ್ ಫ್ರಮ್ ಹೋಮ್ ಜೊತೆಗೆ ಮಕ್ಕಳನ್ನು ನಿಭಾಯಿಸಲು ಇಲ್ಲಿದೆ ಸ್ಮಾರ್ಟ್ ಟಿಪ್ಸ್ -
ಮುಂಬೈ ರೆಡ್ ಅಲರ್ಟ್: ಮಳೆಯಿಂದ ನಿಮ್ಮ ಬಾಡಿಗೆ ಮನೆ ಮತ್ತು ವಸ್ತುಗಳನ್ನು ರಕ್ಷಿಸಿಕೊಳ್ಳುವುದು ಹೇಗೆ? -
ಮುಂಬೈ ರೆಡ್ ಅಲರ್ಟ್: ಮಳೆಗಾಲದ ಕಾಯಿಲೆಗಳಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಮುಂಬೈ ಮಳೆ ಅಬ್ಬರ: ವಿಮಾನ ನಿಲ್ದಾಣಕ್ಕೆ ಹೋಗುವ ಮುನ್ನ ಈ ಸ್ಮಾರ್ಟ್ ಟಿಪ್ಸ್ ಫಾಲೋ ಮಾಡಿ
ಅಬ್ದುಲ್ ಕಲಾಂ ಮಣಿವಣ್ಣನ್ ಮತಾಂತರದ ಹಿಂದುಮುಂದು

ಪಿ. ಮಣಿವಣ್ಣನ್ ಎಂಬುದರ ಬದಲಿಗೆ ಅಬ್ದುಲ್ ಕಲಾಂ ಮಣಿ (ಎ.ಕೆ. ಮಣಿ) ಎಂದು ಇಸ್ಲಾಂ ಧರ್ಮಕ್ಕೆ ಅನುಗುಣವಾಗಿ ಮರು ನಾಮಕರಣ ಮಾಡಿಕೊಂಡಿದ್ದಾರೆ. ಜೊತೆಗೆ ಸಲ್ಮಾ ಅವರೊಂದಿಗಿನ ವಿವಾಹ ಇಸ್ಲಾಂ ಧರ್ಮದ ರೀತಿ-ರಿವಾಜುಗಳ ಪ್ರಕಾರವೇ ನೆರವೇರಿದೆ ಎಂಬ ದಟ್ಟ ವದಂತಿಗಳು ಸುಳಿದಾಡುತ್ತಿದೆ.
ಮಣಿವಣ್ಣನ್ ಅವರ ಎರಡನೇ ವಿವಾಹದ ಬಗ್ಗೆ ಯಾರದೂ ಆಕ್ಷೇಪವಿಲ್ಲ. ಆದರೆ ಈಗ ಈ ವಿಷಯ ಅಧಿಕಾರಿ ವಲಯ, ರಾಜಕಾರಣಿಗಳ ವಲಯದಲ್ಲಿ ತೀವ್ರ ಚರ್ಚೆಯಾಗಲು ಮುಖ್ಯ ಕಾರಣವಿದೆ. ಸಲ್ಮಾ ಅವರನ್ನು ವಿವಾಹವಾಗಲು ಐಎಎಸ್ ಅಧಿಕಾರಿಯಾದ ಮಣಿವಣ್ಣನ್ ಅವರು ಹಿಂದೂ ಧರ್ಮ ತೊರೆದು ಇಸ್ಲಾಂ ಧರ್ಮ ಸ್ವೀಕರಿಸಿದ್ದಾರೆ ಎಂಬ ವಿಷಯ ಚರ್ಚೆಯಾಗುತ್ತಿದೆ.
ಈ ಹಿಂದೆ ಮೈಸೂರು ಉಪಚುನಾವಣೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ನೀರಿಳಿಸಿದ್ದ ಮಣಿವಣ್ಣನ್ ಮೂಲತಃ ತಮಿಳುನಾಡಿನವರು. ಅವರ ತಂದೆ ಪೂಣಯ್ಯ ದಲಿತ ಕುಟುಂಬದಿಂದ ಬಂದವರು. ಮದುರೈನಲ್ಲಿ ಶ್ರೀರಂಗಂನಲ್ಲಿ ವಾಸವಾಗಿದ್ದ ಶಿಸ್ತಿನ ಸಿಪಾಯಿ ಪೂಣಯ್ಯ ರೈಲ್ವೆ ಇಲಾಖೆಯಲ್ಲಿದ್ದರು.
ಪೂಣಯ್ಯಗೆ ಐವರು ಪುತ್ರರು ಇದ್ದಾರೆ. ಮೂವರು ಇಂಜಿನಿಯರುಗಳು ಮತ್ತು ಇಬ್ಬರು ಡಾಕ್ಟರುಗಳು. ಕೆಮಿಕಲ್ ಇಂಜಿನಿಯರ್ ಮಣಿ, 1998ರ ಐಎಎಸ್ ಅಧಿಕಾರಿ. ಟಾಸ್ಕ್ ಮಾಸ್ಟರ್ ಮಣಿವಣ್ಣನ್ ಗೆ ಇನ್ನೂ ಮೂರು ದಶಕಗಳ ಐಎಎಸ್ ಸೇವೆ ಉಳಿದಿದೆ. ಪ್ರೀತಿಸಿದವರಿಗಾಗಿ ಐಎಎಸ್ ಅಧಿಕಾರಿಯೊಬ್ಬರು ಮತಾಂತರವಾದ ಉದಾಹರಣೆಗಳು ಕರ್ನಾಟಕದಲ್ಲಿಲ್ಲ. ಮಣಿ ಮರು ವಿವಾಹ ಜೀವನ ಸುಖಮಯವಾಗಿರಲಿ.



Click it and Unblock the Notifications