Latest Updates
-
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ! -
ಅಂತರಾಷ್ಟ್ರೀಯ ಸ್ನೇಹ ದಿನ: ಗೆಳೆಯರೊಂದಿಗೆ 'ಬಡ್ಡಿ ವರ್ಕೌಟ್' ಮಾಡಿ ಆರೋಗ್ಯ ಮತ್ತು ಬಾಂಧವ್ಯ ಹೆಚ್ಚಿಸಿಕೊಳ್ಳಿ! -
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ!
ಅಬ್ದುಲ್ ಕಲಾಂ ಮಣಿವಣ್ಣನ್ ಮತಾಂತರದ ಹಿಂದುಮುಂದು

ಪಿ. ಮಣಿವಣ್ಣನ್ ಎಂಬುದರ ಬದಲಿಗೆ ಅಬ್ದುಲ್ ಕಲಾಂ ಮಣಿ (ಎ.ಕೆ. ಮಣಿ) ಎಂದು ಇಸ್ಲಾಂ ಧರ್ಮಕ್ಕೆ ಅನುಗುಣವಾಗಿ ಮರು ನಾಮಕರಣ ಮಾಡಿಕೊಂಡಿದ್ದಾರೆ. ಜೊತೆಗೆ ಸಲ್ಮಾ ಅವರೊಂದಿಗಿನ ವಿವಾಹ ಇಸ್ಲಾಂ ಧರ್ಮದ ರೀತಿ-ರಿವಾಜುಗಳ ಪ್ರಕಾರವೇ ನೆರವೇರಿದೆ ಎಂಬ ದಟ್ಟ ವದಂತಿಗಳು ಸುಳಿದಾಡುತ್ತಿದೆ.
ಮಣಿವಣ್ಣನ್ ಅವರ ಎರಡನೇ ವಿವಾಹದ ಬಗ್ಗೆ ಯಾರದೂ ಆಕ್ಷೇಪವಿಲ್ಲ. ಆದರೆ ಈಗ ಈ ವಿಷಯ ಅಧಿಕಾರಿ ವಲಯ, ರಾಜಕಾರಣಿಗಳ ವಲಯದಲ್ಲಿ ತೀವ್ರ ಚರ್ಚೆಯಾಗಲು ಮುಖ್ಯ ಕಾರಣವಿದೆ. ಸಲ್ಮಾ ಅವರನ್ನು ವಿವಾಹವಾಗಲು ಐಎಎಸ್ ಅಧಿಕಾರಿಯಾದ ಮಣಿವಣ್ಣನ್ ಅವರು ಹಿಂದೂ ಧರ್ಮ ತೊರೆದು ಇಸ್ಲಾಂ ಧರ್ಮ ಸ್ವೀಕರಿಸಿದ್ದಾರೆ ಎಂಬ ವಿಷಯ ಚರ್ಚೆಯಾಗುತ್ತಿದೆ.
ಈ ಹಿಂದೆ ಮೈಸೂರು ಉಪಚುನಾವಣೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ನೀರಿಳಿಸಿದ್ದ ಮಣಿವಣ್ಣನ್ ಮೂಲತಃ ತಮಿಳುನಾಡಿನವರು. ಅವರ ತಂದೆ ಪೂಣಯ್ಯ ದಲಿತ ಕುಟುಂಬದಿಂದ ಬಂದವರು. ಮದುರೈನಲ್ಲಿ ಶ್ರೀರಂಗಂನಲ್ಲಿ ವಾಸವಾಗಿದ್ದ ಶಿಸ್ತಿನ ಸಿಪಾಯಿ ಪೂಣಯ್ಯ ರೈಲ್ವೆ ಇಲಾಖೆಯಲ್ಲಿದ್ದರು.
ಪೂಣಯ್ಯಗೆ ಐವರು ಪುತ್ರರು ಇದ್ದಾರೆ. ಮೂವರು ಇಂಜಿನಿಯರುಗಳು ಮತ್ತು ಇಬ್ಬರು ಡಾಕ್ಟರುಗಳು. ಕೆಮಿಕಲ್ ಇಂಜಿನಿಯರ್ ಮಣಿ, 1998ರ ಐಎಎಸ್ ಅಧಿಕಾರಿ. ಟಾಸ್ಕ್ ಮಾಸ್ಟರ್ ಮಣಿವಣ್ಣನ್ ಗೆ ಇನ್ನೂ ಮೂರು ದಶಕಗಳ ಐಎಎಸ್ ಸೇವೆ ಉಳಿದಿದೆ. ಪ್ರೀತಿಸಿದವರಿಗಾಗಿ ಐಎಎಸ್ ಅಧಿಕಾರಿಯೊಬ್ಬರು ಮತಾಂತರವಾದ ಉದಾಹರಣೆಗಳು ಕರ್ನಾಟಕದಲ್ಲಿಲ್ಲ. ಮಣಿ ಮರು ವಿವಾಹ ಜೀವನ ಸುಖಮಯವಾಗಿರಲಿ.



Click it and Unblock the Notifications