Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಅಬ್ದುಲ್ ಕಲಾಂ ಮಣಿವಣ್ಣನ್ ಮತಾಂತರದ ಹಿಂದುಮುಂದು

ಪಿ. ಮಣಿವಣ್ಣನ್ ಎಂಬುದರ ಬದಲಿಗೆ ಅಬ್ದುಲ್ ಕಲಾಂ ಮಣಿ (ಎ.ಕೆ. ಮಣಿ) ಎಂದು ಇಸ್ಲಾಂ ಧರ್ಮಕ್ಕೆ ಅನುಗುಣವಾಗಿ ಮರು ನಾಮಕರಣ ಮಾಡಿಕೊಂಡಿದ್ದಾರೆ. ಜೊತೆಗೆ ಸಲ್ಮಾ ಅವರೊಂದಿಗಿನ ವಿವಾಹ ಇಸ್ಲಾಂ ಧರ್ಮದ ರೀತಿ-ರಿವಾಜುಗಳ ಪ್ರಕಾರವೇ ನೆರವೇರಿದೆ ಎಂಬ ದಟ್ಟ ವದಂತಿಗಳು ಸುಳಿದಾಡುತ್ತಿದೆ.
ಮಣಿವಣ್ಣನ್ ಅವರ ಎರಡನೇ ವಿವಾಹದ ಬಗ್ಗೆ ಯಾರದೂ ಆಕ್ಷೇಪವಿಲ್ಲ. ಆದರೆ ಈಗ ಈ ವಿಷಯ ಅಧಿಕಾರಿ ವಲಯ, ರಾಜಕಾರಣಿಗಳ ವಲಯದಲ್ಲಿ ತೀವ್ರ ಚರ್ಚೆಯಾಗಲು ಮುಖ್ಯ ಕಾರಣವಿದೆ. ಸಲ್ಮಾ ಅವರನ್ನು ವಿವಾಹವಾಗಲು ಐಎಎಸ್ ಅಧಿಕಾರಿಯಾದ ಮಣಿವಣ್ಣನ್ ಅವರು ಹಿಂದೂ ಧರ್ಮ ತೊರೆದು ಇಸ್ಲಾಂ ಧರ್ಮ ಸ್ವೀಕರಿಸಿದ್ದಾರೆ ಎಂಬ ವಿಷಯ ಚರ್ಚೆಯಾಗುತ್ತಿದೆ.
ಈ ಹಿಂದೆ ಮೈಸೂರು ಉಪಚುನಾವಣೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ನೀರಿಳಿಸಿದ್ದ ಮಣಿವಣ್ಣನ್ ಮೂಲತಃ ತಮಿಳುನಾಡಿನವರು. ಅವರ ತಂದೆ ಪೂಣಯ್ಯ ದಲಿತ ಕುಟುಂಬದಿಂದ ಬಂದವರು. ಮದುರೈನಲ್ಲಿ ಶ್ರೀರಂಗಂನಲ್ಲಿ ವಾಸವಾಗಿದ್ದ ಶಿಸ್ತಿನ ಸಿಪಾಯಿ ಪೂಣಯ್ಯ ರೈಲ್ವೆ ಇಲಾಖೆಯಲ್ಲಿದ್ದರು.
ಪೂಣಯ್ಯಗೆ ಐವರು ಪುತ್ರರು ಇದ್ದಾರೆ. ಮೂವರು ಇಂಜಿನಿಯರುಗಳು ಮತ್ತು ಇಬ್ಬರು ಡಾಕ್ಟರುಗಳು. ಕೆಮಿಕಲ್ ಇಂಜಿನಿಯರ್ ಮಣಿ, 1998ರ ಐಎಎಸ್ ಅಧಿಕಾರಿ. ಟಾಸ್ಕ್ ಮಾಸ್ಟರ್ ಮಣಿವಣ್ಣನ್ ಗೆ ಇನ್ನೂ ಮೂರು ದಶಕಗಳ ಐಎಎಸ್ ಸೇವೆ ಉಳಿದಿದೆ. ಪ್ರೀತಿಸಿದವರಿಗಾಗಿ ಐಎಎಸ್ ಅಧಿಕಾರಿಯೊಬ್ಬರು ಮತಾಂತರವಾದ ಉದಾಹರಣೆಗಳು ಕರ್ನಾಟಕದಲ್ಲಿಲ್ಲ. ಮಣಿ ಮರು ವಿವಾಹ ಜೀವನ ಸುಖಮಯವಾಗಿರಲಿ.



Click it and Unblock the Notifications


