Latest Updates
-
ನೀಟ್ ಮರುಪರೀಕ್ಷೆ: ಅಡ್ಮಿಟ್ ಕಾರ್ಡ್ ಬಿಡುಗಡೆ, ಪರೀಕ್ಷೆಗೆ ಹೋಗುವ ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೇ ಮಾಡಬೇಕಾದ ಕೆಲಸಗಳಿವು! -
ಮಳೆಗಾಲದ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವೇ? ಸೋರಿಕೆ ಮತ್ತು ಹಾನಿ ತಪ್ಪಿಸಲು ಈ ಸರಳ ಟಿಪ್ಸ್ ಪಾಲಿಸಿ -
ಸುಡುವ ಬಿಸಿಲಿಗೆ ಹವಾಮಾನ ಇಲಾಖೆ ಎಚ್ಚರಿಕೆ: ದೇಹ ತಂಪಾಗಿಡಲು ಈ ಪಾನೀಯಗಳೇ ರಾಮಬಾಣ! -
ಲಕ್ನೋದಲ್ಲಿ ಭಾರತ-ಅಫ್ಘಾನಿಸ್ತಾನ ಹೈ-ವೋಲ್ಟೇಜ್ ಕದನ: ಪಂದ್ಯದ ಮಜಾ ಸವಿಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಯೋಗ ದಿನಾಚರಣೆ: ಮೈದಾನದಲ್ಲಿ ಯೋಗ ಮಾಡಲು ಸಿದ್ಧರಿದ್ದೀರಾ? ಇಲ್ಲಿದೆ ಅಗತ್ಯ ಮುನ್ನೆಚ್ಚರಿಕೆಗಳು! -
ಟೆಲಿಗ್ರಾಮ್ ಬಳಕೆದಾರರೇ ಎಚ್ಚರ: ಜೂನ್ 16 ರಿಂದ 22 ರವರೆಗೆ ಸೇವೆ ಸ್ಥಗಿತ, ಪರ್ಯಾಯ ಮಾರ್ಗಗಳೇನು? -
ಪಂಜಾಬ್-ಹರಿಯಾಣದಲ್ಲಿ ಭಾರಿ ಬಿರುಗಾಳಿ ಎಚ್ಚರಿಕೆ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ 20 ನಿಮಿಷಗಳ ಟಿಪ್ಸ್ ಪಾಲಿಸಿ! -
ಸೋಯಾಬೀನ್ ಎಣ್ಣೆ ಬೆಲೆ ಏರಿಕೆ: ಅಡುಗೆ ಮನೆ ಬಜೆಟ್ ಮೇಲೆ ಹೊರೆ, ಕಲಬೆರಕೆ ಪತ್ತೆ ಹಚ್ಚುವುದು ಹೇಗೆ? -
ದೆಹಲಿ-ಎನ್ಸಿಆರ್ನಲ್ಲಿ ಮಳೆ ಅಬ್ಬರ: ಟ್ರಾಫಿಕ್ ಕಿರಿಕಿರಿ ತಪ್ಪಿಸಲು ನೀವು ಮಾಡಬೇಕಾದ್ದೇನು? -
ಮುಂಬೈ ಸೆಕೆ ಮತ್ತು ಆರ್ದ್ರತೆ: ಹೊರಗೆ ಹೋಗಿ ಸುಸ್ತಾಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ!
ಅಬ್ದುಲ್ ಕಲಾಂ ಮಣಿವಣ್ಣನ್ ಮತಾಂತರದ ಹಿಂದುಮುಂದು

ಪಿ. ಮಣಿವಣ್ಣನ್ ಎಂಬುದರ ಬದಲಿಗೆ ಅಬ್ದುಲ್ ಕಲಾಂ ಮಣಿ (ಎ.ಕೆ. ಮಣಿ) ಎಂದು ಇಸ್ಲಾಂ ಧರ್ಮಕ್ಕೆ ಅನುಗುಣವಾಗಿ ಮರು ನಾಮಕರಣ ಮಾಡಿಕೊಂಡಿದ್ದಾರೆ. ಜೊತೆಗೆ ಸಲ್ಮಾ ಅವರೊಂದಿಗಿನ ವಿವಾಹ ಇಸ್ಲಾಂ ಧರ್ಮದ ರೀತಿ-ರಿವಾಜುಗಳ ಪ್ರಕಾರವೇ ನೆರವೇರಿದೆ ಎಂಬ ದಟ್ಟ ವದಂತಿಗಳು ಸುಳಿದಾಡುತ್ತಿದೆ.
ಮಣಿವಣ್ಣನ್ ಅವರ ಎರಡನೇ ವಿವಾಹದ ಬಗ್ಗೆ ಯಾರದೂ ಆಕ್ಷೇಪವಿಲ್ಲ. ಆದರೆ ಈಗ ಈ ವಿಷಯ ಅಧಿಕಾರಿ ವಲಯ, ರಾಜಕಾರಣಿಗಳ ವಲಯದಲ್ಲಿ ತೀವ್ರ ಚರ್ಚೆಯಾಗಲು ಮುಖ್ಯ ಕಾರಣವಿದೆ. ಸಲ್ಮಾ ಅವರನ್ನು ವಿವಾಹವಾಗಲು ಐಎಎಸ್ ಅಧಿಕಾರಿಯಾದ ಮಣಿವಣ್ಣನ್ ಅವರು ಹಿಂದೂ ಧರ್ಮ ತೊರೆದು ಇಸ್ಲಾಂ ಧರ್ಮ ಸ್ವೀಕರಿಸಿದ್ದಾರೆ ಎಂಬ ವಿಷಯ ಚರ್ಚೆಯಾಗುತ್ತಿದೆ.
ಈ ಹಿಂದೆ ಮೈಸೂರು ಉಪಚುನಾವಣೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ನೀರಿಳಿಸಿದ್ದ ಮಣಿವಣ್ಣನ್ ಮೂಲತಃ ತಮಿಳುನಾಡಿನವರು. ಅವರ ತಂದೆ ಪೂಣಯ್ಯ ದಲಿತ ಕುಟುಂಬದಿಂದ ಬಂದವರು. ಮದುರೈನಲ್ಲಿ ಶ್ರೀರಂಗಂನಲ್ಲಿ ವಾಸವಾಗಿದ್ದ ಶಿಸ್ತಿನ ಸಿಪಾಯಿ ಪೂಣಯ್ಯ ರೈಲ್ವೆ ಇಲಾಖೆಯಲ್ಲಿದ್ದರು.
ಪೂಣಯ್ಯಗೆ ಐವರು ಪುತ್ರರು ಇದ್ದಾರೆ. ಮೂವರು ಇಂಜಿನಿಯರುಗಳು ಮತ್ತು ಇಬ್ಬರು ಡಾಕ್ಟರುಗಳು. ಕೆಮಿಕಲ್ ಇಂಜಿನಿಯರ್ ಮಣಿ, 1998ರ ಐಎಎಸ್ ಅಧಿಕಾರಿ. ಟಾಸ್ಕ್ ಮಾಸ್ಟರ್ ಮಣಿವಣ್ಣನ್ ಗೆ ಇನ್ನೂ ಮೂರು ದಶಕಗಳ ಐಎಎಸ್ ಸೇವೆ ಉಳಿದಿದೆ. ಪ್ರೀತಿಸಿದವರಿಗಾಗಿ ಐಎಎಸ್ ಅಧಿಕಾರಿಯೊಬ್ಬರು ಮತಾಂತರವಾದ ಉದಾಹರಣೆಗಳು ಕರ್ನಾಟಕದಲ್ಲಿಲ್ಲ. ಮಣಿ ಮರು ವಿವಾಹ ಜೀವನ ಸುಖಮಯವಾಗಿರಲಿ.



Click it and Unblock the Notifications