Latest Updates
-
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ!
ರೀ, ಎಲ್ಲಿ ಹೊಂಟಿರೆಂದು ಹೇಳಿ ಹೋಗಬಾರದಾ?

ಒಂದು ಪಕ್ಷ ಮಕ್ಕಳೇನಾದರೂ ಹಿರಿಯರನ್ನು ಎಲ್ಲಿಗೆ ಹೊಂಟಿರೆಂದು ಕೇಳಿದರೆ, 'ಕೇಳಬೇಡವೆಂದು ಹೇಳಿರಲಿಲ್ಲ, ಮತ್ಯಾಕೆ ಕೇಳಿದೆ?' ಎಂದು ಗದರಿಸಿ ಸುಮ್ಮನೆ ಕೂಡಿಸುತ್ತಾರೆ. ಅಪ್ಪ ಹಾಕಿದ ಆಲದಮರಕ್ಕೆ ಜೋತು ಬೀಳುವ ಇವರು ಯಾಕೆ ಕೇಳಬೇಕು, ಯಾಕೆ ಕೇಳಬಾರದು ಎಂಬ ಬಗ್ಗೆ ಚಿಂತನೆಯನ್ನೇ ಮಾಡಿರುವುದಿಲ್ಲ, ಪ್ರಾಕ್ಟಿಕಲ್ ಚಿಂತನೆ ಇರುವುದಿಲ್ಲ.
ನಮ್ಮ ನಾಡಿನಲ್ಲಿ ಮೂಢನಂಬಿಕೆಗಳಿಗೇನೂ ಕೊರತೆಯಿಲ್ಲ. ಮೂರು ಜನ ಮನೆಯಿಂದ ಹೊರ ಹೋಗಬಾರದು, ಅಂಗಿಗೆ ಎಡಗೈ ಮೊದಲು ಹಾಕಬಾರದು, ಬೆಕ್ಕು ಅಡ್ಡ ಬಂದರೆ ಮುಂದೆ ಹೋಗಬಾರದು, ಗಡಿಯಾರ ಕೆಟ್ಟರೆ ನಮ್ಮ ಟೈಮೂ ಕೆಟ್ಟುಹೋಗುತ್ತದೆ, ನಾಯಿ ಊಳಿಡುವ ಧ್ವನಿ ಕೇಳಿದರೆ ಏನೋ ಕೆಡುಕಾಗುತ್ತದೆ, ಕಪ್ಪೆಗಳ ಮದುವೆ ಮಾಡಿದರೆ ಮಳೆ ಬರುತ್ತದೆ... ಇತ್ಯಾದಿ ಇತ್ಯಾದಿ.
ಈ ಮೂಢನಂಬಿಕೆಗಳನ್ನು ಆಚರಿಸಿದರೆ ಕೆಡುಕು ಆಗುವುದಿಲ್ಲವಾದರೂ, ಪ್ರಯೋಜನವಾದರೂ ಆಗುತ್ತದಾ? ಇಲ್ಲ. ಆದರೆ, ಹೋಗುವಾಗ ಹೇಳಿಹೋಗದಿದ್ದರೆ ಎಂತೆಂಥ ಅವಘಡಗಳು ಸಂಭವಿಸುತ್ತವೆ ಹುಬ್ಬಳ್ಳಿಯಲ್ಲಿ ನಡೆದಿರುವ ಒಂದು ಘಟನೆಯೇ ಸಾಕ್ಷಿ. ಮನೆಯಿಂದ ಹೇಳದೆ ಕೇಳದೆ ಹೊರಟ ಒಬ್ಬ ಮನೆಯವರನ್ನೆಲ್ಲ ಪೇಚಿಗೆ ಸಿಕ್ಕಿಸಿದ ವಿಚಿತ್ರ ಘಟನೆ ಸಂಭವಿಸಿದೆ.
ಹೇಳದೆ ಕೇಳದೆ ಬೆಂಗಳೂರಿಗೆ ಬಂದ ಆ ಹುಬ್ಬಳ್ಳಿ ಹೈದನ ಎಡಗಾಲಿಗೆ ಆರು ಬೆರಳು. ಅವನನ್ನು ಹುಡುಕುತ್ತಿರುವಾಗ ಎಡಗಾಲಿಗೆ ಆರು ಬೆರಳಿರುವ ವ್ಯಕ್ತಿಯೊಬ್ಬನ ಶವ ಉಣಕಲ್ ಕೆರೆಯಲ್ಲಿ ಪತ್ತೆಯಾಗುತ್ತದೆ. ಅವನು ಇವನೇ ಎಂದು ತಿಳಿದು ಹೂತುಬಿಡಲಾಗುತ್ತದೆ. ಆದರೆ, ಆಶ್ಚರ್ಯಕರವೆಂಬಂತೆ, 'ಸತ್ತ'ವನೆಂದು ತಿಳಿದವ ವಾಪಸ್ ಬಂದಿರುತ್ತಾನೆ. ಅವನನ್ನು ಜೀವಂತವಾಗಿ ಕಂಡವರಿಗೆ ಆಶ್ಚರ್ಯ, ದುಗುಡ, ಸಿಟ್ಟು, ಭಯ.
ಚಂದ್ರಕಾಂತ್ ಕುಸನೂರು ಅವರ 'ಆನಿ ಬಂತಾನಿ' ಅಸಂಗತ ನಾಟಕದಲ್ಲಿ ಇಂಥದೇ ಪ್ರಸಂಗ ಬರುತ್ತದೆ. ಅಪ್ಪ ಹೊರಗೆ ಹೊಂಟಾಗ ಮಗ ಎಲ್ಲಿ ಹೊಂಟಿ ಎಂದು ಕೇಳಿದಾಗ ಅಮ್ಮ ಗದರಿಸುತ್ತಾಳೆ. ಆಗ ಪೆದ್ದ ಮಗ ಬಸವ, "ಎಲ್ಲಿ ಹೊಂಟಿರೆಂದು ಯಾಕೆ ಕೇಳಬೇಕಂದರ, ಅವರು ಹೋಗುವ ಸ್ಥಳ ಗೊತ್ತಾಗತದ ಮತ್ತ ಅವರು ಬರಲಾರದಂಥ ಸ್ಥಿತಿಯಲ್ಲಿದ್ದರ ಕರೆತರಲು ಅನುವಾಗುತ್ತದ" ಎಂಬ ಉತ್ತರ ಕೊಡುತ್ತಾನೆ. ಈಗ ಹೇಳಿ, ಹೊರಗೆ ಹೊಂಟವರನ್ನು ಎಲ್ಲಿಗೆ ಹೊಂಟಿರೆಂದು ಕೇಳಿದರೆ ತಪ್ಪೆ?



Click it and Unblock the Notifications