Latest Updates
-
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ!
ರೀ, ಎಲ್ಲಿ ಹೊಂಟಿರೆಂದು ಹೇಳಿ ಹೋಗಬಾರದಾ?

ಒಂದು ಪಕ್ಷ ಮಕ್ಕಳೇನಾದರೂ ಹಿರಿಯರನ್ನು ಎಲ್ಲಿಗೆ ಹೊಂಟಿರೆಂದು ಕೇಳಿದರೆ, 'ಕೇಳಬೇಡವೆಂದು ಹೇಳಿರಲಿಲ್ಲ, ಮತ್ಯಾಕೆ ಕೇಳಿದೆ?' ಎಂದು ಗದರಿಸಿ ಸುಮ್ಮನೆ ಕೂಡಿಸುತ್ತಾರೆ. ಅಪ್ಪ ಹಾಕಿದ ಆಲದಮರಕ್ಕೆ ಜೋತು ಬೀಳುವ ಇವರು ಯಾಕೆ ಕೇಳಬೇಕು, ಯಾಕೆ ಕೇಳಬಾರದು ಎಂಬ ಬಗ್ಗೆ ಚಿಂತನೆಯನ್ನೇ ಮಾಡಿರುವುದಿಲ್ಲ, ಪ್ರಾಕ್ಟಿಕಲ್ ಚಿಂತನೆ ಇರುವುದಿಲ್ಲ.
ನಮ್ಮ ನಾಡಿನಲ್ಲಿ ಮೂಢನಂಬಿಕೆಗಳಿಗೇನೂ ಕೊರತೆಯಿಲ್ಲ. ಮೂರು ಜನ ಮನೆಯಿಂದ ಹೊರ ಹೋಗಬಾರದು, ಅಂಗಿಗೆ ಎಡಗೈ ಮೊದಲು ಹಾಕಬಾರದು, ಬೆಕ್ಕು ಅಡ್ಡ ಬಂದರೆ ಮುಂದೆ ಹೋಗಬಾರದು, ಗಡಿಯಾರ ಕೆಟ್ಟರೆ ನಮ್ಮ ಟೈಮೂ ಕೆಟ್ಟುಹೋಗುತ್ತದೆ, ನಾಯಿ ಊಳಿಡುವ ಧ್ವನಿ ಕೇಳಿದರೆ ಏನೋ ಕೆಡುಕಾಗುತ್ತದೆ, ಕಪ್ಪೆಗಳ ಮದುವೆ ಮಾಡಿದರೆ ಮಳೆ ಬರುತ್ತದೆ... ಇತ್ಯಾದಿ ಇತ್ಯಾದಿ.
ಈ ಮೂಢನಂಬಿಕೆಗಳನ್ನು ಆಚರಿಸಿದರೆ ಕೆಡುಕು ಆಗುವುದಿಲ್ಲವಾದರೂ, ಪ್ರಯೋಜನವಾದರೂ ಆಗುತ್ತದಾ? ಇಲ್ಲ. ಆದರೆ, ಹೋಗುವಾಗ ಹೇಳಿಹೋಗದಿದ್ದರೆ ಎಂತೆಂಥ ಅವಘಡಗಳು ಸಂಭವಿಸುತ್ತವೆ ಹುಬ್ಬಳ್ಳಿಯಲ್ಲಿ ನಡೆದಿರುವ ಒಂದು ಘಟನೆಯೇ ಸಾಕ್ಷಿ. ಮನೆಯಿಂದ ಹೇಳದೆ ಕೇಳದೆ ಹೊರಟ ಒಬ್ಬ ಮನೆಯವರನ್ನೆಲ್ಲ ಪೇಚಿಗೆ ಸಿಕ್ಕಿಸಿದ ವಿಚಿತ್ರ ಘಟನೆ ಸಂಭವಿಸಿದೆ.
ಹೇಳದೆ ಕೇಳದೆ ಬೆಂಗಳೂರಿಗೆ ಬಂದ ಆ ಹುಬ್ಬಳ್ಳಿ ಹೈದನ ಎಡಗಾಲಿಗೆ ಆರು ಬೆರಳು. ಅವನನ್ನು ಹುಡುಕುತ್ತಿರುವಾಗ ಎಡಗಾಲಿಗೆ ಆರು ಬೆರಳಿರುವ ವ್ಯಕ್ತಿಯೊಬ್ಬನ ಶವ ಉಣಕಲ್ ಕೆರೆಯಲ್ಲಿ ಪತ್ತೆಯಾಗುತ್ತದೆ. ಅವನು ಇವನೇ ಎಂದು ತಿಳಿದು ಹೂತುಬಿಡಲಾಗುತ್ತದೆ. ಆದರೆ, ಆಶ್ಚರ್ಯಕರವೆಂಬಂತೆ, 'ಸತ್ತ'ವನೆಂದು ತಿಳಿದವ ವಾಪಸ್ ಬಂದಿರುತ್ತಾನೆ. ಅವನನ್ನು ಜೀವಂತವಾಗಿ ಕಂಡವರಿಗೆ ಆಶ್ಚರ್ಯ, ದುಗುಡ, ಸಿಟ್ಟು, ಭಯ.
ಚಂದ್ರಕಾಂತ್ ಕುಸನೂರು ಅವರ 'ಆನಿ ಬಂತಾನಿ' ಅಸಂಗತ ನಾಟಕದಲ್ಲಿ ಇಂಥದೇ ಪ್ರಸಂಗ ಬರುತ್ತದೆ. ಅಪ್ಪ ಹೊರಗೆ ಹೊಂಟಾಗ ಮಗ ಎಲ್ಲಿ ಹೊಂಟಿ ಎಂದು ಕೇಳಿದಾಗ ಅಮ್ಮ ಗದರಿಸುತ್ತಾಳೆ. ಆಗ ಪೆದ್ದ ಮಗ ಬಸವ, "ಎಲ್ಲಿ ಹೊಂಟಿರೆಂದು ಯಾಕೆ ಕೇಳಬೇಕಂದರ, ಅವರು ಹೋಗುವ ಸ್ಥಳ ಗೊತ್ತಾಗತದ ಮತ್ತ ಅವರು ಬರಲಾರದಂಥ ಸ್ಥಿತಿಯಲ್ಲಿದ್ದರ ಕರೆತರಲು ಅನುವಾಗುತ್ತದ" ಎಂಬ ಉತ್ತರ ಕೊಡುತ್ತಾನೆ. ಈಗ ಹೇಳಿ, ಹೊರಗೆ ಹೊಂಟವರನ್ನು ಎಲ್ಲಿಗೆ ಹೊಂಟಿರೆಂದು ಕೇಳಿದರೆ ತಪ್ಪೆ?



Click it and Unblock the Notifications