Just In
- 2 hrs ago ಮೀನ ರಾಶಿಯಲ್ಲಿ ರಾಹು-ಮಂಗಳ ಯುತಿಯಿಂದ ಅಂಗಾರಕ ಯೋಗ: 12 ರಾಶಿಗಳ ಮೇಲಿರಲಿದೆ ಈ ನಕರಾತ್ಮಕ ಪರಿಣಾ
- 2 hrs ago ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- 3 hrs ago ಪುರುಷರಲ್ಲಿ ಹೆಚ್ಚಾಗುತ್ತಿದೆ ಬಂಜೆತನ: ಪುರುಷರು ಈ ಆಹಾರ ಸೇವಿಸಿದರೆ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚುವುದು
- 4 hrs ago ಏಪ್ರಿಲ್ 24 ದಿನ ಭವಿಷ್ಯ: ಬುಧವಾರದ ಈ ದಿನ ನಿಮ್ಮ ರಾಶಿಫಲ ಹೇಗಿದೆ?
Don't Miss
- Movies 'KGF-2' ಚಿತ್ರದಿಂದ ಸಿಕ್ಕಿದ್ದು 200 ಕೋಟಿ ರೂ.; 'ಟಾಕ್ಸಿಕ್', 'ರಾಮಾಯಣ'ಕ್ಕೆ ಯಶ್ 50-50 ಡೀಲ್!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರೀ, ಎಲ್ಲಿ ಹೊಂಟಿರೆಂದು ಹೇಳಿ ಹೋಗಬಾರದಾ?
ಒಂದು ಪಕ್ಷ ಮಕ್ಕಳೇನಾದರೂ ಹಿರಿಯರನ್ನು ಎಲ್ಲಿಗೆ ಹೊಂಟಿರೆಂದು ಕೇಳಿದರೆ, 'ಕೇಳಬೇಡವೆಂದು ಹೇಳಿರಲಿಲ್ಲ, ಮತ್ಯಾಕೆ ಕೇಳಿದೆ?' ಎಂದು ಗದರಿಸಿ ಸುಮ್ಮನೆ ಕೂಡಿಸುತ್ತಾರೆ. ಅಪ್ಪ ಹಾಕಿದ ಆಲದಮರಕ್ಕೆ ಜೋತು ಬೀಳುವ ಇವರು ಯಾಕೆ ಕೇಳಬೇಕು, ಯಾಕೆ ಕೇಳಬಾರದು ಎಂಬ ಬಗ್ಗೆ ಚಿಂತನೆಯನ್ನೇ ಮಾಡಿರುವುದಿಲ್ಲ, ಪ್ರಾಕ್ಟಿಕಲ್ ಚಿಂತನೆ ಇರುವುದಿಲ್ಲ.
ನಮ್ಮ ನಾಡಿನಲ್ಲಿ ಮೂಢನಂಬಿಕೆಗಳಿಗೇನೂ ಕೊರತೆಯಿಲ್ಲ. ಮೂರು ಜನ ಮನೆಯಿಂದ ಹೊರ ಹೋಗಬಾರದು, ಅಂಗಿಗೆ ಎಡಗೈ ಮೊದಲು ಹಾಕಬಾರದು, ಬೆಕ್ಕು ಅಡ್ಡ ಬಂದರೆ ಮುಂದೆ ಹೋಗಬಾರದು, ಗಡಿಯಾರ ಕೆಟ್ಟರೆ ನಮ್ಮ ಟೈಮೂ ಕೆಟ್ಟುಹೋಗುತ್ತದೆ, ನಾಯಿ ಊಳಿಡುವ ಧ್ವನಿ ಕೇಳಿದರೆ ಏನೋ ಕೆಡುಕಾಗುತ್ತದೆ, ಕಪ್ಪೆಗಳ ಮದುವೆ ಮಾಡಿದರೆ ಮಳೆ ಬರುತ್ತದೆ... ಇತ್ಯಾದಿ ಇತ್ಯಾದಿ.
ಈ ಮೂಢನಂಬಿಕೆಗಳನ್ನು ಆಚರಿಸಿದರೆ ಕೆಡುಕು ಆಗುವುದಿಲ್ಲವಾದರೂ, ಪ್ರಯೋಜನವಾದರೂ ಆಗುತ್ತದಾ? ಇಲ್ಲ. ಆದರೆ, ಹೋಗುವಾಗ ಹೇಳಿಹೋಗದಿದ್ದರೆ ಎಂತೆಂಥ ಅವಘಡಗಳು ಸಂಭವಿಸುತ್ತವೆ ಹುಬ್ಬಳ್ಳಿಯಲ್ಲಿ ನಡೆದಿರುವ ಒಂದು ಘಟನೆಯೇ ಸಾಕ್ಷಿ. ಮನೆಯಿಂದ ಹೇಳದೆ ಕೇಳದೆ ಹೊರಟ ಒಬ್ಬ ಮನೆಯವರನ್ನೆಲ್ಲ ಪೇಚಿಗೆ ಸಿಕ್ಕಿಸಿದ ವಿಚಿತ್ರ ಘಟನೆ ಸಂಭವಿಸಿದೆ.
ಹೇಳದೆ ಕೇಳದೆ ಬೆಂಗಳೂರಿಗೆ ಬಂದ ಆ ಹುಬ್ಬಳ್ಳಿ ಹೈದನ ಎಡಗಾಲಿಗೆ ಆರು ಬೆರಳು. ಅವನನ್ನು ಹುಡುಕುತ್ತಿರುವಾಗ ಎಡಗಾಲಿಗೆ ಆರು ಬೆರಳಿರುವ ವ್ಯಕ್ತಿಯೊಬ್ಬನ ಶವ ಉಣಕಲ್ ಕೆರೆಯಲ್ಲಿ ಪತ್ತೆಯಾಗುತ್ತದೆ. ಅವನು ಇವನೇ ಎಂದು ತಿಳಿದು ಹೂತುಬಿಡಲಾಗುತ್ತದೆ. ಆದರೆ, ಆಶ್ಚರ್ಯಕರವೆಂಬಂತೆ, 'ಸತ್ತ'ವನೆಂದು ತಿಳಿದವ ವಾಪಸ್ ಬಂದಿರುತ್ತಾನೆ. ಅವನನ್ನು ಜೀವಂತವಾಗಿ ಕಂಡವರಿಗೆ ಆಶ್ಚರ್ಯ, ದುಗುಡ, ಸಿಟ್ಟು, ಭಯ.
ಚಂದ್ರಕಾಂತ್ ಕುಸನೂರು ಅವರ 'ಆನಿ ಬಂತಾನಿ' ಅಸಂಗತ ನಾಟಕದಲ್ಲಿ ಇಂಥದೇ ಪ್ರಸಂಗ ಬರುತ್ತದೆ. ಅಪ್ಪ ಹೊರಗೆ ಹೊಂಟಾಗ ಮಗ ಎಲ್ಲಿ ಹೊಂಟಿ ಎಂದು ಕೇಳಿದಾಗ ಅಮ್ಮ ಗದರಿಸುತ್ತಾಳೆ. ಆಗ ಪೆದ್ದ ಮಗ ಬಸವ, "ಎಲ್ಲಿ ಹೊಂಟಿರೆಂದು ಯಾಕೆ ಕೇಳಬೇಕಂದರ, ಅವರು ಹೋಗುವ ಸ್ಥಳ ಗೊತ್ತಾಗತದ ಮತ್ತ ಅವರು ಬರಲಾರದಂಥ ಸ್ಥಿತಿಯಲ್ಲಿದ್ದರ ಕರೆತರಲು ಅನುವಾಗುತ್ತದ" ಎಂಬ ಉತ್ತರ ಕೊಡುತ್ತಾನೆ. ಈಗ ಹೇಳಿ, ಹೊರಗೆ ಹೊಂಟವರನ್ನು ಎಲ್ಲಿಗೆ ಹೊಂಟಿರೆಂದು ಕೇಳಿದರೆ ತಪ್ಪೆ?