Latest Updates
-
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ?
ರೀ, ಎಲ್ಲಿ ಹೊಂಟಿರೆಂದು ಹೇಳಿ ಹೋಗಬಾರದಾ?

ಒಂದು ಪಕ್ಷ ಮಕ್ಕಳೇನಾದರೂ ಹಿರಿಯರನ್ನು ಎಲ್ಲಿಗೆ ಹೊಂಟಿರೆಂದು ಕೇಳಿದರೆ, 'ಕೇಳಬೇಡವೆಂದು ಹೇಳಿರಲಿಲ್ಲ, ಮತ್ಯಾಕೆ ಕೇಳಿದೆ?' ಎಂದು ಗದರಿಸಿ ಸುಮ್ಮನೆ ಕೂಡಿಸುತ್ತಾರೆ. ಅಪ್ಪ ಹಾಕಿದ ಆಲದಮರಕ್ಕೆ ಜೋತು ಬೀಳುವ ಇವರು ಯಾಕೆ ಕೇಳಬೇಕು, ಯಾಕೆ ಕೇಳಬಾರದು ಎಂಬ ಬಗ್ಗೆ ಚಿಂತನೆಯನ್ನೇ ಮಾಡಿರುವುದಿಲ್ಲ, ಪ್ರಾಕ್ಟಿಕಲ್ ಚಿಂತನೆ ಇರುವುದಿಲ್ಲ.
ನಮ್ಮ ನಾಡಿನಲ್ಲಿ ಮೂಢನಂಬಿಕೆಗಳಿಗೇನೂ ಕೊರತೆಯಿಲ್ಲ. ಮೂರು ಜನ ಮನೆಯಿಂದ ಹೊರ ಹೋಗಬಾರದು, ಅಂಗಿಗೆ ಎಡಗೈ ಮೊದಲು ಹಾಕಬಾರದು, ಬೆಕ್ಕು ಅಡ್ಡ ಬಂದರೆ ಮುಂದೆ ಹೋಗಬಾರದು, ಗಡಿಯಾರ ಕೆಟ್ಟರೆ ನಮ್ಮ ಟೈಮೂ ಕೆಟ್ಟುಹೋಗುತ್ತದೆ, ನಾಯಿ ಊಳಿಡುವ ಧ್ವನಿ ಕೇಳಿದರೆ ಏನೋ ಕೆಡುಕಾಗುತ್ತದೆ, ಕಪ್ಪೆಗಳ ಮದುವೆ ಮಾಡಿದರೆ ಮಳೆ ಬರುತ್ತದೆ... ಇತ್ಯಾದಿ ಇತ್ಯಾದಿ.
ಈ ಮೂಢನಂಬಿಕೆಗಳನ್ನು ಆಚರಿಸಿದರೆ ಕೆಡುಕು ಆಗುವುದಿಲ್ಲವಾದರೂ, ಪ್ರಯೋಜನವಾದರೂ ಆಗುತ್ತದಾ? ಇಲ್ಲ. ಆದರೆ, ಹೋಗುವಾಗ ಹೇಳಿಹೋಗದಿದ್ದರೆ ಎಂತೆಂಥ ಅವಘಡಗಳು ಸಂಭವಿಸುತ್ತವೆ ಹುಬ್ಬಳ್ಳಿಯಲ್ಲಿ ನಡೆದಿರುವ ಒಂದು ಘಟನೆಯೇ ಸಾಕ್ಷಿ. ಮನೆಯಿಂದ ಹೇಳದೆ ಕೇಳದೆ ಹೊರಟ ಒಬ್ಬ ಮನೆಯವರನ್ನೆಲ್ಲ ಪೇಚಿಗೆ ಸಿಕ್ಕಿಸಿದ ವಿಚಿತ್ರ ಘಟನೆ ಸಂಭವಿಸಿದೆ.
ಹೇಳದೆ ಕೇಳದೆ ಬೆಂಗಳೂರಿಗೆ ಬಂದ ಆ ಹುಬ್ಬಳ್ಳಿ ಹೈದನ ಎಡಗಾಲಿಗೆ ಆರು ಬೆರಳು. ಅವನನ್ನು ಹುಡುಕುತ್ತಿರುವಾಗ ಎಡಗಾಲಿಗೆ ಆರು ಬೆರಳಿರುವ ವ್ಯಕ್ತಿಯೊಬ್ಬನ ಶವ ಉಣಕಲ್ ಕೆರೆಯಲ್ಲಿ ಪತ್ತೆಯಾಗುತ್ತದೆ. ಅವನು ಇವನೇ ಎಂದು ತಿಳಿದು ಹೂತುಬಿಡಲಾಗುತ್ತದೆ. ಆದರೆ, ಆಶ್ಚರ್ಯಕರವೆಂಬಂತೆ, 'ಸತ್ತ'ವನೆಂದು ತಿಳಿದವ ವಾಪಸ್ ಬಂದಿರುತ್ತಾನೆ. ಅವನನ್ನು ಜೀವಂತವಾಗಿ ಕಂಡವರಿಗೆ ಆಶ್ಚರ್ಯ, ದುಗುಡ, ಸಿಟ್ಟು, ಭಯ.
ಚಂದ್ರಕಾಂತ್ ಕುಸನೂರು ಅವರ 'ಆನಿ ಬಂತಾನಿ' ಅಸಂಗತ ನಾಟಕದಲ್ಲಿ ಇಂಥದೇ ಪ್ರಸಂಗ ಬರುತ್ತದೆ. ಅಪ್ಪ ಹೊರಗೆ ಹೊಂಟಾಗ ಮಗ ಎಲ್ಲಿ ಹೊಂಟಿ ಎಂದು ಕೇಳಿದಾಗ ಅಮ್ಮ ಗದರಿಸುತ್ತಾಳೆ. ಆಗ ಪೆದ್ದ ಮಗ ಬಸವ, "ಎಲ್ಲಿ ಹೊಂಟಿರೆಂದು ಯಾಕೆ ಕೇಳಬೇಕಂದರ, ಅವರು ಹೋಗುವ ಸ್ಥಳ ಗೊತ್ತಾಗತದ ಮತ್ತ ಅವರು ಬರಲಾರದಂಥ ಸ್ಥಿತಿಯಲ್ಲಿದ್ದರ ಕರೆತರಲು ಅನುವಾಗುತ್ತದ" ಎಂಬ ಉತ್ತರ ಕೊಡುತ್ತಾನೆ. ಈಗ ಹೇಳಿ, ಹೊರಗೆ ಹೊಂಟವರನ್ನು ಎಲ್ಲಿಗೆ ಹೊಂಟಿರೆಂದು ಕೇಳಿದರೆ ತಪ್ಪೆ?



Click it and Unblock the Notifications