Latest Updates
-
ಗಣೇಶೋತ್ಸವದ ಸಂಭ್ರಮದಲ್ಲಿ ದಂಪತಿಗಳ ಜಗಳ ಬೇಡ: ಸಮಯ ಮತ್ತು ಬಜೆಟ್ ನಿರ್ವಹಣೆಗೆ ಇಲ್ಲಿದೆ ಸಿಂಪಲ್ ಪ್ಲಾನ್! -
ಗಣೇಶೋತ್ಸವ 2026: ಮಳೆಯ ನಡುವೆಯೂ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಇಲ್ಲಿದೆ ಸರಳ ಟಿಪ್ಸ್! -
ಪ್ಯಾಕ್ ಮಾಡಿದ ಆಹಾರದಲ್ಲಿ ಸಕ್ಕರೆ, ಉಪ್ಪು ಹೆಚ್ಚಿದ್ದರೆ ಕೆಂಪು ಲೇಬಲ್: ಸುಪ್ರೀಂ ಕೋರ್ಟ್ ಪ್ರಶ್ನೆ, ಗ್ರಾಹಕರಿಗೆ ಸಿಗುತ್ತಾ ಪರಿಹಾರ? -
ಝೊಮ್ಯಾಟೋದಲ್ಲಿ 'ಪೇ ಆನ್ ಡೆಲಿವರಿ' ಶುಲ್ಕದ ಶಾಕ್: ನಿಮ್ಮ ಬಿಲ್ ಹೆಚ್ಚಾಗುತ್ತಿದೆಯೇ? ಬಚಾವ್ ಆಗೋದು ಹೇಗೆ? -
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ
ಬೃಹತ್ ಕಟ್ಟಡಗಳಿಂದ ಮಕ್ಕಳನ್ನು ರಕ್ಷಿಸಿ

ಮನೆಯ ಮುಂದೆ, ಹಿಂದೆ ಅಂಗಳಕ್ಕೆ ಅಷ್ಟಿಷ್ಟು ಜಾಗ ಬಿಟ್ಟೇ ಮನೆ ಕಟ್ಟುತ್ತಿದ್ದರು. ಮುಂದಿನ ಅಂಗಳದಲ್ಲಿ ಮಲ್ಲಿಗೆ, ಜಾಜಿ, ಪಾರಿಜಾತ, ಸಂಪಿಗೆಯಂತಹ ಹೂವು ಗಿಡಮರ ಬಳ್ಳಿಗಳು, ಚಿಕ್ಕು, ಚಕೋತ, ಸೀಬೆಯಂತಹ ಹಣ್ಣಿನ ಗಿಡಗಳು ಸಾಮಾನ್ಯವಾಗಿ ಎಲ್ಲರ ಮನೆಯ ಮುಂದೆ ಕಾಣಬರುತ್ತಿದ್ದವು. ಇವಲ್ಲದೆ ಬಣ್ಣ ಬಣ್ಣದ ತರಹಾವರಿ ಹೂಗಿಡಗಳು ಬೇರೆ. ಅಮ್ಮನೋ ಅಜ್ಜಿಯೋ ಬಟ್ಟಲಲ್ಲಿ ಅನ್ನ ಕಲಸಿ ಪುಟ್ಟ ಮಕ್ಕಳಿಗೆ ಉಣಿಸಲು ಅಂಗಳಕ್ಕೆ ಕರೆತರುತ್ತಿದ್ದರು.
ಮಡಿಲಲ್ಲಿ ಕುಳಿತೋ ಅಥವಾ ಪುಟು ಪುಟು ಹೆಜ್ಜೆಯಿಟ್ಟು ಅಂಗಳದ ತುಂಬಾ ಓಡಾಡುತ್ತಲೋ ಕಂದಮ್ಮಗಳು ತುತ್ತು ಉಣ್ಣುತ್ತಿದ್ದವು. ಹೂವಿಂದ ಹೂವಿಗೆ ಹಾರುವ ಬಣ್ಣ ಬಣ್ಣದ ಚಿಟ್ಟೆಗಳು, ಮರದ ಕೊಂಬೆಗಳಲ್ಲಿ ಜೂಜಾಟವಾಡುವ ಅಳಿಲುಗಳು, ಬೇಲಿಯ ಮೇಲಿನ ಓತಿಕೇತ, ಚೆಲ್ಲಿದ ಅಗಳನ್ನು ಹೆಕ್ಕಲು ಬರುವ ಗುಬ್ಬಚ್ಚಿಗಳು, ಈ ಎಲ್ಲ ಪುಟ್ಟ ಮಿತ್ರರನ್ನು ಬೆರಗು ಕಣ್ಣಿನಿಂದ ನೋಡುತ್ತ ಆಟವಾಡಿಕೊಂಡೇ ಊಟ ಮುಗಿಸುತ್ತಿದ್ದವು.
ಈಗ ಬೃಹತ್ ಬೆಂಗಳೂರಿನ ಬಹುಮಹಡಿ ಕಟ್ಟಡಗಳ ಭರಾಟೆಯಲ್ಲಿ ಇವೆಲ್ಲವೂ ಕಳೆದುಹೋಗಿವೆ. ಮನೆಗಳಿಗೆ ಅಂಗಳವಿಲ್ಲ. ಗುಬ್ಬಿ, ಚಿಟ್ಟೆ, ಇಣಚಿಗಳನ್ನು ಚಿತ್ರಪಟದಲ್ಲಿ ತೋರಿಸಬೇಕಷ್ಟೆ. ಎಷ್ಟೋ ಮನೆಗಳಿಂದ ಚಂದ್ರ ನಕ್ಷತ್ರಗಳೇ ಕಾಣುವುದಿಲ್ಲ.
ವಿಧಿಯಿಲ್ಲ, ಕಾಲಾಯ ತಸ್ಮೈ ನಮಃ. ಆದರೆ ಬಹು ಮಹಡಿಗಳನ್ನು ಕಟ್ಟುವ ತಜ್ಞರು, ಮಕ್ಕಳ ಭದ್ರತೆಯ ಬಗ್ಗೆ ಗಮನಕೊಟ್ಟು, ಕಿಟಕಿ ಬಾಗಿಲುಗಳು ಸುರಕ್ಷಿತವಾಗಿರುವಂತೆ ವಿನ್ಯಾಸಗೊಳಿಸಿದಲ್ಲಿ ಮುಂದಾದರೂ ಇಂತಹ ದಾರುಣ ದುರಂತಗಳನ್ನು ತಡೆಗಟ್ಟಬಹುದೇನೋ.



Click it and Unblock the Notifications
