Just In
- 8 min ago ವಿಶ್ವದಲ್ಲೇ ಅತೀ ಹೆಚ್ಚು ಬಾರಿ ಚುನಾವಣೆ ಸೋತ ವ್ಯಕ್ತಿ..! ಯಾರು ಈ ಸೋಲುವ ಸರದಾರ ಗೊತ್ತಾ?
- 1 hr ago ಮದ್ಯದ ಅಮಲಲ್ಲಿ ತೇಲಾಡುತ್ತಿದ್ದ ಶಿಕ್ಷಕನಿಗೆ ಮಕ್ಕಳಿಂದಲೇ ಚಪ್ಪಲಿ ಏಟು..!
- 3 hrs ago ವಿಶ್ವದ ದುಬಾರಿ ಹಣ್ಣುಗಳಿವು..! ನೀವು ಊಹಿಸದ ಬೆಲೆ ಈ ಹಣ್ಣುಗಳಿಗಿದೆ..!
- 3 hrs ago ಶನಿಯ ನಕ್ಷತ್ರ ಬದಲಾವಣೆ: ಅಕ್ಟೋಬವರೆಗೆ ಈ 3 ರಾಶಿಯವರು ಇದರ ಉತ್ತಮ ಫಲ ಪಡೆಯುವಿರಿ
Don't Miss
- Movies ಗುರುಪ್ರಸಾದ್ಗೆ ತಿರುಗೇಟು ಕೊಟ್ಟ ಶ್ರುತಿ ಹರಿಹರನ್ ; ನನ್ನ ಮೀಟೂ ಕಥೆ ಇನ್ನೂ ಮುಗಿದಿಲ್ಲ ಎಂದ ನಟಿ..!
- News India Unemployment: ದೇಶದಲ್ಲಿ ಯುವ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಳ: ಬೆಚ್ಚಿಬೀಳಿಸುವ ವರದಿ ಬಹಿರಂಗ!
- Finance ನಿಮಗೆ ಗೊತ್ತಲ್ಲದೇ ನಿಮ್ಮ ಹೆಸರಲ್ಲಿ ಖಾತೆ ತೆರೆದಿರ್ತಾರೆ, ಪಿಂಚಣಿ ಯೋಜನೆ ಬಗ್ಗೆ ಹುಷಾರಾಗಿರಿ
- Automobiles ಜನಪ್ರಿಯ ಕಂಪನಿಗಳಿಂದ ಮುಂಬರುವ ಪುಟ್ಟ ಕಾರುಗಳಿವು.. ಇವೇ ಮಿಡಲ್ ಕ್ಲಾಸ್ ಜನರ ಫೇವರಿಟ್ ಆಗುವುದು ಪಕ್ಕಾ!
- Sports IPL 2024: ಐಪಿಎಲ್ನಲ್ಲಿ ವಿಶಿಷ್ಟ ದಾಖಲೆ ಬರೆದ ಜಯದೇವ್ ಉನಾದ್ಕಟ್; ಈ ಸಾಧನೆ ಮಾಡಿದ ಮೊದಲ ಭಾರತೀಯ
- Technology iPhones: ಬೇಕಿತ್ತಾ ಇದೆಲ್ಲ? ನಕಲಿ ಐಫೋನ್ ಮೂಲಕ ಆಪಲ್ಗೆ ಪಂಗನಾಮ ಹಾಕಿದವನಿಗೆ ಜೈಲೂಟ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬೃಹತ್ ಕಟ್ಟಡಗಳಿಂದ ಮಕ್ಕಳನ್ನು ರಕ್ಷಿಸಿ
ಮನೆಯ ಮುಂದೆ, ಹಿಂದೆ ಅಂಗಳಕ್ಕೆ ಅಷ್ಟಿಷ್ಟು ಜಾಗ ಬಿಟ್ಟೇ ಮನೆ ಕಟ್ಟುತ್ತಿದ್ದರು. ಮುಂದಿನ ಅಂಗಳದಲ್ಲಿ ಮಲ್ಲಿಗೆ, ಜಾಜಿ, ಪಾರಿಜಾತ, ಸಂಪಿಗೆಯಂತಹ ಹೂವು ಗಿಡಮರ ಬಳ್ಳಿಗಳು, ಚಿಕ್ಕು, ಚಕೋತ, ಸೀಬೆಯಂತಹ ಹಣ್ಣಿನ ಗಿಡಗಳು ಸಾಮಾನ್ಯವಾಗಿ ಎಲ್ಲರ ಮನೆಯ ಮುಂದೆ ಕಾಣಬರುತ್ತಿದ್ದವು. ಇವಲ್ಲದೆ ಬಣ್ಣ ಬಣ್ಣದ ತರಹಾವರಿ ಹೂಗಿಡಗಳು ಬೇರೆ. ಅಮ್ಮನೋ ಅಜ್ಜಿಯೋ ಬಟ್ಟಲಲ್ಲಿ ಅನ್ನ ಕಲಸಿ ಪುಟ್ಟ ಮಕ್ಕಳಿಗೆ ಉಣಿಸಲು ಅಂಗಳಕ್ಕೆ ಕರೆತರುತ್ತಿದ್ದರು.
ಮಡಿಲಲ್ಲಿ ಕುಳಿತೋ ಅಥವಾ ಪುಟು ಪುಟು ಹೆಜ್ಜೆಯಿಟ್ಟು ಅಂಗಳದ ತುಂಬಾ ಓಡಾಡುತ್ತಲೋ ಕಂದಮ್ಮಗಳು ತುತ್ತು ಉಣ್ಣುತ್ತಿದ್ದವು. ಹೂವಿಂದ ಹೂವಿಗೆ ಹಾರುವ ಬಣ್ಣ ಬಣ್ಣದ ಚಿಟ್ಟೆಗಳು, ಮರದ ಕೊಂಬೆಗಳಲ್ಲಿ ಜೂಜಾಟವಾಡುವ ಅಳಿಲುಗಳು, ಬೇಲಿಯ ಮೇಲಿನ ಓತಿಕೇತ, ಚೆಲ್ಲಿದ ಅಗಳನ್ನು ಹೆಕ್ಕಲು ಬರುವ ಗುಬ್ಬಚ್ಚಿಗಳು, ಈ ಎಲ್ಲ ಪುಟ್ಟ ಮಿತ್ರರನ್ನು ಬೆರಗು ಕಣ್ಣಿನಿಂದ ನೋಡುತ್ತ ಆಟವಾಡಿಕೊಂಡೇ ಊಟ ಮುಗಿಸುತ್ತಿದ್ದವು.
ಈಗ ಬೃಹತ್ ಬೆಂಗಳೂರಿನ ಬಹುಮಹಡಿ ಕಟ್ಟಡಗಳ ಭರಾಟೆಯಲ್ಲಿ ಇವೆಲ್ಲವೂ ಕಳೆದುಹೋಗಿವೆ. ಮನೆಗಳಿಗೆ ಅಂಗಳವಿಲ್ಲ. ಗುಬ್ಬಿ, ಚಿಟ್ಟೆ, ಇಣಚಿಗಳನ್ನು ಚಿತ್ರಪಟದಲ್ಲಿ ತೋರಿಸಬೇಕಷ್ಟೆ. ಎಷ್ಟೋ ಮನೆಗಳಿಂದ ಚಂದ್ರ ನಕ್ಷತ್ರಗಳೇ ಕಾಣುವುದಿಲ್ಲ.
ವಿಧಿಯಿಲ್ಲ, ಕಾಲಾಯ ತಸ್ಮೈ ನಮಃ. ಆದರೆ ಬಹು ಮಹಡಿಗಳನ್ನು ಕಟ್ಟುವ ತಜ್ಞರು, ಮಕ್ಕಳ ಭದ್ರತೆಯ ಬಗ್ಗೆ ಗಮನಕೊಟ್ಟು, ಕಿಟಕಿ ಬಾಗಿಲುಗಳು ಸುರಕ್ಷಿತವಾಗಿರುವಂತೆ ವಿನ್ಯಾಸಗೊಳಿಸಿದಲ್ಲಿ ಮುಂದಾದರೂ ಇಂತಹ ದಾರುಣ ದುರಂತಗಳನ್ನು ತಡೆಗಟ್ಟಬಹುದೇನೋ.