Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಪಾಕ ಪ್ರವೀಣರಾಗಲು ತಿಳಿದಿರಲಿ ಈ ಉಪಾಯಗಳು

ಅಡುಗೆಗೆ ಕೆಲ ಸಲಹೆಗಳು:
1. ಅಕ್ಕಿ ಮತ್ತು ಉದ್ದಿನ ಬೇಳೆಯನ್ನು ನೀರಿನಲ್ಲಿ ನೆನೆ ಹಾಕಿ ನಂತರ ತೊಳೆದು ಅರೆಯುವುದಕ್ಕಿಂತ, ಚೆನ್ನಾಗಿ ತೊಳೆದು ನಂತರ ನೀರಿನಲ್ಲಿ ನೆನೆ ಹಾಕಿದರೆ ರುಬ್ಬುವಾಗ ಅದೇ ನೀರನ್ನು ಬಳಸಬಹುದು. ಏಕೆಂದರೆ ಅಕ್ಕಿ, ಕಾಳುಗಳನ್ನು ನೆನೆ ಹಾಕಿದ ನೀರನಲ್ಲಿ ವಿಟಮಿನ್ ಗಳಿರುತ್ತವೆ. ತೊಳೆಯದಿದ್ದರೆ ಆ ನೀರು ಬಿಸಾಡುವುದರಿಂದ ವಿಟಮಿನ್ ಗಳು ನಷ್ಟವಾಗುತ್ತದೆ.
2. ಅಡುಗೆಯಲ್ಲಿ ಉಪ್ಪು ಜಾಸ್ತಿಯಾಗಿದ್ದರೆ ಆಲುಗೆಡ್ಡೆ ಅಥವಾ ಟೊಮೆಟೊ ಕತ್ತರಿಸಿ ಆ ಅಡುಗೆಗೆ ಹಾಕಿದರೆ ಅಥವಾ ಒಂದು ಚಮಚ ಸಕ್ಕರೆ ಸೇರಿಸಿದರೆ ಉಪ್ಪು ಕಡಿಮೆಯಾಗುತ್ತದೆ.
3. ವಡೆ ಮಾಡುವಾಗ ಹಿಟ್ಟು ನೀರಾಗಿದ್ದರೆ ಎಣ್ಣೆಯಲ್ಲಿ ಹಾಕುವಾಗ ಸಿಡಿಯುತ್ತದೆ. ಆದ್ದರಿಂದ ಈ ರೀತಿ ಉಂಟಾದಾಗ ಸ್ವಲ್ಪ ತುಪ್ಪ ಸೇರಿಸಿದರೆ ಸಿಡಿಯುವುದಿಲ್ಲ.
4. ಮಾಂಸಾಹಾರ ಮಾಡುವಾಗ ಮಾಂಸ ಸ್ವಲ್ಪ ಬೆಂದ ಮೇಲೆ ಉಪ್ಪು ಹಾಕಿ, ಅದರಲ್ಲೂ ಉಪ್ಪು ಸ್ವಲ್ಪ ಕಮ್ಮಿ ಹಾಕಬೇಕು. ಬೆಂದ ನಂತರ ಉಪ್ಪು ನೋಡಿ ಬೇಕಿದ್ದರೆ ಸ್ವಲ್ಪ ಸೇರಿಸಬೇಕು.
5. ಗಟ್ಟಿಯಾದ ಗ್ರೇವಿ ಅಥವಾ ಸೂಪ್ ಸ್ವಲ್ಪ ಗಟ್ಟಿಯಾಗಿ ಮಾಡುವುದಾದರೆ ಸ್ವಲ್ಪ ಜೋಳದ ಹಿಟ್ಟು ಸೇರಿಸಬೇಕು. ಇದನ್ನು ಹಾಗೇ ಹಾಕುವುದಕ್ಕಿಂತ ಸ್ವಲ್ಪ ನೀರು ಹಾಕಿ ಮಿಶ್ರ ಮಾಡಿ ನಂತರ ಹಾಕುವುದು ಒಳ್ಳೆಯದು.
6. ಪಾಸ್ತಾ ತಯಾರಿಸುವಾಗ ಬೇಯಿಸುವ ನೀರಿಗೆ ಉಪ್ಪು ಹಾಕಿದರೆ ಒಳ್ಳೆಯದು. ಈ ರೀತಿ ಮಾಡಿದರೆ ಮಾತ್ರ ಪಾಸ್ತಾಕ್ಕೆ ಸ್ವಲ್ಪ ಉಪ್ಪು ಹಿಡಿಯುತ್ತದೆ. ನೀರು ಕುದಿ ಬಂದ ನಂತರ ಉಪ್ಪು ಸೇರಿಸಬೇಕು. ಮೊದಲೇ ಸೇರಿಸಿದರೆ ನೀರು ಕುದಿ ಬರಲು ತುಂಬಾ ಸಮಯ ತೆಗೆದುಕೊಳ್ಳುತ್ತದೆ.
7. ಅನ್ನ ಬೆಂದ ನಂತರ ಬಿಡಿಬೊಡಯಾಗಿ ಇರಬೇಕೆಂದರೆ ಅಕ್ಕಿಯನ್ನು ತೊಳೆದು 10 ನಿಮಿಷ ನೀರಿನಲ್ಲಿ ನೆನೆಹಾಕ ಬೇಕು. ನಂತರ ಬೇಯಿಸಬೇಕು. ಅನ್ನ ಬೇಯಿಸುವಾಗ ಒಂದು ಚಮಚ ಎಣ್ಣೆ ಹಾಕಿದರೆ ಅನ್ನ ಒಂದಕ್ಕೊಂದು ಅಂಟುವುದಿಲ್ಲ.
8. ಕರಿದ ತಿಂಡಿಗಳನ್ನು ತಯಾರಿಸುವಾಗ ಎಣ್ಣೆ ತುಂಬಾ ನೊರೆ ಬಂದು ಬಾಣಲೆಯಿಂದ ಹೊರಚೆಲ್ಲದಂತೆ ತಡೆಯಲು ಎಣ್ಣೆ ಕುದಿಯುವಾಗ ಸ್ವಲ್ಪ ಹುಣಸೆ ಹಣ್ಣು ಹಾಕಿದರೆ ಸಾಕು.
9. ಮೃದುವಾದ ಇಡ್ಲಿ ಬೇಕೆಂದರೆ ಕಲೆಸಿಟ್ಟ ಹಿಟ್ಟನ್ನು ಪಾತ್ರೆಗೆ ಹಾಕಿ ಬೇಯಿಸುವ ಮೊದಲು ಮತ್ತೊಮ್ಮೆ ಕದಡಬಾರದು. ಏಕೆಂದರೆ ಇಡ್ಲಿ ಹಿಟ್ಟನ್ನು ಕಲೆಸಿ 8-10 ಗಂಟೆ ಇಟ್ಟಾಗ ಹಿಟ್ಟಿನಲ್ಲಿ ಗುಳ್ಳೆಗಳಲ್ಲಿ ಗಾಳಿ ಸೇರಿಕೊಂಡಿರುತ್ತದೆ. ಆದ್ದರಿಂದ ಹಿಟ್ಟನ್ನು ಕದಡದೆ ಪಾತ್ರೆಗೆ ಹಾಕಿ ಬೇಯಿಸಿದರೆ ಹಿಟ್ಟು ಮೃದುವಾಗುತ್ತದೆ.
10. ಈರುಳ್ಳಿ ಕತ್ತರಿಸುವಾಗ ಕಣ್ಣಿನಲ್ಲಿ ನೀರು ಬರದಿರಲು ಈರುಳ್ಳಿಯನ್ನು ನೀರಿನಲ್ಲಿ ಹಾಕಿ ಅಥವಾ ಫ್ರಿಜ್ ನಲ್ಲಿಟ್ಟು ಕತ್ತರಿಸಬೇಕು.



Click it and Unblock the Notifications











