Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಪಾಕ ಪ್ರವೀಣರಾಗಲು ತಿಳಿದಿರಲಿ ಈ ಉಪಾಯಗಳು

ಅಡುಗೆಗೆ ಕೆಲ ಸಲಹೆಗಳು:
1. ಅಕ್ಕಿ ಮತ್ತು ಉದ್ದಿನ ಬೇಳೆಯನ್ನು ನೀರಿನಲ್ಲಿ ನೆನೆ ಹಾಕಿ ನಂತರ ತೊಳೆದು ಅರೆಯುವುದಕ್ಕಿಂತ, ಚೆನ್ನಾಗಿ ತೊಳೆದು ನಂತರ ನೀರಿನಲ್ಲಿ ನೆನೆ ಹಾಕಿದರೆ ರುಬ್ಬುವಾಗ ಅದೇ ನೀರನ್ನು ಬಳಸಬಹುದು. ಏಕೆಂದರೆ ಅಕ್ಕಿ, ಕಾಳುಗಳನ್ನು ನೆನೆ ಹಾಕಿದ ನೀರನಲ್ಲಿ ವಿಟಮಿನ್ ಗಳಿರುತ್ತವೆ. ತೊಳೆಯದಿದ್ದರೆ ಆ ನೀರು ಬಿಸಾಡುವುದರಿಂದ ವಿಟಮಿನ್ ಗಳು ನಷ್ಟವಾಗುತ್ತದೆ.
2. ಅಡುಗೆಯಲ್ಲಿ ಉಪ್ಪು ಜಾಸ್ತಿಯಾಗಿದ್ದರೆ ಆಲುಗೆಡ್ಡೆ ಅಥವಾ ಟೊಮೆಟೊ ಕತ್ತರಿಸಿ ಆ ಅಡುಗೆಗೆ ಹಾಕಿದರೆ ಅಥವಾ ಒಂದು ಚಮಚ ಸಕ್ಕರೆ ಸೇರಿಸಿದರೆ ಉಪ್ಪು ಕಡಿಮೆಯಾಗುತ್ತದೆ.
3. ವಡೆ ಮಾಡುವಾಗ ಹಿಟ್ಟು ನೀರಾಗಿದ್ದರೆ ಎಣ್ಣೆಯಲ್ಲಿ ಹಾಕುವಾಗ ಸಿಡಿಯುತ್ತದೆ. ಆದ್ದರಿಂದ ಈ ರೀತಿ ಉಂಟಾದಾಗ ಸ್ವಲ್ಪ ತುಪ್ಪ ಸೇರಿಸಿದರೆ ಸಿಡಿಯುವುದಿಲ್ಲ.
4. ಮಾಂಸಾಹಾರ ಮಾಡುವಾಗ ಮಾಂಸ ಸ್ವಲ್ಪ ಬೆಂದ ಮೇಲೆ ಉಪ್ಪು ಹಾಕಿ, ಅದರಲ್ಲೂ ಉಪ್ಪು ಸ್ವಲ್ಪ ಕಮ್ಮಿ ಹಾಕಬೇಕು. ಬೆಂದ ನಂತರ ಉಪ್ಪು ನೋಡಿ ಬೇಕಿದ್ದರೆ ಸ್ವಲ್ಪ ಸೇರಿಸಬೇಕು.
5. ಗಟ್ಟಿಯಾದ ಗ್ರೇವಿ ಅಥವಾ ಸೂಪ್ ಸ್ವಲ್ಪ ಗಟ್ಟಿಯಾಗಿ ಮಾಡುವುದಾದರೆ ಸ್ವಲ್ಪ ಜೋಳದ ಹಿಟ್ಟು ಸೇರಿಸಬೇಕು. ಇದನ್ನು ಹಾಗೇ ಹಾಕುವುದಕ್ಕಿಂತ ಸ್ವಲ್ಪ ನೀರು ಹಾಕಿ ಮಿಶ್ರ ಮಾಡಿ ನಂತರ ಹಾಕುವುದು ಒಳ್ಳೆಯದು.
6. ಪಾಸ್ತಾ ತಯಾರಿಸುವಾಗ ಬೇಯಿಸುವ ನೀರಿಗೆ ಉಪ್ಪು ಹಾಕಿದರೆ ಒಳ್ಳೆಯದು. ಈ ರೀತಿ ಮಾಡಿದರೆ ಮಾತ್ರ ಪಾಸ್ತಾಕ್ಕೆ ಸ್ವಲ್ಪ ಉಪ್ಪು ಹಿಡಿಯುತ್ತದೆ. ನೀರು ಕುದಿ ಬಂದ ನಂತರ ಉಪ್ಪು ಸೇರಿಸಬೇಕು. ಮೊದಲೇ ಸೇರಿಸಿದರೆ ನೀರು ಕುದಿ ಬರಲು ತುಂಬಾ ಸಮಯ ತೆಗೆದುಕೊಳ್ಳುತ್ತದೆ.
7. ಅನ್ನ ಬೆಂದ ನಂತರ ಬಿಡಿಬೊಡಯಾಗಿ ಇರಬೇಕೆಂದರೆ ಅಕ್ಕಿಯನ್ನು ತೊಳೆದು 10 ನಿಮಿಷ ನೀರಿನಲ್ಲಿ ನೆನೆಹಾಕ ಬೇಕು. ನಂತರ ಬೇಯಿಸಬೇಕು. ಅನ್ನ ಬೇಯಿಸುವಾಗ ಒಂದು ಚಮಚ ಎಣ್ಣೆ ಹಾಕಿದರೆ ಅನ್ನ ಒಂದಕ್ಕೊಂದು ಅಂಟುವುದಿಲ್ಲ.
8. ಕರಿದ ತಿಂಡಿಗಳನ್ನು ತಯಾರಿಸುವಾಗ ಎಣ್ಣೆ ತುಂಬಾ ನೊರೆ ಬಂದು ಬಾಣಲೆಯಿಂದ ಹೊರಚೆಲ್ಲದಂತೆ ತಡೆಯಲು ಎಣ್ಣೆ ಕುದಿಯುವಾಗ ಸ್ವಲ್ಪ ಹುಣಸೆ ಹಣ್ಣು ಹಾಕಿದರೆ ಸಾಕು.
9. ಮೃದುವಾದ ಇಡ್ಲಿ ಬೇಕೆಂದರೆ ಕಲೆಸಿಟ್ಟ ಹಿಟ್ಟನ್ನು ಪಾತ್ರೆಗೆ ಹಾಕಿ ಬೇಯಿಸುವ ಮೊದಲು ಮತ್ತೊಮ್ಮೆ ಕದಡಬಾರದು. ಏಕೆಂದರೆ ಇಡ್ಲಿ ಹಿಟ್ಟನ್ನು ಕಲೆಸಿ 8-10 ಗಂಟೆ ಇಟ್ಟಾಗ ಹಿಟ್ಟಿನಲ್ಲಿ ಗುಳ್ಳೆಗಳಲ್ಲಿ ಗಾಳಿ ಸೇರಿಕೊಂಡಿರುತ್ತದೆ. ಆದ್ದರಿಂದ ಹಿಟ್ಟನ್ನು ಕದಡದೆ ಪಾತ್ರೆಗೆ ಹಾಕಿ ಬೇಯಿಸಿದರೆ ಹಿಟ್ಟು ಮೃದುವಾಗುತ್ತದೆ.
10. ಈರುಳ್ಳಿ ಕತ್ತರಿಸುವಾಗ ಕಣ್ಣಿನಲ್ಲಿ ನೀರು ಬರದಿರಲು ಈರುಳ್ಳಿಯನ್ನು ನೀರಿನಲ್ಲಿ ಹಾಕಿ ಅಥವಾ ಫ್ರಿಜ್ ನಲ್ಲಿಟ್ಟು ಕತ್ತರಿಸಬೇಕು.



Click it and Unblock the Notifications











