ಈ ಅಡುಗೆ ಸಲಹೆಗಳು ತಿಳಿದಿದ್ದರೆ ಒಳ್ಳೆಯದು!

ಅಡುಗೆ ಮಾಡುವುದು ಒಂದು ಕಲೆ. ಆ ಕಲೆ ಗೊತ್ತಿದ್ದರೆ ಮಾತ್ರ ಅಡುಗೆಯನ್ನು ಸುಲಭವಾಗಿ ಹಾಗೂ ರುಚಿಕರವಾಗಿ ಮಾಡಲು ಸಾಧ್ಯ. ಆದರೆ ನಾವೆಲ್ಲಾ ಅಡುಗೆ ಹೇಗೆ ಮಾಡುತ್ತೇವೆ ಎಂದು ಕಲಿಯುತ್ತೇವೆ ಹೊರತು ಅಡುಗೆ ಕಲೆ ಬಗ್ಗೆ ಗಮನ ಕೊಡುವುದಿಲ್ಲ.

ಅಡುಗೆ ಮಾಡುವಾಗ ಕೆಲವೊಂದು ಉಪಾಯಗಳಿವೆ, ಆ ಉಪಾಯಗಳನ್ನು ಪಾಲಿಸಿದರೆ ಅಡುಗೆಯಲ್ಲಿರುವ ಪೋಷಕಾಂಶಗಳು ಹಾಳಾಗದಂತೆ ರುಚಿಕರವಾದ ಅಡುಗೆಯನ್ನು ತಯಾರಿಸಬಹುದು. ಈ ಕೆಳಗೆ 10 ಅಡುಗೆ ಸಲಹೆಗಳನ್ನು ನೀಡಲಾಗಿದೆ. ಈ ಅಡುಗೆ ಸಲಹೆಗಳು ಅಡುಗೆಯಲ್ಲಿ ನಿಮ್ಮ ಸಹಾಯಕ್ಕೆ ಬರುತ್ತೆ.

ಸಲಹೆ 1

ಸಲಹೆ 1

ಅನ್ನ ಒಂದಕ್ಕೊಂದು ಅಂಟದಿರಲು ಅಕ್ಕಿ ಬೇಯಿಸುವಾಗ ಒಂದು ಚಮಚ ಎಣ್ಣೆ ಮತ್ತು ಎರಡು ಹನಿ ನಿಂಬೆರಸ ಹಾಕಿ ಬೇಯಿಸಿದರೆ ಸಾಕು.

ಸಲಹೆ 2

ಸಲಹೆ 2

ಆಲೂಗೆಡ್ಡೆಯನ್ನು ಉಪ್ಪು ನೀರಿನಲ್ಲಿ ನೆನೆ ಹಾಕಿದರೆ ಬೇಗನೆ ಬೇಯುತ್ತದೆ.

ಸಲಹೆ 3

ಸಲಹೆ 3

ಕೊತ್ತಂಬರಿ ಸೊಪ್ಪನ್ನು ಮಸ್ಲೀನ್ ಬಟ್ಟೆಯಿಂದ ಸುತ್ತಿ ಫ್ರಿಜ್ ಲ್ಲಿಟ್ಟರೆ ಸೊಪ್ಪು ಹಾಳಾಗುವುದಿಲ್ಲ.

ಸಲಹೆ 4

ಸಲಹೆ 4

ಆಲೂಗೆಡ್ಡೆ, ಬೀಟ್ ರೋಟ್, ಕ್ಯಾರೆಟ್ ಮುಂತಾದವುಗಳನ್ನು ಕತ್ತರಿಸಿ ತುಂಬಾ ಹೊತ್ತು ಇಟ್ಟರೆ ಅದರ ರುಚಿ ಕಡಿಮೆಯಾಗುವುದು.

ಸಲಹೆ 5

ಸಲಹೆ 5

ತರಕಾರಿಗಳನ್ನು ಕತ್ತರಿಸಿತೊಳೆಯುವುದಕ್ಕಿಂತ, ತೊಳೆದು ಕತ್ತರಿಸಬೇಕು. ಇದರಿಂದ ತರಕಾರಿಯಲ್ಲಿರುವ ವಿಟಮಿನ್ ಗಳು ಹಾಳಾಗುವುದಿಲ್ಲ.

ಸಲಹೆ 6

ಸಲಹೆ 6

ಬಾದಾಮಿಯನ್ನು 10 ನಿಮಿಷ ಬಿಸಿ ಬೀರಿನಲ್ಲಿ ನೆನೆ ಹಾಕಿದರೆ ಅದರ ಸಿಪ್ಪೆಯನ್ನು ಸುಲಭವಾಗಿ ಸುಲಿಯಬಹುದು.

ಸಲಹೆ 7

ಸಲಹೆ 7

ಸೊಪ್ಪು ತರಕಾರಿಗಳು ತಾಜಾವಾಗಿ ಇರುವಾಗ ಉಪಯೋಗಿಸಿದರೆ ಅದರಲ್ಲಿ ಸತ್ವ ಅಧಿಕವಿರುತ್ತದೆ.

ಸಲಹೆ 8

ಸಲಹೆ 8

ತರಕಾರಿ ಸಿಪ್ಪೆಯನ್ನು ತುಂಬಾ ತೆಳ್ಳಗೆ ಹೆಚ್ಚಬೇಕು. ಆಲೂಗೆಡ್ಡೆಯ ಸಿಪ್ಪೆ ತೆಗೆಯದೆ ಬಳಸುವುದು ಒಳ್ಳೆಯದು.

ಸಲಹೆ 9

ಸಲಹೆ 9

ಕಡಲೆ ಅಥವಾ ರಾಜ್ಮಾ ಅನ್ನು ರಾತ್ರಿ ನೆನೆ ಹಾಕಲು ಮರೆತರೆ ಅಡುಗೆ ಮಾಡುವ ಒಂದು ಗಂಟೆಯ ಮೊದಲು ಬಿಸಿ ನೀರಿನಲ್ಲಿ ನೆನೆ ಹಾಕಿದರೆ ಸಾಕು.

1. ತರಕಾರಿಗಳನ್ನು ಕತ್ತರಿಸಿ ತೊಳೆಯುವುದಕ್ಕಿಂತ, ತೊಳೆದು ಕತ್ತರಿಸಬೇಕು. ಇದರಿಂದ ತರಕಾರಿಯಲ್ಲಿರುವ ವಿಟಮಿನ್ ಗಳು ಹಾಳಾಗುವುದಿಲ್ಲ.

2. ತರಕಾರಿ ಸಿಪ್ಪೆಯನ್ನು ತುಂಬಾ ತೆಳ್ಳಗೆ ಹೆಚ್ಚಬೇಕು. ಆಲೂಗೆಡ್ಡೆಯ ಸಿಪ್ಪೆ ತೆಗೆಯದೆ ಬಳಸುವುದು ಒಳ್ಳೆಯದು.

3. ಕೊತ್ತಂಬರಿ ಸೊಪ್ಪನ್ನು ಮಸ್ಲೀನ್ ಬಟ್ಟೆಯಿಂದ ಸುತ್ತಿ ಫ್ರಿಜ್ ನಲ್ಲಿಟ್ಟರೆ ಸೊಪ್ಪು ಹಾಳಾಗುವುದಿಲ್ಲ.

4. ತರಕಾರಿಗಳನ್ನು ತಂದಂತೆಯೇ ಪ್ಲಾಸ್ಟಿಕ್ ಕವರ್ ನಲ್ಲಿ ಇಡುವುದಕ್ಕಿಂತ ಗಾಳಿಯಾಡುವಂತೆ ಎಲ್ಲಾದರು ಹರಡಿ ಇಡಬೇಕು. ಫ್ರಿಜ್ ನಲ್ಲಿ ಹಣ್ಣು ಮತ್ತು ತರಕಾರಿಗಳನ್ನು ನ್ಯೂಸ್ ಪೇಪರ್ ನಲ್ಲಿ ಸುತ್ತಿ ಇಡುವುದು ಒಳ್ಳೆಯದು.

5. ಬಾದಾಮಿಯನ್ನು 10 ನಿಮಿಷ ಬಿಸಿ ಬೀರಿನಲ್ಲಿ ನೆನೆ ಹಾಕಿದರೆ ಅದರ ಸಿಪ್ಪೆಯನ್ನು ಸುಲಭವಾಗಿ ಸುಲಿಯಬಹುದು.

6. ಸೊಪ್ಪು ತರಕಾರಿಗಳು ತಾಜಾವಾಗಿ ಇರುವಾಗ ಉಪಯೋಗಿಸಿದರೆ ಅದರಲ್ಲಿ ಸತ್ವ ಅಧಿಕವಿರುತ್ತದೆ.

7. ಆಲೂಗೆಡ್ಡೆ, ಬೀಟ್ ರೋಟ್, ಕ್ಯಾರೆಟ್ ಮುಂತಾದವುಗಳನ್ನು ಕತ್ತರಿಸಿ ತುಂಬಾ ಹೊತ್ತು ಇಟ್ಟರೆ ಅದರ ರುಚಿ ಕಡಿಮೆಯಾಗುವುದು.

8. ಆಲೂಗೆಡ್ಡೆಯನ್ನು ಉಪ್ಪು ನೀರಿನಲ್ಲಿ ನೆನೆ ಹಾಕಿದರೆ ಬೇಗನೆ ಬೇಯುತ್ತದೆ.

9. ಅನ್ನ ಒಂದಕ್ಕೊಂದು ಅಂಟದಿರಲು ಅಕ್ಕಿ ಬೇಯಿಸುವಾಗ ಒಂದು ಚಮಚ ಎಣ್ಣೆ ಮತ್ತು ಎರಡು ಹನಿ ನಿಂಬೆರಸ ಹಾಕಿ ಬೇಯಿಸಿದರೆ ಸಾಕು.

10. ಕಡಲೆ ಅಥವಾ ರಾಜ್ಮಾ ಅನ್ನು ರಾತ್ರಿ ನೆನೆ ಹಾಕಲು ಮರೆತರೆ ಅಡುಗೆ ಮಾಡುವ ಒಂದು ಗಂಟೆಯ ಮೊದಲು ಬಿಸಿ ನೀರಿನಲ್ಲಿ ನೆನೆ ಹಾಕಿದರೆ ಸಾಕು.

X
Desktop Bottom Promotion