Latest Updates
-
ಮಳೆಗಾಲದಲ್ಲಿ ದಂಪತಿಗಳ ಬಾಂಧವ್ಯ ಗಟ್ಟಿಯಾಗಬೇಕೆ? ಮದುವೆ ಮತ್ತು ಬಜೆಟ್ ಪ್ಲಾನಿಂಗ್ಗೆ ಇಲ್ಲಿದೆ ಬೆಸ್ಟ್ ಟಿಪ್ಸ್ -
ದೆಹಲಿ ನೀರಿನ ಬಿಕ್ಕಟ್ಟು: ಮನೆಯಲ್ಲಿ ನೀರು ಉಳಿಸಿ, ಗಿಡಗಳನ್ನು ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಡೈರಿ ಉತ್ಪನ್ನಗಳ ಸ್ಮಾರ್ಟ್ ಆಯ್ಕೆ: ವಿಶ್ವ ಹಾಲು ದಿನದ ವಿಶೇಷ ಸಲಹೆಗಳು -
ಬೆಂಗಳೂರು ಮಳೆ: ಟ್ರಾಫಿಕ್ ಕಿರಿಕಿರಿ ತಪ್ಪಿಸಿ, ಸ್ಟೈಲಿಶ್ ಆಗಿ ಕಾಣಲು ಈ ವೈರಲ್ ಟಿಪ್ಸ್ ಮಿಸ್ ಮಾಡ್ಬೇಡಿ! -
ವಿಶ್ವ ಸೈಕಲ್ ದಿನ: ಫಿಟ್ನೆಸ್ ಕಾಯ್ದುಕೊಳ್ಳಲು ಮತ್ತು ಸುರಕ್ಷಿತ ಸೈಕ್ಲಿಂಗ್ಗೆ ಇಲ್ಲಿದೆ ಬೆಸ್ಟ್ ಟಿಪ್ಸ್ -
ಪ್ರೈಡ್ ಮಂತ್ 2026: ಮನೆಯವರ ಮುಂದೆ ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಹೇಳಿಕೊಳ್ಳಲು ಹೆದರುತ್ತಿದ್ದೀರಾ? ಈ ಸಲಹೆಗಳು ನಿಮಗಾಗಿ! -
ಮಳೆಗಾಲದ ಮೊದಲ ಮಳೆ ಬಂತು: ನಿಮ್ಮ ಮನೆಯನ್ನು ದುಬಾರಿ ರಿಪೇರಿಯಿಂದ ರಕ್ಷಿಸಲು ಈ ಸಣ್ಣ ಕೆಲಸಗಳನ್ನು ಇಂದೇ ಮಾಡಿ! -
ಮಳೆಗಾಲದಲ್ಲಿ ಪದೇ ಪದೇ ಕಾಯಿಲೆ ಬೀಳ್ತಿದ್ದೀರಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ, ವೈರಲ್ ಜ್ವರದಿಂದ ದೂರವಿರಿ! -
ಆರ್ಸಿಬಿ ಗೆಲುವಿನ ಅಬ್ಬರ: ಬೆಂಗಳೂರಿನಲ್ಲಿ ವಿರಾಟ್-ಅನುಷ್ಕಾ ಸಂಭ್ರಮದ ವಿಡಿಯೋ ವೈರಲ್, ನೀವು ನೋಡಲೇಬೇಕಾದ ದೃಶ್ಯಗಳಿವು! -
ಮಳೆಗಾಲದಲ್ಲಿ ವ್ಯಾಯಾಮ ಮಾಡ್ತೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ!
ಯುಗಾದಿಗಾಗಿ ನೀರೂರಿಸುವ 10 ಸಿಹಿ ಖಾದ್ಯಗಳು!
ಯುಗಾದಿ ವರ್ಷದ ಪ್ರಾರಂಭ ಸಂಕೇತ. ಕರ್ನಾಟಕ ಹಾಗೂ ಆಂಧ್ರದ ಜನತೆಗೆ ಯುಗಾದಿ ತುಂಬಾ ವಿಶೇಷವಾದ ಹಬ್ಬವಾಗಿದೆ. ಹೊಸ ಯುಗದ ಪ್ರಾರಂಭಕ್ಕಾಗಿ ಹೊಸ ಕಾರ್ಯಗಳನ್ನು ಮಾಡುತ್ತೇವೆ ಈ ಸಮಯದಲ್ಲಿ ಇದನ್ನು ಸಿಹಿಯಿಂದ ಆಚರಿಸುವುದು ವಾಡಿಕೆ. ಆದ್ದರಿಂದಲೇ ಯುಗಾದಿಯ ಮೆನು ಪಟ್ಟಿಯಿಂದ ಸಿಹಿಯನ್ನು ನಮಗೆ ಕೈಬಿಡಲಾಗುವುದಿಲ್ಲ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಯುಗಾದಿಗಾಗಿ ರುಚಿಯಾದ ಚನ್ನಾ ಉಸಾಲ್ ರೆಸಿಪಿ
ಈ ಯುಗಾದಿಗಾಗಿ ವಿಭಿನ್ನವಾಗಿ ಹಬ್ಬವನ್ನು ಆಚರಿಸಲು ಬೋಲ್ಡ್ ಸ್ಕೈ 10 ವಿಧದ ಸಿಹಿಗಳ ಪಟ್ಟಿಯನ್ನು ನಿಮ್ಮ ಮುಂದಿಡುತ್ತಿದೆ. ಆಂಧ್ರ ಹಾಗೂ ಕರ್ನಾಟಕದ ಎರಡೂ ರಾಜ್ಯಗಳ ವಿಶೇಷ ಸಿಹಿಯನ್ನು ಈ ಯುಗಾದಿಗಾಗಿ ನಾವು ತಂದಿದ್ದು ಪ್ರತಿಯೊಂದರ ಸಿಹಿಯೂ ವಿಭಿನ್ನ ಮತ್ತು ಸ್ವಾದಪೂರ್ಣವಾಗಿದೆ.
ವಿವಿಧ ಬಗೆಯ ಪಾಯಸ, ಕೀರು, ನೀರೂರಿಸುವ ಮೈಸೂರು ಪಾಕು, ಒಬ್ಬಟ್ಟು ಮುಂತಾದ ಸಿಹಿಗಳು ನಿಮ್ಮ ನಾಲಗೆಯನ್ನು ತಣಿಸಲಿದೆ. ಹಾಗಿದ್ದರೆ ಇನ್ನೇಕೆ ತಡ? ಈ ಪಟ್ಟಿ ಮಾಡಿರುವ 10 ಸಿಹಿ ತಿಂಡಿಗಳನ್ನು ಈ ಯಗಾದಿಗಾಗಿ ವಿಶೇಷವಾಗಿ ತಯಾರಿಸಿ. ಮತ್ತು ವರ್ಷದ ಪ್ರಾರಂಭವನ್ನು ಸಿಹಿಯೊಂದಿಗೆ ಆರಂಭಿಸಿ!
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ವಾವ್! ಮಜ್ಜಿಗೆ ಹುಳಿ: ಯುಗಾದಿ ಸ್ಪೆಶಲ್

ತೆಂಗಿನಕಾಯಿ ಹೂರಣ ಹೋಳಿಗೆ:
ತೆಂಗಿನ ತುರಿಯೊಂದಿಗೆ ಬೆಲ್ಲವನ್ನು ಕರಗಿಸಿ ಮಿಶ್ರ ಮಾಡಿ ಸ್ಟಫ್ಫಿಂಗ್ ರೀತಿಯಲ್ಲಿ ಈ ಹೋಳಿಗೆಯನ್ನು ತಯಾರಿಸುತ್ತಾರೆ.ಈ ತೆಂಗಿನ ಕಾಯಿಯ ಹೂರಣ ಹೋಳಿಗೆಯು ನಿಮ್ಮ ಯುಗಾದಿ ಹಬ್ಬವನ್ನು ನೆನಪಿನಲ್ಲಿರುವಂತೆ ಮಾಡುವುದು ಖಂಡಿತ.

ಹೆಸರು ಬೇಳೆ ಪಾಯಸ:
ಯುಗಾದಿಗಾಗಿ ಸಿದ್ಧಪಡಿಸಲೇಬೇಕಾದ ಡಿಶ್ ಆಗಿದೆ ಹೆಸರು ಬೇಳೆ ಪಾಯಸ. ಹೆಸರು ಬೇಳೆ ಹಾಗೂ ಖರ್ಜೂರದೊಂದಿಗೆ ಇದನ್ನು ತಯಾರಿಸಬಹುದು.

ಮೈಸೂರ್ ಪಾಕ್:
ಶುದ್ಧವಾದ ತಪ್ಪು ಹಾಗೂ ಕಡಲೆಹಿಟ್ಟಿನ ಸಮಪಾಕ ಮೈಸೂರ್ ಪಾಕ್ನ ರುಚಿಯನ್ನು ನಿಮ್ಮ ಬಾಯಲ್ಲಿ ಉಳಿಯುವಂತೆ ಮಾಡುತ್ತದೆ.

ಒಬ್ಬಟ್ಟು:
ಒಬ್ಬಟ್ಟು ಹೆಸರಾಂತ ಯುಗಾದಿ ಸಿಹಿತಿಂಡಿಯಾಗಿದೆ. ಸರಳವಾಗಿ ತಯಾರಿಸಬಹುದಾದ ಈ ಸಿಹಿತಿಂಡಿಯಲ್ಲಿ ಬೆಲ್ಲ ಅತಿ ಮುಖ್ಯ. ಕ್ಯಾಲೋರಿ ರಹಿತ ಪದಾರ್ಥವಾದ ಬೆಲ್ಲ ನಿಮ್ಮ ತೂಕ ಏರಿಕೆ ಚಿಂತೆಯನ್ನು ದೂರಮಾಡುತ್ತದೆ.

ಅವಲಕ್ಕಿ ಪಾಯಸ:
ಈ ಮುಖ್ಯವಾದ ದಿನದಂದು ಪಾಯಸವನ್ನು ಸಿಹಿಯಾಗಿ ತಯಾರಿಸಲೇಬೇಕು. ಅಕ್ಕಿ, ಸೇಮಿಗೆ ಅಥವಾ ಅವಲಕ್ಕಿಯಿಂದ ಕೂಡ ಪಾಯಸವನ್ನು ತಯಾರಿಸಬಹುದು.

ಬೂರೇಲು:
ಯುಗಾದಿಗಾಗಿ ತಯಾರಿಸುವ ಸಿಹಿಖಾದ್ಯವಾಗಿದೆ ಬೂರೇಲು. ಕಡಲೆ ಹಿಟ್ಟು, ಬೆಲ್ಲ ಅಥವಾ ಸಕ್ಕರೆಯಿಂದ ತೆಂಗಿನ ತುರಿ ಬೆರೆಸಿ ಇದನ್ನು ಸಿದ್ಧಪಡಿಸುತ್ತಾರೆ.

ಸೇಮಿಗೆ ಪಾಯಸ:
ಪಾಯಸ ದಕ್ಷಿಣ ಭಾರತದಲ್ಲಿ ಪ್ರಸಿದ್ಧವಾಗಿರುವ ಮತ್ತು ಹಾಲಿನಿಂದ ತಯಾರುಮಾಡಲಾದ ಸಿಹಿತಿಂಡಿಯಾಗಿದೆ. ಸೇಮಿಗೆ ಪಾಯಸವನ್ನು ಕೂಡ ಯುಗಾದಿಗೆ ವಿಶೇಷವಾಗಿ ತಯಾರಿಸುತ್ತಾರೆ.

ಅರಿಸೇಲು:
ಆಂಧ್ರ ಹಾಗೂ ಕರ್ನಾಟಕದಲ್ಲಿ ಯುಗಾದಿ ಹಬ್ಬಕ್ಕಾಗಿ ತಯಾರುಮಾಡಲಾಗುವ ಸಿಹಿ ಖಾದ್ಯವಾಗಿದೆ ಅರಿಸೇಲು. ಕಜ್ಜಾಯ, ಅತಿರಸಂ ಮೊದಲಾದ ಹೆಸರುಗಳಿಂದ ಇದನ್ನು ಕರೆಯುತ್ತಾರೆ. ಅಕ್ಕಿ ಹಿಟ್ಟು ಮತ್ತು ಬೆಲ್ಲ ಈ ಖಾದ್ಯ ತಯಾರಿಗೆ ಅತ್ಯವಶ್ಯಕ ಸಾಮಾಗ್ರಿಗಳು.

ಪೆಸರಪ್ಪು ಪಾಯಸ:
ಇದು ಮೂಲತಃ ದಕ್ಷಿಣ ಭಾರತದ ಸಿಹಿಯಾಗಿದ್ದು ಪಾಯಸ ಅಥವಾ ಖೀರ್ನಿಂದ ಚಿರಪರಿಚಿತ. ಇದನ್ನು ಹೆಸರುಬೇಳೆಯಿಂದ ತಯಾರಿಸುತ್ತಾರೆ. ಆದ್ದರಿಂದ ಹಳದಿ ಬಣ್ಣವನ್ನು ಈ ಪಾಯಸ ಹೊಂದಿದೆ.

ಡ್ರೈ ಫ್ರುಟ್ಸ್ ಕೇಸರಿ:
ರವೆ, ಅಕ್ಕಿ ಮತ್ತು ಕೇಸರಿಯಿಂದ ತಯಾರು ಮಾಡಲಾಗುವ ವಿಶೇಷ ಸಿಹಿಯಾಗಿದೆ ಡ್ರೈ ಫ್ರುಟ್ಸ್ ಕೇಸರಿ. ಕೇಸರಿ ಬಾತ್ ಎಂಬ ಉಪನಾಮವೂ ಈ ಖಾದ್ಯಕ್ಕಿದೆ.



Click it and Unblock the Notifications