Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಸಿಹಿ ಪ್ರಿಯ ಗಣಪನಿಗೆ-ಬಗೆ ಬಗೆಯ ನೈವೇದ್ಯ!
ಗಣೇಶನ ಹಬ್ಬಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಸಪ್ಟೆಂಬರ್ ತಿಂಗಳ ಐದನೆಯ ತಾರೀಕು ಈ ಬಾರಿ ಗಣಪ ಮನೆಮನೆಗೆ ಆಗಮಿಸಲಿದ್ದಾರೆ. ಮೂರ್ತಿಯನ್ನು ತಂದು ಅದನ್ನು ಪೂಜಿಸಿ ವಿಸರ್ಜಿಸುವ ಪದ್ಧತಿ ಹಿಂದೂ ಮನೆಗಳಲ್ಲಿ ಈಗಲೂ ನಡೆದುಕೊಂಡು ಬರುತ್ತಿರುವ ಕ್ರಮವಾಗಿದೆ. ಹಬ್ಬದ ಪ್ರಥಮ ದಿನ ಗೌರಿಯನ್ನು ಮನೆಗೆ ಆಮಂತ್ರಿಸುವ ಪದ್ಧತಿ ಇದ್ದರೆ ಎರಡನೆಯ ದಿನ ಗಣಪನನ್ನು ಆಮಂತ್ರಿಸುತ್ತಾರೆ. ಬೆಲ್ಲ, ಕೊಬ್ಬರಿಯ ಮೋದಕ ರೆಸಿಪಿ
ಹಬ್ಬದ ಸಮಯದಲ್ಲಿ ಸಿಹಿಯನ್ನು ಮಾಡಿದಾಗ ಅದನ್ನು ದೇವರ ಮುಂದಿರಿಸಿ ಸೇವಿಸುವುದು ಪೂಜೆಯ ಕ್ರಮವಾಗಿದೆ. ಮೋದಕ ಪ್ರಿಯನಾದ ಗಣಪನಿಗೆ ಸಿಹಿಯಲ್ಲಿ ಎರಡನೆಯ ಆಯ್ಕೆ ಲಾಡಾಗಿದೆ. ಇಷ್ಟಲ್ಲದೆ ಹುರಿಗಡುಬು, ಸಿಹಿ ತಿಂಡಿಗಳು ವಿಘ್ನವಿನಾಶಕನ ಅಚ್ಚುಮೆಚ್ಚಿನದ್ದಾಗಿದೆ. ಗಣೇಶ ಚತುರ್ಥಿ ವಿಶೇಷ; ಬಗೆ ಬಗೆಯ ತಿನಿಸುಗಳು
ಇಂದಿನ ಲೇಖನದಲ್ಲಿ ಕೂಡ ನಿಮ್ಮ ಬಂದು ಬಾಂಧವರಿಗೆ ಪ್ರಸಾದ ರೂಪದಲ್ಲಿ ನೀಡಿ ದೇವರಿಗೆ ನೈವೇದ್ಯವನ್ನು ಅರ್ಪಿಸಲು ಮಾಡಬಹುದಾದ ವಿಶೇಷ ನೈವೇದ್ಯ ರೆಸಿಪಿಗಳನ್ನು ಇಂದಿಲ್ಲಿ ತಿಳಿಸಿಕೊಡುತ್ತಿದ್ದೇವೆ.
ಪೂರಣ್ ಪೋಲಿ (ಹೂರಣ ಹೋಳಿಗೆ)
ಪೂರಣ್ ಪೋಲಿ (ಹೂರಣ ಹೋಳಿಗೆ) ಸಿಹಿಯನ್ನು ತಯಾರಿಸುವುದು ಸರಳವಾಗಿದ್ದು ಹಬ್ಬಕ್ಕಾಗಿ ಇದನ್ನು ವಿಶೇಷವಾಗಿ ತಯಾರಿಸಿಕೊಳ್ಳಬಹುದಾಗಿದೆ. ಬೇರೆ ಬೇರೆ ಬಗೆಯ ಹೂರಣ ಹೋಳಿಗೆ ರೆಸಿಪಿಯನ್ನು ನಿಮಗೆ ಪ್ರಯತ್ನಿಸಬಹುದಾಗಿದೆ. ಚತುರ್ಥಿಗಾಗಿ ಹೋಳಿಗೆಯನ್ನು ತಯಾರಿಸಲು ಲಿಂಕ್ ಕ್ಲಿಕ್ ಮಾಡಿ ಗಣೇಶ ಹಬ್ಬಕ್ಕೆ ಸಿಹಿ ಸಿಹಿ ಹೂರಣದ ಹೋಳಿಗೆ!
ಕಜ್ಜಾಯ
ದಕ್ಷಿಣ ಭಾರತದ ಪ್ರಮುಖ ಸಿಹಿ ಇದಾಗಿದೆ. ಕಜ್ಜಾಯವಯವನ್ನು ತಯಾರಿಸುವುದು ಕಷ್ಟವೆಂದೇ ಹಲವರ ಭಾವನೆಯಾಗಿದೆ. ಸರಿಯಾದ ವಿಧಾನವನ್ನು ನೀವು ಅನುಸರಿಸಿದಲ್ಲಿ ಇದನ್ನು ಸರಳವಾಗಿ ತಯಾರಿಸಿಕೊಳ್ಳಬಹುದಾಗಿದೆ. ರೆಸಿಪಿಗಾಗಿ ಇಲ್ಲಿ ಕ್ಲಿಕ್ ಮಾಡಿ ರುಚಿಕರವಾದ ರವೆ ಕಜ್ಜಾಯ ರೆಸಿಪಿ
ತಂಬಿಟ್ಟು
ನೈವೇದ್ಯ ರೆಸಿಪಿಗಳಲ್ಲಿ ಒಂದಾಗಿರುವ ತಂಬಿಟ್ಟು ಮಾಡಲು ಹೆಚ್ಚು ಸರಳ ಎಂದೆನಿಸಿದೆ. ಹೆಚ್ಚು ಮೃದುವಾದ ಸಿಹಿ ತಿಂಡಿ ಇದಾಗಿದ್ದು ಅಕ್ಕಿ ಮತ್ತು ಗೋಧಿಯನ್ನು ಬಳಸಿ ಇದನ್ನು ಸಿದ್ಧಪಡಿಸಲಾಗುತ್ತದೆ. ಬೆಲ್ಲ, ನೀರು ಮತ್ತು ಹಿಟ್ಟು ಇದರಲ್ಲಿ ಪ್ರಧಾನ ಸಾಮಾಗ್ರಿಯಾಗಿದೆ. ನೈವೇದ್ಯಕ್ಕಾಗಿ ಇದನ್ನು ತಯಾರಿಸುವುದು ಹೇಗೆ ಎಂಬುದನ್ನು ಅರಿತುಕೊಳ್ಳಿ ರೆಸಿಪಿಗಾಗಿ ಇಲ್ಲಿ ಕ್ಲಿಕ್ ಮಾಡಿ ಜೋಕಾಲಿ ಆಡೋಣ ಬನ್ನಿರೋ ತಂಬಿಟ್ಟು ತಿನ್ನೋಣ ಬನ್ನಿರೋ
ಸಿಹಿ ಪೊಂಗಲ್
ಸಂಕ್ರಾಂತಿಗಾಗಿ ತಯಾರಿಸುವ ಸಿಹಿ ಪೊಂಗಲ್ ಅನ್ನು ದೇವರಿಗೆ ನೈವೇದ್ಯವಾಗಿ ಅರ್ಪಿಸಬಹುದಾಗಿದೆ. ಇದು ಹೆಚ್ಚು ಸರಳವಾಗಿ ತಯಾರಿಸಬಹುದಾದ ಸಿಹಿಯಾಗಿದೆ. ಹೆಸರು ಬೇಳೆ ಮತ್ತು ಬೆಲ್ಲವನ್ನು ಬಳಸಿ ತಯಾರಿಸುವ ಪೊಂಗಲ್ ಗಣೇಶ ಚತುರ್ಥಿಗೆ ಇದು ಅತ್ಯುತ್ತಮ ಸಿಹಿಯಾಗಿದೆ. ರೆಸಿಪಿಗಾಗಿ ಇಲ್ಲಿ ಕ್ಲಿಕ್ ಮಾಡಿ ಸಂಕ್ರಾಂತಿ ಹಬ್ಬಕ್ಕೆ ಸ್ಪೆಷೆಲ್ -ಸ್ವೀಟ್ ಪೊಂಗಲ್



Click it and Unblock the Notifications
