Latest Updates
-
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ
ಸಿಹಿ ಪ್ರಿಯ ಗಣಪನಿಗೆ-ಬಗೆ ಬಗೆಯ ನೈವೇದ್ಯ!
ಗಣೇಶನ ಹಬ್ಬಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಸಪ್ಟೆಂಬರ್ ತಿಂಗಳ ಐದನೆಯ ತಾರೀಕು ಈ ಬಾರಿ ಗಣಪ ಮನೆಮನೆಗೆ ಆಗಮಿಸಲಿದ್ದಾರೆ. ಮೂರ್ತಿಯನ್ನು ತಂದು ಅದನ್ನು ಪೂಜಿಸಿ ವಿಸರ್ಜಿಸುವ ಪದ್ಧತಿ ಹಿಂದೂ ಮನೆಗಳಲ್ಲಿ ಈಗಲೂ ನಡೆದುಕೊಂಡು ಬರುತ್ತಿರುವ ಕ್ರಮವಾಗಿದೆ. ಹಬ್ಬದ ಪ್ರಥಮ ದಿನ ಗೌರಿಯನ್ನು ಮನೆಗೆ ಆಮಂತ್ರಿಸುವ ಪದ್ಧತಿ ಇದ್ದರೆ ಎರಡನೆಯ ದಿನ ಗಣಪನನ್ನು ಆಮಂತ್ರಿಸುತ್ತಾರೆ. ಬೆಲ್ಲ, ಕೊಬ್ಬರಿಯ ಮೋದಕ ರೆಸಿಪಿ
ಹಬ್ಬದ ಸಮಯದಲ್ಲಿ ಸಿಹಿಯನ್ನು ಮಾಡಿದಾಗ ಅದನ್ನು ದೇವರ ಮುಂದಿರಿಸಿ ಸೇವಿಸುವುದು ಪೂಜೆಯ ಕ್ರಮವಾಗಿದೆ. ಮೋದಕ ಪ್ರಿಯನಾದ ಗಣಪನಿಗೆ ಸಿಹಿಯಲ್ಲಿ ಎರಡನೆಯ ಆಯ್ಕೆ ಲಾಡಾಗಿದೆ. ಇಷ್ಟಲ್ಲದೆ ಹುರಿಗಡುಬು, ಸಿಹಿ ತಿಂಡಿಗಳು ವಿಘ್ನವಿನಾಶಕನ ಅಚ್ಚುಮೆಚ್ಚಿನದ್ದಾಗಿದೆ. ಗಣೇಶ ಚತುರ್ಥಿ ವಿಶೇಷ; ಬಗೆ ಬಗೆಯ ತಿನಿಸುಗಳು
ಇಂದಿನ ಲೇಖನದಲ್ಲಿ ಕೂಡ ನಿಮ್ಮ ಬಂದು ಬಾಂಧವರಿಗೆ ಪ್ರಸಾದ ರೂಪದಲ್ಲಿ ನೀಡಿ ದೇವರಿಗೆ ನೈವೇದ್ಯವನ್ನು ಅರ್ಪಿಸಲು ಮಾಡಬಹುದಾದ ವಿಶೇಷ ನೈವೇದ್ಯ ರೆಸಿಪಿಗಳನ್ನು ಇಂದಿಲ್ಲಿ ತಿಳಿಸಿಕೊಡುತ್ತಿದ್ದೇವೆ.
ಪೂರಣ್ ಪೋಲಿ (ಹೂರಣ ಹೋಳಿಗೆ)
ಪೂರಣ್ ಪೋಲಿ (ಹೂರಣ ಹೋಳಿಗೆ) ಸಿಹಿಯನ್ನು ತಯಾರಿಸುವುದು ಸರಳವಾಗಿದ್ದು ಹಬ್ಬಕ್ಕಾಗಿ ಇದನ್ನು ವಿಶೇಷವಾಗಿ ತಯಾರಿಸಿಕೊಳ್ಳಬಹುದಾಗಿದೆ. ಬೇರೆ ಬೇರೆ ಬಗೆಯ ಹೂರಣ ಹೋಳಿಗೆ ರೆಸಿಪಿಯನ್ನು ನಿಮಗೆ ಪ್ರಯತ್ನಿಸಬಹುದಾಗಿದೆ. ಚತುರ್ಥಿಗಾಗಿ ಹೋಳಿಗೆಯನ್ನು ತಯಾರಿಸಲು ಲಿಂಕ್ ಕ್ಲಿಕ್ ಮಾಡಿ ಗಣೇಶ ಹಬ್ಬಕ್ಕೆ ಸಿಹಿ ಸಿಹಿ ಹೂರಣದ ಹೋಳಿಗೆ!
ಕಜ್ಜಾಯ
ದಕ್ಷಿಣ ಭಾರತದ ಪ್ರಮುಖ ಸಿಹಿ ಇದಾಗಿದೆ. ಕಜ್ಜಾಯವಯವನ್ನು ತಯಾರಿಸುವುದು ಕಷ್ಟವೆಂದೇ ಹಲವರ ಭಾವನೆಯಾಗಿದೆ. ಸರಿಯಾದ ವಿಧಾನವನ್ನು ನೀವು ಅನುಸರಿಸಿದಲ್ಲಿ ಇದನ್ನು ಸರಳವಾಗಿ ತಯಾರಿಸಿಕೊಳ್ಳಬಹುದಾಗಿದೆ. ರೆಸಿಪಿಗಾಗಿ ಇಲ್ಲಿ ಕ್ಲಿಕ್ ಮಾಡಿ ರುಚಿಕರವಾದ ರವೆ ಕಜ್ಜಾಯ ರೆಸಿಪಿ
ತಂಬಿಟ್ಟು
ನೈವೇದ್ಯ ರೆಸಿಪಿಗಳಲ್ಲಿ ಒಂದಾಗಿರುವ ತಂಬಿಟ್ಟು ಮಾಡಲು ಹೆಚ್ಚು ಸರಳ ಎಂದೆನಿಸಿದೆ. ಹೆಚ್ಚು ಮೃದುವಾದ ಸಿಹಿ ತಿಂಡಿ ಇದಾಗಿದ್ದು ಅಕ್ಕಿ ಮತ್ತು ಗೋಧಿಯನ್ನು ಬಳಸಿ ಇದನ್ನು ಸಿದ್ಧಪಡಿಸಲಾಗುತ್ತದೆ. ಬೆಲ್ಲ, ನೀರು ಮತ್ತು ಹಿಟ್ಟು ಇದರಲ್ಲಿ ಪ್ರಧಾನ ಸಾಮಾಗ್ರಿಯಾಗಿದೆ. ನೈವೇದ್ಯಕ್ಕಾಗಿ ಇದನ್ನು ತಯಾರಿಸುವುದು ಹೇಗೆ ಎಂಬುದನ್ನು ಅರಿತುಕೊಳ್ಳಿ ರೆಸಿಪಿಗಾಗಿ ಇಲ್ಲಿ ಕ್ಲಿಕ್ ಮಾಡಿ ಜೋಕಾಲಿ ಆಡೋಣ ಬನ್ನಿರೋ ತಂಬಿಟ್ಟು ತಿನ್ನೋಣ ಬನ್ನಿರೋ
ಸಿಹಿ ಪೊಂಗಲ್
ಸಂಕ್ರಾಂತಿಗಾಗಿ ತಯಾರಿಸುವ ಸಿಹಿ ಪೊಂಗಲ್ ಅನ್ನು ದೇವರಿಗೆ ನೈವೇದ್ಯವಾಗಿ ಅರ್ಪಿಸಬಹುದಾಗಿದೆ. ಇದು ಹೆಚ್ಚು ಸರಳವಾಗಿ ತಯಾರಿಸಬಹುದಾದ ಸಿಹಿಯಾಗಿದೆ. ಹೆಸರು ಬೇಳೆ ಮತ್ತು ಬೆಲ್ಲವನ್ನು ಬಳಸಿ ತಯಾರಿಸುವ ಪೊಂಗಲ್ ಗಣೇಶ ಚತುರ್ಥಿಗೆ ಇದು ಅತ್ಯುತ್ತಮ ಸಿಹಿಯಾಗಿದೆ. ರೆಸಿಪಿಗಾಗಿ ಇಲ್ಲಿ ಕ್ಲಿಕ್ ಮಾಡಿ ಸಂಕ್ರಾಂತಿ ಹಬ್ಬಕ್ಕೆ ಸ್ಪೆಷೆಲ್ -ಸ್ವೀಟ್ ಪೊಂಗಲ್



Click it and Unblock the Notifications











