Latest Updates
-
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ!
ಸಂತೋಷಪಡುವವರಿಗೆ ಸಿಹಿ ತಿನಿಸು ಚಂಪಾಕಲಿ

ಇವತ್ತು ಕರ್ನಾಟಕ ರಾಜ್ಯವನ್ನು ಆಳುತ್ತಿರುವ ಬಿಜೆಪಿ ಸರಕಾರ ನೆನೆನೆನೆಗುದಿಗೆ ಬಿದ್ದಿದೆ. ಸರಕಾರ ಇರತ್ತೋ ಬೀಳತ್ತೋ ಎನ್ನುವಂತಹ ಸಂದಿಗ್ಧ ಪರಿಸ್ಥಿತಿ ಉಂಟಾಗಿದೆ. ಈ ಸನ್ನಿವೇಶವು ದೈನಂದಿನ ರಾಜಕೀಯ ಬೆಳವಣಿಗೆಯಲ್ಲಿ ಆಸಕ್ತಿಯಿರುವ ನಾನಾ ನಮೂನೆಯ ಜನಕ್ಕೆ ನಾನಾ ಬಗೆಯ ಪುಳಕ, ಛಳಕವನ್ನು ಹುಟ್ಟುಹಾಕಿದೆ. ಭಾಜಪ ಸರಕಾರ ಬೀಳದಿದ್ದರೆ ಸಾಕು, ಬಿದ್ದರೆ ಸಾಕು, ಎದ್ದರೆಷ್ಟು ಬಿದ್ದರೆಷ್ಟು, ಎನ್ನುವ ಮೂರು ಬಗೆಯ ಓಗುಗರಿಗಾಗಿ ಇವತ್ತು ಎಸ್ ಕೆ ಸಿ ಉಪಾಹಾರ ಮಾಡಲಾಗಿದೆ.
ಸಂತೋಷಪಡುವವರಿಗೆ ಚಂಪಾಕಲಿಯನ್ನೂ, ದುಃಖಪಡುವವರಿಗೆ ಖಾರದ ತಿಂಡಿಯನ್ನೂ ಎರಡೂ ಆಗದೆ ತಟಸ್ಥರಾಗಿರುವವರಿಗೆ ಜಸ್ಟ್ ಫಿಲ್ಟರ್ ಕಾಫಿಯನ್ನು ಸರ್ವ್ ಮಾಡಲಾಗುತ್ತಿದೆ.
ಚಂಪಾಕಲಿ
ಏನೇನು ಬೇಕು : ಅರ್ಧ ಕೆಜಿ ಮೈದಾಹಿಟ್ಟು. ಅರ್ಧ ಕೆಜಿ ಸಕ್ಕರೆ. ಅರ್ಧ ಬಟ್ಟಲು ಅಡುಗೆ ಎಣ್ಣೆ. ಚೂರು ಉಪ್ಪು. ಅಡಿಗೆಗೆ ಬಳಸುವ ಬಣ್ಣ ಚಿಟಿಕೆ. ಒಂದು ಬಟ್ಟಲು ತುಪ್ಪ.
ಮಾಡುವ ರೀತಿ : ಮೈದಾಹಿಟ್ಟಿಗೆ ಚೂರುಎಣ್ಣೆ , ಉಪ್ಪು ಹಾಕಿ ನೀರಿನಲ್ಲಿ ಕಲಸಿ ಇಡಬೇಕು. ಹಿಟ್ಟು ಮೆತ್ತಗಾಗುವಷ್ಟು, ಎಷ್ಟು ಬೇಕೋ ಅಷ್ಟು ನೀರು ಹಾಕಬೇಕು. ಒಟ್ಟಿನಲ್ಲಿ ಹಿಟ್ಟು ಗಟ್ಟಿಯಾಗಿ ಲಟ್ಟಣಿಗೆಯಲ್ಲಿ ಲಟ್ಟಿಸುವುದಕ್ಕೆ ಲಗತ್ತಾಗಿರಬೇಕು. ಇನ್ನೊಂದು ಪಾತ್ರೆಯಲ್ಲಿ ಸಕ್ಕರೆ ಮುಳುಗುವಷ್ಟು ನೀರು ಹಾಕಿ ಒಲೆ ಮೇಲೆ ಇಟ್ಟು ಪಾಕಮಾಡಿಕೊಂಡಿರಿ.
ಉರುಳೆ ಮಾಡಿಕೊಂಡ ಹಿಟ್ಟನ್ನು ಚೆನ್ನಾಗಿ ಅಡುಗೆ ಕಟ್ಟೆಯ ಗ್ರಾನೈಟ್ ಕಲ್ಲಿನ ಮೇಲೆ ನಾದಿಕೊಳ್ಳಿರಿ. ಉರುಳೆ ಮಾಡುವಾಗ ಚಂಪಾಕಲಿಯ ಒಟ್ಟು ಆಕಾರ ಮನಸ್ಸಿನಲ್ಲಿರಲಿ. ಸಿದ್ದವಾದ ಉರುಳೆಗಳನ್ನು ಬೆರಳಿನಿಂದ ಎರಡು ಬಾರಿ ಹಿಂದಕ್ಕೆ ಮುಂದಕ್ಕೆ ಮಡಿಚಿ ನಂತರ ಮಧ್ಯೆ ಚಾಕುವುನಿಂದ ಹೊಟ್ಟೆ ಸೀಳುವ ಹಾಗೆ ಕೊಯ್ದುಕೊಳ್ಳಿ. ಮತ್ತೆ ಅದನ್ನು ಕೈ ಬೆರಳಲ್ಲಿ ಆಡಿಸುತ್ತಾ ಶಂಖಾಕಾರಕ್ಕೆ ಹೊರಳಿಸಿ, ಅರಳಿಸಿ.
ಹೂವಿನಾಕಾರಕ್ಕೆ ಬಂದ ಹಿಟ್ಟನ್ನು ಹಿಂದಕ್ಕೆ ಅರ್ಧ ಮಡಿಚಿ ಚೆನ್ನಾಗಿ ಬಿಸಿಯಾದ ತುಪ್ಪದ ಬಾಣಲೆಯಲ್ಲಿ ಹಾಕಿ. ಕರಿಯುವ ಅಗತ್ಯವಿಲ್ಲ. ಸ್ವಲ್ಪಹೊತ್ತು ಚಂಪಾ ಬೆಂದನಂತರ ಹೊರತೆಗೆದು ಸಿದ್ದವಾಗಿಟ್ಟುಕೊಂಡ ಸಕ್ಕರೆಪಾಕಕ್ಕೆ ಹಾಕಿ. ಸ್ವಲ್ಪಹೊತ್ತು ಸಕ್ಕರೆ ಪಾಕದಲ್ಲಿ ಮುಳುಗಿಸಿಟ್ಟ ಚಂಪಾಕಲಿಯನ್ನು ತೆಳುವಾದ ಇಕ್ಕಳದಿಂದ (ಬೈಸೆಪ್ಸ್) ತೆಗೆದು ತಟ್ಟೆಯ ಮೇಲಿಡಿ. ಚಂಪಾಕಲಿಯ ಕೆಳಗೆ ಸಣ್ಣ ಆಕೃತಿಗೆ ಕಟ್ ಮಾಡಿಟ್ಟುಕೊಂಡ ಪ್ಲಾಸ್ಟಿಕ್ ಹಾಳೆಗಳಿದ್ದರೆ ತೆಗೆದಿಡುವುದಕ್ಕೆ ಈಜಿ.
ಭಾಜಪ ಸಂಕಷ್ಟಕ್ಕೆ ಸಿಲುಕಿರುವುದರಿಂದ ಬೇಜಾರಾಗಿರುವವರು ಖಾರಾ ತಿಂಡಿಗೆ ಬನ್ನಿ. ಖಾರ ಅಂದ್ರೆ ಧಾರವಾಡ ಮಿರ್ಚಿ ಬಜಿಗಿಂತ ಖಾರವಾದ ತಿನಿಸು ಬೇರೇನಿದೆ. ಬನ್ನಿ ಧಾರವಾಡ ಮಿರ್ಚಿ ಬಜಿ ಹೇಗೆ ಮಾಡುವುದೆಂದು ತಿಳಿಯೋಣ.



Click it and Unblock the Notifications
