Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ಸಂತೋಷಪಡುವವರಿಗೆ ಸಿಹಿ ತಿನಿಸು ಚಂಪಾಕಲಿ

ಇವತ್ತು ಕರ್ನಾಟಕ ರಾಜ್ಯವನ್ನು ಆಳುತ್ತಿರುವ ಬಿಜೆಪಿ ಸರಕಾರ ನೆನೆನೆನೆಗುದಿಗೆ ಬಿದ್ದಿದೆ. ಸರಕಾರ ಇರತ್ತೋ ಬೀಳತ್ತೋ ಎನ್ನುವಂತಹ ಸಂದಿಗ್ಧ ಪರಿಸ್ಥಿತಿ ಉಂಟಾಗಿದೆ. ಈ ಸನ್ನಿವೇಶವು ದೈನಂದಿನ ರಾಜಕೀಯ ಬೆಳವಣಿಗೆಯಲ್ಲಿ ಆಸಕ್ತಿಯಿರುವ ನಾನಾ ನಮೂನೆಯ ಜನಕ್ಕೆ ನಾನಾ ಬಗೆಯ ಪುಳಕ, ಛಳಕವನ್ನು ಹುಟ್ಟುಹಾಕಿದೆ. ಭಾಜಪ ಸರಕಾರ ಬೀಳದಿದ್ದರೆ ಸಾಕು, ಬಿದ್ದರೆ ಸಾಕು, ಎದ್ದರೆಷ್ಟು ಬಿದ್ದರೆಷ್ಟು, ಎನ್ನುವ ಮೂರು ಬಗೆಯ ಓಗುಗರಿಗಾಗಿ ಇವತ್ತು ಎಸ್ ಕೆ ಸಿ ಉಪಾಹಾರ ಮಾಡಲಾಗಿದೆ.
ಸಂತೋಷಪಡುವವರಿಗೆ ಚಂಪಾಕಲಿಯನ್ನೂ, ದುಃಖಪಡುವವರಿಗೆ ಖಾರದ ತಿಂಡಿಯನ್ನೂ ಎರಡೂ ಆಗದೆ ತಟಸ್ಥರಾಗಿರುವವರಿಗೆ ಜಸ್ಟ್ ಫಿಲ್ಟರ್ ಕಾಫಿಯನ್ನು ಸರ್ವ್ ಮಾಡಲಾಗುತ್ತಿದೆ.
ಚಂಪಾಕಲಿ
ಏನೇನು ಬೇಕು : ಅರ್ಧ ಕೆಜಿ ಮೈದಾಹಿಟ್ಟು. ಅರ್ಧ ಕೆಜಿ ಸಕ್ಕರೆ. ಅರ್ಧ ಬಟ್ಟಲು ಅಡುಗೆ ಎಣ್ಣೆ. ಚೂರು ಉಪ್ಪು. ಅಡಿಗೆಗೆ ಬಳಸುವ ಬಣ್ಣ ಚಿಟಿಕೆ. ಒಂದು ಬಟ್ಟಲು ತುಪ್ಪ.
ಮಾಡುವ ರೀತಿ : ಮೈದಾಹಿಟ್ಟಿಗೆ ಚೂರುಎಣ್ಣೆ , ಉಪ್ಪು ಹಾಕಿ ನೀರಿನಲ್ಲಿ ಕಲಸಿ ಇಡಬೇಕು. ಹಿಟ್ಟು ಮೆತ್ತಗಾಗುವಷ್ಟು, ಎಷ್ಟು ಬೇಕೋ ಅಷ್ಟು ನೀರು ಹಾಕಬೇಕು. ಒಟ್ಟಿನಲ್ಲಿ ಹಿಟ್ಟು ಗಟ್ಟಿಯಾಗಿ ಲಟ್ಟಣಿಗೆಯಲ್ಲಿ ಲಟ್ಟಿಸುವುದಕ್ಕೆ ಲಗತ್ತಾಗಿರಬೇಕು. ಇನ್ನೊಂದು ಪಾತ್ರೆಯಲ್ಲಿ ಸಕ್ಕರೆ ಮುಳುಗುವಷ್ಟು ನೀರು ಹಾಕಿ ಒಲೆ ಮೇಲೆ ಇಟ್ಟು ಪಾಕಮಾಡಿಕೊಂಡಿರಿ.
ಉರುಳೆ ಮಾಡಿಕೊಂಡ ಹಿಟ್ಟನ್ನು ಚೆನ್ನಾಗಿ ಅಡುಗೆ ಕಟ್ಟೆಯ ಗ್ರಾನೈಟ್ ಕಲ್ಲಿನ ಮೇಲೆ ನಾದಿಕೊಳ್ಳಿರಿ. ಉರುಳೆ ಮಾಡುವಾಗ ಚಂಪಾಕಲಿಯ ಒಟ್ಟು ಆಕಾರ ಮನಸ್ಸಿನಲ್ಲಿರಲಿ. ಸಿದ್ದವಾದ ಉರುಳೆಗಳನ್ನು ಬೆರಳಿನಿಂದ ಎರಡು ಬಾರಿ ಹಿಂದಕ್ಕೆ ಮುಂದಕ್ಕೆ ಮಡಿಚಿ ನಂತರ ಮಧ್ಯೆ ಚಾಕುವುನಿಂದ ಹೊಟ್ಟೆ ಸೀಳುವ ಹಾಗೆ ಕೊಯ್ದುಕೊಳ್ಳಿ. ಮತ್ತೆ ಅದನ್ನು ಕೈ ಬೆರಳಲ್ಲಿ ಆಡಿಸುತ್ತಾ ಶಂಖಾಕಾರಕ್ಕೆ ಹೊರಳಿಸಿ, ಅರಳಿಸಿ.
ಹೂವಿನಾಕಾರಕ್ಕೆ ಬಂದ ಹಿಟ್ಟನ್ನು ಹಿಂದಕ್ಕೆ ಅರ್ಧ ಮಡಿಚಿ ಚೆನ್ನಾಗಿ ಬಿಸಿಯಾದ ತುಪ್ಪದ ಬಾಣಲೆಯಲ್ಲಿ ಹಾಕಿ. ಕರಿಯುವ ಅಗತ್ಯವಿಲ್ಲ. ಸ್ವಲ್ಪಹೊತ್ತು ಚಂಪಾ ಬೆಂದನಂತರ ಹೊರತೆಗೆದು ಸಿದ್ದವಾಗಿಟ್ಟುಕೊಂಡ ಸಕ್ಕರೆಪಾಕಕ್ಕೆ ಹಾಕಿ. ಸ್ವಲ್ಪಹೊತ್ತು ಸಕ್ಕರೆ ಪಾಕದಲ್ಲಿ ಮುಳುಗಿಸಿಟ್ಟ ಚಂಪಾಕಲಿಯನ್ನು ತೆಳುವಾದ ಇಕ್ಕಳದಿಂದ (ಬೈಸೆಪ್ಸ್) ತೆಗೆದು ತಟ್ಟೆಯ ಮೇಲಿಡಿ. ಚಂಪಾಕಲಿಯ ಕೆಳಗೆ ಸಣ್ಣ ಆಕೃತಿಗೆ ಕಟ್ ಮಾಡಿಟ್ಟುಕೊಂಡ ಪ್ಲಾಸ್ಟಿಕ್ ಹಾಳೆಗಳಿದ್ದರೆ ತೆಗೆದಿಡುವುದಕ್ಕೆ ಈಜಿ.
ಭಾಜಪ ಸಂಕಷ್ಟಕ್ಕೆ ಸಿಲುಕಿರುವುದರಿಂದ ಬೇಜಾರಾಗಿರುವವರು ಖಾರಾ ತಿಂಡಿಗೆ ಬನ್ನಿ. ಖಾರ ಅಂದ್ರೆ ಧಾರವಾಡ ಮಿರ್ಚಿ ಬಜಿಗಿಂತ ಖಾರವಾದ ತಿನಿಸು ಬೇರೇನಿದೆ. ಬನ್ನಿ ಧಾರವಾಡ ಮಿರ್ಚಿ ಬಜಿ ಹೇಗೆ ಮಾಡುವುದೆಂದು ತಿಳಿಯೋಣ.



Click it and Unblock the Notifications