Latest Updates
-
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಈ ಸಿಂಪಲ್ ಟಿಪ್ಸ್ ಪಾಲಿಸಿದ್ರೆ ಬೇಸಿಗೆಯಲ್ಲೂ ನೀವು ಕೂಲ್ ಆಗಿರಬಹುದು! -
ಬಿಸಿಲ ಬೇಗೆಯಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ನಿಮ್ಮ ಹೃದಯದ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಎಚ್ಚರ! -
ಬಿಸಿಲಿನ ತಾಪಕ್ಕೆ ದಂಪತಿಗಳ ನಡುವೆ ಜಗಳವೇ? ಸಂಬಂಧ ಗಟ್ಟಿಯಾಗಿರಲು ಇಲ್ಲಿವೆ ನೋಡಿ ಸರಳ ಉಪಾಯಗಳು -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ವಿದ್ಯುತ್ ಬಿಲ್ ಇಲ್ಲದೆ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲ ಬೇಗೆಗೆ ರೆಡ್ ಅಲರ್ಟ್: ಹೀಟ್ ಸ್ಟ್ರೋಕ್ನಿಂದ ಪಾರಾಗಲು ಈ ಮನೆಮದ್ದುಗಳನ್ನು ಇಂದೇ ಟ್ರೈ ಮಾಡಿ! -
ಮಳೆಗಾಲದಲ್ಲಿ ಸ್ಟೈಲಿಶ್ ಆಗಿ ಕಾಣಬೇಕಾ? ಈ ಸಿಂಪಲ್ ಟಿಪ್ಸ್ ನಿಮ್ಮನ್ನು ಮಳೆಗಾಲದ ಫ್ಯಾಷನ್ ಐಕಾನ್ ಮಾಡೋದು ಗ್ಯಾರಂಟಿ! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಆರೋಗ್ಯಕ್ಕೆ ಕುತ್ತು ತಪ್ಪಿದ್ದಲ್ಲ! -
ಸೋಷಿಯಲ್ ಮೀಡಿಯಾದಲ್ಲಿ ಪ್ರೀತಿಯನ್ನು ತೋರಿಸುವ ಹೊಸ ಟ್ರೆಂಡ್: 'ಸಾಫ್ಟ್ ಲಾಂಚ್' ಮೂಲಕ ನಿಮ್ಮ ಸಂಬಂಧವನ್ನು ಭದ್ರಪಡಿಸಿಕೊಳ್ಳಿ! -
ಹೀಟ್ವೇವ್ ಎಚ್ಚರಿಕೆ: ಸುಡುವ ಬಿಸಿಲಲ್ಲೂ ನಿಮ್ಮ ಮನೆಯನ್ನು ತಂಪಾಗಿಡಲು ಮತ್ತು ಗಿಡಗಳನ್ನು ಉಳಿಸಲು ಈ ಟಿಪ್ಸ್ ಸಾಕು! -
ಬಿಸಿಲ ಬೇಗೆಗೆ ಸುಸ್ತಾಗಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಆಹಾರ ಕ್ರಮಗಳನ್ನು ಮರೆಯದೆ ಪಾಲಿಸಿ!
ಸಂತೋಷಪಡುವವರಿಗೆ ಸಿಹಿ ತಿನಿಸು ಚಂಪಾಕಲಿ

ಇವತ್ತು ಕರ್ನಾಟಕ ರಾಜ್ಯವನ್ನು ಆಳುತ್ತಿರುವ ಬಿಜೆಪಿ ಸರಕಾರ ನೆನೆನೆನೆಗುದಿಗೆ ಬಿದ್ದಿದೆ. ಸರಕಾರ ಇರತ್ತೋ ಬೀಳತ್ತೋ ಎನ್ನುವಂತಹ ಸಂದಿಗ್ಧ ಪರಿಸ್ಥಿತಿ ಉಂಟಾಗಿದೆ. ಈ ಸನ್ನಿವೇಶವು ದೈನಂದಿನ ರಾಜಕೀಯ ಬೆಳವಣಿಗೆಯಲ್ಲಿ ಆಸಕ್ತಿಯಿರುವ ನಾನಾ ನಮೂನೆಯ ಜನಕ್ಕೆ ನಾನಾ ಬಗೆಯ ಪುಳಕ, ಛಳಕವನ್ನು ಹುಟ್ಟುಹಾಕಿದೆ. ಭಾಜಪ ಸರಕಾರ ಬೀಳದಿದ್ದರೆ ಸಾಕು, ಬಿದ್ದರೆ ಸಾಕು, ಎದ್ದರೆಷ್ಟು ಬಿದ್ದರೆಷ್ಟು, ಎನ್ನುವ ಮೂರು ಬಗೆಯ ಓಗುಗರಿಗಾಗಿ ಇವತ್ತು ಎಸ್ ಕೆ ಸಿ ಉಪಾಹಾರ ಮಾಡಲಾಗಿದೆ.
ಸಂತೋಷಪಡುವವರಿಗೆ ಚಂಪಾಕಲಿಯನ್ನೂ, ದುಃಖಪಡುವವರಿಗೆ ಖಾರದ ತಿಂಡಿಯನ್ನೂ ಎರಡೂ ಆಗದೆ ತಟಸ್ಥರಾಗಿರುವವರಿಗೆ ಜಸ್ಟ್ ಫಿಲ್ಟರ್ ಕಾಫಿಯನ್ನು ಸರ್ವ್ ಮಾಡಲಾಗುತ್ತಿದೆ.
ಚಂಪಾಕಲಿ
ಏನೇನು ಬೇಕು : ಅರ್ಧ ಕೆಜಿ ಮೈದಾಹಿಟ್ಟು. ಅರ್ಧ ಕೆಜಿ ಸಕ್ಕರೆ. ಅರ್ಧ ಬಟ್ಟಲು ಅಡುಗೆ ಎಣ್ಣೆ. ಚೂರು ಉಪ್ಪು. ಅಡಿಗೆಗೆ ಬಳಸುವ ಬಣ್ಣ ಚಿಟಿಕೆ. ಒಂದು ಬಟ್ಟಲು ತುಪ್ಪ.
ಮಾಡುವ ರೀತಿ : ಮೈದಾಹಿಟ್ಟಿಗೆ ಚೂರುಎಣ್ಣೆ , ಉಪ್ಪು ಹಾಕಿ ನೀರಿನಲ್ಲಿ ಕಲಸಿ ಇಡಬೇಕು. ಹಿಟ್ಟು ಮೆತ್ತಗಾಗುವಷ್ಟು, ಎಷ್ಟು ಬೇಕೋ ಅಷ್ಟು ನೀರು ಹಾಕಬೇಕು. ಒಟ್ಟಿನಲ್ಲಿ ಹಿಟ್ಟು ಗಟ್ಟಿಯಾಗಿ ಲಟ್ಟಣಿಗೆಯಲ್ಲಿ ಲಟ್ಟಿಸುವುದಕ್ಕೆ ಲಗತ್ತಾಗಿರಬೇಕು. ಇನ್ನೊಂದು ಪಾತ್ರೆಯಲ್ಲಿ ಸಕ್ಕರೆ ಮುಳುಗುವಷ್ಟು ನೀರು ಹಾಕಿ ಒಲೆ ಮೇಲೆ ಇಟ್ಟು ಪಾಕಮಾಡಿಕೊಂಡಿರಿ.
ಉರುಳೆ ಮಾಡಿಕೊಂಡ ಹಿಟ್ಟನ್ನು ಚೆನ್ನಾಗಿ ಅಡುಗೆ ಕಟ್ಟೆಯ ಗ್ರಾನೈಟ್ ಕಲ್ಲಿನ ಮೇಲೆ ನಾದಿಕೊಳ್ಳಿರಿ. ಉರುಳೆ ಮಾಡುವಾಗ ಚಂಪಾಕಲಿಯ ಒಟ್ಟು ಆಕಾರ ಮನಸ್ಸಿನಲ್ಲಿರಲಿ. ಸಿದ್ದವಾದ ಉರುಳೆಗಳನ್ನು ಬೆರಳಿನಿಂದ ಎರಡು ಬಾರಿ ಹಿಂದಕ್ಕೆ ಮುಂದಕ್ಕೆ ಮಡಿಚಿ ನಂತರ ಮಧ್ಯೆ ಚಾಕುವುನಿಂದ ಹೊಟ್ಟೆ ಸೀಳುವ ಹಾಗೆ ಕೊಯ್ದುಕೊಳ್ಳಿ. ಮತ್ತೆ ಅದನ್ನು ಕೈ ಬೆರಳಲ್ಲಿ ಆಡಿಸುತ್ತಾ ಶಂಖಾಕಾರಕ್ಕೆ ಹೊರಳಿಸಿ, ಅರಳಿಸಿ.
ಹೂವಿನಾಕಾರಕ್ಕೆ ಬಂದ ಹಿಟ್ಟನ್ನು ಹಿಂದಕ್ಕೆ ಅರ್ಧ ಮಡಿಚಿ ಚೆನ್ನಾಗಿ ಬಿಸಿಯಾದ ತುಪ್ಪದ ಬಾಣಲೆಯಲ್ಲಿ ಹಾಕಿ. ಕರಿಯುವ ಅಗತ್ಯವಿಲ್ಲ. ಸ್ವಲ್ಪಹೊತ್ತು ಚಂಪಾ ಬೆಂದನಂತರ ಹೊರತೆಗೆದು ಸಿದ್ದವಾಗಿಟ್ಟುಕೊಂಡ ಸಕ್ಕರೆಪಾಕಕ್ಕೆ ಹಾಕಿ. ಸ್ವಲ್ಪಹೊತ್ತು ಸಕ್ಕರೆ ಪಾಕದಲ್ಲಿ ಮುಳುಗಿಸಿಟ್ಟ ಚಂಪಾಕಲಿಯನ್ನು ತೆಳುವಾದ ಇಕ್ಕಳದಿಂದ (ಬೈಸೆಪ್ಸ್) ತೆಗೆದು ತಟ್ಟೆಯ ಮೇಲಿಡಿ. ಚಂಪಾಕಲಿಯ ಕೆಳಗೆ ಸಣ್ಣ ಆಕೃತಿಗೆ ಕಟ್ ಮಾಡಿಟ್ಟುಕೊಂಡ ಪ್ಲಾಸ್ಟಿಕ್ ಹಾಳೆಗಳಿದ್ದರೆ ತೆಗೆದಿಡುವುದಕ್ಕೆ ಈಜಿ.
ಭಾಜಪ ಸಂಕಷ್ಟಕ್ಕೆ ಸಿಲುಕಿರುವುದರಿಂದ ಬೇಜಾರಾಗಿರುವವರು ಖಾರಾ ತಿಂಡಿಗೆ ಬನ್ನಿ. ಖಾರ ಅಂದ್ರೆ ಧಾರವಾಡ ಮಿರ್ಚಿ ಬಜಿಗಿಂತ ಖಾರವಾದ ತಿನಿಸು ಬೇರೇನಿದೆ. ಬನ್ನಿ ಧಾರವಾಡ ಮಿರ್ಚಿ ಬಜಿ ಹೇಗೆ ಮಾಡುವುದೆಂದು ತಿಳಿಯೋಣ.



Click it and Unblock the Notifications