Latest Updates
-
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು! -
ಮಳೆಗಾಲದ ಎಚ್ಚರಿಕೆ: ಹೊರಗೆ ವಾಕಿಂಗ್ ಹೋಗುವ ಮುನ್ನ ಈ ವಿಷಯ ಗಮನಿಸಿ, ಮನೆಯಲ್ಲೇ ಫಿಟ್ ಆಗಿರಿ -
ಗೃಹಹಿಂಸೆಯ ಸುಳಿಯಲ್ಲಿ ಸಿಲುಕಿದ್ದೀರಾ? ಸುರಕ್ಷಿತವಾಗಿ ಪಾರಾಗಲು ಈ ಮಾರ್ಗದರ್ಶಿ ಮತ್ತು ತುರ್ತು ಸಹಾಯವಾಣಿಗಳು ನಿಮಗೆ ನೆರವಾಗಲಿವೆ
ಆಹಾ ಘಮ ಘಮ, ಅಂತಿದೆ 'ತರಕಾರಿ ಬಿರಿಯಾನಿ'
ಬಿರಿಯಾನಿ ಎಂದರೆ ಮಾಂಸಾಹಾರವೇ ಆಗಬೇಕೆಂದಿಲ್ಲ. ಸಸ್ಯಾಹಾರಿಗಳು ಕೂಡ ಬಿರಿಯಾನಿಯ ರುಚಿಯನ್ನು ಸವಿಯಬಹುದಾಗಿದೆ. ಇದಕ್ಕಾಗಿಯೇ ವೆಜ್(ತರಕಾರಿ) ಬಿರಿಯಾನಿ ಕೂಡ ತಯಾರಿಸಲಾಗುತ್ತದೆ...
ಇರಾನ್ನಿಂದ ಬಂದಂತಹ ಬಿರಿಯಾನಿ ಇಂದು ಭಾರತದೆಲ್ಲೆಡೆ ವ್ಯಾಪಿಸಿಕೊಂಡಿದೆ. ಬಿರಿಯಾನಿ ಎಂದ ತಕ್ಷಣ ಬಾಯಿಯಲ್ಲಿ ನೀರು ಬರುವುದು ಸಹಜ. ಯಾಕೆಂದರೆ ಬಿರಿಯಾನಿಯ ರುಚಿಯೇ ಹಾಗೆ. ಅದರಲ್ಲೂ ಹೈದರಾಬಾದ್ನಲ್ಲಿ ಸಿಗುವಂತಹ ಬಿರಿಯಾನಿಯ ರುಚಿ ನೋಡದೆ ಇದ್ದರೆ ಜೀವನ ಸಾರ್ಥಕವಲ್ಲವೆನ್ನಬಹುದು. ಬಿರಿಯಾನಿ ಪ್ರತಿಯೊಬ್ಬರಿಗೂ ಇಷ್ಟ. ಯಾವುದೇ ಹಬ್ಬವಾಗಲಿ ಅಥವಾ ಕಾರ್ಯಕ್ರಮವೇ ಆಗಲಿ ಬಿರಿಯಾನಿ ಮಾಡದೇ ಇರುವ ಕಾರ್ಯಕ್ರಮವೇ ಇಲ್ಲ. ಬಾಸುಮತಿ ಅಕ್ಕಿ ತರಕಾರಿ ಬಿರಿಯಾನಿ
ಈದ್, ಕ್ರಿಸ್ಮಸ್ ಹಾಗೂ ಕೆಲವೊಂದು ಹಿಂದೂ ಹಬ್ಬಗಳಿಗೂ ಈಗೀಗ ಬಿರಿಯಾನಿ ತಯಾರಿಸುತ್ತಾರೆ. ಬಿರಿಯಾನಿ ಎಂದರೆ ಮಾಂಸಾಹಾರವೇ ಆಗಬೇಕೆಂದಿಲ್ಲ. ಸಸ್ಯಾಹಾರಿಗಳು ಕೂಡ ಬಿರಿಯಾನಿಯ ರುಚಿಯನ್ನು ಸವಿಯಬಹುದಾಗಿದೆ. ಇದಕ್ಕಾಗಿಯೇ ವೆಜ್(ತರಕಾರಿ) ಬಿರಿಯಾನಿ ಕೂಡ ತಯಾರಿಸಲಾಗುತ್ತದೆ... ಹಾಗಾದರೆ ತಡವೇತಕ್ಕೆ? ಮುಂದೆ ಓದಿ....
ಆರು ಮಂದಿಗೆ ಬಡಿಸಬಹುದು
*ಸಮಯ-15 ನಿಮಿಷ
*ಅಡುಗೆ ಮಾಡುವ ಸಮಯ-25 ನಿಮಿಷ
ಮಾಡಲು ಬೇಕಾಗುವ ಸಾಮಗ್ರಿಗಳು
*ಲವಂಗದ ಎಲೆ-1
*ಲವಂಗ-1
*ದಾಲ್ಚಿನ್ನಿ ಚಕ್ಕೆ-1
*ಏಲಕ್ಕಿ-1
*ಅಕ್ಕಿ-2 ಕಪ್(ನೆನೆಸಿ ತೆಗೆದಿರುವುದು)
*ಉಪ್ಪು ರುಚಿಗೆ ತಕ್ಕಷ್ಟು ಬೇಗ ಮಾಡಬಹುದು ಬೇಬಿ ಕಾರ್ನ್ ಪಲಾವ್
ತರಕಾರಿ ರಸಕ್ಕೆ
*ಬೇಯಿಸಿದ ತರಕಾರಿಗಳು 2 ಕಪ್(ಕ್ಯಾರೆಟ್, ಬಟಾಟೆ, ಬೀನ್ಸ್, ಹೂಕೋಸ್, ಬಟಾಣಿ ಇತ್ಯಾದಿ)
*ಎಣ್ಣೆ-2 ಚಮಚ
*ಪನ್ನೀರ್ ¼ ಕಪ್( ಸಣ್ಣ ತುಂಡುಗಳಾಗಿ ಕತ್ತರಿಸಿರುವುದು)
*ಜೀರಿಗೆ ಕಾಳುಗಳು-1/2 ಚಮಚ
*ಈರುಳ್ಳಿ-3/4 ಕಪ್(ಕತ್ತರಿಸಿರುವುದು)
*ಅರಿಶಿನ ಹುಡಿ-1/4 ಚಮಚ
*ಶುಂಠಿ, ಬೆಳ್ಳುಳ್ಳಿ, ಹಸಿಮೆಣಸಿನ ಪೇಸ್ಟ್ 2 ಚಮಚ
*ಗರಂ ಮಸಾಲ ½ ಚಮಚ
*ಕೊತ್ತಂಬರಿ ಹುಡಿ 2 ಚಮಚ
*ಹಾಲು ¼ ಕಪ್
*ಮೆಣಸಿನ ಹುಡಿ 1 ಚಮಚ
*ಟೊಮೆಟೊ 1 ಕಪ್( ಕತ್ತರಿಸಿರುವುದು)
*ಉಪ್ಪು ರುಚಿಗೆ ತಕ್ಕಷ್ಟು
*ಸ್ವಲ್ಪ ಸಕ್ಕರೆ
*ಮೊಸರು ¼ ಕಪ್
*ಕೊತ್ತಂಬರಿ ಸೊಪ್ಪು ¼ ಕಪ್
*ಖಾದ್ಯ ಕೇಸರಿ ಬಣ್ಣ -ಕೆಲವು ಹನಿ
*ಬೆಣ್ಣೆ- 2 ಚಮಚ
*ಕ್ರೀಮ್-1 ಚಮಚ
ವಿಧಾನ
*ಅಕ್ಕಿಯನ್ನು ಅರ್ಧ ಗಂಟೆ ಕಾಲ ನೀರಿನಲ್ಲಿ ನೆನೆಸಿಟ್ಟು ನೀರು ತೆಗೆಯಿರಿ. ಒಂದು ಪಾತ್ರೆಯಲ್ಲಿ ನೀರು ಹಾಕಿ ಕುದಿಸಲು ಇಡಿ. ಲವಂಗ, ದಾಲ್ಚಿನ್ನಿ, ಏಲಕ್ಕಿ ಮತ್ತು ಲವಂಗ ಎಲೆಯನ್ನು ನೀರಿಗೆ ಹಾಕಿ.

*ಈ ನೀರಿಗೆ ನೆನೆಸಿ ತೆಗೆದ ಅಕ್ಕಿಯನ್ನು ಹಾಕಿ ಹತ್ತು ನಿಮಿಷ ಕಾಲ ಬೇಯಿಸಿ. ಅಕ್ಕಿಯನ್ನು ಹೆಚ್ಚು ಬೇಯಿಸಿದರೆ ಅದು ಅಂಟಿಕೊಳ್ಳಬಹುದು. ಅಕ್ಕಿ ಬೆಂದ ಬಳಿಕ ನೀರು ಸೋಸಿಕೊಂಡು ಬದಿಗಿಡಿ.
*ಈಗ ತರಕಾರಿ ರಸವನ್ನು ತಯಾರಿಸುವುದು. ಒಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆಯನ್ನು ಬಿಸಿ ಮಾಡಿ. ಅದಕ್ಕೆ ಜೀರಿಗೆ ಕಾಳುಗಳನ್ನು ಹಾಕಿ.
*ಇನ್ನು ಜೀರಿಗೆ ಕಾಳುಗಳು ಸಿಡಿಯಲು ಆರಂಭಿಸಿದಾಗ ಅದಕ್ಕೆ ಕತ್ತರಿಸಿಕೊಂಡಿರುವ ಈರುಳ್ಳಿ ಹಾಕಿ. ಈರುಳ್ಳಿ ತಿಳಿಕಂದು ಬಣ್ಣಕ್ಕೆ ತಿರುಗುವ ತನಕ ಕರಿಯಿರಿ. ಬಳಿಕ ಶುಂಠಿ, ಬೆಳ್ಳುಳ್ಳಿ ಮತ್ತು ಹಸಿಮೆಣಸಿನ ಪೇಸ್ಟ್, ಅರಶಿನ, ಕೊತ್ತಂಬರಿ ಹುಡಿ, ಮೆಣಸಿನ ಹುಡಿ, ಗರಂ ಮಸಾಲ ಹುಡಿ ಮತ್ತು ಟೊಮೆಟೋ ಹಾಕಿ.
*ಮಸಾಲೆಯಲ್ಲಿ ಟೊಮೆಟೋ ಸರಿಯಾಗಿ ಬೇಯಲು ಬಿಡಿ. ಟೊಮೆಟೋ ಸರಿಯಾಗಿ ಬೇಯಲು ಎರಡು ಚಮಚ ನೀರು ಹಾಕಿಕೊಂಡು ಅದನ್ನು ಸರಿಯಾಗಿ ಬೇಯಿಸಿ.
*ಈಗ ಕತ್ತರಿಸಿಕೊಂಡಿರುವ ತರಕಾರಿ, ಪನ್ನೀರ್ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿಕೊಳ್ಳಿ. ಇದನ್ನು ಸರಿಯಾಗಿ ತಿರುಗಿಸಿ. ಈಗ ಹಾಲು ಹಾಕಿ ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ಸ್ವಲ್ಪ ಸಕ್ಕರೆ ಮತ್ತು ಕ್ರೀಮ್ ಹಾಕಿ ರಸ ದಪ್ಪ ಮಾಡಿಕೊಳ್ಳಿ.
*ರಸವು ದಪ್ಪ ಆದಾಗ ತರಕಾರಿ ಬೆಂದಿದೆ ಎಂದು ಹೇಳಬಹುದು. ಇದನ್ನು ತೆಗೆದು ಬದಿಗಿಟ್ಟ ಬಳಿಕ ಬೇಯಿಸಿದ ಅನ್ನವನ್ನು ಇದಕ್ಕೆ ಸೇರಿಸಿಕೊಳ್ಳಿ. ಇದಕ್ಕೆ ಮೊದಲು ಅನ್ನದ ಮಿಶ್ರಣ ಮಾಡಬೇಕು.
*ಮೊಸರು, ಕತ್ತರಿಸಿಕೊಂಡಿರುವ ಕೊತ್ತಂಬರಿ ಸೊಪ್ಪು ಮತ್ತು ಕೇಸರಿ ಬಣ್ಣವನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡು ಅನ್ನಕ್ಕೆ ಹಾಕಿಕೊಂಡು ಬೆರೆಸಿಕೊಳ್ಳಿ. ಸರಿಯಾಗಿ ಮಿಶ್ರಣ ಮಾಡಿದರೆ ಅರ್ಧ ಕೇಸರಿ ಮತ್ತು ಅರ್ಧ ಬಿಳಿ ಅನ್ನವು ಕಾಣಸಿಗುವುದು.
*ಒಂದು ದೊಡ್ಡ ಪಾತ್ರೆ ತೆಗೆದುಕೊಂಡು ತಯಾರಿಸಿದ ಅನ್ನದ ಪದರವನ್ನು ರಚಿಸಿ. ಮೇಲ್ಭಾಗದಲ್ಲಿ ನೀವು ತಯಾರಿಸಿದ ತರಕಾರಿ ರಸವನ್ನು ಹಾಕಿಕೊಳ್ಳಿ. ಇದನ್ನು ಸಮತಟ್ಟು ಮಾಡಿಕೊಂಡು ಅನ್ನದ ಮತ್ತೊಂದು ಪದರವನ್ನು ಅದರ ಮೇಲೆ ಹಾಕಿ. ಇದರ ಮೇಲೆ ಬೆಣ್ಣೆ ಅಥವಾ ಹಾಲು ಹಾಕಿ.
*ಪಾತ್ರೆಯನ್ನು ಸರಿಯಾಗಿ ಮುಚ್ಚಿಕೊಳ್ಳಿ. ಗ್ಯಾಸ್ ಮೇಲೆ ತವಾ ಇಟ್ಟು ಅದರ ಮೇಲೆ ಈ ಪಾತ್ರೆಯನ್ನು ಇಟ್ಟು ಬಿಡಿ. ಇದರಿಂದ ಬಿರಿಯಾನಿ ಸುಡುವುದಿಲ್ಲ. ಸುಮಾರು ಅರ್ಧ ಗಂಟೆ ಕಾಲ ಬಿರಿಯಾನಿಯನ್ನು ಬೇಯಿಸಿ ಬಳಿಕ ಬಡಿಸಿ.



Click it and Unblock the Notifications





