Latest Updates
-
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು -
ವರಮಹಾಲಕ್ಷ್ಮೀ ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆಯ ಬಿಸಿ: ಕೆ.ಆರ್. ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಹೂವು-ಹಣ್ಣುಗಳ ದರ -
BWF ವಿಶ್ವ ಚಾಂಪಿಯನ್ಷಿಪ್: ದೆಹಲಿಯಲ್ಲಿ ಭಾರತೀಯ ಆಟಗಾರರ ಅಬ್ಬರ, ಅಭಿಮಾನಿಗಳಿಗೆ ಇಲ್ಲಿದೆ ವಿಶೇಷ ಗೇಮ್ ಪ್ಲಾನ್! -
ವರಮಹಾಲಕ್ಷ್ಮಿ ಹಬ್ಬದ ದಿನಾಂಕದ ಗೊಂದಲ: ಆಗಸ್ಟ್ 21 ಅಥವಾ 28? ಇಲ್ಲಿದೆ ಸ್ಪಷ್ಟ ಮಾಹಿತಿ!
ಮೋದಕ ಪ್ರಿಯ, ಮುದ್ದು ಗಣೇಶನಿಗೆ ಅರ್ಪಿಸಿ ಮೊಸರನ್ನ!
ಹಿಂದೂಗಳಿಗೆ ಹಬ್ಬಗಳು ಪವಿತ್ರವಾದುದು ಮತ್ತು ಅವುಗಳ ಆಚರಣೆಗೂ ಮಹತ್ವತೆಯನ್ನು ನೀಡುತ್ತಾರೆ. ಧಾರ್ಮಿಕ ನಂಬಿಕೆಗಳಿಂದ ಕೂಡಿರುವ ಹಬ್ಬಗಳ ಆಚರಣೆಗೆ ಅದರದ್ದೇ ಆದ ನಿಯಮಾವಳಿಗಳಿರುತ್ತವೆ. ಹಬ್ಬಗಳ ಆಚರಣೆಯಲ್ಲಿ ನಿಷ್ಟೆ, ನಿಯಮಗಳು ಪ್ರಧಾನ ಪಾತ್ರವನ್ನು ವಹಿಸುವುದರಿಂದ ಹಬ್ಬಗಳನ್ನು ಆಚರಿಸುವಾಗ ತಿನಿಸಿನಿಂದ ಹಿಡಿದು ಪೂಜೆಯನ್ನು ನೆರವೇರಿಸುವ ವಿಧಾನವನ್ನು ಕೂಡ ಶ್ರದ್ಧೆ ಭಕ್ತಿಯಿಂದ ಮಾಡುತ್ತೇವೆ.
ದೇವರ ಕೃಪಾಕಟಾಕ್ಷಕ್ಕೆ ನಾವು ಪಾತ್ರರಾಗಬೇಕೆಂಬ ತುಡಿತದಿಂದಲೇ ಹಬ್ಬಗಳು ನಂಬಿಕೆಯ ಶ್ರದ್ಧಾ ಕೇಂದ್ರಗಳಾಗಿವೆ. ಸಿದ್ಧಿವಿನಾಯಕ, ಮೋದಕ ಪ್ರಿಯ, ಗಜಮುಖ, ಲಂಬೋದರ ಹೀಗೆ ವಿವಿಧ ನಾಮಧೇಯಗಳಿಂದ ಪ್ರಸಿದ್ಧನಾಗಿರುವ ವಿಘ್ನ ವಿನಾಶಕ ಗಣಪತಿ ಹಬ್ಬಕ್ಕೆ ಇನ್ನೇನು ಬೆರಳೆಣಿಕೆಯ ದಿನಗಳು ಮಾತ್ರ.
ವಿಘ್ನವನ್ನು ನಿವಾರಿಸುವ ವಿನಾಯಕನ ಚತುರ್ಥಿಯನ್ನು ನಾಡಿನಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ ಜೊತೆಗೆ ದೇವರನ್ನು ಸಂತೃಪ್ತಿಗೊಳಿಸುವ ಉದ್ದೇಶದಿಂದ ಘಮ ಘಮ ಪರಿಮಳದ ಅಡುಗೆಗಳೂ, ಖಾದ್ಯ, ಸಿಹಿತಿನಿಸುಗಳ ಭರಾಟೆ ಕೂಡ ಜೋರಾಗಿ ನಡೆಯುತ್ತವೆ, ಈ ನಿಟ್ಟಿನಲ್ಲಿ ಇಂದಿನ ಲೇಖನದಲ್ಲಿ ವಿಶೇಷ ಮೊಸರು ಅನ್ನ ಪಾಕ ವಿಧಾನವನ್ನು ನಾವು ಪ್ರಸ್ತುತಪಡಿಸುತ್ತಿದ್ದೇವೆ, ಮುಂದೆ ಓದಿ...
*ತಯಾರಿಕೆಗೆ ತಗುಲುವ ಸಮಯ: 5 ನಿಮಿಷ
*ಅಡುಗೆಗೆ ತಗುಲುವ ಸಮಯ: 15 ನಿಮಿಷ
ಬೇಕಾಗುವ ಪದಾರ್ಥಗಳು
*ಮೊಸರು - ½ ಕಪ್
*ಹಾಲು - ½ ಕಪ್
*ಬಾಸುಮತಿ ಅಕ್ಕಿ - 1 1/2 ಕಪ್ಗಳು
*ಈರುಳ್ಳಿ (ಕತ್ತರಿಸಿದಂತಹುದು) - 1 ಸಣ್ಣದು
*ಕರಿಬೇವು ಸೊಪ್ಪು - ಒಂದು ಹಿಡಿ
*ಸಾಸಿವೆ - ½ ಟೀ.ಚಮಚ
*ಜೀರಿಗೆ ಬೀಜಗಳು - ½ ಟೀ.ಚಮಚ
*ಕಡಲೆ ಬೇಳೆ / ಉದ್ದಿನ ಬೇಳೆ - ½ ಟೀ.ಚಮಚ
*ಜೀರಿಗೆ ಪುಡಿ - ½ ಟೀ.ಚಮಚ
*ಎಣ್ಣೆ - 1 ಟೀ.ಚಮಚ
*ಕತ್ತರಿಸಿದ ಕೆಂಪು ಒಣ ಮೆಣಸಿನಕಾಯಿ - 2
*ಹಸಿ ಮೆಣಸಿನಕಾಯಿ (ಎರಡು ಭಾಗಗಳಾಗಿ ಕತ್ತರಿಸಿ) - 2
*ಶುಂಠಿ (ಸಣ್ಣಗೆ ಕತ್ತರಿಸಿದಂತಹುದು) - 1 ಟೀ.ಚಮಚ
*ಕೊತ್ತಂಬರಿ ಸೊಪ್ಪು- ಅಲಂಕಾರಕ್ಕೆ
*ದಾಳಿಂಬೆ ಬೀಜ - ಒಂದು ಹಿಡಿ
*ರುಚಿಗೆ ತಕ್ಕಷ್ಟು ಉಪ್ಪು
ತಯಾರಿಸುವ ವಿಧಾನ
1. ಒಗ್ಗರೆಣ್ಣೆಗೆ: ಒಂದು ದಪ್ಪ ತಳವಿರುವ ಪಾತ್ರೆಯನ್ನು ತೆಗೆದುಕೊಳ್ಳಿ. ಇದನ್ನು ಚೆನ್ನಾಗಿ ಕಾಯಿಸಿ, ಅದರಲ್ಲಿ ಕರಿಬೇವು ಸೊಪ್ಪನ್ನು ಹಾಕಿ. ಇದು ಕರಿಯಲ್ಪಟ್ಟಾಗ, ಅದಕ್ಕೆ ಸ್ವಲ್ಪ ಎಣ್ಣೆಯನ್ನು ಹಾಕಿ. ಇದು ಸೀದು ಹೋಗದಂತೆ ಅಗಾಗ ಅದನ್ನು ತಿರುವಿಕೊಡಿ.
2. ಸಾಸಿವೆ ಬೀಜಗಳನ್ನು, ಕೆಂಪು ಮೆಣಸಿನಕಾಯಿ, ಜೀರಿಗೆ, ಕಡಲೆ ಬೇಳೆ/ಉದ್ದಿನ ಬೇಳೆ, ಶುಂಠಿ ಮತ್ತು ಹಸಿಮೆಣಸಿನಕಾಯಿಯನ್ನು ಹಾಕಿ, ಒಂದು ನಿಮಿಷ ಉರಿಯಿರಿ. ನಂತರ ಇದಕ್ಕೆ ಈರುಳ್ಳಿಯನ್ನು ಹಾಕಿ ಚೆನ್ನಾಗಿ ಹುರಿಯಿರಿ.
3. ಕುಕ್ಕರಿನಲ್ಲಿ ಅಕ್ಕಿಯನ್ನು ತೊಳೆದು ಹಾಕಿ, ಚೆನ್ನಾಗಿ ಬೇಯಿಸಿ. ಎರಡು ವಿಷಲ್ ಬರುವವರೆಗೆ ಬಿಡಿ. ಇದು ಹೆಚ್ಚು ಬೇಯದೆ ಇರುವಂತೆ ಜಾಗರೂಕತೆಯನ್ನು ವಹಿಸಿ. ಇದಕ್ಕೆ ಉಪ್ಪನ್ನು ಬೆರೆಸಿ ತಣ್ಣಗಾಗಲು ಬಿಡಿ. ಇದಕ್ಕೆ ಅಗತ್ಯವಾಗಿರುವಷ್ಟು ಹಾಲನ್ನು ಹಾಕಿ, ತುಂಬಾ ನೀರು ನೀರಿನಂತೆ ಆಗಲು ಬಿಡಬೇಡಿ.
4. ಮೊಸರನ್ನು ಕಡೆಯಿರಿ. ಆ ಮೊಸರನ್ನು ಅನ್ನದ ಮೇಲೆ ಹಾಕಿ, ಕಲೆಸಿಕೊಡಿ.
5. ಅನ್ನಕ್ಕೆ ಒಗ್ಗರೆಣ್ಣೆಯನ್ನು ಬೆರೆಸಿ. ಚೆನ್ನಾಗಿ ಮಿಶ್ರಣ ಮಾಡಿ. ಇದರ ಮೇಲೆ ದಾಳಿಂಬೆ ಬೀಜ ಮತ್ತು ಕೊತ್ತಂಬರಿ ಸೊಪ್ಪಿನಿಂದ ಅಲಂಕಾರ ಮಾಡಿ. ಅದರ ಮೇಲೆ ಜೀರಿಗೆ ಪುಡಿಯನ್ನು ಚಿಮುಕಿಸಿ. ಈಗ ನಿಮ್ಮ ಮುಂದೆ ರುಚಿಕರವಾದ ಮೊಸರನ್ನ ತಯಾರಾಗಿರುತ್ತದೆ.



Click it and Unblock the Notifications