Latest Updates
-
ವಿಶ್ವ ಸಂಗೀತ ದಿನ: ಸಂಗಾತಿಯೊಂದಿಗೆ ಮರೆಯಲಾಗದ ಕ್ಷಣ ಕಳೆಯಲು ಇಲ್ಲಿದೆ ಸಿಂಪಲ್ ಪ್ಲಾನ್! -
ಮುಂಬೈನಲ್ಲಿ ತೀವ್ರ ನೀರಿನ ಅಭಾವ: ಬಿಎಂಸಿ ಕಠಿಣ ನಿಯಮಗಳ ನಡುವೆ ನೀರು ಉಳಿಸಲು ಈ ಟಿಪ್ಸ್ ಪಾಲಿಸಿ -
ಮಳೆಗಾಲದಲ್ಲಿ ಸಿಕಲ್ ಸೆಲ್ ಸಮಸ್ಯೆ: ಆರೋಗ್ಯ ಕಾಪಾಡಲು ಈ ಆಹಾರ ಕ್ರಮ ಪಾಲಿಸಿ, ನೋವು ದೂರವಿಡಿ! -
ಟೆಲಿಗ್ರಾಂ ಬ್ಯಾನ್: ಜೂನ್ 22ರವರೆಗೆ ಈ ಆಪ್ಗಳನ್ನು ಬಳಸಿ, ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ! -
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ!
ಹಿತಕವರೆಬೇಳೆ ಹುಳಿ
ಈಗ ಅವರೆಕಾಯಿ ಕಾಲ. ಯಾವುದೇ ಮಾರುಕಟ್ಟೆಗೆ ಹೋದರೂ ತಾಜಾತಾಜಾ ಅವರೆಕಾಯಿ ಕಣ್ಣಿಗೆ ರಾಚುತ್ತದೆ. ಕೊಳ್ಳಲು ಹೋದರೆ ಕೈಸುಡುವ ಬೆಲೆ. ಏನ್ಮಾಡಕ್ಕಾಗುತ್ತದೆ ವಾತಾವರಣದ ಏರುಪೇರುಗಳು ಬೆಳೆಗೆ ಕಂಟಕವಾಗಿ ಅವರೆಕಾಯಿ ಇಳುವರಿ ಈ ಬಾರಿ ಕಡಿಮೆ. ಹಾಗಾಗಿ ಬೆಲೆ ಹೆಚ್ಚು. ಬೆಲೆ ಹೆಚ್ಚಾದರೂ ಹಿತಕವರೆ ತಿನ್ನದಿರಲು ಮನಸು ಒಪ್ಪಬೇಕಲ್ಲಾ. ಸಾಲದ್ದಕ್ಕೆ ಬೀದಿಗಳಲ್ಲಿ ಓಡಾಡಿದರೆ ಘಂ ಎನ್ನುವ ಹಿತಕವರೆ ಘಮಲು ಮೂಗಿಗೆ ಅಡರುತ್ತಿರುತ್ತದೆ. ಮುಂದೆ ಉಳಿದಿರುವ ದಾರಿ ಎಂದರೆ ರುಚಿಕಟ್ಟಾದ ಹಿತಕರೆ ಮಾಡಿ ತಿನ್ನುವುದು! ಇದರ ಜತೆಗೆ ರಾಗಿಮುದ್ದೆ ಇದ್ದರೆ ಫಸಂದಾಗಿರುತ್ತೆ.
ಬೇಕಾಗುವ ಪದಾರ್ಥಗಳು :
ಹಿತಕವರೆ : ಎರಡು ಲೋಟ
ಉದ್ದಿನಬೇಳೆ :1 ಟೀ ಚಮಚ
ಮೆಣಸು : 10 ರಿಂದ 12 ಕಾಳು
ಸಾರಿನಪುಡಿ :1 ಟೀ ಚಮಚ
ತೆಂಗಿನಕಾಯಿ ತುರಿ : 1 ಬಟ್ಟಲು
ಎಣ್ಣೆ : ಒಂದೂವರೆ ಟೀ ಚಮಚ
ಸಾಸಿವೆ, ಕರಿಬೇವು : ಒಗ್ಗರಣೆಗೆ
ಉಪ್ಪು : ರುಚಿಗೆ ತಕ್ಕಷ್ಟು
ಕೊತ್ತಂಬರಿ ಸೊಪ್ಪು : ಒಂದು ಹಿಡಿ
ಮಾಡುವ ವಿಧಾನ:
ಮೊದಲು ಬಿಡಿಸಿಟ್ಟು ಕೊಂಡ ಅವರೆಕಾಳನ್ನು ನೀರಿನಲ್ಲಿ 5 ರಿಂದ 6 ಗಂಟೆಗಳ ಕಾಲ ನೆನೆಸಿಡಿ. ಹೀಗೆ ಮಾಡುವುದರಿಂದ ಅವರೆಕಾಳನ್ನು ಸುಲಭವಾಗಿ ಹಿಚುಕಬಹುದು. ಈಗ ಅವರೆಕಾಳನ್ನು ಹಿಚುಕಿಟ್ಟುಕೊಳ್ಳಿ.
ಉದ್ದಿನಬೇಳೆಯನ್ನು ಬಾಣಲೆಗೆ ಹಾಕಿ ಹೊಂಬಣ್ಣಕ್ಕೆ ಹುರಿದುಕೊಳ್ಳಿ. ಮೆಣಸನ್ನು ಕೂಡಾ ಇದೇ ರೀತಿ ಚಿಟಗುಟ್ಟುವವರೆಗೂ ಹುರಿಯಿರಿ. ಬಾಣಲೆಯನ್ನು ಇಳಿಸಿ, ತಣ್ಣಗಾದ ನಂತರ ಎರಡನ್ನು ಪುಡಿಮಾಡಿಕೊಳ್ಳಿ. ಈ ಪುಡಿಗೆ ಸಾರಿನಪುಡಿ, ತೆಂಗಿನತುರಿ, ಉಪ್ಪು, ಇಂಗು ಸ್ವಲ್ಪ ನೀರನ್ನು ಹಾಕಿ ಚಟ್ನಿಯ ಹದಕ್ಕೆ ರುಬ್ಬಿಕೊಳ್ಳಿ.
ಈಗ ಹಿತಕವರೆಯನ್ನು ನೀರಿಗೆ ಹಾಕಿ. ಸುಮಾರು ಹದಿನೈದು ನಿಮಿಷ ಬೇಯಿಸಿ. ಹಿತಕವರೆ ಬೆಂದ ಮೇಲೆ ರುಬ್ಬಿದ ಮಸಾಲೆಯನ್ನು ಹಾಕಿ ಚೆನ್ನಾಗಿ ಕುದಿಸಿ. ಆಗಾಗ ಸೌಟಿನಿಂದ ಕದಡುತ್ತಿರಿ. ಚೆನ್ನಾಗಿ ಬೆಂದ ನಂತರ ಒಗ್ಗರಣೆ ಹಾಕಿ. ರುಚಿಕಟ್ಟಾದ ಹಿತಕವರೆ ಹುಳೀ ಸಿದ್ಧವಾದಂತೆ.
(ದಟ್ಸ್ಕನ್ನಡ ಪಾಕಶಾಲೆ)



Click it and Unblock the Notifications