Just In
- 48 min ago 2024 ಏಪ್ರಿಲ್ ತಿಂಗಳ ರಾಶಿಫಲ: 12 ರಾಶಿಗಳ ವೃತ್ತಿ, ಆರ್ಥಿಕ, ಸಂಬಂಧ, ಆರೋಗ್ಯ ಭವಿಷ್ಯ
- 1 hr ago ಕಂಡ ಕಂಡಲ್ಲಿ ಏಕೆ ಉಗುಳಬಾರದು ಗೊತ್ತಾ? ಈ ವಿಡಿಯೋ ನೋಡಿ..!
- 3 hrs ago ವಿಭಿನ್ನ ಶೈಲಿಯಲ್ಲಿ ಮೊಟ್ಟೆ ಸಾಂಬಾರ್ ಮಾಡಿ..! ಇಲ್ಲಿದೆ ಸಿಂಪಲ್ ಅಡುಗೆ
- 5 hrs ago ವಿಶ್ವದಲ್ಲೇ ಅತೀ ಹೆಚ್ಚು ಬಾರಿ ಚುನಾವಣೆ ಸೋತ ವ್ಯಕ್ತಿ..! ಯಾರು ಈ ಸೋಲುವ ಸರದಾರ ಗೊತ್ತಾ?
Don't Miss
- News ಕುಡಿಯುವ ನೀರಿಲ್ಲದೇ ಜನ ಬೆಂಗಳೂರಿಗೆ ಬಾಯ್ ಹೇಳುತ್ತಿದ್ದಾರೆ: ಆರ್.ಅಶೋಕ್
- Sports ರೋಹಿತ್ vs ಹಾರ್ದಿಕ್: ಸತತ ಸೋಲಿನ ನಡುವೆಯೇ ಮುಂಬೈ ಇಂಡಿಯನ್ಸ್ ಇಬ್ಭಾಗ!?
- Movies Puttakkana Makkalu:ಈ ಬಾರಿ ಸಹನಾ ಹೊಗಳಿದ ಅಭಿಮಾನಿಗಳು: ಪುಟ್ಟಕ್ಕನ ನಡವಳಿಕೆಗೆ ಫ್ಯಾನ್ಸ್ ಬೇಸರ
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹಿತಕವರೆಬೇಳೆ ಹುಳಿ
ಈಗ ಅವರೆಕಾಯಿ ಕಾಲ. ಯಾವುದೇ ಮಾರುಕಟ್ಟೆಗೆ ಹೋದರೂ ತಾಜಾತಾಜಾ ಅವರೆಕಾಯಿ ಕಣ್ಣಿಗೆ ರಾಚುತ್ತದೆ. ಕೊಳ್ಳಲು ಹೋದರೆ ಕೈಸುಡುವ ಬೆಲೆ. ಏನ್ಮಾಡಕ್ಕಾಗುತ್ತದೆ ವಾತಾವರಣದ ಏರುಪೇರುಗಳು ಬೆಳೆಗೆ ಕಂಟಕವಾಗಿ ಅವರೆಕಾಯಿ ಇಳುವರಿ ಈ ಬಾರಿ ಕಡಿಮೆ. ಹಾಗಾಗಿ ಬೆಲೆ ಹೆಚ್ಚು. ಬೆಲೆ ಹೆಚ್ಚಾದರೂ ಹಿತಕವರೆ ತಿನ್ನದಿರಲು ಮನಸು ಒಪ್ಪಬೇಕಲ್ಲಾ. ಸಾಲದ್ದಕ್ಕೆ ಬೀದಿಗಳಲ್ಲಿ ಓಡಾಡಿದರೆ ಘಂ ಎನ್ನುವ ಹಿತಕವರೆ ಘಮಲು ಮೂಗಿಗೆ ಅಡರುತ್ತಿರುತ್ತದೆ. ಮುಂದೆ ಉಳಿದಿರುವ ದಾರಿ ಎಂದರೆ ರುಚಿಕಟ್ಟಾದ ಹಿತಕರೆ ಮಾಡಿ ತಿನ್ನುವುದು! ಇದರ ಜತೆಗೆ ರಾಗಿಮುದ್ದೆ ಇದ್ದರೆ ಫಸಂದಾಗಿರುತ್ತೆ.
ಬೇಕಾಗುವ ಪದಾರ್ಥಗಳು :
ಹಿತಕವರೆ
:
ಎರಡು
ಲೋಟ
ಉದ್ದಿನಬೇಳೆ
:1
ಟೀ
ಚಮಚ
ಮೆಣಸು
:
10
ರಿಂದ
12
ಕಾಳು
ಸಾರಿನಪುಡಿ
:1
ಟೀ
ಚಮಚ
ತೆಂಗಿನಕಾಯಿ
ತುರಿ
:
1
ಬಟ್ಟಲು
ಎಣ್ಣೆ
:
ಒಂದೂವರೆ
ಟೀ
ಚಮಚ
ಸಾಸಿವೆ,
ಕರಿಬೇವು
:
ಒಗ್ಗರಣೆಗೆ
ಉಪ್ಪು
:
ರುಚಿಗೆ
ತಕ್ಕಷ್ಟು
ಕೊತ್ತಂಬರಿ
ಸೊಪ್ಪು
:
ಒಂದು
ಹಿಡಿ
ಮಾಡುವ ವಿಧಾನ:
ಮೊದಲು ಬಿಡಿಸಿಟ್ಟು ಕೊಂಡ ಅವರೆಕಾಳನ್ನು ನೀರಿನಲ್ಲಿ 5 ರಿಂದ 6 ಗಂಟೆಗಳ ಕಾಲ ನೆನೆಸಿಡಿ. ಹೀಗೆ ಮಾಡುವುದರಿಂದ ಅವರೆಕಾಳನ್ನು ಸುಲಭವಾಗಿ ಹಿಚುಕಬಹುದು. ಈಗ ಅವರೆಕಾಳನ್ನು ಹಿಚುಕಿಟ್ಟುಕೊಳ್ಳಿ.
ಉದ್ದಿನಬೇಳೆಯನ್ನು ಬಾಣಲೆಗೆ ಹಾಕಿ ಹೊಂಬಣ್ಣಕ್ಕೆ ಹುರಿದುಕೊಳ್ಳಿ. ಮೆಣಸನ್ನು ಕೂಡಾ ಇದೇ ರೀತಿ ಚಿಟಗುಟ್ಟುವವರೆಗೂ ಹುರಿಯಿರಿ. ಬಾಣಲೆಯನ್ನು ಇಳಿಸಿ, ತಣ್ಣಗಾದ ನಂತರ ಎರಡನ್ನು ಪುಡಿಮಾಡಿಕೊಳ್ಳಿ. ಈ ಪುಡಿಗೆ ಸಾರಿನಪುಡಿ, ತೆಂಗಿನತುರಿ, ಉಪ್ಪು, ಇಂಗು ಸ್ವಲ್ಪ ನೀರನ್ನು ಹಾಕಿ ಚಟ್ನಿಯ ಹದಕ್ಕೆ ರುಬ್ಬಿಕೊಳ್ಳಿ.
ಈಗ ಹಿತಕವರೆಯನ್ನು ನೀರಿಗೆ ಹಾಕಿ. ಸುಮಾರು ಹದಿನೈದು ನಿಮಿಷ ಬೇಯಿಸಿ. ಹಿತಕವರೆ ಬೆಂದ ಮೇಲೆ ರುಬ್ಬಿದ ಮಸಾಲೆಯನ್ನು ಹಾಕಿ ಚೆನ್ನಾಗಿ ಕುದಿಸಿ. ಆಗಾಗ ಸೌಟಿನಿಂದ ಕದಡುತ್ತಿರಿ. ಚೆನ್ನಾಗಿ ಬೆಂದ ನಂತರ ಒಗ್ಗರಣೆ ಹಾಕಿ. ರುಚಿಕಟ್ಟಾದ ಹಿತಕವರೆ ಹುಳೀ ಸಿದ್ಧವಾದಂತೆ.
(ದಟ್ಸ್ಕನ್ನಡ ಪಾಕಶಾಲೆ)