Latest Updates
-
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ನೀಟ್ ಮರುಪರೀಕ್ಷೆ: ಅಡ್ಮಿಟ್ ಕಾರ್ಡ್ ಬಿಡುಗಡೆ, ಪರೀಕ್ಷೆಗೆ ಹೋಗುವ ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೇ ಮಾಡಬೇಕಾದ ಕೆಲಸಗಳಿವು! -
ಮಳೆಗಾಲದ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವೇ? ಸೋರಿಕೆ ಮತ್ತು ಹಾನಿ ತಪ್ಪಿಸಲು ಈ ಸರಳ ಟಿಪ್ಸ್ ಪಾಲಿಸಿ -
ಸುಡುವ ಬಿಸಿಲಿಗೆ ಹವಾಮಾನ ಇಲಾಖೆ ಎಚ್ಚರಿಕೆ: ದೇಹ ತಂಪಾಗಿಡಲು ಈ ಪಾನೀಯಗಳೇ ರಾಮಬಾಣ! -
ಲಕ್ನೋದಲ್ಲಿ ಭಾರತ-ಅಫ್ಘಾನಿಸ್ತಾನ ಹೈ-ವೋಲ್ಟೇಜ್ ಕದನ: ಪಂದ್ಯದ ಮಜಾ ಸವಿಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ!
ಫಲಾಮೃತವ ಸವಿದು ತಣ್ಣಗಿರಿ!

ಭಕ್ತ ಸಿರಿಯಾಳನಂತೆ, ಬೇಡರ ಕಣ್ಣಪ್ಪನಂತೆ ನೇಮನಿಷ್ಠೆಯನ್ನು ಕೈಕಂಕರ್ಯವೆಂದು ಭಾವಿಸುವವನಾದರೆ ಅಹೋರಾತ್ರಿ ನಾಲಕ್ಕು ಯಾಮದ ಪೂಜೆ. ರುದ್ರಾಭಿಷೇಕ, ಮಹಾರುದ್ರ ಪಠಣ. ಅನೇಕರಿಗೆ ಇಂದು ನಿಟ್ಟುಪವಾಸದ ದಿನಕೂಡ. ಕೆಲವರಿಗೆ ಪಾನಕ, ಕೋಸಂಬರಿ, ಹಣ್ಣು ಹಂಪಲಗಳೇ ಆಹಾರ.
ಇಂಥ ದಿವಸ ನಿಮಗೊಂದು ಫಲಾಹಾರ ಅರ್ಥಾತ್ ಫಲಾಮೃತವನ್ನು ಉಣಿಸಬೇಕೆಂಬ ಆಸೆ ನಮ್ಮದು. ಫಲಾಮೃತ ತಯಾರಿಸುವ ಬಗೆಯನ್ನು ಬೆಂಗಳೂರಿನ ಅಂಜಲಿ ರಾಮಣ್ಣ ವಿವರಿಸಿದ್ದು, ಆಬಾಲವೃದ್ಧರಿಗೂ ಸಲ್ಲುವ ಹಣ್ಣಿನ ಜೀವರಸವನ್ನು ಇಂದು ತಯಾರಿಸಿ ಮನೆ-ನೆರೆಮನೆ ಮಕ್ಕಳಿಗೆ ಕೊಡುವವರಂಥವರಾಗಿರಿ. ನೀವೂ ಸೇವಿಸಿ ತಣ್ಣಗಿರಿ, ಈ ಬೆಸಗೆಯಲ್ಲಿ. ಶಿವ ನಿಮಗೊಲಿದಾನು. ಅದೇಕೆ ಒಲಿಯನು?- ಸಂಪಾದಕ)
ಫಲಾಮೃತ ಮಾಡೋದು ಎಷ್ಟು ಸುಲಭ ಗೊತ್ತಾ...
ಕಲ್ಲಂಗಡಿ ಹಣ್ಣಿನ ಹೋಳುಗಳು 4 ಕಪ್
ಕರಬೂಜ ಹಣ್ಣಿನ ಹೋಳುಗಳು 3 ಕಪ್
ಚಿಕ್ಕದಾದ ಸಪೋಟ ಹಣ್ಣುಗಳು 2 ಅಥವಾ 3
ಕಳಿತ ಏಲಕ್ಕಿ ಬಾಳೆಹಣ್ಣು 2 ಅಥವಾ 3
ಚಿಕ್ಕದಾದ (ಸಿಪ್ಪೆ ಬಿಡಿಸಿದ) ಕಿತ್ತಲೆ ಹಣ್ಣು 2 ಅಥವಾ 3
ನಿಂಬೇಹಣ್ಣಿನ ರಸ 1 ಸ್ಪೂನ್
ಬಿಡಿಸಿದ ಪುದಿನಾ ಸೊಪ್ಪು 1/2 ಕಪ್
ರುಚಿಗೆ ಬೇಕಾದಷ್ಟು (ಬೇಕಿದ್ದರೆ) ಸಕ್ಕರೆ, ಒಂದು ಚಿಟಿಕೆ ಉಪ್ಪು, ಒಂದು ಸ್ಪೂನ್ ಚ್ಯಾಟ್ ಮಸಾಲ ಪುಡಿ
ವಿಧಾನ : ಎಲ್ಲ ಸಾಮಾನನ್ನು ಮಿಕ್ಸಿಗೆ ಹಾಕಿ ಜೂಸ್ ಮಾಡಿ, ಸೋಸಿಡುವುದು. ಆಗ ಮಾಡಿ ಆಗಲೇ ಉಪಯೋಗಿಸಿದರೆ ಒಳಿತು.



Click it and Unblock the Notifications