Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಮಧುಮೇಹಿಗಳಿಗೆ ಉತ್ತಮ ಈ ದಾಲ್ ಕಬಿಲ
ಮಧುಮೇಹ ನಿಮ್ಮನ್ನು ತಿನ್ನಬಯಸುವ ಆಹಾರಗಳಿಂದ ದೂರವಿಡುತ್ತದೆ. ಅದರರ್ಥ ನೀವು ನಿಮ್ಮಿಷ್ಟದ ಆಹಾರ ತಿನ್ನಲೇ ಬಾರದು ಎಂದಲ್ಲ. ನಾವಿಲ್ಲಿ ನಿಮ್ಮ ಆರೋಗ್ಯ ಮತ್ತು ರುಚಿ ಎರಡಕ್ಕೂ ಹೊಂದುವಂತಹ ಹೊಸ ರೆಸಿಪಿಯನ್ನು ಇಂದು ನಿಮ್ಮ ಮುಂದೆ ಇಡುತ್ತಿದ್ದೇವೆ.
ಮಧುಮೇಹಿಗಳಿಗಾಗಿಯೇ ಈ ವಿಶೇಷ ರೆಸಿಪಿ ದಾಲ್ ಕಬಿಲ. ಇದು ಮೊಘಲರ ಆಹಾರ ಶೈಲಿಗೆ ಸಂಬಂಧಿಸಿದ್ದು. ಇದನ್ನು ಮಧುಮೇಹಿಗಳ ಅಗತ್ಯಕ್ಕೆ ತಕ್ಕಂತೆ ಸಿದ್ಧಪಡಿಸಲಾಗಿದೆ. ಇದಕ್ಕೆ ಕಡಿಮೆ ಮಸಾಲೆ ಪದಾರ್ಥ ಮತ್ತು ಕಡಿಮೆ ಬೇಳೆಯನ್ನು ಬಳಸುವುದರಿಂದ ಮಧುಮೇಹಿಗಳು ಯಾವುದೇ ಆತಂಕವಿಲ್ಲದೆ ಸವಿಯಬಹುದು. ಹಾಗಿದ್ದರೆ ಒಮ್ಮೆ ಮಾಡಿ ರುಚಿ ನೋಡಿ.

ಬೇಕಾಗುವ ಸಾಮಗ್ರಿಗಳು
1. ಉದ್ದಿನ ಬೇಳೆ- 1 ಕಪ್
2. ದಾಲ್ಚಿನ್ನಿ- 1
3. ಲವಂಗ- 2
4. ಒಣಮೆಣಸಿನಕಾಯಿ- 1
5. ಶುಂಠಿ- ಬೆಳ್ಳುಳ್ಳಿ ಪೇಸ್ಟ್- 1 ಟೀಚಮಚ
6. ಟೊಮೊಟೊ- 2 (ಕತ್ತರಿಸಿಟ್ಟುಕೊಳ್ಳಿ)
7. ಅರಿಶಿಣ ಪುಡಿ- 1 ಟೀಚಮಚ
8. ಅಚ್ಚಖಾರದ ಪುಡಿ- 1/2 ಟೀಚಮಚ
9. ಧನಿಯ ಪುಡಿ- 2 ಟೀಚಮಚ
10. ಗರಂ ಮಸಾಲ ಪುಡಿ- 1/2 ಟೀಚಮಚ
11. ನಿಂಬೆ ರಸ- 2 ಟೀಚಮಚ
12. ಜೀರಿಗೆ- 1 ಟೀ ಚಮಚ
13. ಉಪ್ಪು- ರುಚಿಗೆ ತಕ್ಕಷ್ಟು
14. ಎಣ್ಣೆ- 1 ಟೀ ಚಮಚ
15. ನೀರು- 2 ಕಪ್
16. ಕೊತ್ತಂಬರಿಸೊಪ್ಪು- ಸ್ವಲ್ಪ (ಸಣ್ಣಗೆ ಹೆಚ್ಚಿಕೊಳ್ಳಿ)
ಮಾಡುವ ವಿಧಾನ
1. ಉದ್ದಿನ ಬೇಳೆಯನ್ನು 4 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ.
2. ನಂತರ ನೀರನ್ನು ಸೋಸಿ ಕುಕ್ಕರಿನಲ್ಲಿ ಹಾಕಿ ನೀರು ಮತ್ತು ಉಪ್ಪಿನೊಂದಿಗೆ ಬೇಯಲು ಇಡಿ. 2 ಕೂಗಿಗೆ ಕುಕ್ಕರ್ ಇಳಿಸಿ.
3. ಬಾಣಲಿಯಲ್ಲಿ ಎಣ್ಣೆ ಹಾಕಿ ಕಾಯಿಸಿಕೊಂಡು ಅದಕ್ಕೆ ದಾಲ್ಚಿನ್ನಿ, ಲವಂಗ, ಏಲಕ್ಕಿ, ಜೀರಿಗೆ ಹಾಕಿ ಸ್ವಲ್ಪ ಹುರಿದುಕೊಳ್ಳಿ.
4. ಅದಕ್ಕೆ ಒಣಮೆಣಸಿನಕಾಯಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ 2 ನಿಮಿಷ ಸಣ್ಣ ಉರಿಯಲ್ಲಿ ಬೇಯಲು ಬಿಡಿ.
5. ನಂತರ ಹೆಚ್ಚಿದ ಟೊಮೊಟೊ, ಧನಿಯ ಪುಡಿ, ಅರಿಶಿಣ ಪುಡಿ, ಅಚ್ಚಖಾರದ ಪುಡಿ, ಗರಂ ಮಸಾಲ ಪುಡಿ, ಉಪ್ಪು ಹಾಕಿ 4-5 ನಿಮಿಷಗಳ ಕಾಲ ಬೇಯಿಸಿ.
6. ಈಗ ಅದಕ್ಕೆ ಉದ್ದಿನ ಬೇಳೆ ಮತ್ತು ನಿಂಬೆ ರಸ ಸೇರಿಸಿ ಎಲ್ಲವನ್ನೂ ಚೆನ್ನಾಗಿ ಕಲಸಿ 5 ನಿಮಿಷಗಳವರೆಗೆ ಸಣ್ಣ ಉರಿಯಲ್ಲಿ ಬೇಯಿಸಿ. ನಂತರ ಅದಕ್ಕೆ ಕೊತ್ತಂಬರಿ ಸೊಪ್ಪನ್ನು ಸೇರಿಸಿ ಬಡಿಸಿ.
ದಾಲ್ ಕಬಿಲವನ್ನು ರೋಟಿಯೊಂದಿಗೆ ಸವಿಯಲು ರುಚಿಕರವಾಗಿರುತ್ತದೆ.



Click it and Unblock the Notifications