Just In
- 25 min ago ರುಚಿ ರುಚಿಯ ಸ್ಪೆಷಲ್ ಅಂಬೂರ್ ಬಿರಿಯಾನಿ ಮಾಡಿ ನೋಡಿ..! ಇಲ್ಲಿದೆ ರೆಸಿಪಿ
- 1 hr ago ಹನುಮಂತನ ಪವಾಡ: ಈ ದೇವಾಲಯದಲ್ಲಿ ಹನುಮಾನ್ ಮೂರ್ತಿ ವರ್ಷದಿಂದ ವರ್ಷಕ್ಕೆ ಎತ್ತರ ಬೆಳೆಯುತ್ತಿದೆ!
- 3 hrs ago ತಾವರೆಯ ಬೀಜವನ್ನು ಹಾಲಿನ ಜೊತೆ ಸೇವಿಸಿದರೆ ಇಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?
- 3 hrs ago ಗಂಡು ಎಂದು ಸಾಕಿದ್ದ ನೀರು ಕುದುರೆ 7 ವರ್ಷದ ಬಳಿಕ ಹೆಣ್ಣಾಗಿತ್ತು..! ಝೂನಲ್ಲಿ ಅಚ್ಚರಿ..!
Don't Miss
- News ಬೆಂಗಳೂರು ಗ್ರಾಮಾಂತರ ಕ್ಷೇತ್ರವನ್ನೇ ಗುರಿಯಾಗಿಸಿ ಐಟಿ ದಾಳಿ : ಡಿ ಕೆ ಶಿವಕುಮಾರ್ ಏನಂದ್ರು?
- Technology Poco: ವಿಶೇಷ ಟ್ಯಾಬ್ಲೆಟ್ ಲಾಂಚ್ ಮಾಡಲು ಸಿದ್ಧವಾಗ್ತಿದೆ ಪೊಕೊ! ಸಖತ್ ಸ್ಟೈಲಿಶ್..
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Automobiles ಪ್ರಸಿದ್ಧ ಪುಣ್ಯಕ್ಷೇತ್ರ ಶೃಂಗೇರಿ ಶಾರದಾಂಬಾ ದರ್ಶನಕ್ಕೆ ತೆರಳಬೇಕೇ.. ಹಾಗಾದರೆ ಈ ಸ್ಟೋರಿ ನೋಡಿ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Movies ತಮನ್ನಾ ಪಾಲಿಗೆ 'ದುಬಾರಿ' ಆಯಿತು 'ಪ್ರಚಾರ' ; ಮಿಲ್ಕಿ ಬ್ಯೂಟಿಯನ್ನ ವಿಚಾರಣೆಗೆ ಕರೆದ ಸೈಬರ್ ಇಲಾಖೆ..!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಉಪ್ಪು ರುಚಿಗಷ್ಟೇ ಅಲ್ಲ, ಶುಚಿಗೂ ಬೇಕು!
ಉಪ್ಪಿಗಿಂತ ರುಚಿ ಬೇರೇಯಿಲ್ಲ.. ಹೌದು ಉಪ್ಪಿನ ಮಹತ್ವ ದೊಡ್ಡದು. ಅಡುಗೆ ಜೊತೆಗೆ ಉಪ್ಪಿನ ಇತರೆ ಉಪಯೋಗಗಳನ್ನು ಇಲ್ಲಿ ನೋಡೋಣ. ಈ ಸಲಹೆಗಳು ನಿಮಗೆ ಪ್ರಯೋಜನಕ್ಕೆ ಬರಬಹುದು.
- ಡಿ.ಜಿ.ರಾಜಲಕ್ಷ್ಮಿ
1. ಪಾತ್ರೆಗಳ ಮೇಲೆ ಟೀ ಮತ್ತು ಕಾಫಿ ಕರೆಗಳಿದ್ದರೆ ಸ್ವಲ್ಪ ಉಪ್ಪಿನಿಂದ ಉಜ್ಜಿ, ಕೆಲವು ನಿಮಿಷಗಳ ನಂತರ ತೊಳೆಯಬೇಕು.
2. ಮೊಟ್ಟೆ ಕೆಟ್ಟಿದೆಯೇ ಅಥವಾ ಉತ್ತಮವಾಗಿದೆಯೇ ಎಂಬುದನ್ನು ತಿಳಿಯಬೇಕಾದರೆ ಅದನ್ನು ಉಪ್ಪು ನೀರಿಗೆ ಹಾಕಬೇಕು. ಉತ್ತಮ ಮೊಟ್ಟೆ ಮುಳುಗುತ್ತದೆ. ಕೆಟ್ಟ ಮೊಟ್ಟೆ ತೇಲುತ್ತದೆ.
3. ಕಪ್ಪಗಾಗಿರುವ ತಾಮ್ರ, ಕಂಚು. ಹಿತ್ತಾಳೆ ಪಾತ್ರೆಗಳನ್ನು ಉಪ್ಪು ಮತ್ತು ಹುಣಸೆ ಹಣ್ಣು ಅಥವಾ ಉಪ್ಪು ಮತ್ತು ನಿಂಬೇರಸ ಹಾಕಿ ತೊಳೆದರೆ ಪಾತ್ರೆಗಳ ಹೊಳಪು ಹೆಚ್ಚುತ್ತದೆ.
4. ಉಪ್ಪು ಮತ್ತು ಅಡುಗೆ ಸೋಡಾ ಸಮಪ್ರಮಾಣದಲ್ಲಿ ಬೆರೆಸಿ ಹಲ್ಲುಜ್ಜಿದರೆ ಹಲ್ಲುಗಳು ಹೊಳಪು ಪಡೆಯುತ್ತವೆ.
5. ಮಿಕ್ಸಿಯ ಬ್ಲೇಡುಗಳು ಮೊಂಡಾಗಿದ್ದರೆ ಕಲ್ಲುಪ್ಪನ್ನು ಮಿಕ್ಸಿಗೆ ಹಾಕಿ ಐದಾರು ನಿಮಿಷ ತಿರುಗಿಸಿ. ಬ್ಲೇಡುಗಳು ಹರಿತವಾಗುತ್ತವೆ.
6. ಹೊಸ ಬಟ್ಟೆ ಬಣ್ಣ ಬಿಡುವುದೆಂಬ ಅನುಮಾನವಿದ್ದರೆ ನೀರಿಗೆ ಸ್ವಲ್ಪ ಉಪ್ಪು ಸೇರಿಸಿ ಅದರಲ್ಲಿ ಮುಕ್ಕಾಲು ಗಂಟೆ ಬಟ್ಟೆ ನೆನೆಸಿ ಒಗೆದರೆ ಬಣ ಬಿಡುವುದಿಲ್ಲ.
7. ಹಲ್ಲು ನೋವು ಅಥವಾ ಗಂಟಲು ನೋವಿದ್ದಾಗ ಉಗುರು ಬೆಚ್ಚನೆ ನೀರಿಗೆ ಉಪ್ಪು ಸೇರಿಸಿ ಬಾಯಿ ಮುಕ್ಕಳಿಸಿದರೆ ನೋವು ಕಡಿಮೆಯಾಗುತ್ತದೆ. ಹಲ್ಲು ಶುಭ್ರವಾಗುತ್ತದೆ. ವಸಡುಗಳ ತೊಂದರೆಯೂ ನಿವಾರಣೆಯಾಗುತ್ತದೆ.