Latest Updates
-
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್!
ಎಣ್ಣೆರಹಿತ ಹೆಸರುಕಾಳಿನ ಮಸಾಲಾ

* ಧರ್ಮಸ್ಥಳ ಮಮತಾ ಶೆಣೈ
ಇಬ್ಬರ ಊಟಕ್ಕೆ ಪ್ರಮಾಣ : ಎರಡು ಕಪ್ ಹೆಸರುಕಾಳುಗಳನ್ನು ನೀರಲ್ಲಿ ನೆನೆ ಹಾಕಿ. ರಾತ್ರಿ ಅಥವಾ ಬೆಳಗ್ಗೆ ನೆನೆ ಹಾಕಿದರೆ ಸುಮಾರು ಎಂಟು ಗಂಟೆಕಾಲ ನೆನೆಯಬೇಕು. ನೆನೆದ ಹೆಸರು ಕಾಳನ್ನು ಬೇಯಲು ಇಡಿ. ಹೆಚ್ಚಿಗೆ ಬೆಂದು ನುಣ್ಣಗಾಗದಂತೆ ಎಚ್ಚರ ವಹಿಸಿ. ಮುಕ್ಕಾಲು ಭಾಗದಷ್ಟು ಬೆಂದರೆ ಸಾಕು. ಅದು ಒಂದು ಕಡೆ ಹಾಗಿರಲಿ.
ಮಸಾಲೆಗೆ ಸಿದ್ಧಮಾಡಿಕೊಳ್ಳೋಣ : ಗಸಗಸೆ ಒಂದು ಚಮಚ, ಚೂರು ಚಕ್ಕೆ, ಗೋಲಿ ಗಾತ್ರ ಹುಣಿಸೆ ಹಣ್ಣು, ಗೋಲಿ ಗಾತ್ರ ಬೆಲ್ಲ, ಐದಾರು ಗೋಡಂಬಿ, ಸಣ್ಣ ಹಿಡಿ ಕಾಯಿ ತುರಿ, ನಾಲಕ್ಕು ಹಸಿಮೆಣಸಿನಕಾಯಿ, ಐದಾರು ಎಸಳು ಕೊತ್ತಂಬರಿ ಸೊಪ್ಪು. ಇವಿಷ್ಟನ್ನು ಮಿಕ್ಸಿಗೆ ಹಾಕಿ, ಚೂರು ನೀರು ಬೆರೆಸಿ ನುಣ್ಣಗೆ ರುಬ್ಬಿಕೊಳ್ಳಬೇಕು.
ಬೆಂದ ಹೆಸರುಕಾಳಿಗೆ ಈ ಮೇಲಿನ ಮಸಾಲೆಯನ್ನು ಬೆರೆಸಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮತ್ತೆ ಕುದಿಸಬೇಕು. ಹೆಚ್ಚಿಗೆ ನೀರು ಹಾಕಬಾರದು, ಪದಾರ್ಥ ತೊವ್ವೆ ಮಾದರಿಯಲ್ಲಿ ಇರಬೇಕು. ಈ ಅಡುಗೆಯ ವಿಶೇಷವೆಂದರೆ ಎಣ್ಣೆ, ಬೆಣ್ಣೆ ಅಥವಾ ತುಪ್ಪ ಅಥವಾ ಯಾವುದೇ ವನಸ್ಪತಿ ಇಲ್ಲದೆ ಮಸಾಲಾ ತಯಾರಾಗಿರುತ್ತದೆ. ದುಬಾರಿ ಬೇಳೆಯಲ್ಲಿ ಕಳೆದುಕೊಂಡದ್ದನ್ನು ಜಿಡ್ಡುರಹಿತ ಮಸಾಲಾದಲ್ಲಿ ಗಳಿಸಿ!



Click it and Unblock the Notifications