Latest Updates
-
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು!
ಎಣ್ಣೆರಹಿತ ಹೆಸರುಕಾಳಿನ ಮಸಾಲಾ

* ಧರ್ಮಸ್ಥಳ ಮಮತಾ ಶೆಣೈ
ಇಬ್ಬರ ಊಟಕ್ಕೆ ಪ್ರಮಾಣ : ಎರಡು ಕಪ್ ಹೆಸರುಕಾಳುಗಳನ್ನು ನೀರಲ್ಲಿ ನೆನೆ ಹಾಕಿ. ರಾತ್ರಿ ಅಥವಾ ಬೆಳಗ್ಗೆ ನೆನೆ ಹಾಕಿದರೆ ಸುಮಾರು ಎಂಟು ಗಂಟೆಕಾಲ ನೆನೆಯಬೇಕು. ನೆನೆದ ಹೆಸರು ಕಾಳನ್ನು ಬೇಯಲು ಇಡಿ. ಹೆಚ್ಚಿಗೆ ಬೆಂದು ನುಣ್ಣಗಾಗದಂತೆ ಎಚ್ಚರ ವಹಿಸಿ. ಮುಕ್ಕಾಲು ಭಾಗದಷ್ಟು ಬೆಂದರೆ ಸಾಕು. ಅದು ಒಂದು ಕಡೆ ಹಾಗಿರಲಿ.
ಮಸಾಲೆಗೆ ಸಿದ್ಧಮಾಡಿಕೊಳ್ಳೋಣ : ಗಸಗಸೆ ಒಂದು ಚಮಚ, ಚೂರು ಚಕ್ಕೆ, ಗೋಲಿ ಗಾತ್ರ ಹುಣಿಸೆ ಹಣ್ಣು, ಗೋಲಿ ಗಾತ್ರ ಬೆಲ್ಲ, ಐದಾರು ಗೋಡಂಬಿ, ಸಣ್ಣ ಹಿಡಿ ಕಾಯಿ ತುರಿ, ನಾಲಕ್ಕು ಹಸಿಮೆಣಸಿನಕಾಯಿ, ಐದಾರು ಎಸಳು ಕೊತ್ತಂಬರಿ ಸೊಪ್ಪು. ಇವಿಷ್ಟನ್ನು ಮಿಕ್ಸಿಗೆ ಹಾಕಿ, ಚೂರು ನೀರು ಬೆರೆಸಿ ನುಣ್ಣಗೆ ರುಬ್ಬಿಕೊಳ್ಳಬೇಕು.
ಬೆಂದ ಹೆಸರುಕಾಳಿಗೆ ಈ ಮೇಲಿನ ಮಸಾಲೆಯನ್ನು ಬೆರೆಸಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮತ್ತೆ ಕುದಿಸಬೇಕು. ಹೆಚ್ಚಿಗೆ ನೀರು ಹಾಕಬಾರದು, ಪದಾರ್ಥ ತೊವ್ವೆ ಮಾದರಿಯಲ್ಲಿ ಇರಬೇಕು. ಈ ಅಡುಗೆಯ ವಿಶೇಷವೆಂದರೆ ಎಣ್ಣೆ, ಬೆಣ್ಣೆ ಅಥವಾ ತುಪ್ಪ ಅಥವಾ ಯಾವುದೇ ವನಸ್ಪತಿ ಇಲ್ಲದೆ ಮಸಾಲಾ ತಯಾರಾಗಿರುತ್ತದೆ. ದುಬಾರಿ ಬೇಳೆಯಲ್ಲಿ ಕಳೆದುಕೊಂಡದ್ದನ್ನು ಜಿಡ್ಡುರಹಿತ ಮಸಾಲಾದಲ್ಲಿ ಗಳಿಸಿ!



Click it and Unblock the Notifications











