Latest Updates
-
ಪುರಿ ರಥಯಾತ್ರೆ 2026: ಭಕ್ತರೇ ಎಚ್ಚರ! ಸುಗಮ ದರ್ಶನಕ್ಕೆ ಇಲ್ಲಿವೆ ಪ್ರಮುಖ ಟಿಪ್ಸ್ -
ಭಾರತ-ಇಂಗ್ಲೆಂಡ್ ಪಂದ್ಯ ವೀಕ್ಷಿಸುವಾಗ ಬೆನ್ನು ನೋವು ಕಾಡುತ್ತಿದೆಯೇ? ಈ 8 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ!
ಎಣ್ಣೆರಹಿತ ಹೆಸರುಕಾಳಿನ ಮಸಾಲಾ

* ಧರ್ಮಸ್ಥಳ ಮಮತಾ ಶೆಣೈ
ಇಬ್ಬರ ಊಟಕ್ಕೆ ಪ್ರಮಾಣ : ಎರಡು ಕಪ್ ಹೆಸರುಕಾಳುಗಳನ್ನು ನೀರಲ್ಲಿ ನೆನೆ ಹಾಕಿ. ರಾತ್ರಿ ಅಥವಾ ಬೆಳಗ್ಗೆ ನೆನೆ ಹಾಕಿದರೆ ಸುಮಾರು ಎಂಟು ಗಂಟೆಕಾಲ ನೆನೆಯಬೇಕು. ನೆನೆದ ಹೆಸರು ಕಾಳನ್ನು ಬೇಯಲು ಇಡಿ. ಹೆಚ್ಚಿಗೆ ಬೆಂದು ನುಣ್ಣಗಾಗದಂತೆ ಎಚ್ಚರ ವಹಿಸಿ. ಮುಕ್ಕಾಲು ಭಾಗದಷ್ಟು ಬೆಂದರೆ ಸಾಕು. ಅದು ಒಂದು ಕಡೆ ಹಾಗಿರಲಿ.
ಮಸಾಲೆಗೆ ಸಿದ್ಧಮಾಡಿಕೊಳ್ಳೋಣ : ಗಸಗಸೆ ಒಂದು ಚಮಚ, ಚೂರು ಚಕ್ಕೆ, ಗೋಲಿ ಗಾತ್ರ ಹುಣಿಸೆ ಹಣ್ಣು, ಗೋಲಿ ಗಾತ್ರ ಬೆಲ್ಲ, ಐದಾರು ಗೋಡಂಬಿ, ಸಣ್ಣ ಹಿಡಿ ಕಾಯಿ ತುರಿ, ನಾಲಕ್ಕು ಹಸಿಮೆಣಸಿನಕಾಯಿ, ಐದಾರು ಎಸಳು ಕೊತ್ತಂಬರಿ ಸೊಪ್ಪು. ಇವಿಷ್ಟನ್ನು ಮಿಕ್ಸಿಗೆ ಹಾಕಿ, ಚೂರು ನೀರು ಬೆರೆಸಿ ನುಣ್ಣಗೆ ರುಬ್ಬಿಕೊಳ್ಳಬೇಕು.
ಬೆಂದ ಹೆಸರುಕಾಳಿಗೆ ಈ ಮೇಲಿನ ಮಸಾಲೆಯನ್ನು ಬೆರೆಸಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮತ್ತೆ ಕುದಿಸಬೇಕು. ಹೆಚ್ಚಿಗೆ ನೀರು ಹಾಕಬಾರದು, ಪದಾರ್ಥ ತೊವ್ವೆ ಮಾದರಿಯಲ್ಲಿ ಇರಬೇಕು. ಈ ಅಡುಗೆಯ ವಿಶೇಷವೆಂದರೆ ಎಣ್ಣೆ, ಬೆಣ್ಣೆ ಅಥವಾ ತುಪ್ಪ ಅಥವಾ ಯಾವುದೇ ವನಸ್ಪತಿ ಇಲ್ಲದೆ ಮಸಾಲಾ ತಯಾರಾಗಿರುತ್ತದೆ. ದುಬಾರಿ ಬೇಳೆಯಲ್ಲಿ ಕಳೆದುಕೊಂಡದ್ದನ್ನು ಜಿಡ್ಡುರಹಿತ ಮಸಾಲಾದಲ್ಲಿ ಗಳಿಸಿ!



Click it and Unblock the Notifications