Latest Updates
-
ಸುಪ್ರೀಂ ಕೋರ್ಟ್ ಲೋಕ್ ಅದಾಲತ್ ದಿನ 2: ನಿಮ್ಮ ಪ್ರಕರಣ ಇತ್ಯರ್ಥವಾಗಲು ಈ ದಾಖಲೆಗಳು ಕಡ್ಡಾಯ! -
ರಕ್ಷಾ ಬಂಧನ 2026: ಹಬ್ಬದ ಸಂಭ್ರಮಕ್ಕೆ ಬಜೆಟ್ ಮತ್ತು ಪ್ಲಾನಿಂಗ್ ಹೀಗಿರಲಿ! -
ಮಳೆಗಾಲದಲ್ಲಿ ಬೆಂಗಳೂರಿನ ಮನೆ ಮತ್ತು ಬಾಲ್ಕನಿ ರಕ್ಷಣೆ: 40 ನಿಮಿಷದ ಸಿಂಪಲ್ ಚೆಕ್ಲಿಸ್ಟ್ -
ಬೆಂಗಳೂರಿನಲ್ಲಿ 2 ದಿನ ಭಾರಿ ಪವರ್ ಕಟ್: ಈ 70 ಪ್ರದೇಶಗಳಲ್ಲಿ ಕರೆಂಟ್ ಇರಲ್ಲ, ಮುನ್ನೆಚ್ಚರಿಕೆ ವಹಿಸಿ! -
ಈರುಳ್ಳಿ ಬೆಲೆ ಏರಿಕೆ ಬಿಸಿ: ₹800ರಲ್ಲಿ ವಾರಪೂರ್ತಿ ಪ್ರೋಟೀನ್ ಯುಕ್ತ ಆರೋಗ್ಯಕರ ಊಟದ ಪ್ಲಾನ್! -
ಹಬ್ಬದ ಸಿಹಿ ತಯಾರಿಗೆ ಸಕ್ಕರೆ ಬೆಲೆ ಬಿಸಿ: ಜೇಬಿಗೆ ಹೊರೆಯಾಗದಂತೆ ಸಂಭ್ರಮಿಸುವುದು ಹೇಗೆ? -
LPG e-KYC ಗಡುವು: ನಾಳೆಯೇ ಕೊನೆಯ ದಿನ, ನಿಮ್ಮ ಗ್ಯಾಸ್ ಸಂಪರ್ಕ ಕಡಿತವಾಗದಂತೆ ತಡೆಯುವುದು ಹೇಗೆ? -
BWF ಸೆಮಿಫೈನಲ್ ವೀಕ್ಷಿಸುವಾಗ ಮೈಕೈ ನೋವೇ? 8 ನಿಮಿಷದ ಈ ಸಿಂಪಲ್ ವ್ಯಾಯಾಮ ಮಾಡಿ! -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ?
ಎಣ್ಣೆರಹಿತ ಹೆಸರುಕಾಳಿನ ಮಸಾಲಾ

* ಧರ್ಮಸ್ಥಳ ಮಮತಾ ಶೆಣೈ
ಇಬ್ಬರ ಊಟಕ್ಕೆ ಪ್ರಮಾಣ : ಎರಡು ಕಪ್ ಹೆಸರುಕಾಳುಗಳನ್ನು ನೀರಲ್ಲಿ ನೆನೆ ಹಾಕಿ. ರಾತ್ರಿ ಅಥವಾ ಬೆಳಗ್ಗೆ ನೆನೆ ಹಾಕಿದರೆ ಸುಮಾರು ಎಂಟು ಗಂಟೆಕಾಲ ನೆನೆಯಬೇಕು. ನೆನೆದ ಹೆಸರು ಕಾಳನ್ನು ಬೇಯಲು ಇಡಿ. ಹೆಚ್ಚಿಗೆ ಬೆಂದು ನುಣ್ಣಗಾಗದಂತೆ ಎಚ್ಚರ ವಹಿಸಿ. ಮುಕ್ಕಾಲು ಭಾಗದಷ್ಟು ಬೆಂದರೆ ಸಾಕು. ಅದು ಒಂದು ಕಡೆ ಹಾಗಿರಲಿ.
ಮಸಾಲೆಗೆ ಸಿದ್ಧಮಾಡಿಕೊಳ್ಳೋಣ : ಗಸಗಸೆ ಒಂದು ಚಮಚ, ಚೂರು ಚಕ್ಕೆ, ಗೋಲಿ ಗಾತ್ರ ಹುಣಿಸೆ ಹಣ್ಣು, ಗೋಲಿ ಗಾತ್ರ ಬೆಲ್ಲ, ಐದಾರು ಗೋಡಂಬಿ, ಸಣ್ಣ ಹಿಡಿ ಕಾಯಿ ತುರಿ, ನಾಲಕ್ಕು ಹಸಿಮೆಣಸಿನಕಾಯಿ, ಐದಾರು ಎಸಳು ಕೊತ್ತಂಬರಿ ಸೊಪ್ಪು. ಇವಿಷ್ಟನ್ನು ಮಿಕ್ಸಿಗೆ ಹಾಕಿ, ಚೂರು ನೀರು ಬೆರೆಸಿ ನುಣ್ಣಗೆ ರುಬ್ಬಿಕೊಳ್ಳಬೇಕು.
ಬೆಂದ ಹೆಸರುಕಾಳಿಗೆ ಈ ಮೇಲಿನ ಮಸಾಲೆಯನ್ನು ಬೆರೆಸಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮತ್ತೆ ಕುದಿಸಬೇಕು. ಹೆಚ್ಚಿಗೆ ನೀರು ಹಾಕಬಾರದು, ಪದಾರ್ಥ ತೊವ್ವೆ ಮಾದರಿಯಲ್ಲಿ ಇರಬೇಕು. ಈ ಅಡುಗೆಯ ವಿಶೇಷವೆಂದರೆ ಎಣ್ಣೆ, ಬೆಣ್ಣೆ ಅಥವಾ ತುಪ್ಪ ಅಥವಾ ಯಾವುದೇ ವನಸ್ಪತಿ ಇಲ್ಲದೆ ಮಸಾಲಾ ತಯಾರಾಗಿರುತ್ತದೆ. ದುಬಾರಿ ಬೇಳೆಯಲ್ಲಿ ಕಳೆದುಕೊಂಡದ್ದನ್ನು ಜಿಡ್ಡುರಹಿತ ಮಸಾಲಾದಲ್ಲಿ ಗಳಿಸಿ!



Click it and Unblock the Notifications