Latest Updates
-
ಮಳೆಗಾಲದಲ್ಲಿ ಮದುವೆ ನಿಶ್ಚಯವಾಗಿದೆಯೇ? ನಿಮ್ಮ ಮದುವೆ ಸಂಭ್ರಮ ಹಾಳಾಗದಂತೆ ತಡೆಯಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ಸಜ್ಜುಗೊಳಿಸಿ: ಸೋರಿಕೆ ಮತ್ತು ತೇವಾಂಶದಿಂದ ಮುಕ್ತಿ ಪಡೆಯಿರಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೇಹ ತಂಪಾಗಿಡಲು ಈ ಸಾಂಪ್ರದಾಯಿಕ ಪಾನೀಯಗಳೇ ಮದ್ದು! -
ಬೆಂಗಳೂರಿನಲ್ಲಿ ಇವತ್ತು ಭಾರಿ ಮಳೆ: ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಈ ಕೆಲಸಗಳನ್ನು ಮಿಸ್ ಮಾಡ್ಬೇಡಿ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಾದಿದೆ! -
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ!
ರಂಜಾನ್ ಉಪವಾಸಕ್ಕಾಗಿ ತಂಪುಣಿಸುವ ಬಾದಾಮಿ ಹಾಲು
ರಂಜಾನ್ ಮಾಸದಲ್ಲಿ ಹದಿನಾಲ್ಕು ಗಂಟೆಗಳ ಉಪವಾಸದ ಬಳಿಕ ದೇಹಕ್ಕೆ ವಿಶೇಷ ಆಹಾರಗಳ ಅಗತ್ಯವಿದೆ. ಅದರಲ್ಲೂ ಉಪವಾಸ ಹಿಡಿಯುತ್ತಿರುವ ಬಾಣಂತಿಯರಿಗೆ ಮತ್ತು ಮಕ್ಕಳಿಗೆ ಹೆಚ್ಚಿನ ಪೋಷಕಾಂಶಗಳು ಅತ್ಯಗತ್ಯ. ಈ ಅಗತ್ಯವನ್ನು ಕೇಸರಿ, ಹಾಲು, ತುಪ್ಪ ಮತ್ತು ಬಾದಾಮಿ ಪೂರೈಸುತ್ತವೆ.
ಇವೇ ಸಾಮಾಗ್ರಿಗಳನ್ನು ಉಪಯೋಗಿಸಿ ತಯಾರಿಸುವ ಈ ವಿಶೇಷ ಪೇಯ ರುಚಿಕರವೂ ಹೌದು. ಪೌಷ್ಠಿಕಾಂಶಗಳ ಆಗರವಾಗಿರುವ ಬಾದಾಮಿಯಲ್ಲಿ ಕ್ಯಾಲ್ಸಿಯಂ ಮತ್ತು ಪ್ರೋಟೀನುಗಳು ಹೆಚ್ಚಿರುವುದರಿಂದ ಮಕ್ಕಳಿಗೆ ವಿಶೇಷವಾಗಿ ಈ ಪೇಯ ಹೆಚ್ಚಿನ ಆರೈಕೆ ನೀಡಬಲ್ಲುದು.
ಈ ಪೇಯವನ್ನು ವರ್ಷವಿಡೀ ತಯಾರಿಸಬಹುದಾದರೂ ಇದರ ಮಹತ್ವ ರಂಜಾನ್ ತಿಂಗಳ ಇಫ್ತಾರ್ ಸಮಯಕ್ಕೆ ಹೆಚ್ಚು ಸಮರ್ಪಕವಾಗಿದೆ. ಬಿಸಿಯಿರುವಾಗಲೇ ಸೇವಿಸಬೇಕಾದ ಈ ಸ್ವಾದಿಷ್ಟ ಪೇಯವನ್ನು ಸುಹೂರ್ ಮತ್ತು ಇಫ್ತಾರ್ ಸಮಯದಲ್ಲಿ ಬಳಸಬಹುದು. ಜೊತೆಗೇ ಮಳೆಯಿಂದಾಗಿ ಚಳಿಯಲ್ಲಿ ಕುಡಿಯುವ ಪೇಯ ಶರೀರಕ್ಕೆ ಅಗತ್ಯವಾದ ಶಾಖವನ್ನೂ ನೀಡುವುದರಿಂದ ಎಲ್ಲರ ಮನಗೆಲ್ಲುವುದು ಖಂಡಿತ. ಅಷ್ಟೇ ಏಕೆ, ಇನ್ನುಳಿದ ಸಮಯದಲ್ಲಿ ರಾತ್ರಿ ಊಟದ ಬಳಿಕ ನೀಡಿದರೂ ಮನೆಯವರು ಮತ್ತು ಅತಿಥಿಗಳು ಈ ಪೇಯವನ್ನು ಮತ್ತಷ್ಟು ಕೊಂಡಾಡುತ್ತಾರೆ.

ಪ್ರಮಾಣ: ನಾಲ್ವರಿಗೆ ಒಂದು ಹೊತ್ತಿಗಾಗುವಷ್ಟು
ಸಿದ್ಧತಾ ಸಮಯ: ಐದು ನಿಮಿಷಗಳು
ತಯಾರಿಕಾ ಸಮಯ: ಇಪ್ಪತ್ತು ನಿಮಿಷಗಳು.
ಅಗತ್ಯವಿರುವ ಸಾಮಾಗ್ರಿಗಳು:
*ಹಸುವಿನ ತುಪ್ಪ: 1 ಚಿಕ್ಕ ಚಮಚ
*ಮೈದಾ ಹಿಟ್ಟು- 1 ದೊಡ್ಡಚಮಚ
*ಹಾಲು - 1 ಲೀಟರ್
*ಬಾದಾಮಿ ಪುಡಿ - 4 ದೊಡ್ಡಚಮಚ
*ಕೇಸರಿ - ಕೆಲಸು ಎಸಳುಗಳು
*ಸಕ್ಕರೆ- 1/4 ಕಪ್
*ಒಣಫಲಗಳು-ಚಿಕ್ಕದಾಗಿ ಹೆಚ್ಚಿದ್ದು (ನಿಮ್ಮ ಆಯ್ಕೆಯ ಯಾವುದೂ ಆಗಬಹುದು)-ಮೇಲಿನ ಅಲಂಕಾರಕ್ಕಾಗಿ
*ಗುಲಾಬಿ ಹೂಗಳ ದಳಗಳು - ಸ್ವಲ್ಪ, ಮೇಲಿನ ಅಲಂಕಾರಕ್ಕಾಗಿ (ಅಥವಾ ನಿಮ್ಮ ಆಯ್ಕೆಯ ಬೇರೆ ಯಾವುದಾದರೂ ಸರಿ)
ವಿಧಾನ:
*ದಪ್ಪತಳದ ಪಾತ್ರೆಯಲ್ಲಿ ತುಪ್ಪ ಹಾಕಿ ಮಧ್ಯಮ ಉರಿಯಲ್ಲಿ ಬಿಸಿಮಾಡಿ
*ಮೈದಾ ಹಾಕಿ ಎರಡು ನಿಮಿಷ ತಿರುವುತ್ತಾ ಇರಿ. (ತಿರುವುದನ್ನು ಕೊಂಚ ನಿಲ್ಲಿಸಿದರೂ ಕೆಳಭಾಗ ಸುಟ್ಟು ರುಚಿ ಕೆಡುತ್ತದೆ)
*ಕೊಂಚ ಕಂದು ಬಣ್ಣ ಬರುತ್ತಿದ್ದಂತೆಯೇ ಹಾಲು ಹಾಕಿ ಕುದಿ ಬರಿಸಿ, ನಡುನಡುವೆ ಕೊಂಚ ತಿರುವುತ್ತಿರಿ.
*ಕುದಿ ಬರುತ್ತಿದ್ದಂತೆಯೇ ಉರಿಯನ್ನು ಚಿಕ್ಕದಾಗಿಸಿ ಬಾದಾಮಿ ಪುಡಿ ಮತ್ತು ಕೇಸರಿಯನ್ನು ಹಾಕಿ
*ಚಿಕ್ಕ ಉರಿಯಲ್ಲಿಯೇ ಸುಮಾರು ಹತ್ತರಿಂದ ಹದಿನೈದು ನಿಮಿಷ ಕುದಿಯಲು ಬಿಡಿ.
*ಈಗ ಸಕ್ಕರೆ ಹಾಕಿ ಎರಡು ನಿಮಿಷ ಕುದಿಸಿ, ನಡುನಡುವೆ ತಿರುವುತ್ತಿರಿ
*ಬಳಿಕ ಇಳಿಸಿ ಒಣಫಲಗಳ ಪುಡಿ ಮತ್ತು ಗುಲಾಬಿ ದಳಗಳಿಂದ ಮೇಲ್ಭಾಗವನ್ನು ಅಲಂಕರಿಸಿ.
*ಬಿಸಿಯಿದ್ದಂತೆಯೇ ಲೋಟಗಳಲ್ಲಿ ಹಾಕಿ ಅತಿಥಿಗಳಿಗೆ ಕುಡಿಯಲು ನೀಡಿ ಮೆಚ್ಚುಗೆ ಗಳಿಸಿ.
ಸೂಚನೆ:
ಪೇಯವನ್ನು ಲೋಟಗಳಿಗೆ ಹಾಕಿದ ಬಳಿಕವೂ ಒಣಫಲಗಳನ್ನು ಹಾಕಿ ಅಲಂಕರಿಸಬಹುದು.



Click it and Unblock the Notifications
