Latest Updates
-
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ -
ಬಿಸಿಲ ಬೇಗೆಯಿಂದ ಪಾರಾಗಲು ಮನೆಯನ್ನು ತಂಪಾಗಿರಿಸುವ ಅದ್ಭುತ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ಈ ಪಾನೀಯಗಳೇ ಮದ್ದು!
ಕಪ್ಪು,ನಸುಗೆಂಪು,ಕರಿಮಣಿ ರಾಗಿ

ತಮಿಳು ನಾಡು,ಒರಿಸ್ಸಾ ಮತ್ತು ಕರ್ನಾಟಕದಲ್ಲಿ ರಾಗಿಯನ್ನು ಯಥೇಶ್ಚವಾಗಿ ಬೆಳೆಯುತ್ತಾರೆ. ಜೋಳ, ನವಣೆಯಂತೆ ರಾಗಿ ಮೂಲತಃ ಮಳೆಯನ್ನು ನಂಬಿ ಬಹುಶಃ, ಭಾಗಶಃ ಅರಳುವ ಬೆಳೆ. ಬಯಲು ಸೀಮೆಯಲ್ಲಿ ಎಂಟು ಕುಂಟೆ ಜಮೀನು ಇದ್ದರೆ ಒಬ್ಬ ರೈತನ ಸಂಸಾರವನ್ನು ವರ್ಷಪೂರ್ತ ಕಾಪಾಡುವ ಶಕ್ತಿ ರಾಗಿಗೆ ಇದೆ. ಅದಕ್ಕೇ, ಬಡ ರೈತರು ಮತ್ತು ರೈತ ಕಾರ್ಮಿಕರು ಭೂಮಿ ಹದಮಾಡುವುದಕ್ಕೆ ಮುಂಚೆ ಚಲಿಸುವ ಮೋಡಗಳನ್ನು ನೋಡುತ್ತಲೇ ಇರುತ್ತಾರೆ. ಬೀಜಬಿತ್ತಿದ ಮೇಲೆ ಆಕಾಶಕ್ಕೆ ಕೈಮುಗಿಯುತ್ತಾರೆ.
ಬಿಸಿಬಿಸಿ ರಾಗಿ ಮುದ್ದೆ ಗರಿಗರಿ ರಾಗಿ ರೊಟ್ಟಿ ಎಂದರೆ ಯಾರಿಗಿಷ್ಟವಿಲ್ಲ. ನಮ್ಮ ಕರ್ನಾಟಕದಲ್ಲಿ ಆಹಾರ ಪದ್ದತಿಯಾಗಿ ರಾಗಿ ಜನಪ್ರಿಯವಾಗಿದ್ದರೂ ಅದರ ಜನಪ್ರಿಯತೆ ಕೆಲವು ಪ್ರದೇಶಗಳಿಗೆ ಮಾತ್ರ ಸೀಮಿತ. ಚಿತ್ರದುರ್ಗದಿಂದ ದಕ್ಷಿಣ ಮತ್ತು ಪೂರ್ವ ದಿಕ್ಕಿಗೆ ಚಾಚಿಕೊಂಡಿರುವ ತುಮಕೂರು, ರಾಮನಗರ, ಕೋಲಾರ, ಮಂಡ್ಯ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಮೈಸೂರು , ಹಾಸನದ ಕೆಲವು ತಾಲೂಕುಗಳಲ್ಲಿ, ಮುಖ್ಯವಾಗಿ ನೀರಾವರಿ ಸೌಲಭ್ಯವಿಲ್ಲದ ಹೊಲಗಳಲ್ಲಿ ರಾಗಿ ಬೆಳೆಯುವುದುಂಟು.
ಕಂಪ್ಯೂಟರ್ ಕಪಿಮುಷ್ಟಿಯಲ್ಲಿ ಜೀವನ ನೂಕುತ್ತಾ, ಇಂಟರ್ ನೆಟ್ಟಿನ ಮೂಲಕವೇ ಅನ್ನ ಸಾರು ಬಯಸುವಂಥ ನಾವು ಉತ್ತು ಬಿತ್ತಿ ಕೊಯಿಲು ಮಾಡಿ, ಕಣ ಮಾಡಿ, ಕೇರಿ, ತೂರಿ, ಅಳೆದು, ತುಂಬಿ, ಮಿಷನ್ನಿಗೆ ಹಾಕಿಸಿ, ಜರಡಿಯಾಡಿ ಮುದ್ದೆ ಮತ್ತು ರೊಟ್ಟಿ ಮಾಡುವುದು ಅಷ್ಟರಲ್ಲೇ ಇದೆ. ಅಂಗಡಿ ಹೋದರೆ ಅರ್ಧ ಕೆಜಿ ಒಂದು ಕೆಜಿ ರಾಗಿ ಹಿಟ್ಟಿನ ಪ್ಯಾಕೆಟ್ಟುಗಳು ಸಿಗುತ್ತವೆ. ಅಂಗಡಿ ಎಂದರೆ ಕುಪರ್ಟಿನೊದ ಇಂಡಿಯನ್ ಸ್ಟೋರ್ಸ್ ಅಲ್ಲ, ನಮ್ಮ ಚಿಂತಾಮಣಿಯ ಆಜಾದ್ ಚೌಕದಲ್ಲೂ ಪ್ಯಾಕಡ್ ಗ್ರೋಸರಿ ಸಿಕ್ಕತ್ತೆ. ಸುಮ್ಮನೆ ತಂದು ರೊಟ್ಟಿ ಮಾಡಿಕೊಂಡು ತಿಂದು ತೇಗುವುದನ್ನು ಕಲಿಯುವಾ!



Click it and Unblock the Notifications











