Latest Updates
-
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು! -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆಯ ಮಳೆನೀರು ಕೊಯ್ಲು ವ್ಯವಸ್ಥೆ ಹಾಳಾಗದಂತೆ ತಡೆಯುವುದು ಹೇಗೆ? -
ಮಳೆಗಾಲದಲ್ಲಿ ಮಕ್ಕಳ ಲಂಚ್ಬಾಕ್ಸ್ ಸುರಕ್ಷತೆ: ಆರೋಗ್ಯಕರ ಮತ್ತು ಹೈ-ಪ್ರೋಟೀನ್ ಆಹಾರದ ಟಿಪ್ಸ್
ತಿಂಡಿ ಪೋತ ರಾಮಣ್ಣನ ಅನುಭವ ಮಂಟಪ

ನೀವು ಏನೇ ಹೇಳಿ, ನಾಲಗೆ ಚಪಲ ಎಷ್ಟೇ ಇದ್ರೂ ಈ ಮೈ (ಸ್ಥೂಲಕಾಯ) ಅನ್ನೋದು ಎಲ್ಲಾ ತಿಂಡಿಗಳಿಗೂ ಬ್ರೇಕ್ ಹಾಕಿಸತ್ತೆ. ಮೈ ಬಂದೋರಿಗೆ, ಟೈರು ಬಂದೋರಿಗಾಗಿ dietary foodದೇ ಬೇರೆ ದೊಡ್ಡ ಲಿಸ್ಟ್ ಇದೆ. ಅದನ್ನ ಇನ್ನೊಂದು ಸಲ ಹೇಳ್ತೀನಿ.
ಹುಡುಗಿಯರಿಗಂತೂ ನಾನು ಸ್ಲಿಮ್ ಆಗಿರಬೇಕು... ಬೇರೆ ಬೇರೆ ತರಹ ಡ್ರೆಸ್ ಮಾಡ್ಕೊಬೇಕು, ಫಿಟ್ ಆಗಿರಬೇಕು ಅಂತ ಮನಸ್ಸಿನ ಒಳಗೊಳಗೆ ಬಯಕೆ. ಹುಡುಗರಿಗಾದ್ರೆ ಬೈಸೆಪ್ಸ್ ಬೆಳಸಬೇಕು 6 ಪ್ಯಾಕ್ 8 ಪ್ಯಾಕ್ ಮಾಡ್ಕೊಬೇಕು ಅಂತ ಆಸೆ.
ಆದ್ರೆ ಇವರೆಲ್ಲ ತಮ್ಮ ನಾಲಿಗೇನ ಹೇಗೆ ತಾನೆ ಟೋನ್ ಮಾಡ್ಕೋತಾರೋ ಗೊತ್ತಿಲ್ಲ. ಹೆಲ್ತಿಯಾಗಿರಬೇಕು ನಿಜ, ಆದ್ರೆ ನಾಲಗೆಗೆ ಮೋಸ ಮಾಡಿನ? nah ಅಂತ ಕೆಲವರು ತಿಂಡಿಪೋತ ರಾಮಣ್ಣ ಆಗಿಬಿಟ್ಟಿದ್ದಾರೆ.
ಈ ತಿಂಡಿಪೋತ ರಾಮಣ್ಣ ಹೀಗೆ ಒಂದ್ಸಲ ಕಾಂಗ್ರೆಸ್ ಕಡಲೆಬೀಜ ತಿಂತಾ ಯೋಚನೆಮಾಡ್ದ. ಈ ಜನ ತಮ್ಮ ಬಾಹ್ಯ ಸೌಂದರ್ಯಕ್ಕಾಗಿ ಎಷ್ಟೆಲ್ಲಾ ಕಷ್ಟ ಪಡ್ತಾರೆ. ಆದರೆ, ಇವರಲ್ಲಿ ಎಷ್ಟು ಜನ ತಮ್ಮ ಆಂತರಿಕ ಸೌಂದರ್ಯ ಹೆಚಿಸ್ಕೊಳ್ಳಕೆ ಪ್ರಯತ್ನಪಡ್ತಿದಾರೆ ಅಂತ.
ಹೀಗೆ ಒಬ್ಬ ಹುಡುಗನ ಹತ್ರ ಹೋಗಿ ಕೇಳ್ದ. ನೀನೇನೋ 6 ಪ್ಯಾಕ್ ಮಾಡ್ಕೊಂಡು ಚೆನ್ನಾಗಿ ಕಾಣತಿದ್ಯ, ಆದ್ರೆ ನಿನ್ನ ಮನಸಿನಲ್ಲಿರೋ ಸೌಂದರ್ಯ ಎಷ್ಟು ಹೆಚ್ಚಿದೆ ಅಂತ ಹೇಳು ನೋಡೋಣ ಅಂದ.
ಆಗ ಆ ಹುಡ್ಗ ಹೇಳದ್ನಂತೆ... ನನ್ನ ಮನಸಿನಲ್ಲಿರೋ ಸೌಂದರ್ಯ ನನ್ನ ಜಿಮ್ ಗೆ ಬರ್ತಾಳೆ.. ಅವಳೂ ಸೈಜ್ 0 ಗೆ ಟ್ರೈ ಮಾಡ್ತಿದಾಳೆ ಅಂತ. ಹಾಗೆ ರಾಮಣ್ಣ ಹುಡುಕ್ತಾ ಹೋದಾಗ ಯೋಗ, ಪ್ರಾಣಾಯಾಮ ಮಾಡೋವ್ರು ಕಾಣ್ತಾರೆ. ನೀವು ಯಾಕೆ ಯೋಗ ಪ್ರಾಣಾಯಾಮ ಮಾಡ್ತಿರ ಅಂತ ಕೇಳ್ದಾಗ, ಆರೋಗ್ಯಕಾಗಿ ಸ್ವಲ್ಪಮಟ್ಟಿನ ಮನಶ್ಯಾಂತಿಗಾಗಿ ಅನ್ನೋ ಸಮಾಧಾನ ಸಿಗುವ ಉತ್ತರಗಳು ಸಿಕ್ತು.
ಇಲ್ಲಿ ಆತಂರಿಕ ಸೌಂದರ್ಯ ಎಂದರೇನು?
ಪ್ರಶ್ನೆಗೆ ಉತ್ತರ ಸಿಗಬೇಕಾದರೆ ನಾವು ರಾಮಣ್ಣ ತರಹ ಕಡ್ಲೆಕಾಯಿಬೀಜ ತಿನ್ಕೊಂಡು ಹೋಗಬೇಕಾ? ಹೀಗೆ ರಾಮಣ್ಣ ಒಬ್ಬ ಸನ್ಯಾಸಿನ ಕೇಳ್ದಾಗ... ಅಂತರ್ ಸೌಂದರ್ಯ ಹೆಚ್ಚಬೇಕಾದರೆ ನನ್ನ ಪ್ರಕಾರ ಮನುಷ್ಯ ಎಲ್ಲ ಸಾತ್ವಿಕ ಗುಣಗಳನ್ನು ಅಳವಡಿಸಿಕೊಳ್ಳಬೇಕು. ನಮ್ಮ ವೇದಾಂತಿಗಳು.. ಗುರುಗಳು ಹೇಳುವ ಹಾದಿಯಲ್ಲಿ ನಡೆಯಬೇಕು ಅಂದ್ರಂತೆ.
ನಮ್ಮ ಗುರುಗಳು ಹಾಗು ವೇದಾಂತಿಗಳು ಇನ್ನು ರಿಸರ್ಚ್ ಅಥವಾ ಅಧ್ಯಯನ ಮಾಡ್ತಾನೆ ಇದ್ದಾರೆ. ಜನರಿಗೆ ತಮ್ಮ ಆಂತರಿಕ ಸೌಂದರ್ಯವನ್ನು ಹೆಚಿಸ್ಕೊಳ್ಳೊ ಟಿಪ್ಸ್ ಕೊಡೋಕೆ. ಆಂತರಿಕ ಸೌಂದರ್ಯದ ಬಗ್ಗೆ ಈಗಷ್ಟೆ ಬಹಿರಂಗವಾಗಿರೊ ಮಾಹಿತಿ ಪ್ರಕಾರ ಒಟ್ಟು ಮೂರು ಟೈಪ್ ಜನ ಇದಾರಂತೆ.
1) ಆಂತರಿಕ ಸೌಂದರ್ಯದ ಅರಿವೇ ಇಲ್ಲದವರ ಒಂದು ವರ್ಗ.
2) ಚೂರುಪಾರು ಗೊತ್ತಿದೆ ಆದರೆ ಇನ್ನೂ ತಿಳಿಬೇಕಾಗಿರೋವ್ರ ಮತ್ತೊಂದು ವರ್ಗ.
3) ಎಲ್ಲ ತಿಳಿದು ಇನ್ನು ತಿಳಿದು ಜನರಿಗೆ ಹೇಳುವ ಪ್ರಯತ್ನ ಇನ್ನೊಂದು ವರ್ಗ.
knowledge is proud it knows so much but wisdom is humble that, it can know no more. ಎಲ್ಲರೂ ನಮ್ಮ ರಾಮಣ್ಣನವರ ವರ್ಗಕ್ಕೆ ಸೇರಿದವರೇ ಎನ್ನುವುದು ನನ್ನ ಕಲ್ಪನೆ, ಸುಮ್ಮನೆ ಭಾವನೆ.



Click it and Unblock the Notifications