Latest Updates
-
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ!
ಬಂಗಾರದಂಥ ಅಕ್ಕಿಯನ್ನು ಉಳಿಸುವುದು ಹೇಗೆ?

ಮದುವೆ ಮುಂತಾದ ಸಮಾರಂಭಗಳಲ್ಲಿ, ಮನೆಯಲ್ಲಿ ಊಟ ಮಾಡುವಾಗ ಎಷ್ಟೊಂದು ಅನ್ನ ಭೂಮಿಯ ಪಾಲಾಗಿ ಕೊನೆಗೆ ತಿಪ್ಪೆ ಸೇರುತ್ತದೆ ಎಂಬುದನ್ನು ನಾವು ಲೆಕ್ಕ ಇಡುತ್ತೇವೆಯೆ? ಖಂಡಿತ ಇಲ್ಲ. ದೇವಸ್ಥಾನಗಳಲ್ಲಿ ಎಂಜಲು ಎಲೆಯ ಮೇಲೆ ಅನಾಥವಾಗಿ ಬಿದ್ದ ಅನ್ನದ ಮೇಲೆ ಉರುಳಾಡುತ್ತೇವೆಯೇ ಹೊರತು ಆ ಅನ್ನವನ್ನು ಉಳಿಸಿದರೆ, ಇನ್ನೂ ನಾಲ್ಕಾರು ಜನ ಊಟ ಮಾಡಬಹುದಿತ್ತು ಎಂದು ಚಿಂತಿಸುವುದಿಲ್ಲ. ಹಂಡೆಗಟ್ಟಲೆ ಅನ್ನ ಸಾರು ಉಳಿದಾಗ ಹತ್ತಿರದಲ್ಲಿರುವ ಅನಾಥಾಶ್ರಮಕ್ಕೆ ಕೊಟ್ಟು ಬರುವ ಮನಸು ಮಾಡುವುದಿಲ್ಲ.
ಅಕ್ಕಿ ಬಗ್ಗೆ ಈಗ ಯಾಕಿಷ್ಟು ತಲೆಕೆಡಿಸಿಕೊಳ್ಳಬೇಕೆಂದರೆ. ಅಕ್ಕಿ ರೇಟು ದಿನದಿನಕ್ಕೆ ರಾಕೆಟ್ನಂತೆ ಮೇಲೇರುತ್ತಿದೆ. ಉತ್ತಮ ಗುಣಮಟ್ಟದ ಅಕ್ಕಿ ಬಡವರ ಕೈಗೆಟುಕದಂತಾಗಿದೆ. ಗೋದಾಮುಗಳಲ್ಲಿ ಅಕ್ಕಿ ಹೆಗ್ಗಣ ಮತ್ತು ಕಳ್ಳರ ಪಾಲಾಗುತ್ತಿದೆ. ಅಕ್ಕಿಯನ್ನು ಈಪಾಟಿ ಪೋಲು ಮಾಡುವ ಬದಲು ಉಳಿಸಿದರೆ ನಮಗೇ ಉಳಿತಾಯ. ಮುಂಬೈನಲ್ಲಿ ಯಾರೋ ಪ್ರಜ್ಞಾವಂತರೊಬ್ಬರು ಮದುವೆ ಮುಂತಾದ ಶುಭ ಸಮಾರಂಭದಲ್ಲಿ ಆರಕ್ಷತೆಗೆ ಅಕ್ಕಿ ಬಳಸಬಾರದು ಎಂದು ಅಭಿಯಾನವನ್ನು ಆರಂಭಿಸಿದ್ದರು ಮತ್ತು ಮದುವೆಯಲ್ಲೆಲ್ಲ ಕಾಲಬಳಿ ಬಿದ್ದು ಒದ್ದಾಡುತ್ತಿದ್ದ ಅಕ್ಕಿಯನ್ನು ಭಾರೀ ಪ್ರಮಾಣದಲ್ಲಿ ಸಂಗ್ರಹಿಸಿಟ್ಟಿದ್ದರು.
ಅಕ್ಕಿಯನ್ನು ಉಳಿಸಲು ನಾವು ಏನು ಮಾಡಬಹುದು
* ಮನೆಯಲ್ಲಿ ಜನರು ಇದ್ದಷ್ಟೇ ಅನ್ನ ಬೇಯಿಸಿರಿ.
* ಅತಿಥಿಗಳಿಗೆ ಅನ್ನ ಹಾಕುವಾಗ ಅವರು ಕೇಳಿದಷ್ಟೇ ಬಡಿಸಿರಿ. ಬಲವಂತಮಾಡಿ ಬಡಿಸಬೇಡಿ.
* ಆರತಕ್ಷತೆಯಲ್ಲಿ ವಧುವರರನ್ನು ಆಶೀರ್ವದಿಸುವಾಗ ಮುಷ್ಟಿಗಟ್ಟಲೆ ಎಸೆಯಬೇಡಿ.
* ಮನೆಯಲ್ಲಿ ಕ್ವಿಂಟಾಲ್ಗಟ್ಟಲೆ ಅಕ್ಕಿ ಶೇಖರಿಸಿಟ್ಟಾಗ ಕೆಡದಂತೆ ಮುಂಜಾಗ್ರತೆ ವಹಿಸಿ.
* ಅಕಸ್ಮಾತ್ ಅನ್ನ ಜಾಸ್ತಿ ಉಳಿದರೆ ತಿಪ್ಪೆಗೆ ಹಾಕದೆ, ಅನಾಥಾಲಯಕ್ಕೆ ದಾನ ಮಾಡಿರಿ.
* ಅಕ್ಕಿ ಪೋಲಾಗುವ ಸಮಯ ಬಂದಾಗ ಅನ್ನವೇ ನಮ್ಮ ಪಾಲಿನ ದೇವರು ಎಂದು ನೆನೆಸಿಕೊಳ್ಳಿ.
ಹಾಗೆಯೆ, ಅಕ್ಕಿಗೆ ಸಂಬಂಧಿಸಿದಂತೆ ಬಂದಿರುವ ಎರಡು ಪ್ರತಿಕ್ರಿಯೆಗಳು
ಅಕ್ಕಿಯನ್ನು ಮೆಡಿಕಲ್ ಸ್ಟೋರ್ನಲ್ಲಿ ಸಿಗುವ PARAD TABLETS ಅನ್ನು ಮೂಟೆ ಒಳಗೆ ಮಧ್ಯೆ ಮಧ್ಯೆ ಸೇರಿಸಿ ಇಡುವುದರಿಂದ ಅಕ್ಕಿಯು ಹಾಳಾಗದಂತೆ ಹೆಚ್ಚು ತಿಂಗಳುಗಳ ಕಾಲ ರಕ್ಷಿಸಬಹುದು. ಬೇರೆ ಕಾಳು ಮತ್ತು ಇತರ ಧಾನ್ಯಗಳನ್ನು ಇದೇ ರೀತಿ ಸಂರಕ್ಷಿಸಬಹುದು.
ಹಿಂದೂ ಸಂಪ್ರದಾಯದಲ್ಲಿ ವಧು-ವರರನ್ನು ಲಕ್ಷ್ಮಿ ನಾರಾಯಣ ಸ್ವರೂಪವೆಂದು ನಂಬಲಾಗಿದೆ. ಹಾಗಾಗಿ ವಧು ವರರಿಗೆ ಅಕ್ಕಿಯಿಂದ ಧಾರೆ ಎರೆಯುವುದು ಲಕ್ಷ್ಮಿ ನಾರಾಯಣರಿಗೆ ಸುವರ್ಣ ಧಾರೆ ಎಂದೆನಿಸುತ್ತದೆ. ಈ ಅಕ್ಕಿಯು ಎಲ್ಲೂ ಹಾಳಾದ ಉದಾಹರಣೆ ಇಲ್ಲ. ಈ ಅಕ್ಕಿಯನ್ನು ಮತ್ತೆ ಉಪಯೋಗಿಸುತ್ತಾರೆ. ಎಲ್ಲರೂ ಇದನ್ನು ತುಳಿದು ಹಾಳುಮಾಡುವುದಿಲ್ಲ. ಎಲ್ಲಾ ಸಂಪ್ರದಾಯಗಳನ್ನು ಹೀಗೆ ಅವಹೇಳನ ಮಾಡಿ ಅಮೆರಿಕ ಸಂಸ್ಕೃತಿಯನ್ನು ತಂದು ಎಲ್ಲರ ಭಾವನೆ, ನಂಬಿಕೆ ಹಾಳು ಮಾಡುವುದು ಅಭ್ಯಾಸವಾಗಿದೆ. ದೊಡ್ಡ ಜನರು ತಿಂದು ಎಸೆಯುವ ಆಹಾರವನ್ನು ಗಮನಿಸಿ. ಅವರಿಗೆ ಅನ್ನಬ್ರಹ್ಮನ ಪಾವಿತ್ರತೆಯನ್ನು ಅರಿಕೆ ಮಾಡಿ ಪೋಲು ಮಾಡುವುದನ್ನು ನಿಲ್ಲಿಸಿ.



Click it and Unblock the Notifications