Just In
- 5 hrs ago ವಾರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಈ 7 ದಿನಗಳು ನಿಮಗೆ ಹೇಗಿರಲಿದೆ?
- 6 hrs ago ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- 7 hrs ago ಪರಿಸರ ದಿನ: ಇಂದು ನೀವು ಹೀಗೆ ಮಾಡಿದರೆ ಮುಂದಿನ ಪೀಳಿಗೆಗೆ ನೀಡುವ ದೊಡ್ಡ ಆಸ್ತಿ
- 7 hrs ago ಲಿವರ್ ಸಮಸ್ಯೆಯಿದೆ ಎಂದು ಸೂಚಿಸುವ ಲಕ್ಷಣಗಳಿವು, ಕುಟುಂಬಸ್ಥರು ಲಿವರ್ ದಾನ ಮಾಡಿದರೆ ವ್ಯಕ್ತಿಯ ಪ್ರಾಣ ಉಳಿಸಬಹುದು
Don't Miss
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Movies ಡಿ. ಕೆ ಸುರೇಶ್ ಪರ ನಟ ದರ್ಶನ್ ಪ್ರಚಾರ; ಆ 2 ವಿಧಾನಸಭಾ ಕ್ಷೇತ್ರಗಳಲ್ಲಿ ಮತಬೇಟೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಂಗಾರದಂಥ ಅಕ್ಕಿಯನ್ನು ಉಳಿಸುವುದು ಹೇಗೆ?
ಮದುವೆ ಮುಂತಾದ ಸಮಾರಂಭಗಳಲ್ಲಿ, ಮನೆಯಲ್ಲಿ ಊಟ ಮಾಡುವಾಗ ಎಷ್ಟೊಂದು ಅನ್ನ ಭೂಮಿಯ ಪಾಲಾಗಿ ಕೊನೆಗೆ ತಿಪ್ಪೆ ಸೇರುತ್ತದೆ ಎಂಬುದನ್ನು ನಾವು ಲೆಕ್ಕ ಇಡುತ್ತೇವೆಯೆ? ಖಂಡಿತ ಇಲ್ಲ. ದೇವಸ್ಥಾನಗಳಲ್ಲಿ ಎಂಜಲು ಎಲೆಯ ಮೇಲೆ ಅನಾಥವಾಗಿ ಬಿದ್ದ ಅನ್ನದ ಮೇಲೆ ಉರುಳಾಡುತ್ತೇವೆಯೇ ಹೊರತು ಆ ಅನ್ನವನ್ನು ಉಳಿಸಿದರೆ, ಇನ್ನೂ ನಾಲ್ಕಾರು ಜನ ಊಟ ಮಾಡಬಹುದಿತ್ತು ಎಂದು ಚಿಂತಿಸುವುದಿಲ್ಲ. ಹಂಡೆಗಟ್ಟಲೆ ಅನ್ನ ಸಾರು ಉಳಿದಾಗ ಹತ್ತಿರದಲ್ಲಿರುವ ಅನಾಥಾಶ್ರಮಕ್ಕೆ ಕೊಟ್ಟು ಬರುವ ಮನಸು ಮಾಡುವುದಿಲ್ಲ.
ಅಕ್ಕಿ ಬಗ್ಗೆ ಈಗ ಯಾಕಿಷ್ಟು ತಲೆಕೆಡಿಸಿಕೊಳ್ಳಬೇಕೆಂದರೆ. ಅಕ್ಕಿ ರೇಟು ದಿನದಿನಕ್ಕೆ ರಾಕೆಟ್ನಂತೆ ಮೇಲೇರುತ್ತಿದೆ. ಉತ್ತಮ ಗುಣಮಟ್ಟದ ಅಕ್ಕಿ ಬಡವರ ಕೈಗೆಟುಕದಂತಾಗಿದೆ. ಗೋದಾಮುಗಳಲ್ಲಿ ಅಕ್ಕಿ ಹೆಗ್ಗಣ ಮತ್ತು ಕಳ್ಳರ ಪಾಲಾಗುತ್ತಿದೆ. ಅಕ್ಕಿಯನ್ನು ಈಪಾಟಿ ಪೋಲು ಮಾಡುವ ಬದಲು ಉಳಿಸಿದರೆ ನಮಗೇ ಉಳಿತಾಯ. ಮುಂಬೈನಲ್ಲಿ ಯಾರೋ ಪ್ರಜ್ಞಾವಂತರೊಬ್ಬರು ಮದುವೆ ಮುಂತಾದ ಶುಭ ಸಮಾರಂಭದಲ್ಲಿ ಆರಕ್ಷತೆಗೆ ಅಕ್ಕಿ ಬಳಸಬಾರದು ಎಂದು ಅಭಿಯಾನವನ್ನು ಆರಂಭಿಸಿದ್ದರು ಮತ್ತು ಮದುವೆಯಲ್ಲೆಲ್ಲ ಕಾಲಬಳಿ ಬಿದ್ದು ಒದ್ದಾಡುತ್ತಿದ್ದ ಅಕ್ಕಿಯನ್ನು ಭಾರೀ ಪ್ರಮಾಣದಲ್ಲಿ ಸಂಗ್ರಹಿಸಿಟ್ಟಿದ್ದರು.
ಅಕ್ಕಿಯನ್ನು ಉಳಿಸಲು ನಾವು ಏನು ಮಾಡಬಹುದು
*
ಮನೆಯಲ್ಲಿ
ಜನರು
ಇದ್ದಷ್ಟೇ
ಅನ್ನ
ಬೇಯಿಸಿರಿ.
*
ಅತಿಥಿಗಳಿಗೆ
ಅನ್ನ
ಹಾಕುವಾಗ
ಅವರು
ಕೇಳಿದಷ್ಟೇ
ಬಡಿಸಿರಿ.
ಬಲವಂತಮಾಡಿ
ಬಡಿಸಬೇಡಿ.
*
ಆರತಕ್ಷತೆಯಲ್ಲಿ
ವಧುವರರನ್ನು
ಆಶೀರ್ವದಿಸುವಾಗ
ಮುಷ್ಟಿಗಟ್ಟಲೆ
ಎಸೆಯಬೇಡಿ.
*
ಮನೆಯಲ್ಲಿ
ಕ್ವಿಂಟಾಲ್ಗಟ್ಟಲೆ
ಅಕ್ಕಿ
ಶೇಖರಿಸಿಟ್ಟಾಗ
ಕೆಡದಂತೆ
ಮುಂಜಾಗ್ರತೆ
ವಹಿಸಿ.
*
ಅಕಸ್ಮಾತ್
ಅನ್ನ
ಜಾಸ್ತಿ
ಉಳಿದರೆ
ತಿಪ್ಪೆಗೆ
ಹಾಕದೆ,
ಅನಾಥಾಲಯಕ್ಕೆ
ದಾನ
ಮಾಡಿರಿ.
*
ಅಕ್ಕಿ
ಪೋಲಾಗುವ
ಸಮಯ
ಬಂದಾಗ
ಅನ್ನವೇ
ನಮ್ಮ
ಪಾಲಿನ
ದೇವರು
ಎಂದು
ನೆನೆಸಿಕೊಳ್ಳಿ.
ಹಾಗೆಯೆ, ಅಕ್ಕಿಗೆ ಸಂಬಂಧಿಸಿದಂತೆ ಬಂದಿರುವ ಎರಡು ಪ್ರತಿಕ್ರಿಯೆಗಳು
ಅಕ್ಕಿಯನ್ನು ಮೆಡಿಕಲ್ ಸ್ಟೋರ್ನಲ್ಲಿ ಸಿಗುವ PARAD TABLETS ಅನ್ನು ಮೂಟೆ ಒಳಗೆ ಮಧ್ಯೆ ಮಧ್ಯೆ ಸೇರಿಸಿ ಇಡುವುದರಿಂದ ಅಕ್ಕಿಯು ಹಾಳಾಗದಂತೆ ಹೆಚ್ಚು ತಿಂಗಳುಗಳ ಕಾಲ ರಕ್ಷಿಸಬಹುದು. ಬೇರೆ ಕಾಳು ಮತ್ತು ಇತರ ಧಾನ್ಯಗಳನ್ನು ಇದೇ ರೀತಿ ಸಂರಕ್ಷಿಸಬಹುದು.
ಹಿಂದೂ ಸಂಪ್ರದಾಯದಲ್ಲಿ ವಧು-ವರರನ್ನು ಲಕ್ಷ್ಮಿ ನಾರಾಯಣ ಸ್ವರೂಪವೆಂದು ನಂಬಲಾಗಿದೆ. ಹಾಗಾಗಿ ವಧು ವರರಿಗೆ ಅಕ್ಕಿಯಿಂದ ಧಾರೆ ಎರೆಯುವುದು ಲಕ್ಷ್ಮಿ ನಾರಾಯಣರಿಗೆ ಸುವರ್ಣ ಧಾರೆ ಎಂದೆನಿಸುತ್ತದೆ. ಈ ಅಕ್ಕಿಯು ಎಲ್ಲೂ ಹಾಳಾದ ಉದಾಹರಣೆ ಇಲ್ಲ. ಈ ಅಕ್ಕಿಯನ್ನು ಮತ್ತೆ ಉಪಯೋಗಿಸುತ್ತಾರೆ. ಎಲ್ಲರೂ ಇದನ್ನು ತುಳಿದು ಹಾಳುಮಾಡುವುದಿಲ್ಲ. ಎಲ್ಲಾ ಸಂಪ್ರದಾಯಗಳನ್ನು ಹೀಗೆ ಅವಹೇಳನ ಮಾಡಿ ಅಮೆರಿಕ ಸಂಸ್ಕೃತಿಯನ್ನು ತಂದು ಎಲ್ಲರ ಭಾವನೆ, ನಂಬಿಕೆ ಹಾಳು ಮಾಡುವುದು ಅಭ್ಯಾಸವಾಗಿದೆ. ದೊಡ್ಡ ಜನರು ತಿಂದು ಎಸೆಯುವ ಆಹಾರವನ್ನು ಗಮನಿಸಿ. ಅವರಿಗೆ ಅನ್ನಬ್ರಹ್ಮನ ಪಾವಿತ್ರತೆಯನ್ನು ಅರಿಕೆ ಮಾಡಿ ಪೋಲು ಮಾಡುವುದನ್ನು ನಿಲ್ಲಿಸಿ.