Just In
- 1 hr ago ವಿಶ್ವದ ದುಬಾರಿ ಹಣ್ಣುಗಳಿವು..! ನೀವು ಊಹಿಸದ ಬೆಲೆ ಈ ಹಣ್ಣುಗಳಿಗಿದೆ..!
- 2 hrs ago ಶನಿಯ ನಕ್ಷತ್ರ ಬದಲಾವಣೆ: ಅಕ್ಟೋಬವರೆಗೆ ಈ 3 ರಾಶಿಯವರು ಇದರ ಉತ್ತಮ ಫಲ ಪಡೆಯುವಿರಿ
- 7 hrs ago ಒಂದು ಸೌತೆಕಾಯಿ ಹಾಕಿ ಮಾಡಿ ಮೊಸರು ಹುಳಿ..! ಸಿಕ್ಕಾಪಟ್ಟೆ ರುಚಿ ರೆಸಿಪಿ
- 14 hrs ago ವರ್ಷದ ಮೊದಲ ಸೂರ್ಯಗ್ರಹಣ ಏಪ್ರಿಲ್ನಲ್ಲಿ ಯಾವಾಗ ಸಂಭವಿಸಲಿದೆ? ಇದರ ಸೂತಕ ಭಾರತಕ್ಕಿದೆಯೇ?
Don't Miss
- Movies 'ಉಳಿದವರು ಕಂಡಂತೆ' ದಶಕದ ಸಂಭ್ರಮ; ಟ್ವೀಟ್ ಮಾಡಿ 'ರಿಚರ್ಡ್ ಆಂಟನಿ' ಬಗ್ಗೆ ಮೌನ ಮುರಿದ ರಕ್ಷಿತ್
- Sports RR vs DC: ಐಪಿಎಲ್ನಲ್ಲಿ ಇತಿಹಾಸ ನಿರ್ಮಿಸಲು ಸಜ್ಜಾದ ರಿಷಭ್ ಪಂತ್
- News Asianet Digital Network Survey: ಮತ್ತೊಮ್ಮೆ ಮೋದಿಗೆ ಜೈ ಎಂದ ಮತದಾರರು!
- Technology ಮತ್ತೊಂದು ಅಗ್ಗದ 5G ಫೋನ್ ಲಾಂಚ್ ಮಾಡಲು ಸಜ್ಜಾದ ರಿಯಲ್ಮಿ!..ಫೀಚರ್ಸ್ ಏನು?
- Finance ಜಗತ್ತಿನಾದ್ಯಂತ 6,000 ಉದ್ಯೋಗಿಗಳನ್ನು ವಜಾ ಮಾಡಿದ ಡೆಲ್
- Automobiles ಬುಕ್ ಮಾಡಿದ ರೈಲಿನ ಸೀಟಿನಲ್ಲಿ ಬೇರೆಯವರು ಕೂತಿದ್ರೆ ಏನ್ ಮಾಡಬೇಕು ಗೊತ್ತಾ? ಸಿಂಪಲ್ ಪರಿಹಾರ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸೆ. 25ಕ್ಕೆ ಸರ್ವ ಪಿತೃ ಅಮವಾಸ್ಯೆ: ಈ ದಿನ ಹೀಗೆ ಮಾಡಿದರೆ ಕಷ್ಟಗಳು ದೂರಾಗುವುದು
ಪಿತೃಪಕ್ಷ ಸೆಪ್ಟೆಂಬರ್ 10ರಿಂದ ಪ್ರಾರಂಭವಾಗಿತ್ತು, ಇದೀಗ ಸೆಪ್ಟೆಂಬರ್ 25ಕ್ಕೆ ಮುಕ್ತಾಯವಾಗಲಿದೆ. ಪಿತೃಪಕ್ಷ ಹಿಂದೂಗಳಿಗೆ ತುಂಬಾನೇ ಮಹತ್ವವಾದದ್ದು. ಈ ಸಂದರ್ಭದಲ್ಲಿ ಮರಣವೊಂದಿರುವ ಹಿರಿಯರಿಗೆ ತರ್ಪಣ ನೀಡಿ, ಅವರ ಆಶೀರ್ವಾದ ಪಡೆಯಲಾಗುವುದು. ಪಿತೃಪಕ್ಷ ಆಚರಣೆ ಮಾಡುವುದರಿಂದ ಪಿತೃದೋಷವಿದ್ದರೆ ನಿವಾರಣೆಯಾಗುವುದು. ಪಿತೃಪಕ್ಷ ಅಶ್ವನಿ ಮಾಸದ ಅಮವಾಸ್ಯೆಯಂದು ಮುಕ್ತಾಯವಾಗಲಿದೆ.
ಸೆಪ್ಟೆಂಬರ್ 25ಕ್ಕೆ ಸರ್ವ ಪಿತೃ ಅಮವಾಸ್ಯೆ ಇದನ್ನು ಮಹಾಲಯ ಅಮವಾಸ್ಯೆ ಎಂದು ಕೂಡ ಕರೆಯಲಾಗುವುದು. ಸರ್ವ ಪಿತೃ ಅಮವಾಸ್ಯೆಯನ್ನು ಅಶ್ವಿನ ಮಾಸದ ಕೃಷ್ಣ ಪಕ್ಷದಲ್ಲಿ ಆಚರಿಸಲಾಗುತ್ತಿದೆ.
ಸರ್ವ ಪಿತೃ ಅಮವಾಸ್ಯೆಯ ಮಹತ್ವ
ಪಿತೃದೋಷ ಒಳ್ಳೆಯದಲ್ಲ. ಕೆಲವರಿಗೆ ಕುಂಡಲಿಯಲ್ಲಿ ಪಿತೃದೋಷವಿರುತ್ತದೆ, ಇನ್ನು ಕೆಲವರಿಗೆ ಕರ್ಮಫಲದಿಂದಾಗಿ ಪಿತೃದೋಷ ಉಂಟಾಗಿರುತ್ತದೆ. ಪಿತೃದೋಷ ಹೋಗಲಾಡಿಸಲು ಈ ಪಿತೃಪಕ್ಷ ಸೂಕ್ತವಾದ ಸಂದರ್ಭವಾಗಿದೆ. ಪಿತೃಪಕ್ಷದಲ್ಲಿ ಹಿರಿಯರಿಗೆ ತರ್ಪಣ ನೀಡುವುದರಿಂದ ಪಿತೃದೋಷ ನೀಗುವುದು, ಅದರಲ್ಲೂ ಸರ್ವ ಪಿತೃ ಅಮವಾಸ್ಯೆಯಂದು ತರ್ಪಣ ನೀಡಿದರೆ ನಿಮ್ಮ ಎಲ್ಲಾ ಹಿರಿಯರು ಸಂತುಷ್ಟರಾಗಿ ನಿಮ್ಮನ್ನು ಆಶೀರ್ವದಿಸುತ್ತಾರೆ. ಇದರಿಂದಾಗಿ ಪಿತೃದೋಷವಿದ್ದರೆ ಅದು ನಿವಾರಣೆಯಾಗಿ ಏಳಿಗೆ ಉಂಟಾಗಲಿದೆ.
ಸರ್ವ ಪಿತೃ ಅಮವಾಸ್ಯೆ ತಿಥಿ
ಸರ್ವ ಪಿತೃ ಅಮವಾಸ್ಯೆ ದಿನಾಂಕ ಸೆಪ್ಟೆಂಬರ್ 25
ಅಮವಾಸ್ಯೆ ತಿಥಿ ಪ್ರಾರಂಭ: ಸೆಪ್ಟೆಂಬರ್ 25 ಮುಂಜಾನೆ 03:12ಕ್ಕೆ
ಅಮವಾಸ್ಯೆ ತಿಥಿ ಮುಕ್ತಾಯ: ಸೆಪ್ಟೆಂಬರ್ 26 ಮುಂಜಾನೆ 03:23ಕ್ಕೆ
ರೋಹಿಣಿ ಮುಹೂರ್ತ: 11:48ರಿದ 12:37ರವರೆಗೆ
ಅಪರಾಹ್ನ ಕಾಲ: ಮಧ್ಯಾಹ್ನ 01:25ರಿಂದ 03:50ರವರೆಗೆ
ಸರ್ವ ಪಿತೃಪಕ್ಷ ಅಮವಾಸ್ಯೆ ನಿಯಮಗಳು
* ಬೆಳಗ್ಗೆ ಬೇಗನೆ ಎದ್ದು ಸ್ನಾನ ಮಾಡಬೇಕು
* ಈ ದಿನ ಸಾತ್ವಿಕ ಆಹಾರ ಸೇವಿಸಬೇಕು
* ಶ್ರಾದ್ಧ ಕಾರ್ಯ ಮಾಡಬೇಕು
* ಬ್ರಾಹ್ಮಿಣರಿಗೆ ಆಹಾರ, ಹಣ್ಣು, ಬಟ್ಟೆಯನ್ನು ನೀಡಿ, ಅವರ ಪಾದ ಮುಟ್ಟಿ ನಮಸ್ಕರಿಸಬೇಕು.
* ಕೆಲವರು ಪವಿತ್ರ ನದಿಗಳ ತಟದಲ್ಲಿ ಶ್ರಾದ್ಧ ಕಾರ್ಯ ಮಾಡುತ್ತಾರೆ,
ಈ ದಿನ ಹೀಗೆ ಮಾಡಿದರೆ ಶುಭ ಫಲ ಪಡೆಯುವಿರಿ
ಹಸುವಿಗೆ ಹಸಿರು ಮೇವು ನೀಡಿ
ಸರ್ವ ಪಿತೃ ಅಮಾವಾಸ್ಯೆಯ ದಿನ ಪೂರ್ವಜರನ್ನು ಮೆಚ್ಚಿಸಲು ಹಸುವಿಗೆ ಹಸಿರು ಮೇವು ನೀಡಬೇಕು.
ಆಲದ ಮರಕ್ಕೆ ಪೂಜೆ ಮಾಡಿ
ಸರ್ವಪಿತ್ರ ಅಮಾವಾಸ್ಯೆಯಂದು ಆಲದ ಮರದ ಬಳಿ ದೀಪ ಹಚ್ಚಿದರೆ ಸಂತುಷ್ಟರಾಗಿ ನಮ್ಮನ್ನು ಆಶೀರ್ವದಿಸುತ್ತಾರೆ.
ದಾನ ಮಾಡಿ
ಜ್ಯೋತಿಷ್ಯ ಪ್ರಕಾರ ಸರ್ವ ಪಿತೃ ಅಮಾವಾಸ್ಯೆಯಂದು ದಾನ ಮಾಡುವುದು ತುಂಬಾ ಒಳ್ಳೆಯದು. ಈ ದಿನ ದಾನ ಮಾಡುವುದರಿಂದ ಪುಣ್ಯ ಬರುತ್ತದೆ. ಸರ್ವ ಪಿತೃ ಅಮಾವಾಸ್ಯೆಯಂದು ಬ್ರಾಹ್ಮಣನಿಗೆ ಸಾಮಾನ್ಯ ದಾನವನ್ನು ಮಾಡಬೇಕು. ಹಾಗೆಯೇ ಬೆಳ್ಳಿಯನ್ನು ದಾನ ಮಾಡುವುದು ಶ್ರೇಷ್ಠವೆಂದು ಪರಿಗಣಿಸಲಾಗಿದೆ.