Just In
- 1 hr ago ಗುರು ಸಂಚಾರ 2024: ಕನ್ಯಾ ರಾಶಿಯಲ್ಲಿ 12 ತಿಂಗಳು ಗುರುವಿನ ಪ್ರಭಾವ ಹೇಗಿರಲಿದೆ?
- 10 hrs ago ವಾರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಈ 7 ದಿನಗಳು ನಿಮಗೆ ಹೇಗಿರಲಿದೆ?
- 11 hrs ago ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- 12 hrs ago ಪರಿಸರ ದಿನ: ಇಂದು ನೀವು ಹೀಗೆ ಮಾಡಿದರೆ ಮುಂದಿನ ಪೀಳಿಗೆಗೆ ನೀಡುವ ದೊಡ್ಡ ಆಸ್ತಿ
Don't Miss
- News Karnataka Dam Water Level: ಏಪ್ರಿಲ್ 20ರಂದು ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ, ವಿವರ ಇಲ್ಲಿದೆ
- Automobiles ಪೆಟ್ರೋಲ್ಗೆ ಹೆಚ್ಚು ಹಣ ಖರ್ಚು ಮಾಡುತ್ತಿದ್ದೀರಾ?.. ಇಲ್ಲಿವೆ ಉತ್ತಮ ಎಲೆಕ್ಟ್ರಿಕ್ ಸ್ಕೂಟರ್ಗಳು, ಜಾಸ್ತಿ ಓಡ
- Finance Bengaluru Traffic Police: ಬೆಂಗಳೂರಿನ ಈ ರಸ್ತೆ ಸಂಚಾರ ಮಾರ್ಗ ಬದಲಾವಣೆ, ವಿವರ
- Technology Samsung: ಭಾರತದಲ್ಲಿ ಹೊಸ ವೇರಿಯಂಟ್ನಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ F15 5G! ಬೆಲೆ ಎಷ್ಟು?
- Sports RCB: 'ಗೋ ಗ್ರೀನ್' ಭಾಗವಾಗಿ 3 ಕೆರೆಗಳ ಅಭಿವೃದ್ಧಿಪಡಿಸಿದ ಆರ್ಸಿಬಿ
- Movies Amruthadhaare ; ಪಾರ್ಥ ಮತ್ತು ಅಪೇಕ್ಷಾ ಪ್ರೀತಿ, ಕೆಂಡಾಮಂಡಲಗೊಂಡ ಶಕುಂತಲಾ..!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
Pitru Paksha 2022: ಪಿತೃಪಕ್ಷದಲ್ಲಿ ಶ್ರದ್ಧೆಯಿಂದ ಶ್ರಾದ್ಧ ಮಾಡಬೇಕಾದರೆ ಈ ಆಹಾರಗಳನ್ನು ಸೇವಿಸಲೇಬಾರದು
ಕುಟುಂಬದ ಹಿರಿಯರು ಹಾಗೂ ಪೂರ್ವಜರನ್ನು ಸ್ಮರಿಸುವ, ಅವರಿಗೆ ಶ್ರದ್ಧಾ ಮಾಡುವ ಪಿತೃಪಕ್ಷವು 2022ನೇ ಸಾಲಿನಲ್ಲಿ ಸೆಪ್ಟಂಬರ್ 10ರಿಂದ 25ರವರೆಗೆ 15 ದಿನ ಇರಲಿದೆ. ಈ ವಿಶೇಷವಾದ ಸಮಯದಲ್ಲಿ ಆಚರಿಸಲು ಕೆಲವು ನಿಮಯಗಳಿಗೆ. ಈ ನಿಮಯಗಳನ್ನು ಪಾಲಿಸಿ ಶ್ರದ್ಧೆಯಿಂದ ಶ್ರಾದ್ಧ ಮಾಡಬೇಕು, ಇದರಿಂದ ಮಾತ್ರ ಪೂರ್ವಜರಿಗೆ ನಾವು ಮಾಡುವ ಪೂಜೆ, ಗೌರವ ಸಮರ್ಪಣೆಯಾಗುತ್ತದೆ ಎಂಬುದು ಹಿಂದಿನಿಂದಲೂ ಬಂದ ಪದ್ಧತಿ ಹಾಗೂ ನಂಬಿಕೆ.
ಹಾಗೆಯೇ, ಶ್ರಾದ್ಧದ ಆಚರಣೆಗಳನ್ನು ಹಿಂದೂ ಸಂಪ್ರದಾಯಗಳಿಗೆ ಅನುಗುಣವಾಗಿ ಸಾಕಷ್ಟು ನಿರ್ಬಂಧಗಳ ಅಡಿಯಲ್ಲಿ ನಡೆಸಲಾಗುತ್ತದೆ. ಈ ಸಮಯದಲ್ಲಿ ಕೆಲವು ಆಹಾರಗಳನ್ನು ತ್ಯಜಿಸಲಾಗುತ್ತದೆ. ಶ್ರಾದ್ಧ ಸಮಯದಲ್ಲಿ ಈ ಆಹಾರಗಳನ್ನು ಸೇವಿಸಿ ಹಿರಿಯರನ್ನು ಸ್ಮರಿಸುವುದು ನಿಷಿದ್ಧ ಎಂದು ಹೇಳಲಾಗುತ್ತದೆ.
ಶ್ರಾದ್ಧ ಋತುವಿನಲ್ಲಿ ತಪ್ಪಿಸಬೇಕಾದ ಕೆಲವು ಆಹಾರಗಳು ಈ ಕೆಳಗಿನಂತಿವೆ:
ಈರುಳ್ಳಿ ಮತ್ತು ಬೆಳ್ಳುಳ್ಳಿ
ನಿಮಗೆ ಗೊತ್ತಾ, ಆಯುರ್ವೇದದಲ್ಲಿ ಬೆಳ್ಳುಳ್ಳಿಯನ್ನು ರಾಜಸಿಕ ಮತ್ತು ಈರುಳ್ಳಿಯನ್ನು ತಾಮಸಿಕ ಎಂದು ಭಾವಿಸಲಾಗಿದೆ. ಅವು ದೇಹದಲ್ಲಿ ಶಾಖವನ್ನು ಉಂಟುಮಾಡಬಹುದು, ಆದ್ದರಿಂದ ಈ ಎರಡು ತರಕಾರಿಗಳನ್ನು ಪಿತೃಪಕ್ಷದಲ್ಲಿ ಸೇವಿಸಬಾರದು ಮತ್ತು ಆಚರಣೆಗಳನ್ನು ಮಾಡುವಾಗ ತಪ್ಪಿಸಬೇಕು. ಅಲ್ಲದೆ ಕೆಲವು ಆಯುರ್ವೇದ ವೃತ್ತಿಪರರು ಸಹ ಶ್ರಾದ್ಧ ಋತುವಿನಲ್ಲಿ ಈರುಳ್ಳಿ ಮತ್ತು ಇತರ ತಾಮಸಿಕ ಆಹಾರವನ್ನು ಸೇವಿಸದಂತೆ ಸಲಹೆ ನೀಡಿದ್ದಾರೆ ಎಂಬುದನ್ನು ನೆನಪಿನಲ್ಲಿಡಿ.
ತೊಗರಿಬೇಳೆ
ಈ ಹಿಂದೆ ಹೇಳಿದ ಆಹಾರಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಜೊತೆಗೆ, ಶ್ರಾದ್ಧ ಸಮಾರಂಭಗಳನ್ನು ಮಾಡುವವರು ತೊಗರಿ ಬೇಳೆಗಳನ್ನು ತಿನ್ನುವಂತಿಲ್ಲ. ಮಸೂರ ದಾಲ ತಿನ್ನುವಾಗ ಕಡಲೆ ಮತ್ತು ಒಡೆದ ಮಸೂರವನ್ನು ಸಹ ತಪ್ಪಿಸಬೇಕು. ಕಪ್ಪು ಉದ್ದಿನ ಬೇಳೆಗಳನ್ನು ಸಹ ತಪ್ಪಿಸಬೇಕು.
ಮಾಂಸಾಹಾರಿ ಆಹಾರ
ಯಾವುದೇ ಹಿಂದೂ ಆಚರಣೆಗಳಲ್ಲಿ ಮಾಂಸಾಹಾರ ಸೇವನೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಅಂತೆಯೇ, ಶ್ರಾದ್ಧದ ಸಮಯದಲ್ಲಿ ಮಾಂಸ ಅಥವಾ ಯಾವುದೇ ಮಾಂಸಾಹಾರಿ ಆಹಾರವನ್ನು ಸೇವಿಸುವುದನ್ನು ಅನುಮತಿಸಲಾಗುವುದಿಲ್ಲ.
ಗೋಧಿ ಮತ್ತು ಬೇಳೆಕಾಳುಗಳು
ಶ್ರಾದ್ಧದ ಪವಿತ್ರ ಅವಧಿಯಲ್ಲಿ ಹಸಿ ಧಾನ್ಯಗಳನ್ನು ನಿಷೇಧಿಸಲಾಗಿದೆ. ಹೀಗಾಗಿ, ಈ ಅವಧಿಯಲ್ಲಿ ಅಕ್ಕಿ, ಬೇಳೆಕಾಳುಗಳು ಮತ್ತು ಗೋಧಿಗಳನ್ನು ತಿನ್ನಬಾರದು. ಈ ಆಹಾರ ಪದಾರ್ಥಗಳನ್ನು ಬೇಯಿಸದೆ ಸೇವಿಸುವುದನ್ನು ನಿಷೇಧಿಸಲಾಗಿದೆ. ಆಲೂಗಡ್ಡೆ, ಮೂಲಂಗಿಯಂತಹ ತರಕಾರಿಗಳನ್ನು ಸಹ ನಿಷೇಧಿಸಲಾಗಿದೆ.
ಇತರ ಆಹಾರ ಪದಾರ್ಥಗಳು
ಮಾಂಸಾಹಾರಿ ಆಹಾರ ಮತ್ತು ಮದ್ಯದ ಜೊತೆಗೆ ಪಿತೃ ಪಕ್ಷದ ಸಮಯದಲ್ಲಿ ಇತರ ಕೆಲವು ಆಹಾರ ಪದಾರ್ಥಗಳನ್ನು ಸಹ ನಿರ್ಬಂಧಿಸಲಾಗಿದೆ. ಅವುಗಳೆಂದರೆ ಜೀರಿಗೆ, ಕಪ್ಪು ಉಪ್ಪು, ಕಪ್ಪು ಸಾಸಿವೆ, ಸೌತೆಕಾಯಿ ಮತ್ತು ಬದನೆಕಾಯಿಯಂಥ ಕೆಲವು ಆಹಾರ ಪದಾರ್ಥಗಳು ನಿಷಿದ್ಧ ಎಂದು ಹಿರಿಯರು ಹೇಳುತ್ತಾರೆ.
ಶ್ರಾದ್ಧ ಆಹಾರ ಮೊದಲು ಕಾಗೆಗೆ ಬಡಿಸಬೇಕು
ಪಿತೃಪಕ್ಷದ ಸಮಯದಲ್ಲಿ ಶ್ರಾದ್ಧಕ್ಕೆ ತಯಾರಿಸಲಾದ ವಿಶೇಷ ಆಹಾರವನ್ನು ಕುಟುಂಬದವರು ತಿನ್ನುವ ಮೊದಲು ಕಾಗೆಗೆ ಬಡಿಸಲಾಗುತ್ತದೆ, ಇದನ್ನು ಪಿತೃಲೋಕದ ಪಾಲಕನಾದ ಯಮ ಎಂದು ಭಾವಿಸಲಾಗುತ್ತದೆ ಮತ್ತು ನಂತರ ಪುರೋಹಿತರಿಗೆ ನೀಡಲಾಗುತ್ತದೆ. ತಮ್ಮ ಪೂರ್ವಜರ ಸ್ವರ್ಗ ಪ್ರವೇಶವನ್ನು ಖಚಿತಪಡಿಸಿಕೊಳ್ಳಲು ಪಿತೃ ಪಕ್ಷ ಮತ್ತು ಶ್ರಾದ್ಧದ ಅಗತ್ಯವಿದೆ ಎಂದು ಹಿಂದೂಗಳು ನಂಬುತ್ತಾರೆ.