Latest Updates
-
ಬೆಕ್ಕು ಸಾಕುವ ದಂಪತಿಗಳೇ ಎಚ್ಚರ! ಜಗಳ ತಪ್ಪಿಸಲು ಈ 'ಪೆಟ್-ಕೇರ್ ಒಪ್ಪಂದ' ಕಡ್ಡಾಯ -
ಮಳೆಗಾಲದಲ್ಲೂ ಬಾಡದ ಹೂವುಗಳು: ಶ್ರಾವಣ ಸೋಮವಾರದ ಪೂಜೆಗೆ ಸುಲಭ ಮತ್ತು ಪರಿಸರ ಸ್ನೇಹಿ ಅಲಂಕಾರ ಐಡಿಯಾಗಳು -
ಕಾಮಿಕಾ ಏಕಾದಶಿ 2026: ಉಪವಾಸದ ವೇಳೆ ಆರೋಗ್ಯವಾಗಿರಲು ಈ ಟಿಪ್ಸ್ ಪಾಲಿಸಿ, ಇಲ್ಲಿದೆ ಸಂಪೂರ್ಣ ಮಾರ್ಗದರ್ಶಿ -
ರಾಷ್ಟ್ರೀಯ ಕೈಮಗ್ಗ ದಿನ: ನೇಕಾರರ ಹೆಗಲು-ಮಣಿಕಟ್ಟು ನೋವು ಮರೆಸುವ 12 ನಿಮಿಷದ ಸರಳ ಮಂತ್ರ! -
ರೆಪೋ ದರ ಸ್ಥಿರ: ಸಾಲಗಾರರೇ ಎಚ್ಚರ, ನಿಮ್ಮ EMI ಹೊರೆಯನ್ನು ಕಡಿಮೆ ಮಾಡಲು ಈ ಸ್ಮಾರ್ಟ್ ಟಿಪ್ಸ್ ಫಾಲೋ ಮಾಡಿ -
ಬೆಂಗಳೂರಿನಲ್ಲಿ 'ಫ್ರೀಡಂ ಫ್ರಮ್ ವೇಸ್ಟ್': ದಂಡದಿಂದ ಪಾರಾಗಲು ಆಗಸ್ಟ್ 15ರೊಳಗೆ ಈ ಕೆಲಸ ಮಾಡಿ! -
8,000mAh ಬ್ಯಾಟರಿಯ ರೆಡ್ಮಿ ನೋಟ್ 17 ಲಾಂಚ್: ಖರೀದಿಸುವ ಮುನ್ನ ನೀವು ತಿಳಿಯಲೇಬೇಕಾದ ಪ್ರಮುಖ ವಿಷಯಗಳಿವು! -
ಬಾಣಂತಿಯರಿಗೆ ಬೆಂಬಲ: ತಾಯಿಯ ಆರೋಗ್ಯಕ್ಕೆ ತಂದೆಯ ಸಣ್ಣ ಸಹಾಯ ಎಷ್ಟು ಮುಖ್ಯ? -
8,000mAh ಬ್ಯಾಟರಿಯ POCO M8 Power ಲಾಂಚ್: ಈ ಫೋನ್ ಖರೀದಿಸುವ ಮುನ್ನ ನೀವು ತಿಳಿಯಲೇಬೇಕಾದ ವಿಷಯಗಳಿವು! -
ರಾಷ್ಟ್ರೀಯ ಮೂಳೆ ಮತ್ತು ಕೀಲು ದಿನ: ಬೆನ್ನು ಮತ್ತು ಮೊಣಕಾಲು ನೋವಿಗೆ ಈ 10 ನಿಮಿಷದ ವ್ಯಾಯಾಮವೇ ಮದ್ದು!
ಜ್ಯೋತಿಷ್ಯ ಪ್ರಕಾರ ಮಂಗಳವಾರ ಈ ಕಾರ್ಯಗಳನ್ನು ಅಪ್ಪಿ ತಪ್ಪಿಯೂ ಮಾಡಬಾರದು
ಮಂಗಳವಾರದ ಅಧಿಪತಿ ಮಂಗಳಗ್ರಹ, ಅಲ್ಲದೆ ಹಿಂದೂ ಧರ್ಮದಲ್ಲಿ ಮಂಗಳವಾರವನ್ನು ಹನುಮಂತನ ದಿನ ಎಂದು ಪರಿಗಣಿಸಲಾಗಿದೆ. ಮಂಗವಾರದಂದು ಹನುಮಂತನನ್ನು ಶ್ರದ್ಧಾ, ಭಕ್ತಿಯಿಂದ ಪೂಜಿಸಿದರೆ ಬದುಕಿನ ಎಲ್ಲಾ ಕಷ್ಟಗಳು ದೂರವಾಗುವುದು, ಅಲ್ಲದೆ ಬದುಕಿನಲ್ಲಿ ಕಷ್ಟಗಳನ್ನು ಎದುರಿಸುವ ಶಕ್ತಿ ಕೂಡ ದೊರೆಯುವುದು.
ವಾಯು ಪುತ್ರ, ರಾಮನ ಭಕ್ತ ಹನುಮಂತನಿಗೆ ಈ ದಿನದಂದು ವಿಶೇಷ ಪೂಜೆ ಸಲ್ಲಿಸಲಾಗುವುದು. ಹನುಮಂತನ ಗುಡಿಗೆ ಹೋಗಿ ಪ್ರಾರ್ಥಿಸಿ , ಪ್ರಸಾದವನ್ನು ಅರ್ಪಿಸಿ, ಅದನ್ನು ಅಲ್ಲಿ ಬಂದ ಭಕ್ತಾದಿಗಳಿಗೆ ಹಂಚಿದರೆ ಒಳಿತಾಗುವುದು.
ಇನ್ನು ಜ್ಯೋತಿಷ್ಯದ ಪ್ರಕಾರದ ಮಂಗಳವಾರದ ಬಗ್ಗೆ ಕೆಲವೊಂದು ನಂಬಿಕೆಗಳಿವೆ. ಈ ದಿನ ಕೆಲವೊಂದು ಕಾರ್ಯಗಳನ್ನು ಮಾಡಬಾರದು ಎನ್ನುತ್ತಾರೆ. ಒಂದು ವೇಳೆ ಆ ಕಾರ್ಯಗಳನ್ನು ಮಾಡಿದರೆ ಮಂಗಳ ದೋಷ ಉಂಟಾಗುವುದು ಎಂದು ಹೇಳಲಾಗುವುದು.
ಜ್ಯೋತಿಷ್ಯ ಪ್ರಕಾರ ಮಂಗಳವಾರದಂದು ಯಾವ ಕಾರ್ಯಗಳನ್ನು ಮಾಡಬಾರದು ನೋಡಿ:

ಶೇವಿಂಗ್, ಕಟ್ಟಿಂಗ್ ಮಾಡುವಂತಿಲ್ಲ
ಮಂಗಳವಾರದಂದು ಶೇವಿಂಗ್, ಕಟ್ಟಿಂಗ್ ಮಾಡುವಂತಿಲ್ಲ ಎಂದು ಹೇಳಲಾಗುವುದು. ಎಷ್ಟೋ ಜನರು ಇದನ್ನು ತುಂಬಾ ಕಟ್ಟು ನಿಟ್ಟಾಗಿ ಪಾಲಿಸುತ್ತಾರೆ ಕೂಡ. ಮನುಷ್ಯನ ದೇಹದ ಮೇಲೆ ಮಂಗಳನ ಪ್ರಭಾವ ಇರುತ್ತದೆ, ಮಂಗಳವಾರ ಕೂದಲು ಕತ್ತರಿಸುವುದು, ಶೇವಿಂಗ್ ಮಾಡುವುದು ಮಾಡಿದರೆ ಗಾಯವಾಗಬಹುದು ಎಂದು ಹೇಳಲಾಗುತ್ತದೆ. ಎಷ್ಟೋ ಜನರು ಈ ದಿನ ಮನೆ ಕೂಡ ಸ್ವಚ್ಛ ಮಾಡುವುದಿಲ್ಲ. ಮಂಗಳವಾರ ಉಗುರುಗಳನ್ನು ಕೂಡ ಕತ್ತರಿಸುವುದಿಲ್ಲ.

ಮೇಕಪ್ ಸಾಧನಗಳನ್ನು ಕೊಳ್ಳಬಾರದು
ಮಂಗಳವಾರ ಸೌಂದರ್ಯವರ್ಧಕ ಸಾಧನಗಳನ್ನು ಕೊಳ್ಳಬಾರದು, ಸೌಂದರ್ಯವರ್ಧಕ ಸಾಧನಗಳನ್ನು ಕೊಳ್ಳುವುದರಿಂದ ವೈವಾಹಿಕ ಸಂಬಂಧದಲ್ಲಿ ಸಮಸ್ಯೆ ಉಂಟಾಗುವುದು ಎಂಬ ನಂಬಿಕೆ ಇದೆ.

ಮಂಗಳವಾರ ಹಿರಿಯ ಸಹೋದರನ ಜೊತೆ ಜಗಳವಾಡಬಾರದು
ಮಂಗಳ ಗ್ರಹವನ್ನು ಹಿರಿಯ ಸಹೋದರ ಎಂದು ಪರಿಗಣಿಸಲಾಗಿದೆ. ಮಂಗಳವಾರ ಹಿರಿಯ ಸಹೋದರ ಜೊತೆ ಜಗಳವಾಡಿದರೆ ಮಂಗಳ ಗ್ರಹದ ಕೆಟ್ಟ ಪರಿಣಾಮ ಎದುರಿಸಬೇಕಾಗುವುದು. ಕುಟುಂಬದಲ್ಲಿ ಸಮಸ್ಯೆಗಳು ಹೆಚ್ಚಾಗುವುದು.

ಮೀನು ತಿನ್ನಬಾರದು
ಮಂಗಳವಾರದಂದು ಮೀನು ತಿನ್ನಬಾರದು ಎಂಬ ನಂಬಿಕೆ ಇದೆ.

ಕಡು ಬಣ್ಣದ ಬಟ್ಟೆ ಧರಿಸಬಾರದು
ಮಂಗಳವಾರದಂದು ಕೆಂಪು ಬಣ್ಣದ ಬಟ್ಟೆ ಧರಿಸಿದರೆ ಒಳ್ಳೆಯದು, ಇದರಿಂದ ಮಂಗಳ ದೊಷ ಕಡಿಮೆಯಾಗುವುದು ಎಂದು ಹೇಳಲಾಗುವುದು.

ಭೂಮಿ ಅಗೆಯಬಾರದು
ಮಂಗಳವಾರದೆಂದು ಮನೆ ಪೌಂಡೇಷನ್ಗೆ ಭೂಮಿ ಅಗೆಯಬಾರದೆಂದು ಹೇಳಲಾಗುವುದು. ಮಂಗಳನನ್ನು ಭೂಮಿ ಪುತ್ರ ಎಂದು ಹೇಳಲಾಗುವುದು. ಹಾಗಾಗಿ ಮಂಗಳವಾರದೆಂದು ಭೂಮಿ ಅಗೆಯಬಾರದು.



Click it and Unblock the Notifications