Just In
- 22 min ago ನರಿ ಮತ್ತು ಕೋಳಿಗೂ ಮೂರ್ಖರ ದಿನಕ್ಕೂ ಇದೆ ನಂಟು..! ಏನದು.?
- 50 min ago 2024: ಮದುವೆ, ಗಾಡಿ ಖರೀದಿ, ಗೃಹ ಪ್ರವೇಶ ಹೀಗೆ ಶುಭ ಕಾರ್ಯಕ್ಕೆ ಏಪ್ರಿಲ್ನಲ್ಲಿರುವ ಶುಭ ದಿನಾಂಕಗಳಿವು
- 3 hrs ago ಗುಡ್ಫ್ರೈಡೆ ಆಚರಣೆ ಹುಟ್ಟಿದ್ದು ಹೇಗೆ? ಇದರ ಮಹತ್ವವೇನು ಗೊತ್ತಾ?
- 12 hrs ago ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
Don't Miss
- News RBI: ಬ್ಯಾಂಕ್ ಕೆಲಸ ಮುಗಿದಿಲ್ವಾ? ಭಯ ಬೇಡ ಮಾರ್ಚ್ 30, 31ಕ್ಕೂ ಓಪನ್ ಇರುತ್ತೆ ಆರ್ಬಿಐ ಕಚೇರಿಗಳು!
- Automobiles ಶಿಯೋಮಿಯ ಈ ಎಲೆಕ್ಟ್ರಿಕ್ ಕಾರು ಸ್ಮಾರ್ಟ್ಫೋನ್ಗಳಂತೆ ಅಗ್ಗದ ಬೆಲೆ: ರೇಂಜ್ ಕೇಳಿದ್ರೆ ತಲೆ ತಿರುಗುತ್ತೆ!
- Technology ಈ Amoled ಡಿಸ್ಪ್ಲೇ ಫೋನ್ ಬೆಲೆಯಲ್ಲಿ ಭಾರೀ ಇಳಿಕೆ!..ಈ ಆಫರ್ಗೆ ನೀವು ಫಿದಾ ಆಗ್ತೀರಾ!
- Finance ಮೊದಲ ಬಾರಿಗೆ ಅಂಬಾನಿ ಅದಾನಿ ಸೇರಿ ವ್ಯಾಪಾರ ಒಪ್ಪಂದ, ಇಲ್ಲಿದೆ ಒಪ್ಪಂದ ವಿವರ
- Sports IPL 2024: ವಿರಾಟ್ ಕೊಹ್ಲಿ ಕೆಕೆಆರ್ ಡಗೌಟ್ ನೋಡಿದ್ರೆ ಉರಿದು ಬೀಳ್ತಾರೆ; ಆರ್ಸಿಬಿ ಮಾಜಿ ಕ್ರಿಕೆಟಿಗ
- Movies "ಇವರು ಆಡೋ ಮಾತುಗಳಿಂದ ನಮ್ಮ ತಾಯಿ ಊಟ ಮಾಡ್ತಿಲ್ಲ"; ಕಣ್ಣೀರಿಟ್ಟ ವರ್ತೂರು ಸಂತೋಷ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಾಷ್ಟ್ರೀಯ ಶಿಕ್ಷಣ ದಿನಾಚರಣೆ: ಇತಿಹಾಸ, ಮಹತ್ವ ಮತ್ತು ಸಂದೇಶಗಳು
"ಖಡ್ಗಕ್ಕಿಂತ ಲೇಖನಿ ಹರಿತ" ಇದು ಶಿಕ್ಷಣಕ್ಕಿರುವ ತಾಕತ್ತು. ಹಣ ಇದ್ದವನು ಕೆಲವನ್ನು ಮಾತ್ರ ಗೆಲ್ಲಬಲ್ಲ, ಶಿಕ್ಷಣ ಇದ್ದವನು ಜಗತ್ತನ್ನೇ ಗೆಲ್ಲಬಲ್ಲ. ಇದಕ್ಕೆ ಸಾಕ್ಷಿಯಾಗಿ ದೇಶದ ಮಹಾನ್ ನಾಯಕರು ಮಾಡಿರುವ ಸಾಧನೆಗಳ ಪಟ್ಟಿ ತುಂಬಾ ಉದ್ದವಿದೆ. ಈ ಜಗತ್ತಿನಲ್ಲಿ ಶಿಕ್ಷಣ, ವಿದ್ಯೆಗೆ ಇರುವ ಮಾನ್ಯತೆ ಯಾವುದೇ ಭೌತಿಕ ವಿಷಯಗಳಿಗೆ ಶಾಶ್ವತವಾಗಿ ಸಿಗಲು ಸಾಧ್ಯವೇ ಇಲ್ಲ. ಶಿಕ್ಷಣದ ಪ್ರಾಮುಖ್ಯತೆ ಬಗ್ಗೆ ಇಷ್ಟೆಲ್ಲಾ ಪೀಠಿಕೆ ಏಕೆ ಅಂದುಕೊಂಡಿದ್ದೀರಾ, ಕಾರಣ ಇಂದು ಶಿಕ್ಷಣದ ಮಹತ್ವ ಸಾರುವ "ರಾಷ್ಟ್ರೀಯ ಶಿಕ್ಷಣ ದಿನ''.
ದಿನದ
ಮಹತ್ವ
ಸ್ವತಂತ್ರ
ಭಾರತದ
ಮೊದಲ
ಶಿಕ್ಷಣ
ಸಚಿವ
ಮೌಲಾನಾ
ಅಬುಲ್
ಕಲಾಂ
ಆಜಾದ್
ಅವರ
ಜನ್ಮದಿನದ
ಪ್ರಯುಕ್ತ
ಇಂದು
"ರಾಷ್ಟ್ರೀಯ
ಶಿಕ್ಷಣ
ದಿನವಾಗಿ''
ಆಚರಣೆ
ಮಾಡಲಾಗುತ್ತದೆ.
ದೇಶದ
ಶಿಕ್ಷಣ
ಕ್ಷೇತ್ರಕ್ಕೆ
ಆಜಾದ್
ಅವರು
ನೀಡಿದ
ಕೊಡುಗೆಯ
ಸ್ಮರಣಾರ್ಥ
2008
ರಲ್ಲಿ
ಮಾನವ
ಸಂಪನ್ಮೂಲ
ಅಭಿವೃದ್ಧಿ
ಸಚಿವಾಲಯವು
ನವೆಂಬರ್
11
ಅನ್ನು
ರಾಷ್ಟ್ರೀಯ
ಶಿಕ್ಷಣ
ದಿನವೆಂದು
ಆಚರಿಸಲು
ಘೋಷಿಸಿತು.
ಪರೀಕ್ಷಾ
ಸಮಯದಲ್ಲಿ
ಆಹಾರ
ಕ್ರಮ
ಹೀಗಿರಲಿ-'ನೆನಪಿನ
ಶಕ್ತಿ'
ಹೆಚ್ಚುತ್ತೆ
ಮೌಲಾನಾ ಅಬುಲ್ ಕಲಾಂ ಆಜಾದ್ ಕುರಿತು
1. ಆಜಾದ್ ಅವರ ಸಂಪೂರ್ಣ ಹೆಸರು - ಮೌಲಾನಾ ಸಯ್ಯಿದ್ ಅಬುಲ್ ಕಲಾಂ ಗುಲಾಮ್ ಮುಹಿಯುದ್ದೀನ್ ಅಹ್ಮದ್ ಬಿನ್ ಖೈರುದ್ದೀನ್ ಅಲ್ ಹುಸೇನಿ ಆಜಾದ್.
2. ಆರಂಭದಲ್ಲಿ ತಂದೆಯಿಂದಲೇ ಶಿಕ್ಷಣ ಪಡೆದ ಆಜಾದ್, ನಂತರ ಅಲ್ಲಿನ ಪ್ರಸಿದ್ಧ ಶಿಕ್ಷಕರಿಂದ ಶಿಕ್ಷಣವನ್ನು ಪಡೆದರು.
3. ಆಜಾದ್ ಅವರು ಅರೇಬಿಕ್ ಮತ್ತು ಪರ್ಷಿಯನ್ ಭಾಷೆಯನ್ನು ಸಹ ಕಲಿತಿದ್ದರು.
4. ತತ್ವಶಾಸ್ತ್ರ, ಗಣಿತ ಮತ್ತು ಬೀಜಗಣಿತವನ್ನು ಪ್ರಮುಖ ವಿಷಯವಾಗಿ ಅಧ್ಯಯನ ಮಾಡಿದರು. ನಂತರ ಸ್ವತಃ ಅಧ್ಯಯನ ಮಾಡುವ ಮೂಲಕ ಇಂಗ್ಲಿಷ್ ಭಾಷೆ, ವಿಶ್ವದ ಇತಿಹಾಸ ಮತ್ತು ರಾಜಕೀಯವನ್ನು ಅರಿತರು.
5. ಬಂಗಾಳದ ಇಬ್ಬರು ಪ್ರಮುಖ ಕ್ರಾಂತಿಕಾರಿಗಳಾದ ಅರವಿಂದ ಘೋಷ್ ಮತ್ತು ಶ್ಯಾಮ್ ಸುಂದರ್ ಚಕ್ರವರ್ತಿ ಅವರನ್ನು ಭೇಟಿಯಾದ ನಂತರ, ಬ್ರಿಟಿಷ್ ಆಡಳಿತದ ವಿರುದ್ಧ ಕ್ರಾಂತಿಕಾರಿ ಚಳವಳಿಗೆ ಧುಮುಕಿದರು.
6. ಆಜಾದ್ ಅವರು ಎರಡೇ ವರ್ಷಗಳಲ್ಲಿ ಉತ್ತರ ಭಾರತ ಮತ್ತು ಬಾಂಬೆಯಾದ್ಯಂತ ರಹಸ್ಯ ಕ್ರಾಂತಿಕಾರಿ ಕೇಂದ್ರಗಳನ್ನು ಸ್ಥಾಪಿಸಿದರು.
7. 1912ರಲ್ಲಿ ಮುಸ್ಲಿಮರಲ್ಲಿ ದೇಶಭಕ್ತಿಯ ಭಾವನೆಯನ್ನು ಹೆಚ್ಚಿಸಲು 'ಅಲ್-ಹಿಲಾಲ್' ಎಂಬ ಉರ್ದು ವಾರಪತ್ರಿಕೆಯನ್ನು ಪ್ರಾರಂಭಿಸಿದರು.
8. ಮೌಲಾನಾ ಅಬುಲ್ ಕಲಾಂ ಆಜಾದ್ ಅವರು ಪಂಡಿತ್ ಜವಾಹರಲಾಲ್ ನೆಹರೂ ಅವರ ಸಂಪುಟದಲ್ಲಿ 1947ರಿಂದ 1958ರವರೆಗೆ ಪ್ರಥಮ ಶಿಕ್ಷಣ ಸಚಿವರಾಗಿ ದೇಶಕ್ಕೆ ಸೇವೆ ಸಲ್ಲಿಸಿದರು. 22ರ ಫೆಬ್ರವರಿ 1958ರಂದು ಹೃದಯಾಘಾತದಿಂದ ಅವರು ನಿಧನರಾದರು.
ಸ್ವತಂತ್ರ ಭಾರತದ ಮೊದಲ ಶಿಕ್ಷಣ ಸಚಿವರಾಗಿ ಆಜಾದ್
1888ರ ನವೆಂಬರ್ 11ರಂದು ಜನಿಸಿದ ಮೌಲಾನಾ ಅಬುಲ್ ಕಲಾಂ ಆಜಾದ್ ಅವರು ಭಾರತದ ಮೊದಲ ಶಿಕ್ಷಣ ಸಚಿವರಾಗಿದ್ದರು. ಆಗಸ್ಟ್ 15ರ 1947 ರಿಂದ ಫೆಬ್ರವರಿ 2ರ 1958 ರವರೆಗೆ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಶಿಕ್ಷಣ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆ ಸ್ತುತ್ಯರ್ಹ. ದೇಶಕ್ಕೆ ಸ್ವಾತಂತ್ರ ದೊರೆತ ನಂತರ ರಾಷ್ಟ್ರದ ಇಡೀ ಶಿಕ್ಷಣ ವ್ಯವಸ್ಥೆಗೆ ಅಡಿಪಾಯ ಹಾಕುವ ನಿಟ್ಟಿನಲ್ಲಿ ಮೌಲಾನಾ ಅವರ ಕೊಡುಗೆ ನೆನೆಯಲೇಬೇಕು.
ಶಿಕ್ಷಣ ಸಚಿವರಾಗಿ ಆಜಾದ್ ಮುಕ್ತ ಭಾರತದ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸಲು ಮಹತ್ವದ ಕ್ರಮಗಳನ್ನು ಕೈಗೊಂಡರು. 1951ರಲ್ಲಿ ಭಾರತದಲ್ಲಿ ಮೊದಲ ಬಾರಿಗೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಯನ್ನು ಪ್ರಾರಂಭಿಸಿದವರು ಆಜಾದ್. ಇಂದು ದೆಹಲಿ ವಿಶ್ವವಿದ್ಯಾಲಯವಾಗಿ ಮಾರ್ಪಾಡಾಗಿರುವ ಅಂದಿನ ದೆಹಲಿಯ ದಿ ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಎಜುಕೇಶನ್ ಅನ್ನು ಸ್ಥಾಪಿಸಿದ ಕೀರ್ತಿ ಸಹ ಆಜಾದ್ ಗೆ ಸಲ್ಲುತ್ತದೆ. ಅಲ್ಲದೇ, 1953ರಲ್ಲಿ ವಿಶ್ವವಿದ್ಯಾಲಯಗಳ ಧನಸಹಾಯ ಆಯೋಗವನ್ನು ಸ್ಥಾಪಿಸಿ ದೇಶದಲ್ಲಿ ಹತ್ತಾರು ವಿಶ್ವವಿದ್ಯಾಲಯಗಳ ಹುಟ್ಟು ಹಾಗೂ ಇಂದಿನ ಉಳಿವಿಗೆ ಕಾರಣರಾಗಿದ್ದಾರೆ ಆಜಾದ್.
ಶಿಕ್ಷಣಕ್ಕೆ ಸಂಬಂಧಿಸಿದ ಗಣ್ಯರ ಪ್ರಮುಖ ಸಂದೇಶಗಳು
ಸಂದೇಶ 1
* ಇಡೀ ಜಗತ್ತನ್ನೇ ಬದಲಾಯಿಸಲು ಬಳಸಬಹುದಾದ ಅತ್ಯಂತ ಶಕ್ತಿಶಾಲಿ ಅಸ್ತ್ರ ಶಿಕ್ಷಣ - ನೆಲ್ಸನ್ ಮಂಡೇಲಾಎಕ್ಸಾಂಗೆ ಓದಿನಷ್ಟೇ ಆರೋಗ್ಯ ಮುಖ್ಯ
ಸಂದೇಶ 2
* ಶಾಲೆ ಮತ್ತು ಜೀವನದ ನಡುವಿನ ವ್ಯತ್ಯಾಸವೆಂದರೆ, ಶಾಲೆಯಲ್ಲಿ ಮೊದಲು ನಿಮಗೆ ಪಾಠ ಕಲಿಸುತ್ತಾರೆ ನಂತರ ಪರೀಕ್ಷೆಯನ್ನು ನೀಡಲಾಗುತ್ತದೆ. ಆದರೆ ಜೀವನದಲ್ಲಿ ನಿಮಗೆ ಮೊದಲು ಪರೀಕ್ಷೆಗಳು ಎದುರಾಗುತ್ತದೆ, ನಂತರ ಅದರಿಂದ ನಾವು ಪಾಠ ಕಲಿಯುತ್ತೇವೆ- ಟಾಮ್ ಬೊಡೆಟ್
ಸಂದೇಶ 3
* ನಾವು ಪ್ರಶ್ನೆಗಳಿಗೆ ಉತ್ತರವನ್ನು ಹುಡುಕುವ ಮೂಲಕ ಕಲಿಯುತ್ತೇವೆಯೋ ಹೊರತು, ನಾವಾಗಿಯೇ ಪ್ರಶ್ನೆ ಇಲ್ಲದೆ ಉತ್ತರವನ್ನು ಹುಡುಕುವ ಪ್ರಯತ್ನವನ್ನೇ ಮಾಡುವುದಿಲ್ಲ- ಲಾಯ್ಡ್ ಅಲೆಕ್ಸಾಂಡರ್
ಸಂದೇಶ 4
* ಒಬ್ಬ ವ್ಯಕ್ತಿಗೆ ಒಂದು ಮೀನು ಕೊಟ್ಟರೆ ನೀವು ಅವನಿಗೆ ಒಂದು ದಿನದ ಆಹಾರ ಕೊಟ್ಟಂತೆ, ಆದರೆ ಅದೇ ವ್ಯಕ್ತಿಗೆ ಮೀನು ಹಿಡಿಯುವುದನ್ನೇ ಕಲಿಸಿದರೆ ಮತ್ತು ನೀವು ಅವನಿಗೆ ಆತನ ಜೀವಿತಾವಧಿ ಆಹಾರ ನೀಡಿದಂತೆ - ಮೈಮೋನೈಡ್ಸ್
ವಿದ್ಯಾರ್ಥಿಗಳು ಅರ್ಧಕ್ಕೆ ಶಾಲೆ ಬಿಡಲು ಕಾರಣವೇನು ಗೊತ್ತೇ?
ಸಂದೇಶ 5
* ಶಾಲೆಯಲ್ಲಿ ನಾವು ಏನ್ನನ್ನು ಕಲಿತಿದ್ದೇವೋ ಅದ್ದನ್ನು ಮರೆತ ನಂತರವೂ ನೆನಪಿನಲ್ಲೇ ಉಳಿಯುವುದೇ ಶಿಕ್ಷಣ - ಆಲ್ಬರ್ಟ್ ಐನ್ ಸ್ಟೈನ್
ಸಂದೇಶ 6
*ನೀವು ಏನು ಮಾಡಬಾರದು ಎಂಬುದು ನೀವು ಮಾಡಬಹುದಾದ ವಿಷಯಗಳ ಮೇಲೆ ಹಸ್ತಕ್ಷೇಪ ಮಾಡಲು ಬಿಡಬೇಡಿ -ಜಾನ್ ಆರ್ ವುಡನ್
ಸಂದೇಶ 7
* ಶಿಕ್ಷಣ ಎಂಬುದು ಕೇವಲ ಕೆಲಸವನ್ನು ಹೇಳಿಕೊಡುವುದಲ್ಲ, ಅದು ಜೀವನವನ್ನೇ ಕಲಿಸುತ್ತದೆ - ಡಬ್ಲ್ಯು ಇ ಬಿ ದು ಬ್ಯಾಸ್
ಸಂದೇಶ 8
* ಶಿಕ್ಷಣವು ಆತ್ಮವಿಶ್ವಾಸವನ್ನು ವೃದ್ಧಿಸುತ್ತದೆ, ಆತ್ಮವಿಶ್ವಾಸವು ಭರವಸೆಯನ್ನು ತುಂಬುತ್ತದೆ, ಭರವಸೆ ಶಾಂತಿಯನ್ನು ಬೆಳೆಸುತ್ತದೆ - ಕನ್ಫ್ಯೂಷಿಯಸ್