Just In
Don't Miss
- Movies ಅರ್ಜುನ್ ಮಹಾಕ್ಷಯ್ ಅಡ್ಡಾದಲ್ಲೂ ಆಯುಧ ಪೂಜೆ; 'ಮ್ಯಾಕ್ಸ್' ಕ್ರೇಜಿ ಅಪ್ಡೇಟ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- News ಮಂಡ್ಯದ ‘ಹಲವು ಸುಮಲತಾ’ ತಂತ್ರ ಬೆಂಗಳೂರು ಗ್ರಾಮಾಂತದಲ್ಲೂ ಬಂತಾ? ಮತ್ತೊಬ್ಬ ಡಾ ಸಿಎನ್ ಮಂಜುನಾಥ್ ಕಣಕ್ಕೆ!
- Sports IPL 2024: ರಾಜಸ್ಥಾನ್ ರಾಯಲ್ಸ್ vs ಡೆಲ್ಲಿ ಕ್ಯಾಪಿಟಲ್ಸ್ ರೋಚಕ ಪಂದ್ಯದ ಟಾಸ್ ವರದಿ, ಆಡುವ 11ರ ಬಳಗ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವೃಶ್ಚಿಕ ರಾಶಿಯರವರಲ್ಲಿ ಕಾಣಸಿಗುವ ಗುಣಗಳಿವು
ಪ್ರತಿಯೊಂದು ರಾಶಿಚಕ್ರಗಳಿಗೂ ಅದರದ್ದೇ ಆಗಿರುವ ಗುಣ, ಅವಗುಣಗಳು ಇದ್ದೇ ಇರುವುದು. ಇಷ್ಟು ಮಾತ್ರವಲ್ಲದೆ, ಕೆಲವೊಂದು ಸಮಯದಲ್ಲಿ ರಾಶಿಗಳಿಗೆ ಕೆಟ್ಟ ಸಮಯವಿದ್ದರೆ, ಇನ್ನು ಕೆಲ ಕಾಲ ಒಳ್ಳೆಯದಾಗಿರುವುದು. ಈಗ ತುಲಾ ರಾಶಿಯಲ್ಲಿದ್ದ ಸೂರ್ಯನ ಪ್ರಭಾವವು ವೃಶ್ಚಿಕ ರಾಶಿಗೆ ಬಂದಿದ್ದು, ಇನ್ನು ಮುಂದೆ ವೃಶ್ಚಿಕ ರಾಶಿಯವರಿಗೆ ತುಂಬಾ ಶಕ್ತಿಯುತ ಸಮಯ. ಸೂರ್ಯನು ಎಂಟನೇ ರಾಶಿ ವೃಶ್ಚಿಕವನ್ನು ಪ್ರವೇಶಿಸಿರುವನು. ಇದರಿಂದಾಗಿ ಇದುವರೆಗೆ ವೃಶ್ಚಿಕ ರಾಶಿಯವರನ್ನು ತುಂಬಾ ಅಪಾರ್ಥ ಮಾಡಿಕೊಂಡಿದ್ದವರು ಇನ್ನು ಸರಿಯಾಗಿ ನಡೆದುಕೊಳ್ಳಲಿರುವರು. ಈ ಋತುವಿನಲ್ಲಿ ಭಾವನೆಗಳು, ವೈಯಕ್ತಿಕ ಬೆಳವಣಿಯು ನಡೆಯಲಿದೆ.
ವೃಶ್ಚಿಕ ರಾಶಿಯವರಾಗಿದ್ದರೆ, ಈಗ ನಿಮಗೆ ಇದು ಒಳ್ಳೆಯ ಸಮಯ. ವೃಶ್ಚಿಕ ರಾಶಿಯವರು ಇಲ್ಲಿ ಹಿಂದಿನ ಕೆಲವೊಂದು ಕೆಟ್ಟ ಸಮಯವನ್ನು ಮರೆತು ಆಧ್ಯಾತ್ಮಿಕವಾಗಿ ಹೊಸತನವನ್ನು ಪಡೆಯಬಹುದು. ಮುಂದಿನ ಕೆಲವು ತಿಂಗಳು ವೃಶ್ಚಿಕ ರಾಶಿಯವರಿಗೆ ತುಂಬಾ ಮಹತ್ವದ್ದಾಗಿರುವುದು ಮತ್ತು ಜೀವನದಲ್ಲಿ ನೀವೇನು ಬಯಸುತ್ತಿದ್ದೀರಿ ಎಂದು ತಿಳಿದುಕೊಳ್ಳಬೇಕಾಗಿದೆ. ಇಲ್ಲಿ ಭಾವನೆಗಳು ತುಂಬಾ ಆಳವಾಗಿ ಇರುವ ಕಾರಣದಿಂಧಾಗಿ ಜೀವನದಲ್ಲಿನ ಬದಲಾವಣೆಗಳ ಬಗ್ಗೆ ಮಹತ್ವದ ದೃಢ ನಿರ್ಧಾರ ಅನಿವಾರ್ಯ. ನಿಮ್ಮತ್ತ ಬರುತ್ತಿರುವಂತಹ ಶಕ್ತಿಯನ್ನು ದೂರ ಮಾಡದೆ, ಪ್ರಕೃತಿಗೆ ಅನುಗುಣವಾಗಿ ಸಾಗಿ.
ದಕ್ಷಿಣ ಕನ್ನಡದ ಪ್ರಸಿದ್ಧ ಜ್ಯೋತಿಷ್ಯರು, ಆಚಾರ್ಯ ಶ್ರೀ ರಾಘವೇಂದ್ರ ಭಟ್ ಕುಡ್ಲ.
ಕಟೀಲು ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಉಪಾಸಕರು ಪ್ರೀತಿ- ಪ್ರೇಮ ವಿಚಾರ, ಸತಿ- ಪತಿ ಕಲಹ, ಮದುವೆ ವಿಳಂಬ, ಸಂತಾನ, ಉದ್ಯೋಗ, ವ್ಯಾಪಾರ ಸಮಸ್ಯೆ, ದೃಷ್ಟಿ ದೋಷ, ಕುಜ ದೋಷ, ವಾಮಾಚಾರ ಬಾಧಿತರಿಗೆ ಪರಿಹಾರ ನಿಶ್ಚಿತ.
ಹಣಕಾಸು ಸಮಸ್ಯೆ, ಅನಾರೋಗ್ಯ, ಶತ್ರು ಬಾಧೆ, ಗೃಹ ನಿರ್ಮಾಣದಲ್ಲಿ ಅಡೆ-ತಡೆಗಳಿದ್ದಲ್ಲಿ ಸುಲಭ ಪರಿಹಾರ ಒದಗಿಸಲಿದ್ದಾರೆ. ನಿಮ್ಮ ಯಾವುದೇ ಸಮಸ್ಯೆಗೆ ಒಮ್ಮೆ ಭೇಟಿ ನೀಡಿ. ದುರ್ಗಾ ಅನುಗ್ರಹ ಜ್ಯೋತಿಷ್ಯ ಕೇಂದ್ರ ಮೊಬೈಲ್ ಫೋನ್ ಸಂಖ್ಯೆ 9945699005
ವೃಶ್ಚಿಕ ರಾಶಿ ಬಗ್ಗೆ ತಿಳಿಯಿರಿ
ಜನ್ಮ ದಿನಾಂಕಕ್ಕೆ ಅನುಗುಣವಾಗಿ 23 ಅಕ್ಟೋಬರ್ ನಿಂದ 22 ನವಂಬರ್
ರಾಶಿ: ವೃಶ್ಚಿಕ
ರಾಶಿಯ ಅಧಿಪತಿ ಪ್ಲೂಟೋ
ಅಂಶ: ನೀರು
ಗುಣ: ಸ್ಥಿರ
ಋತು: ಪತನ
ರಾಶಿ ಲಕ್ಷಣಗಳು
ಸಮಸ್ಯೆಗಳಿಗೆ ಹೆದರಲ್ಲ
ಪ್ಲೂಟೋ ಅಧಿಪತ್ಯವಿರುವಂತಹ ಈ ರಾಶಿಯಲ್ಲಿ ಜನಿಸಿದವರಲ್ಲಿ ಹೆಚ್ಚಿನ ಆಸಕ್ತಿದಾಯವಾಗಿರುವುದು. ಪ್ಲೂಟೋ ಎನ್ನುವುದು ಬಹಿರಂಗಪಡಿಸುವ, ಪುನರುಜ್ಜೀವನ ಮತ್ತು ಮರುಹುಟ್ಟಿನ ಸಂಕೇತವಾಗಿದೆ. ವೃಶ್ಚಿಕ ರಾಶಿಯವರು ಅವರ ಅಪೇಕ್ಷಿತ ಗುಣಕ್ಕೆ ಜನಪ್ರಿಯರು. ವೃಶ್ಚಿಕ ರಾಶಿಯವರ ಅಂಶವು ನೀರಿನದ್ದಾಗಿದ್ದರೂ ಹೆಚ್ಚಿನವರು ಇದೊಂದು ಬೆಂಕಿಯ ಅಂಶದ ರಾಶಿ ಎಂದು ಗೊಂದಲ ಮಾಡಿಕೊಳ್ಳುವರು.
ನಿಗೂಢ, ಕಾಲ್ಪನಿಕ ಹಾಗೂ ಭಾವನಾತ್ಮಕವಾಗಿ ಇವರು ತುಂಬಾ ತೀವ್ರವಾಗಿ ಇರುವರು. ಜೀವನದಲ್ಲಿ ಯಾವುದೇ ಉನ್ನತ ಗುರಿ ತಲುಪಲು ನಿಮ್ಮ ದಾರಿಗೆ ಅಡ್ಡವಾಗಿ ಇರುವಂತಹ ಯಾವುದೇ ಅಡೆತಡೆಯನ್ನು ನೀವು ದೂರ ಮಾಡಲು ಹೆದರಲ್ಲ. ಸುತ್ತಲು ಇರುವವರ ಬಗ್ಗೆ ನಿಮಗೊಂದು ಆಲೋಚನೆ ಇರುವುದು ಹಾಗೂ ನಿಮ್ಮನ್ನು ಪ್ರೀತಿಸುವ ಜನರೊಂದಿಗೆ ನೀವು ತುಂಬಾ ಪ್ರಾಮಾಣಿಕವಾಗಿ ಇರುವಿರಿ.
ಯಾರ ಜತೆಗೆ ಹೊಂದಿಕೊಳ್ಳುವಿರಿ
ವೃಶ್ಚಿಕ ರಾಶಿಯವರಿಗೆ ಸಂಬಂಧವು ಯಾವಾಗಲೂ ದೀರ್ಘ, ಅರ್ಥಪೂರ್ಣ ಹಾಗೂ ನೈಜವಾಗಿ ಇರಬೇಕು. ಇದು ಮೀನ ಹಾಗೂ ಕರ್ಕಾಟಕ ರಾಶಿಯವರಿಗೆ ಸಮಾನವಾಗಿರುವುದು. ಯಾಕೆಂದರೆ ಈ ರಾಶಿಯವರು ಭಾವನಾತ್ಮಕವಾಗಿ ಸೂಕ್ಷ್ಮವಾಗಿರುವರು. ನೀವು ಕಠಿಣವಾಗಿ ಕೆಲಸ ಮಾಡಲು ಮತ್ತು ಅಡೆತಡೆಗಳನ್ನು ಮೀರಿ ನಿಲ್ಲಲು ಪ್ರಯತ್ನಿಸುವ ಕಾರಣ ಮಿಥುನ, ಕನ್ಯಾ ಮಕರ ರಾಶಿಯವರ ಜತೆಗೆ ಒಳ್ಳೆಯ ರೀತಿ ಹೊಂದಿಕೊಳ್ಳುವಿರಿ.
ನಿಮ್ಮ ವೃತ್ತಿ
ಯಶಸ್ಸಿನ ಆಕಾಂಕ್ಷೆಯನ್ನು ಈಡೇರಿಸಲು ನೀವು ಯಾವುದೇ ಪರಿಸ್ಥಿತಿಯನ್ನು ಮೀರಿ ನಿಲ್ಲಬಲ್ಲಿರಿ ಮತ್ತು ಇದು ಯಾವುದೇ ವೃತ್ತಿಗೂ ತುಂಬಾ ಲಾಭದಾಯಕವಾಗಿರುವುದು. ಯಾವುದೇ ವೃತ್ತಿಯಲ್ಲಿ ನಿಮ್ಮ ಈ ಗುಣಗಳಿಂದ ಯಶಸ್ಸವನ್ನು ಪಡೆಯಬಹುದು. ತೆರಿಗೆ, ಮಾರ್ಪಾಡು ಮಾಡುವಂತಹ ಕೆಲವೊಂದು ಹುದ್ದೆಗಳು ನಿಮಗೆ ಒಳ್ಳೆಯದು. ಇವುಗಳಲ್ಲಿ ಮುಖ್ಯವಾಗಿ ಮನಶಾಸ್ತ್ರಜ್ಞ, ಸಂಪಾದಕ, ಲೇಖಕ, ವೈದ್ಯ, ಹಣಕಾಸು ನಿರ್ವಹಣೆ ಅಥವಾ ಕಾರ್ಯನಿರ್ವಾಹಕನ ಹುದ್ದೆಗಳು ಒಳ್ಳೆಯದು. ವೃತ್ತಿಗೆ ಸಂಬಂಧಿಸಿದಂತೆ ನೀವು ಕೆಲವೊಂದು ಕಟ್ಟುಪಾಡುಗಳು ಕೂಡ ಇದೆ ಎಂದು ತಿಳಿಯುವುದು ಅಗತ್ಯವಾಗಿರುವುದು.
ಜೀವನದ ಧ್ಯೇಯ
ವೃಶ್ಚಿಕ ರಾಶಿಯವರು ಯಾವಾಗಲೂ ಗೊಂದಲದಲ್ಲಿರುವ ಮನಸ್ಥಿತಿ. ಯಾಕೆಂದರೆ ಈ ರಾಶಿಯವರಲ್ಲಿ ಕತ್ತಲು ಹಾಗೂ ಬೆಳಕು ಎರಡೂ ಇರುವುದು. ಹೀಗಾಗಿ ಜೀವನದಲ್ಲಿ ಎರಡು ಕಡೆಗೆ ಮಹತ್ವ ನೀಡಲು ಹೋಗುವ ವೇಳೆ ಗೊಂದಲವು ಉಂಟಾಗುವುದು. ಆದರೆ ಬದಲಾವಣೆಯನ್ನು ನೀವು ಅನಿವಾರ್ಯ ಮತ್ತು ಒಳ್ಳೆಯದಕ್ಕಾಗಿ ಎಂದು ತಿಳಿಯುತ್ತೀರಿ. ನಿಮ್ಮ ಜೀವನದ ಪ್ರಮುಖ ಉದ್ದೇಶವೆಂದರೆ ಬೇರೆಯವರು ಬದಲಾವಣೆಯು ಸಾಧ್ಯ ಎನ್ನುವುದನ್ನು ತಿಳಿಯುವುದು. ಇದು ಎಷ್ಟೇ ಕಷ್ಟವಾಗಿದ್ದರೂ ನೀವು ಮಾಡುವಿರಿ. ಸುರಂಗದ ಕೊನೆಗೆ ಬೆಳಕು ಇದ್ದೇ ಇರುತ್ತದೆ ಎನ್ನುವ ಮಾತಿನಂತೆ ವೃಶ್ಚಿಕ ರಾಶಿಯವರು ಕತ್ತಲಿನಲ್ಲಿ ಇರುವವರಿಗೆ ಯಾವಾಗಲೂ ನೆರವಾಗುವರು.