Just In
- 3 hrs ago ವಾರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಈ 7 ದಿನಗಳು ನಿಮಗೆ ಹೇಗಿರಲಿದೆ?
- 4 hrs ago ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- 5 hrs ago ಪರಿಸರ ದಿನ: ಇಂದು ನೀವು ಹೀಗೆ ಮಾಡಿದರೆ ಮುಂದಿನ ಪೀಳಿಗೆಗೆ ನೀಡುವ ದೊಡ್ಡ ಆಸ್ತಿ
- 6 hrs ago ಲಿವರ್ ಸಮಸ್ಯೆಯಿದೆ ಎಂದು ಸೂಚಿಸುವ ಲಕ್ಷಣಗಳಿವು, ಕುಟುಂಬಸ್ಥರು ಲಿವರ್ ದಾನ ಮಾಡಿದರೆ ವ್ಯಕ್ತಿಯ ಪ್ರಾಣ ಉಳಿಸಬಹುದು
Don't Miss
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Movies ಡಿ. ಕೆ ಸುರೇಶ್ ಪರ ನಟ ದರ್ಶನ್ ಪ್ರಚಾರ; ಆ 2 ವಿಧಾನಸಭಾ ಕ್ಷೇತ್ರಗಳಲ್ಲಿ ಮತಬೇಟೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವಿನಾಯಕ ಚತುರ್ಥಿಗೆ ಈ ಪರಿಹಾರ ಮಾಡಿದರೆ ಸಮಸ್ಯೆಗಳು ದೂರಾಗುವುದು, ಹಣದ ಕೊರತೆಯೇ ಇರಲ್ಲ
ಗಣಪತಿ ಬಪ್ಪ ಮೋರಿಯ...... ವಿನಾಯಕ ಚತುರ್ಥಿಯಂದು ಅಂದರೆ ಆಗಸ್ಟ್ 31ರಂದು ಗಣಪತಿಯನ್ನು ಸ್ವಾಗತಿಸಲು ಮನ-ಮನೆಗಳಲ್ಲಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಯಾರು ಭಕ್ತಿಯಿಂದ ಗಣೇಶನನ್ನು ಪೂಜಿಸುತ್ತಾರೋ ಅವರನ್ನು ಗಣಪ ಎಂದಿಗೂ ಕೈ ಬಿಡಲ್ಲ.
ಈ ವರ್ಷ ಗಣೇಶ ಚತುರ್ಥಿ ಬುಧವಾರದಂದು ಬಂದಿದೆ. ಬುಧವಾರ ಗಣಪನಿಗೆ ತುಂಬಾ ವಿಶೇಷವಾದ ದಿನ. ಬುಧವಾರ ಗಣೇಶನಿಗೆ ದೂರ್ವ ಅರ್ಪಿಸಿ ಪೂಜಿಸಿದರೆ ತುಂಬಾ ಒಳತಾಗುವುದು ಎಂಬುವುದು ಧಾರ್ಮಿಕ ನಂಬಿಕೆ, ಇದೀಗ ಬುಧವಾರ ವಿನಾಯಕ ಚತುರ್ಥಿ ಆಚರಿಸುವಾಗ ಕೆಲವೊಂದು ಪರಿಹಾರಗಳನ್ನು ಮಾಡಿದರೆ ನಿಮ್ಮ ನಾನಾ ಸಮಸ್ಯೆಗೆ ಶುಭ ಫಲ ಸಿಗುತ್ತದೆ.
ಸಂಪತ್ತು ವೃದ್ಧಿಗೆ
*11 ದೂರ್ವಾ ಹಾಗೂ ಒಂದು ಅರಿಶಿನ ಕೊಂಬು ತೆಗೆದುಕೊಂಡು ಅದನ್ನು ಹಳದಿ ಬಟ್ಟೆಯಲ್ಲಿ ಗಂಟು ಹಾಕಿ ಗಣಪತಿಯ ಮುಂದೆ ಇಟ್ಟು ಅನಂತ ಚತುರ್ದಶಿವರೆಗೆ ಪೂಜಿಸಿ ನಂತರ ಅದನ್ನು ನೀವು ಹಣವನ್ನು ಇರಿಸುವ ಸ್ಥಳದಲ್ಲಿ ಇರಿಸಿ.
* ಮನೆಯ ಕಷ್ಟಗಳು ದೂರಾಗಿ ಆರ್ಥಿಕ ಸಂಪತ್ತು ವೃದ್ಧಸಲುಗಣೇಶ ಚತುರ್ಥಿಯ ದಿನದಂದು ಸ್ನಾನ ಮಾಡಿ ಗಣಪತಿಗೆ ಬೆಲ್ಲದೊಂದಿಗೆ ಶುದ್ಧ ತುಪ್ಪವನ್ನು ಅರ್ಪಿಸಿ. ನಂತರ ಬೆಲ್ಲವನ್ನು ಹಸುವಿಗೆ ನೀಡಿ.
ಸಂಕಲ್ಪ ನೆರವೇರಲು
ಗಣೇಶ ಚತುರ್ಥಿಯ ದಿನದಂದು ಬೆಲ್ಲದಿಂದ 21 ಸಣ್ಣ ಉಂಡೆಗಳನ್ನು ಮಾಡಿ ಗಣೇಶ ದೇವಸ್ಥಾನಕ್ಕೆ ಹೋಗಿ ದೂರ್ವಾದೊಂದಿಗೆ ಈ ಬೆಲ್ಲದ ಉಂಡೆಗಳನ್ನು ಅರ್ಪಿಸಿ ಗಣಪತಿಗೆ ನಿಮ್ಮ ಇಷ್ಟಾರ್ಥವನ್ನು ಹೇಳಿ. ಹೀಗೆ ಮಾಡಿದರೆ ನೀವು ಬಯಸಿದ್ದು ನೆರವೇರುವುದು.
ಗಣೇಶ ಯಂತ್ರವನ್ನು ಸ್ಥಾಪಿಸಿ
ಗಣೇಶ ಚತುರ್ಥಿಯ ದಿನದಂದು ಗಣೇಶ ಯಂತ್ರವನ್ನು ಸರಿಯಾದ ರೀತಿಯಲ್ಲಿ ಸ್ಥಾಪಿಸಿ. ಅದನ್ನು ನಿಯಮಿತವಾಗಿ ಪೂಜೆ ಮಾಡಿ. ಹೀಗೆ ಮಾಡುವುದರಿಂದ ಮನೆಯಲ್ಲಿ ಸುಖ, ಸಮೃದ್ಧಿ, ಸುಖ, ಶಾಂತಿ ನೆಲೆಸುತ್ತದೆ.
ಗಣೇಶನಿಗೆ ಅಭಿಷೇಕ
ಗಣೇಶ ಉತ್ಸವದಲ್ಲಿ ಗಣಪತಿಗೆ ಅಭಿಷೇಕ ಮಾಡುವುದರಿಂದ ವಿಶೇಷ ಫಲ ದೊರೆಯುತ್ತದೆ. ಈ ದಿನ ಗಣೇಶನಿಗೆ ಶುದ್ಧ ನೀರಿನಿಂದ ಅಭಿಷೇಕ ಮಾಡಿ. ಇದರೊಂದಿಗೆ ಗಣಪತಿ ಅಥರ್ವಶೀರ್ಷ ಪಠಿಸಿ.
ವಿಘ್ನ ನಿವಾರಿಸಲು
ನೀವು ಕೆಲವು ತೊಂದರೆಗಳಿಂದ ಸುತ್ತುವರೆದಿದ್ದರೆ ಅದನ್ನು ನಿವಾರಿಸಲು ಗಣೇಶ ಉತ್ಸವದ ಸಮಯದಲ್ಲಿ, ಗಣಪತಿಯ, 'ಓಂ ಗಂ ಗೌಂ ಗಣಪತಯೇ ವಿಘ್ನ ವಿನಾಶಿನೇ ಸ್ವಾಹಾ' ಎಂಬ ಮಂತ್ರವನ್ನು 21 ಬಾರಿ ಪಠಿಸಿ.
ಸಂತೋಷದ ದಾಂಪತ್ಯ ಜೀವನಕ್ಕಾಗಿ
ಪತಿ-ಪತ್ನಿಯರ ನಡುವೆ ಯಾವುದೋ ವಿಷಯಕ್ಕೆ ಜಗಳವಾದರೆ, ಗಣೇಶ ಚತುರ್ಥಿಯ ದಿನದಂದು ಇಬ್ಬರೂ ಸೇರಿ 11 ಅಥವಾ 21 ಜೋಡಿ ದೂರ್ವಾವನ್ನು ಗಣಪತಿಗೆ ಅರ್ಪಿಸಬೇಕು. ಹೀಗೆ ಮಾಡುವುದರಿಂದ ದಾಂಪತ್ಯ ಜೀವನದಲ್ಲಿನ ಸಮಸ್ಯೆಗಳು ದೂರಾಗಿ ಸಂತೋಷ ಹೆಚ್ಚುವುದು.
ಇತರ ಪರಿಹಾರಗಳು
* ನೀವು ಮಾತನಾಡಲು ಹಿಂಜರಿಯುತ್ತಿದ್ದರೆ ಅಥವಾ ತೊದಲುವಿಕೆ ಮತ್ತು ಬಿಕ್ಕಿ-ಬಿಕ್ಕಿ ಮಾತನಾಡುವದೋಷಗಳನ್ನು ಹೊಂದಿದ್ದರೆ, ಗಣೇಶನಿಗೆ ಬಾಳೆಹಣ್ಣಿನ ಮಾಲೆಯನ್ನು ಮಾಡಿ ಹಾಕಿ.
* ನಿಮ್ಮ ಯಾವುದೇ ಕೆಲಸವು ಪೂರ್ಣಗೊಳ್ಳದೆ ನಿಂತು ಹೋಗುತ್ತಿದ್ದರೆ 4 ತೆಂಗಿನಕಾಯಿಯನ್ನು ಮಾಲೆ ಮಾಡಿ ಗಣೇಶನಿಗೆ ಅರ್ಪಿಸಿ ಗಣೇಶನನ್ನು ಪ್ರಾರ್ಥಿಸಿ. ನಿಮ್ಮ ಕೆಲಸವು ನಿರ್ವಿಘ್ನವಾಗಿ ನೆರವೇರುವುದು.
* ಗಣೇಶ ಚತುರ್ಥಿಯಂದು ಆನೆಗೆ ಆಹಾರ ತಿನ್ನಿಸಿ ಹಾಗೂ ಗಣೇಶನ ದೇವಸ್ಥಾನಕ್ಕೆ ಹೋಗಿ ನಿಮ್ಮ ಸಮಸ್ಯೆ ದೂರವಾಗಲು ದೇವರನ್ನು ಪ್ರಾರ್ಥಿಸಿ. ಕೆಲವೇ ದಿನಗಳಲ್ಲಿ ನಿಮ್ಮ ಎಲ್ಲಾ ಸಮಸ್ಯೆಗಳು ಬಗೆಹರಿಯುತ್ತವೆ.
ಬುಧವಾರ ಈ ಪರಿಹಾರಗಳನ್ನು ಮಾಡಿ
* ಮಗಳಿಗೆ ಮದುವೆ ತಡವಾಗುತ್ತಿದ್ದರೆ ಗಣೇಶ ಚತುರ್ಥಿಯಂದು ಮಗಳಿಗೆ ಮದುವೆಯಾಗಬೇಕೆಂದು ಬಯಸಿ ಉಪವಾಸವಿದ್ದು ಗಣಪನನ್ನು ಪೂಜಿಸಿ, ಕೂಡಲೇ ಒಳ್ಳೆಯ ಸಂಬಂಧ ಕೂಡಿ ಬರುವುದು.
* ಹುಡುಗನಿಗೆ ಮದುವೆ ತಡವಾಗುತ್ತಿದ್ದರೆ ಣೇಶ ಚತುರ್ಥಿಯಂದು ಗಣೇಶನಿಗೆ ಹಳದಿ ಬಣ್ಣದ ಸಿಹಿಯನ್ನು ಅರ್ಪಿಸಬೇಕು. ಇದರಿಂದ ಬೇಗನೆ ಕಂಕಣ ಬಲ ಕೂಡಿ ಬರುವುದು.
ಗಣೇಶ ಚತುರ್ಥಿಯ ಪೂಜೆಯ ಸಮಯದಲ್ಲಿ ಕೆಂಪು ಬಟ್ಟೆಯ ಮೇಲೆ ಶ್ರೀಯಂತ್ರವನ್ನು ಇಟ್ಟು ಅದರ ಮಧ್ಯದಲ್ಲಿ ವೀಳ್ಯದೆಲೆಯನ್ನು ಇರಿಸಿದರೆ, ಗಣೇಶನು ಪ್ರಸನ್ನನಾಗುತ್ತಾನೆ.ರ ನಂತರ ಈ ಬಟ್ಟೆಯನ್ನು ಸುರಕ್ಷಿತವಾಗಿ ಮನೆ ಕಬೋರ್ಡ್ ಅಥವಾ ಪೆಟ್ಟಿಗೆಯಲ್ಲಿ ಇಟ್ಟರೆ ಮನೆಯಲ್ಲಿ ಹಣದ ಕೊರತೆ ಇರುವುದಿಲ್ಲ.
ಮನೆಯ ಪ್ರಗತಿಯಲ್ಲಿ ಸಮಸ್ಯೆಗಳಿದ್ದರೆ ಅಥವಾ ಏನಾದರೂ ತೊಂದರೆಯಾಗಿದ್ದರೆ, ಚತುರ್ಥಿಯ ದಿನದಂದು ಮನೆಯ ಪೂರ್ವ ಮತ್ತು ಉತ್ತರ ದಿಕ್ಕಿನಲ್ಲಿ ವೀಳ್ಯದೆಲೆಯನ್ನು ಬೆಳ್ಳಿಯ ಪಾತ್ರೆಯಲ್ಲಿ ಇರಿಸಿ. ಅನಂತ ಚತುರ್ದಶಿಯವರೆಗೆ ದೀಪ ಬೆಳಗಿ ಧೂಪ ಹಚ್ಚಿ. ಹೀಗೆ ಮಾಡಿದರೆ ನಿಮ್ಮ ಸಮಸ್ಯೆ ದೂರಾಗುವುದು.