Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ದ್ರವಾಹಾರ ಪಥ್ಯ ಮಾಡಿ ಮೆದುಳಿಗೆ ಹಾನಿ ಮಾಡಿಕೊಂಡ ಮಹಿಳೆ!
ದೇಹದಲ್ಲಿ ಅತಿಯಾಗಿ ಬೆಳೆದಿರುವ ಬೊಜ್ಜು ಕರಗಿಸಿಕೊಳ್ಳಬೇಕು, ಎಲ್ಲರ ಮುಂದೆ ಫಿಟ್ ಆಗಿ ಕಾಣಿಸಿಕೊಳ್ಳಬೇಕು ಎನ್ನುವಂತಹ ಬಯಕೆಯು ಪ್ರತಿಯೊಬ್ಬ ಮಹಿಳೆಯಲ್ಲೂ ಇರುವುದು. ಆದರೆ ಹೆಚ್ಚಿನ ಮಹಿಳೆಯರಿಗೆ ತಮ್ಮ ದೇಹದಲ್ಲಿ ಇರುವಂತಹ ಬೊಜ್ಜು ತುಂಬಾ ನಾಚಿಕೆ ಉಂಟು ಮಾಡುವುದು. ಇದಕ್ಕಾಗಿ ಅವರು ಪ್ರತಿಯೊಂದು ವಿಧಾನವನ್ನು ಅಳವಡಿಸಿಕೊಂಡು ದೇಹದ ತೂಕ ಕಡಿಮೆ ಮಾಡಿಕೊಳ್ಳಬೇಕು ಎಂದು ಬಯಸುವರು. ಆದರೆ ಇದು ಕೆಲವೊಂದು ಸಂದರ್ಭದಲ್ಲಿ ಸಾಧ್ಯವಾಗುವುದು. ದೇಹವು ಫಿಟ್ ಇರಬೇಕು ಎಂದಾದರೆ ಆಗ ಆಹಾರ ಕ್ರಮವು ಸರಿಯಾಗಿರಬೇಕು, ವ್ಯಾಯಾಮ ಮಾಡಬೇಕು. ಇದೆಲ್ಲವೂ ಇದ್ದರೆ ಆಗ ದೇಹದ ತೂಕ ಇಳಿಸಿಕೊಂಡು ಫಿಟ್ ಆಗಿರಬಹುದು.

ಇನ್ನು ಕೆಲವು ಜನರು ಅವರಿವರು ಹೇಳಿದಂತಹ ಮಾತನ್ನು ಕೇಳಿ ತುಂಬಾ ವಿಚಿತ್ರವಾದ ತಂತ್ರಗಳನ್ನು ಅನುಸರಿಸಿಕೊಂಡು ಬೊಜ್ಜು ಇಳಿಸಲು ಪ್ರಯತ್ನಿಸುವರು. ಆದರೆ ಇದು ಕೆಲವೊಮ್ಮೆ ತುಂಬಾ ಹಾನಿ ಉಂಟು ಮಾಡುವುದು. ಹೀಗೆ ಸರಿಯಾದ ಜ್ಞಾನವಿಲ್ಲದೆ ಇರುವವರಿಂದ ಸಲಹೆಗಳನ್ನು ಪಡೆದು, ಅಳವಡಿಸಿಕೊಂಡರೆ ಆಗ ಖಂಡಿತವಾಗಿಯೂ ಅದರಿಂದ ಅಡ್ಡಪರಿಣಾಮಗಳು ಬೀರುವುದು. ಇದರಿಂದ ವೃತ್ತಿಪರರು ಸೂಚಿಸಿರುವ ವಿಧಾನಗಳನ್ನು ಮಾತ್ರ ಅನುಸರಿಸಬೇಕು. ಇಂತಹ ಒಂದು ಘಟನೆಯನ್ನು ನಾವು ನಿಮಗೆ ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ. ಇಲ್ಲೊಬ್ಬರು ಮಹಿಳೆ ಕೇವಲ ದ್ರವಾಹಾರದ ಆಹಾರ ಕ್ರಮ ಅನುಸರಿಸಲು ಹೋಗಿ ಈಗ ಮೆದುಳಿಗೆ ಶಾಶ್ವತವಾಗಿ ಹಾನಿ ಮಾಡಿಕೊಂಡಿರುವರು. ಇದರ ಬಗ್ಗೆ ನೀವು ಮುಂದಕ್ಕೆ ಓದುತ್ತಾ ಸಾಗಿ....

ಕೇವಲ ದ್ರವಾಹಾರ ಸೇವನೆ ಮಾಡಬೇಕೆಂದು ಸೂಚಿಸಲಾಗಿತ್ತು
ತನ್ನ 40ರ ಹರೆಯದಲ್ಲಿದ್ದ ಮಹಿಳೆಗೆ ಕೇವಲ ದ್ರವಾಹಾರ ಮಾತ್ರ ಸೇವನೆ ಮಾಡಬೇಕು ಎಂದು ಹೇಳಲಾಗಿತ್ತು. ಇಸ್ರೇಲಿನ ಟೆಲ್ ಅವಿವ್ ಆಸ್ಪತ್ರೆಗೆ ಆಕೆಯನ್ನು ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ದಾಖಲಿಸಲಾಯಿತು.

ಮೂರು ವಾರಗಳ ಕಾಲ ಕೇವಲ ದ್ರವಾಹಾರ ಸೇವನೆ ಮಾಡುತ್ತಿದ್ದರು
ಟೆಲ್ ಅವಿವ್ ನಲ್ಲಿ ಆಕೆ ಒಬ್ಬರು ಪರ್ಯಾಯ ತಜ್ಞರನ್ನು ಭೇಟಿಯಾದ ಬಳಿಕ ಮೂರು ವಾರಗಳ ಕಾಲ ಕೇವಲ ದ್ರವಾಹಾರ ಮಾತ್ರ ಸೇವನೆ ಮಾಡುತ್ತಲಿದ್ದರು ಎಂದು ವರದಿಗಳು ಹೇಳಿವೆ.

ಆಕೆಯ ದ್ರವಾಹಾರದಲ್ಲಿ ಏನೆಲ್ಲಾ ಇತ್ತು
ಆಹಾರ ಪಥ್ಯದಿಂದಾಗಿ ಮಹಿಳೆಗೆ ಕೇವಲ ನೀರು ಮತ್ತು ಹಣ್ಣಿನ ಜ್ಯೂಸ್ ಗಳನ್ನು ಮಾತ್ರ ಸೇವಿಸಲು ಹೇಳಲಾಗಿತ್ತು. ಇದರಿಂದಾಗಿ ಆಕೆಯ ದೇಹದಲ್ಲಿ ಉಪ್ಪಿನಾಂಶದ ಅಸಮತೋಲನ ಉಂಟಾಯಿತು. ಈ ಹಂತದಲ್ಲಿ ಆಕೆಯ ತೂಕವು 40 ಕೆಜಿಗಿಂತ ಕಡಿಮೆ ಆಯಿತು.

ಆಕೆಯ ಪರಿಸ್ಥಿತಿ ಬಿಗಡಾಯಿಸಿತು
ವೈದ್ಯರು ಹೇಳುವ ಪ್ರಕಾರ ಮಹಿಳೆಗೆ ಹೈಪೋನಾಟ್ರಾಮಿಯಾ ಎನ್ನುವ ಸಮಸ್ಯೆಯು ಕಾಡಿತು. ಇದು ನೀರು ನಶೆಯಾಗುವಂತಹ ಪರಿಸ್ಥಿತಿಯಾಗಿದೆ. ರಕ್ತದಲ್ಲಿ ಉಪ್ಪಿನ ಅಂಶವು ತುಂಬಾ ಕಡಿಮೆ ಆದರೆ ಈ ರೀತಿಯ ಪರಿಸ್ಥಿತಿ ಬರುವುದು. ಹೊಟ್ಟೆಯು ಸರಿಯಾಗಿ ಇಲ್ಲದೆ ಇರುವ ವೇಳೆ ಅತಿಯಾಗಿ ನೀರು ಸೇವನೆ ಮಾಡುವಂತಹ ಜನರಲ್ಲಿ ಇಂತಹ ಸಮಸ್ಯೆ ಕಾಣಿಸುವುದು. ಇವರು ವಿದ್ಯುದ್ವಿಚ್ಛೇದಗಳ ಬಗ್ಗೆ ಚಿಂತೆ ಮಾಡುವುದಿಲ್ಲ. ಮಹಿಳೆಯ ಮೆದುಳಿಗೆ ಈಗ ಶಾಶ್ವತವಾಗಿ ಹಾನಿಯಾಗಿದೆ.

ವೃತ್ತಿಪರರ ಬಗ್ಗೆ
ಇಸ್ರೇಲ್ ನಲ್ಲಿ ಇರುವಂತಹ ಕಾನೂನಿನ ಪ್ರಕಾರ ಅವರುಗೆ ಥೆರಪಿಸ್ಟ್ ಎಂದು ಹೇಳಿಕೊಳ್ಳಲು ಯಾವುದೇ ರೀತಿಯ ಪದವಿ ಬೇಕಾಗಿಲ್ಲ ಮತ್ತು ಅವರು ಆರೋಗ್ಯ ಸಂಬಂಧಿ ಸಲಹೆಗಳನ್ನು ನೀಡಬಹುದಾಗಿದೆ.
ಮುಂದಿನ ಸಲ ತೂಕ ಇಳಿಸಲು ನೀವು ಪ್ರಯತ್ನಿಸುತ್ತಿರುವಿರಾದರೆ ಆಗ ಹೆಚ್ಚು ಗಮನಹರಿಸಿ. ಇದಕ್ಕಾಗಿ ಸ್ವಲ್ಪ ಹೆಚ್ಚು ತಿಳುವಳಿಕೆ ಬೇಕು ಮತ್ತು ಸ್ವಲ್ಪ ಸಂಶೋಧನೆಯನ್ನು ನಾವು ಮಾಡಬೇಕು. ಇದರಿಂದ ಸರಿಯಾದ ಆಹಾರ ಪಥ್ಯವು ನಮಗೆ ಸಿಗುವುದು.
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆಯನ್ನು ನಮಗೆ ಬರೆದು ತಿಳಿಸಿ.



Click it and Unblock the Notifications