Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ವೈದ್ಯರೊಬ್ಬರ ನೆನಪಿನ ಶಕ್ತಿಯು ಕಡಿಮೆಯಾಗಿ, ತಮ್ಮ ರೋಗಿಗೆ 'ಬ್ರೈನ್ ಟ್ಯೂಮರ್' ಇರುವುದನ್ನೇ ಹೇಳಲು ಮರೆತರಂತೆ!!
ವೈದ್ಯೋ ನಾರಾಯಣ ಹರಿ ಎನ್ನುತ್ತೇವೆ. ಅಂದರೆ ವೈದ್ಯರು ದೇವರಿಗೆ ಸಮಾನ ಎನ್ನುವುದು ಇದರ ಅರ್ಥ. ಆದರೆ ವೈದ್ಯರು ಕೂಡ ಮಾನವರೇ ಆಗಿರುವ ಕಾರಣದಿಂದಾಗಿ ಹಲವಾರು ತಪ್ಪುಗಳು ಅವರಿಂದಲೂ ನಡೆಯುತ್ತದೆ. ಇಂತಹ ತಪ್ಪುಗಳ ಬಗ್ಗೆ ನಾವು ಈಗಾಗಲೇ ಓದಿಕೊಂಡಿರುತ್ತೇವೆ. ಅದೇನೆಂದರೆ ವೈದ್ಯರು ಶಸ್ತ್ರಚಿಕಿತ್ಸೆ ವೇಳೆ ಕತ್ತರಿ ಹಾಗೂ ಇತರ ಸಾಮಗ್ರಿಗಳನ್ನು ರೋಗಿಯ ಹೊಟ್ಟೆಯ ಒಳಗೆ ಬಿಟ್ಟಿರುವುದು. ಇಂತಹ ಅನಾಹುತಗಳು ಹಲವಾರು ನಡೆದಿದೆ. ಅದೇ ರೀತಿಯಲ್ಲಿ ಈಗ ವೈದ್ಯರೊಬ್ಬರ ನೆನಪಿನ ಶಕ್ತಿಯು ಕಡಿಮೆಯಾಗಿ, ಅವರು ತಮ್ಮ ರೋಗಿಗೆ ಮಾರಕ ಕಾಯಿಲೆ ಇರುವುದನ್ನೇ ಹೇಳಲು ಮರೆತ್ತಿದ್ದಾರೆ. ಸುಮಾರು 18 ತಿಂಗಳ ಹಿಂದೆ ಪತ್ತೆಯಾದ ಬ್ರೈನ್ ಟ್ಯೂಮರ್(ಮೆದುಳಿನ ಗಡ್ಡೆ) ಬಗ್ಗೆ ಹೇಳಲು ವೈದ್ಯರು ಮರೆತುಬಿಟ್ಟಿದ್ದಾರೆ. ರೋಗಿಗೆ ಆತನಿಗೆ ದೊಡ್ಡ ಮಟ್ಟದ ಕಾಯಿಲೆ ಇದೆ ಎಂದು ಹೇಳಲು ವೈದ್ಯರಿಗೆ ನೆನಪಿಲ್ಲ. ಇಂತಹ ಒಂದು ಅನಾಹುತ ನಡೆದಿದ್ದು, ಮುಂದೆ ಏನಾಯಿತು ಎನ್ನುವ ಕುತೂಹಲ ನಿಮ್ಮನ್ನು ಕಾಡದೆ ಇರದು. ಈ ಲೇಖನ ಓದಿಕೊಂಡು ಹೋದರೆ ನಿಮ್ಮ ಕುತೂಹಲ ಖಂಡಿತವಾಗಿಯೂ ತಣಿಯುವುದು.

ಘಟನೆಯು ನಡೆದಿರುವುದು ಚೀನಾದಲ್ಲಿ…
ಹಾಂಗ್ ಕಾಂಗ್ ನಿವಾಸಿಯಾಗಿರುವ ಲೀ ಶು-ಲಿಯಂಗ್ ಗೆ 54 ಹರೆಯ. 2005ರಲ್ಲಿ ಲೀ ಒಂದು ಸಲ ಶಸ್ತ್ರಚಿಕಿತ್ಸೆಗೆ ಒಳಗಾಗಿ ಮೆದುಳಿನ ಗಡ್ಡೆಯನ್ನು ತೆಗೆಸಿಕೊಂಡಿದ್ದರು. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದರೂ ಇದರ ಬಳಿಕ ಅವರಿಗೆ ಅವರಿಗೆ ಎಡ ಕಿವಿ ಕೇಳಿಸುತ್ತಿರಲಿಲ್ಲ.

ಒಂದು ದಿನ ಲೀ ಕುಸಿದು ಬಿದ್ದರು
ಒಂದು ದಿನ ರಸ್ತೆಯಲ್ಲೇ ಲೀ ಕುಸಿದು ಬಿದ್ದರು ಮತ್ತು ಅವರನ್ನು ತಕ್ಷಣವೇ ಯೂ ಮಾ ತೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತು. ಈ ವೇಳೆ ಪರೀಕ್ಷೆ ಮಾಡಿದಂತಹ ವೈದ್ಯರು ಮೆದುಳು ಸರಿಯಾಗಿ ಕಾರ್ಯನಿರ್ವಹಿಸುತ್ತಿದೆ ಮತ್ತು ಯಾವುದೇ ತೊಂದರೆಯಿಲ್ಲ. ಆದರೆ ಆರು ತಿಂಗಳ ಬಳಿಕ ಹೃದಯದ ಪರೀಕ್ಷೆಗೆ ಮರಳಿ ಬರಬೇಕು ಎಂದು ಅವರು ಹೇಳಿದರು.

ಲೀಗೆ ಪದೇ ಪದೇ ಬಳಲಿಕೆ ಕಂಡುಬರುತ್ತಿತ್ತು
ರಸ್ತೆ ಬಿದ್ದ ಬಳಿಕ ಲೀಗೆ ಪದೇ ಪದೇ ಬಳಲಿಕೆ ಕಂಡು ಬರಲು ಆರಂಭಿಸಿತ್ತು ಮತ್ತು ಇದರಿಂದ ಅವರನ್ನು ಮತ್ತೆ ಆಸ್ಪತ್ರೆಗೆ ದಾಖಲಿಸಲಾಯಿತು. ಲೀ ಪರೀಕ್ಷೆ ಮಾಡಿದಂತಹ ವೈದ್ಯರಿಗೆ ಎರಡನೇ ಗಡ್ಡೆ ಇರುವುದು ಪತ್ತೆಯಾಗಿದೆ. ಆದರೆ ದುರಾದೃಷ್ಟದಿಂದ ಇದನ್ನು ಲೀಗೆ ಹೇಳಲು ವೈದ್ಯರು ಮರೆತರು.

18 ತಿಂಗಳಲ್ಲಿ ಇದು ದೊಡ್ಡ ಹಾನಿ ಉಂಟು ಮಾಡಿತು
18 ತಿಂಗಳ ಬಳಿಕ ಮತ್ತೆ ಲೀಗೆ ತನ್ನ ದೇಹದಲ್ಲಿ ಏನೋ ಸರಿಯಿಲ್ಲವೆನ್ನುವಂತಹ ಭಾವನೆಯು ಉಂಟಾಯಿತು ಮತ್ತು ಇದರಿಂದಾಗಿ ಅವರು ಮತ್ತೆ ಪರೀಕ್ಷೆ ಮಾಡಿಕೊಂಡರು. ಮೆದುಳಿನಲ್ಲಿ ಗಡ್ಡೆ ಇರುವುದು ಪತ್ತೆಯಾಗಿದೆ ಮತ್ತು ಅದನ್ನು ಅವರು ಲೀಗೆ ಹೇಳಿರಲ್ಲ. ಆದರೆ ಅದಾಗಲೇ ಹಾನಿಯಾಗಿತ್ತು. ವೈದ್ಯರ ತಪ್ಪಿನಿಂದಾಗಿ ಲೀ ಶಾಶ್ವತವಾಗಿ ಈಗ ಗಾಳಿಕುರ್ಚಿಯಲ್ಲಿ ಕುಳಿತುಕೊಂಡಿರಬೇಕಾಗಿದೆ ಮತ್ತು ಅವರ ಚಲನಶೀಲತೆ ಮೇಲೆ ಸಂಪೂರ್ಣ ಪರಿಣಾಮ ಬೀರಿದೆ.

ದಂಪತಿ ಆಸ್ಪತ್ರೆ ವಿರುದ್ಧ ಕಾನೂನು ಸಮರಕ್ಕೆ ಮುಂದಾಗಿದ್ದಾರೆ
ಆಸ್ಪತ್ರೆ ವಿರುದ್ಧ ಅಧಿಕೃತವಾಗಿ ಯಾವುದೇ ದೂರು ದಾಖಲಾಗಿದೆಯಾ ಎಂದು ಇದುವರೆಗೆ ತಿಳಿದುಬಂದಿಲ್ಲ. ಆದರೆ ಲೀ ಮತ್ತು ಅವರ ಪತ್ನಿ ಆಸ್ಪತ್ರೆಗ ವಿರುದ್ಧ ದೂರು ದಾಖಲಿಸಿಕೊಳ್ಳಲು ಮುಂದಾಗಿದ್ದಾರೆ ಎಂದು ವರದಿಗಳು ಹೇಳಿವೆ. ಈಗಾಗಲೇ ಲೀ ಚಿಕಿತ್ಸೆಗಾಗಿ ಸುಮಾರು 9800 ಡಾಲರ್ ವ್ಯಯಿಸಲಾಯಿದೆ. ಆದರೆ ಇದುವರೆಗೆ ಶಾಶ್ವತ ಪರಿಹಾರ ಮಾತ್ರ ಸಿಕ್ಕಿಲ್ಲ. ಇದರಿಂದಾಗಿ ದಂಪತಿ ತುಂಬಾ ನೊಂದಿದ್ದು, ಆಸ್ಪತ್ರೆಗೆ ವಿರುದ್ಧ ಕಾನೂನು ಸಮರಕ್ಕೆ ಮುಂದಾಗಿದ್ದಾರೆ.
ಈ ಘಟನೆ ಬಗ್ಗೆ ನಿಮ್ಮ ಅನಿಸಿಕೆ ಏನು? ನಿಮ್ಮ ಅಭಿಪ್ರಾಯವನ್ನು ನಮಗೆ ಕಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.



Click it and Unblock the Notifications











