Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಬ್ರೇಕ್ಫಾಸ್ಟ್ಗೆ ಮಸಾಲೆ ವಾಂಗೀಬಾತ್ ಮಾಡಿ: ಇಲ್ಲಿದೆ ಸುಲಭದ ವಿಧಾನ
ಬೆಳಗ್ಗೆ ತಿಂಡಿಯ ಸಮಯದಲ್ಲಿ ಸುಲಭವಾಗಿ ನೀವು ಯಾವುದಾದರು ಖಾದ್ಯ ಮಾಡಿ ಸವಿಯುವ ಬಯಕೆ ಹೊಂದಿರಬಹುದು. ಅದ್ರಲ್ಲೂ ರೈಸ್ನಿಂದ ಮಾಡುವ ಖಾದ್ಯಗಳು ಹಲವರಿಗೆ ಇಷ್ಟವಾಗುತ್ತೆ. ಬಹುತೇಕರು ಅನ್ನದಿಂದ ಮಾಡುವ ಪಲಾವ್, ರೈಸ್ ಬಾತ್, ಪುಳಿಯೋಗರೆ ಸೇರಿದಂತೆ ಹಲವು ರೀತಿಯ ಖಾದ್ಯಗಳು ಅಂದ್ರೆ ಬಾಯಲ್ಲಿ ನೀರುಬರಬಹುದು. ಇನ್ನು ಸುಲಭವಾಗಿ ಮಾಡುವ ಚಿತ್ರಾನ್ನ, ಹುಳಿ ಅನ್ನ, ವಾಂಗೀಬಾತ್ ಸಹ ಬಹುತೇಕರ ಇಷ್ಟದ ಖಾದ್ಯ.
ಹಾಗೆ ನಾವಿಂದು ಮಸಾಲೆ ಭರಿತ ಸುಲಭವಾಗಿ ಮಾಡುವಂತಹ ವಾಂಗೀಬಾತ್ ಮಾಡುವ ಕುರಿತು ತಿಳಿಯೋಣ. ಅದ್ರಲ್ಲೂ ಈ ಬದನೆಕಾಯಿ ಹಾಕಿ ಮಾಡುವಂತಹ ವಾಂಗೀಬಾತ್ ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಹೋಟೆಲ್ಗಳಲ್ಲಿ ನೀಡುವಂತಹ ಈ ವಾಂಗೀಬಾತ್ ವಿಶೇಷ ರುಚಿಯಲ್ಲಿ ಕೂಡಿರಲಿದೆ. ಹಾಗಾದ್ರೆ ನಾವಿಂದು ಮನೆಯಲ್ಲೇ ಈ ಮಸಾಲೆ ಭರಿತ ವಾಂಗೀಬಾತ್ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ.
ಮಸಾಲೆ ವಾಂಗೀಬಾತ್ ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬೆಲ್ಲಾ ಕುರಿತಾದ ಮಾಹಿತಿಯನ್ನು ನಾವಿಲ್ಲಿ ತಿಳಿದುಕೊಳ್ಳೋಣ.
ಮಸಾಲೆ ವಾಂಗೀಬಾತ್ ಮಾಡಲು ಅಗತ್ಯ ವಸ್ತುಗಳು
- ಅಕ್ಕಿ
- ಬದನೆಕಾಯಿ - 3
- ಈರುಳ್ಳಿ - 3
- ಹುಣಸೆಹಣ್ಣು
- ಟೊಮೆಟೋ - 1
- ಜೀರಿಗೆ
- ಕರಿಬೇವು
- ಸಾಸಿವೆ
- ಹಸಿರು ಮೆಣಸಿನಕಾಯಿ
- ಶುಂಠಿ ಬೆಳ್ಳುಳ್ಳಿ ಪೇಸ್ಟ್
- ಕೆಂಪು ಮೆಣಸಿನ ಪುಡಿ
- ಅರಿಶಿನ ಪುಡಿ
- ವಾಂಗಿ ಬಾತ್ ಪೌಡರ್
- ಕೊತ್ತಂಬರಿ ಸೊಪ್ಪು
- ಅಡುಗೆ ಎಣ್ಣೆ
- ರುಚಿಗೆ ತಕ್ಕಷ್ಟು ಉಪ್ಪು
ಮಸಾಲೆ ವಾಂಗೀಬಾತ್ ಮಾಡುವ ವಿಧಾನವೇನು?
ಮೊದಲು ಒಲೆ ಮೇಲೆ ಕುಕ್ಕರ್ ಇಟ್ಟು ಎಣ್ಣೆ ಹಾಕಿಕೊಂಡು ಬಳಿಕ ಜೀರಿಗೆ, ಸಾಸಿವೆ, ಈರುಳ್ಳಿ, ಕಡಲೆ ಬೇಳೆ, ಕರಿಬೇವು, ಹಸಿ ಮೆಣಸು ಹಾಕಿ ಫ್ರೈ ಮಾಡಿಕೊಳ್ಳಿ. ಇದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಟೊಮೆಟೋ ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ಈ ರೆಸಿಪಿ ಆರಂಭಿಸುವ ಮುನ್ನವೆ ಅಳತೆ ಕಪ್ನಲ್ಲಿ ಅಕ್ಕಿಯನ್ನು ತೊಳೆದು ನೆನೆಸಿಟ್ಟುಕೊಳ್ಳಿ. ಹಾಗೆ ಮೈಸೂರು ಬದನೆಯನ್ನು ಕತ್ತರಿಸಿಕೊಂಡು ನೀರಿನಲ್ಲ ಹಾಕಿಟ್ಟುಕೊಳ್ಳಿ.
ಈಗ ಕುಕ್ಕರ್ಗೆ ಹೆಚ್ಚಿಕೊಂಡಿರುವ ಬದನೆಕಾಯಿಯನ್ನು ಹಾಕಿಕೊಳ್ಳಿ. ಹಾಗೆ ಇದಕ್ಕೆ ಅರಶಿಣ ಪುಡಿ, ಖಾರದ ಪುಡಿ ಸಹ ಹಾಕಿಕೊಳ್ಳಿ. ಉಪ್ಪು ಕೂಡ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿ. ಈಗ ವಾಂಗೀಬಾತ್ ಪುಡಿ ಸಹ ಹಾಕಿ ಮಿಶ್ರಣ ಮಾಡುತ್ತಾ ಇರಿ. ಇದು ಗೊಜ್ಜು ರೀತಿ ಬರಬೇಕು. ಈಗ ಇದಕ್ಕೆ ಒಂದು ಸಣ್ಣ ಉಂಡೆಯ ಹುಣಸೆ ಹುಳಿಯ ನೀರನ್ನು ಸಹ ಹಾಕಿಕೊಳ್ಳಬೇಕು.
ಈಗ ಅಳತೆ ಕಪ್ನಲ್ಲಿಯೇ ನೀರು ಹಾಕಿಕೊಳ್ಳಿ. ಅಕ್ಕಿಯ ಅಳತೆಯ ಪ್ರಕಾರ ಎರಡರಷ್ಟು ನೀರನ್ನು ಇದಕ್ಕೆ ಹಾಕಿಕೊಳ್ಳಿ. ಕುದಿಬರಲು ಬಿಟ್ಟು ನಂತರ ನೆನೆಸಿಟ್ಟಿರುವ ಅಕ್ಕಿಯನ್ನು ಹಾಕಿ ಮಿಶ್ರಣ ಮಾಡಿ, ನಿಧಾನಕ್ಕೆ ಕುದಿಬರಲು ಬಿಡಿ. ಇದು ಕುದಿಬರಲು ಆರಂಭಿಸಿದಾಗ ಕುಕ್ಕರ್ ಮುಚ್ಚಳ ಮುಚ್ಚಿ 2 ಸೀಟಿ ಹೊಡೆಯಲು ಬಿಡಿ. ಕೊನಯೆಲ್ಲಿ ಮುಚ್ಚಳ ತೆಗೆದು ಒಮ್ಮೆ ಮಿಕ್ಸ್ ಮಾಡಿಕೊಂಡರೆ ನಿಮ್ಮ ಮುಂದೆ ರುಚಿ ರುಚಿಯಾದ ಮಸಾಲೆ ವಾಂಗೀಬಾತ್ ಸಿದ್ದವಾಗುತ್ತೆ. ನೀವು ಸಹ ಮಾಡಿ ಸವಿದು ನೋಡಿ.



Click it and Unblock the Notifications

