Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಹುಡುಗಿಯ ಬೆನ್ನತ್ತಿ ಹೋಗಿ ಮಧುಮೇಹ ತಂದುಕೊಂಡ!
ನಿಮ್ಮ ಕನಸುಗಳನ್ನು ಬೆನ್ನತ್ತಿಕೊಂಡು ಅದನ್ನು ಈಡೇರಿಸಿಕೊಳ್ಳುವುದು ಇದೆಯಲ್ಲಾ ಅದು ಅತೀ ದೊಡ್ಡ ಕಠಿಣ ಸವಾಲು. ಇದು ಪ್ರತಿಯೊಬ್ಬರಿಂದಲೂ ಸಾಧ್ಯವಾಗಲ್ಲ. ಕೆಲವು ಜನರು ಬೇರೆಯವರ ಗಮನ ಸೆಳೆಯಲು ಏನಾದರೂ ವಿಚಿತ್ರವಾಗಿರುವುದನ್ನು ಮಾಡಲು ಪ್ರಯತ್ನಿಸುತ್ತಾರೆ. ಇದರಿಂದಲೇ ಅವರು ಜನಪ್ರಿಯರಾಗುತ್ತಾರೆ ಕೂಡ.
ಇತ್ತೀಚೆಗೆ ತೈವಾನ್ ನ ಸಾಮಾಜಿಕ ಜಾಲತಾಣವೊಂದರಲ್ಲಿ ವ್ಯಕ್ತಿಯೊಬ್ಬ ತನ್ನ ಪ್ರೀತಿಯಿಂದ ಮಧುಮೇಹ ಹೇಗೆ ಬಂದಿದೆ ಎಂದು ಬರೆದುಕೊಂಡಿದ್ದಾರೆ. ಈ ಅಸಾಮಾನ್ಯ ಘಟನೆ ಬಗ್ಗೆ ನೀವು ತಿಳಿಯಿರಿ. ಈ ವ್ಯಕ್ತಿಯ ತೈವಾನ್ ನ ಸಾಮಾಜಿಕ ಜಾಲತಾಣ ಡಿಕಾರ್ಡ್ ನಲ್ಲಿ ಬರೆದುಕೊಂಡಿದ್ದಾನೆ. ಎರಡು ವರ್ಷಗಳ ಮೊದಲು ತಾನು ಒಂದು ಹುಡುಗಿಯ ಪ್ರೀತಿಯಲ್ಲಿ ಬಿದ್ದೆ ಎಂದು ಹೇಳಿದ್ದಾರೆ. ಈ ಹುಡುಗಿಯು ತನ್ನ ಮನೆಯ ಸಮೀಪದಲ್ಲೇ ಇದ್ದ 7-ಇಲೆವನ್ ನಲ್ಲಿ ಕೆಲಸ ಮಾಡುತ್ತಲಿದ್ದಳು. ಆತ ತುಂಬಾ ನಾಚಿಕೆ ಸ್ವಭಾವದವನಾಗಿದ್ದ ಕಾರಣದಿಂದಾಗಿ ಆಕೆಯ ಮುಂದೆ ಪ್ರೇಮ ನಿವೇದನೆ ಹೇಗೆ ಮಾಡಿಕೊಳ್ಳಬೇಕು ಎಂದು ಆತನಿಗೆ ತಿಳಿದಿರಲಿಲ್ಲ.

ನೆಟ್ಟಿಗರು ಮೊದಲಿಗೆ ಈ ಕಥೆಯನ್ನು ತುಂಬಾ ಪ್ರೇರಣೆಯದ್ದು ಎಂದು ಭಾವಿಸಿದ್ದರು. ಆತ ಮೊದಲಿಗೆ ಈ ರೀತಿ ಬರೆದುಕೊಂಡಿದ್ದ. ನಾವು ಹುಡುಗಿಯನ್ನು ಬೆನ್ನಟ್ಟುವಾಗ, ನಮ್ಮ ಕನಸುಗಳ ಹುಡುಗಿಯನ್ನು ಪಡೆಯಲು ನಾವು ನಮ್ಮ ಪರಿಶ್ರಮವನ್ನು ಅವಲಂಬಿಸಲಾಗುತ್ತದೆ.'' ತನ್ನನ್ನು ನೋಡಬೇಕೆಂದು ಆತ ವಿಚಿತ್ರ ವಿಧಾನವನ್ನು ಅನುಸರಿಸಿದ. ಪ್ರತಿನಿತ್ಯವು ಆಕೆಯ ಶಾಪ್ ನಿಂದ ಕಾಫಿ ಖರೀದಿ ಮಾಡಲು ಆತ ನಿರ್ಧಾರ ಮಾಡಿದ. ಆದರೆ ಕೇವಲ ಕಾಫಿ ಖರೀದಿ ಮಾಡಿದರೆ ಆಗ ಅದರಿಂದ ಹೆಚ್ಚು ಆಕರ್ಷಣೆಗೆ ಒಳಗಾಗುವುದಿಲ್ಲ. ತನ್ನನ್ನು ಆಕೆ ನೆನಪಿನಲ್ಲಿ ಇಟ್ಟುಕೊಳ್ಳಬೇಕು ಎಂದು ಆತ ನಿರ್ಧಾರ ಮಾಡಿ. ತನ್ನ ಕಾಫಿಯಲ್ಲಿ ಐದು ಚಮಚ ಸಕ್ಕರೆ ಹಾಕಬೇಕು ಎಂದು ಆತ ಹೇಳಿದ.
ಹುಡುಗಿಯು ಇದನ್ನು ಕೇಳಿದ ವೇಳೆ ಆಕೆ ಅಚ್ಚರಿಯಿಂದ ಇದು ತುಂಬಾ ಸಿಹಿ ಆಗಿರುವುದಲ್ಲವೇ ಎಂದು ಕೇಳಿದಳು. ಆಗ ಆ ಯುವಕ ತಡಮಾಡದೆ ಅದು ನಿನ್ನಷ್ಟು ಸಿಹಿಯಾಗಿ ಇರಲಿಕ್ಕಿಲ್ಲ ಎಂದು ಹೇಳಿಬಿಟ್ಟ. ಈ ಮಾತನ್ನು ಕೇಳಿದ ಹುಡುಗಿ ಸಣ್ಣ ನಾಚಿಕೆಯ ಕಿರುನಗೆ ಬೀರಿ ಅಲ್ಲಿಂದ ಹೊರಟುಹೋದಳು. ಇದರ ಬಳಿಕ ಪ್ರತಿನಿತ್ಯವು ಆಕೆಯ ಕೈಯಿಂದ ಕಾಫಿ ತರಿಸಿಕೊಂಡು ಅದಕ್ಕೆ ಐದು ಚಮಚ ಸಕ್ಕರೆ ಹಾಕಿ ಕುಡಿಯುತ್ತಿದ್ದ.
ಈ ಕಥೆಯು ಸಂತೋಷದ ಅಂತ್ಯ ಕಂಡಿದೆ ಎಂದು ನಿಮಗನಿಸುತ್ತಿದ್ದರೆ ಖಂಡಿತವಾಗಿಯೂ ಇದು ತಪ್ಪು. ಇದೇ ಪೋಸ್ಟ್ ನಲ್ಲಿ ಆ ವ್ಯಕ್ತಿ ಹೀಗೆ ಬರೆದಿದ್ದಾನೆ. ನನಗೆ ಎರಡು ವರ್ಷಗಳ ಬಳಿಕ ಮಧುಮೇಹ ಬಂದಿತ್ತು. ಆ ವ್ಯಕ್ತಿಗೆ ಮಧುಮೇಹ ಬಂದಿರುವುದನ್ನು ಕಂಡು ನೆಟ್ಟಿಗರಿಗೆ ತುಂಬಾ ಆಘಾತವಾಗಿದೆ. ಈ ಪರಿಸ್ಥಿತಿಯನ್ನು ವಿವರಿಸಿದ ಬಗ್ಗೆ ಕೆಲವು ಮಂದಿ ಆತನ ಬಗ್ಗೆ ಸಿಟ್ಟು ವ್ಯಕ್ತಪಡಿಸಿದ್ದಾರೆ. ಆದರೆ ಆತನಿಗೆ ಹುಡುಗಿ ಸಿಕ್ಕಿದ್ದಾಳೆಯಾ ಇಲ್ಲವಾ ಎಂದು ಹೇಳಿಲ್ಲ. ನಿಮ್ಮ ಕನಸಿನ ಹುಡುಗಿಯನ್ನು ಪಡೆಯಲು ಯಾವ ಹಂತಕ್ಕೆ ಹೋಗಬಲ್ಲೀರಿ ಎಂದು ನಮಗೆ ಕಮೆಂಟ್ ಬಾಕ್ಸ್ ನಲ್ಲಿ ಬರೆಯಲು ಮರೆಯಬೇಡಿ.



Click it and Unblock the Notifications











