Latest Updates
-
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ? -
ವಿಶ್ವ ಸಂಗೀತ ದಿನ: ಸಂಗಾತಿಯೊಂದಿಗೆ ಮರೆಯಲಾಗದ ಕ್ಷಣ ಕಳೆಯಲು ಇಲ್ಲಿದೆ ಸಿಂಪಲ್ ಪ್ಲಾನ್! -
ಮುಂಬೈನಲ್ಲಿ ತೀವ್ರ ನೀರಿನ ಅಭಾವ: ಬಿಎಂಸಿ ಕಠಿಣ ನಿಯಮಗಳ ನಡುವೆ ನೀರು ಉಳಿಸಲು ಈ ಟಿಪ್ಸ್ ಪಾಲಿಸಿ -
ಮಳೆಗಾಲದಲ್ಲಿ ಸಿಕಲ್ ಸೆಲ್ ಸಮಸ್ಯೆ: ಆರೋಗ್ಯ ಕಾಪಾಡಲು ಈ ಆಹಾರ ಕ್ರಮ ಪಾಲಿಸಿ, ನೋವು ದೂರವಿಡಿ! -
ಟೆಲಿಗ್ರಾಂ ಬ್ಯಾನ್: ಜೂನ್ 22ರವರೆಗೆ ಈ ಆಪ್ಗಳನ್ನು ಬಳಸಿ, ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ!
ಹುಡುಗಿಯ ಬೆನ್ನತ್ತಿ ಹೋಗಿ ಮಧುಮೇಹ ತಂದುಕೊಂಡ!
ನಿಮ್ಮ ಕನಸುಗಳನ್ನು ಬೆನ್ನತ್ತಿಕೊಂಡು ಅದನ್ನು ಈಡೇರಿಸಿಕೊಳ್ಳುವುದು ಇದೆಯಲ್ಲಾ ಅದು ಅತೀ ದೊಡ್ಡ ಕಠಿಣ ಸವಾಲು. ಇದು ಪ್ರತಿಯೊಬ್ಬರಿಂದಲೂ ಸಾಧ್ಯವಾಗಲ್ಲ. ಕೆಲವು ಜನರು ಬೇರೆಯವರ ಗಮನ ಸೆಳೆಯಲು ಏನಾದರೂ ವಿಚಿತ್ರವಾಗಿರುವುದನ್ನು ಮಾಡಲು ಪ್ರಯತ್ನಿಸುತ್ತಾರೆ. ಇದರಿಂದಲೇ ಅವರು ಜನಪ್ರಿಯರಾಗುತ್ತಾರೆ ಕೂಡ.
ಇತ್ತೀಚೆಗೆ ತೈವಾನ್ ನ ಸಾಮಾಜಿಕ ಜಾಲತಾಣವೊಂದರಲ್ಲಿ ವ್ಯಕ್ತಿಯೊಬ್ಬ ತನ್ನ ಪ್ರೀತಿಯಿಂದ ಮಧುಮೇಹ ಹೇಗೆ ಬಂದಿದೆ ಎಂದು ಬರೆದುಕೊಂಡಿದ್ದಾರೆ. ಈ ಅಸಾಮಾನ್ಯ ಘಟನೆ ಬಗ್ಗೆ ನೀವು ತಿಳಿಯಿರಿ. ಈ ವ್ಯಕ್ತಿಯ ತೈವಾನ್ ನ ಸಾಮಾಜಿಕ ಜಾಲತಾಣ ಡಿಕಾರ್ಡ್ ನಲ್ಲಿ ಬರೆದುಕೊಂಡಿದ್ದಾನೆ. ಎರಡು ವರ್ಷಗಳ ಮೊದಲು ತಾನು ಒಂದು ಹುಡುಗಿಯ ಪ್ರೀತಿಯಲ್ಲಿ ಬಿದ್ದೆ ಎಂದು ಹೇಳಿದ್ದಾರೆ. ಈ ಹುಡುಗಿಯು ತನ್ನ ಮನೆಯ ಸಮೀಪದಲ್ಲೇ ಇದ್ದ 7-ಇಲೆವನ್ ನಲ್ಲಿ ಕೆಲಸ ಮಾಡುತ್ತಲಿದ್ದಳು. ಆತ ತುಂಬಾ ನಾಚಿಕೆ ಸ್ವಭಾವದವನಾಗಿದ್ದ ಕಾರಣದಿಂದಾಗಿ ಆಕೆಯ ಮುಂದೆ ಪ್ರೇಮ ನಿವೇದನೆ ಹೇಗೆ ಮಾಡಿಕೊಳ್ಳಬೇಕು ಎಂದು ಆತನಿಗೆ ತಿಳಿದಿರಲಿಲ್ಲ.

ನೆಟ್ಟಿಗರು ಮೊದಲಿಗೆ ಈ ಕಥೆಯನ್ನು ತುಂಬಾ ಪ್ರೇರಣೆಯದ್ದು ಎಂದು ಭಾವಿಸಿದ್ದರು. ಆತ ಮೊದಲಿಗೆ ಈ ರೀತಿ ಬರೆದುಕೊಂಡಿದ್ದ. ನಾವು ಹುಡುಗಿಯನ್ನು ಬೆನ್ನಟ್ಟುವಾಗ, ನಮ್ಮ ಕನಸುಗಳ ಹುಡುಗಿಯನ್ನು ಪಡೆಯಲು ನಾವು ನಮ್ಮ ಪರಿಶ್ರಮವನ್ನು ಅವಲಂಬಿಸಲಾಗುತ್ತದೆ.'' ತನ್ನನ್ನು ನೋಡಬೇಕೆಂದು ಆತ ವಿಚಿತ್ರ ವಿಧಾನವನ್ನು ಅನುಸರಿಸಿದ. ಪ್ರತಿನಿತ್ಯವು ಆಕೆಯ ಶಾಪ್ ನಿಂದ ಕಾಫಿ ಖರೀದಿ ಮಾಡಲು ಆತ ನಿರ್ಧಾರ ಮಾಡಿದ. ಆದರೆ ಕೇವಲ ಕಾಫಿ ಖರೀದಿ ಮಾಡಿದರೆ ಆಗ ಅದರಿಂದ ಹೆಚ್ಚು ಆಕರ್ಷಣೆಗೆ ಒಳಗಾಗುವುದಿಲ್ಲ. ತನ್ನನ್ನು ಆಕೆ ನೆನಪಿನಲ್ಲಿ ಇಟ್ಟುಕೊಳ್ಳಬೇಕು ಎಂದು ಆತ ನಿರ್ಧಾರ ಮಾಡಿ. ತನ್ನ ಕಾಫಿಯಲ್ಲಿ ಐದು ಚಮಚ ಸಕ್ಕರೆ ಹಾಕಬೇಕು ಎಂದು ಆತ ಹೇಳಿದ.
ಹುಡುಗಿಯು ಇದನ್ನು ಕೇಳಿದ ವೇಳೆ ಆಕೆ ಅಚ್ಚರಿಯಿಂದ ಇದು ತುಂಬಾ ಸಿಹಿ ಆಗಿರುವುದಲ್ಲವೇ ಎಂದು ಕೇಳಿದಳು. ಆಗ ಆ ಯುವಕ ತಡಮಾಡದೆ ಅದು ನಿನ್ನಷ್ಟು ಸಿಹಿಯಾಗಿ ಇರಲಿಕ್ಕಿಲ್ಲ ಎಂದು ಹೇಳಿಬಿಟ್ಟ. ಈ ಮಾತನ್ನು ಕೇಳಿದ ಹುಡುಗಿ ಸಣ್ಣ ನಾಚಿಕೆಯ ಕಿರುನಗೆ ಬೀರಿ ಅಲ್ಲಿಂದ ಹೊರಟುಹೋದಳು. ಇದರ ಬಳಿಕ ಪ್ರತಿನಿತ್ಯವು ಆಕೆಯ ಕೈಯಿಂದ ಕಾಫಿ ತರಿಸಿಕೊಂಡು ಅದಕ್ಕೆ ಐದು ಚಮಚ ಸಕ್ಕರೆ ಹಾಕಿ ಕುಡಿಯುತ್ತಿದ್ದ.
ಈ ಕಥೆಯು ಸಂತೋಷದ ಅಂತ್ಯ ಕಂಡಿದೆ ಎಂದು ನಿಮಗನಿಸುತ್ತಿದ್ದರೆ ಖಂಡಿತವಾಗಿಯೂ ಇದು ತಪ್ಪು. ಇದೇ ಪೋಸ್ಟ್ ನಲ್ಲಿ ಆ ವ್ಯಕ್ತಿ ಹೀಗೆ ಬರೆದಿದ್ದಾನೆ. ನನಗೆ ಎರಡು ವರ್ಷಗಳ ಬಳಿಕ ಮಧುಮೇಹ ಬಂದಿತ್ತು. ಆ ವ್ಯಕ್ತಿಗೆ ಮಧುಮೇಹ ಬಂದಿರುವುದನ್ನು ಕಂಡು ನೆಟ್ಟಿಗರಿಗೆ ತುಂಬಾ ಆಘಾತವಾಗಿದೆ. ಈ ಪರಿಸ್ಥಿತಿಯನ್ನು ವಿವರಿಸಿದ ಬಗ್ಗೆ ಕೆಲವು ಮಂದಿ ಆತನ ಬಗ್ಗೆ ಸಿಟ್ಟು ವ್ಯಕ್ತಪಡಿಸಿದ್ದಾರೆ. ಆದರೆ ಆತನಿಗೆ ಹುಡುಗಿ ಸಿಕ್ಕಿದ್ದಾಳೆಯಾ ಇಲ್ಲವಾ ಎಂದು ಹೇಳಿಲ್ಲ. ನಿಮ್ಮ ಕನಸಿನ ಹುಡುಗಿಯನ್ನು ಪಡೆಯಲು ಯಾವ ಹಂತಕ್ಕೆ ಹೋಗಬಲ್ಲೀರಿ ಎಂದು ನಮಗೆ ಕಮೆಂಟ್ ಬಾಕ್ಸ್ ನಲ್ಲಿ ಬರೆಯಲು ಮರೆಯಬೇಡಿ.



Click it and Unblock the Notifications