Latest Updates
-
ಶುಗರ್ ಇದ್ದರೂ ಯುಗಾದಿಗೆ ಗುಜಿಯಾ ತಿನ್ನಬಹುದು! ಸಕ್ಕರೆ ಬೇಡ.. ರುಚಿ ಅದ್ಭುತ.. ಹೆಲ್ತ್ 100ಕ್ಕೆ 100 ಸೇಫ್! -
ದೇಹ ತಂಪಾಗಿಸಲು, ತೂಕ ಇಳಿಸಲು ಈ ಬಾರ್ಲಿ ಜ್ಯೂಸ್ ಮಾಡಿ! 5 ನಿಮಿಷದೊಳಗೆ ಸಿದ್ದ! -
ರಾಹು-ಕೇತು ಸಂಯೋಗದಿಂದ ಕಾಳಸರ್ಪ ಯೋಗ: ಈ ಎಲ್ಲಾ ರಾಶಿಯವರಿಗೆ ಅದೃಷ್ಟದ ಸಮಯ! -
ಸಂಕಷ್ಟಗಳು ದೂರ, ಐಶ್ವರ್ಯ ಹತ್ತಿರ! ಕೇತು ಸಂಚಾರದಿಂದ ಇವರ ಜೀವನವೇ ಬಂಗಾರ.. ಯಾರಿಗೆ ರಾಜಯೋಗ? -
ಬೇಕರಿ ಸ್ಟೈಲ್ ಕಚೋರಿ ರೆಸಿಪಿ.. ಮನೆಯಲ್ಲೇ ಈ 4 ಟೇಸ್ಟಿ ಕಚೋರಿ ಮಾಡಿ! ಹೊಸಬರಿಗೆ ಕೂಡ ಸುಲಭ -
ಆರ್ಥಿಕ ದೃಷ್ಟಿಯಿಂದ ಈ ದಿನ ಅನುಕೂಲಕರ! ಪ್ರಣಯ ಜೀವನವು ಸುಖಮಯ -
March 11 Horoscope: ಪ್ರಯಾಣಗಳಲ್ಲಿ ನಿಮಗೆ ಶುಭವಿಲ್ಲ! ಅಪಾಯದ ಮುನ್ಸೂಚನೆ! -
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು
ಹುಡುಗಿಯ ಬೆನ್ನತ್ತಿ ಹೋಗಿ ಮಧುಮೇಹ ತಂದುಕೊಂಡ!
ನಿಮ್ಮ ಕನಸುಗಳನ್ನು ಬೆನ್ನತ್ತಿಕೊಂಡು ಅದನ್ನು ಈಡೇರಿಸಿಕೊಳ್ಳುವುದು ಇದೆಯಲ್ಲಾ ಅದು ಅತೀ ದೊಡ್ಡ ಕಠಿಣ ಸವಾಲು. ಇದು ಪ್ರತಿಯೊಬ್ಬರಿಂದಲೂ ಸಾಧ್ಯವಾಗಲ್ಲ. ಕೆಲವು ಜನರು ಬೇರೆಯವರ ಗಮನ ಸೆಳೆಯಲು ಏನಾದರೂ ವಿಚಿತ್ರವಾಗಿರುವುದನ್ನು ಮಾಡಲು ಪ್ರಯತ್ನಿಸುತ್ತಾರೆ. ಇದರಿಂದಲೇ ಅವರು ಜನಪ್ರಿಯರಾಗುತ್ತಾರೆ ಕೂಡ.
ಇತ್ತೀಚೆಗೆ ತೈವಾನ್ ನ ಸಾಮಾಜಿಕ ಜಾಲತಾಣವೊಂದರಲ್ಲಿ ವ್ಯಕ್ತಿಯೊಬ್ಬ ತನ್ನ ಪ್ರೀತಿಯಿಂದ ಮಧುಮೇಹ ಹೇಗೆ ಬಂದಿದೆ ಎಂದು ಬರೆದುಕೊಂಡಿದ್ದಾರೆ. ಈ ಅಸಾಮಾನ್ಯ ಘಟನೆ ಬಗ್ಗೆ ನೀವು ತಿಳಿಯಿರಿ. ಈ ವ್ಯಕ್ತಿಯ ತೈವಾನ್ ನ ಸಾಮಾಜಿಕ ಜಾಲತಾಣ ಡಿಕಾರ್ಡ್ ನಲ್ಲಿ ಬರೆದುಕೊಂಡಿದ್ದಾನೆ. ಎರಡು ವರ್ಷಗಳ ಮೊದಲು ತಾನು ಒಂದು ಹುಡುಗಿಯ ಪ್ರೀತಿಯಲ್ಲಿ ಬಿದ್ದೆ ಎಂದು ಹೇಳಿದ್ದಾರೆ. ಈ ಹುಡುಗಿಯು ತನ್ನ ಮನೆಯ ಸಮೀಪದಲ್ಲೇ ಇದ್ದ 7-ಇಲೆವನ್ ನಲ್ಲಿ ಕೆಲಸ ಮಾಡುತ್ತಲಿದ್ದಳು. ಆತ ತುಂಬಾ ನಾಚಿಕೆ ಸ್ವಭಾವದವನಾಗಿದ್ದ ಕಾರಣದಿಂದಾಗಿ ಆಕೆಯ ಮುಂದೆ ಪ್ರೇಮ ನಿವೇದನೆ ಹೇಗೆ ಮಾಡಿಕೊಳ್ಳಬೇಕು ಎಂದು ಆತನಿಗೆ ತಿಳಿದಿರಲಿಲ್ಲ.

ನೆಟ್ಟಿಗರು ಮೊದಲಿಗೆ ಈ ಕಥೆಯನ್ನು ತುಂಬಾ ಪ್ರೇರಣೆಯದ್ದು ಎಂದು ಭಾವಿಸಿದ್ದರು. ಆತ ಮೊದಲಿಗೆ ಈ ರೀತಿ ಬರೆದುಕೊಂಡಿದ್ದ. ನಾವು ಹುಡುಗಿಯನ್ನು ಬೆನ್ನಟ್ಟುವಾಗ, ನಮ್ಮ ಕನಸುಗಳ ಹುಡುಗಿಯನ್ನು ಪಡೆಯಲು ನಾವು ನಮ್ಮ ಪರಿಶ್ರಮವನ್ನು ಅವಲಂಬಿಸಲಾಗುತ್ತದೆ.'' ತನ್ನನ್ನು ನೋಡಬೇಕೆಂದು ಆತ ವಿಚಿತ್ರ ವಿಧಾನವನ್ನು ಅನುಸರಿಸಿದ. ಪ್ರತಿನಿತ್ಯವು ಆಕೆಯ ಶಾಪ್ ನಿಂದ ಕಾಫಿ ಖರೀದಿ ಮಾಡಲು ಆತ ನಿರ್ಧಾರ ಮಾಡಿದ. ಆದರೆ ಕೇವಲ ಕಾಫಿ ಖರೀದಿ ಮಾಡಿದರೆ ಆಗ ಅದರಿಂದ ಹೆಚ್ಚು ಆಕರ್ಷಣೆಗೆ ಒಳಗಾಗುವುದಿಲ್ಲ. ತನ್ನನ್ನು ಆಕೆ ನೆನಪಿನಲ್ಲಿ ಇಟ್ಟುಕೊಳ್ಳಬೇಕು ಎಂದು ಆತ ನಿರ್ಧಾರ ಮಾಡಿ. ತನ್ನ ಕಾಫಿಯಲ್ಲಿ ಐದು ಚಮಚ ಸಕ್ಕರೆ ಹಾಕಬೇಕು ಎಂದು ಆತ ಹೇಳಿದ.
ಹುಡುಗಿಯು ಇದನ್ನು ಕೇಳಿದ ವೇಳೆ ಆಕೆ ಅಚ್ಚರಿಯಿಂದ ಇದು ತುಂಬಾ ಸಿಹಿ ಆಗಿರುವುದಲ್ಲವೇ ಎಂದು ಕೇಳಿದಳು. ಆಗ ಆ ಯುವಕ ತಡಮಾಡದೆ ಅದು ನಿನ್ನಷ್ಟು ಸಿಹಿಯಾಗಿ ಇರಲಿಕ್ಕಿಲ್ಲ ಎಂದು ಹೇಳಿಬಿಟ್ಟ. ಈ ಮಾತನ್ನು ಕೇಳಿದ ಹುಡುಗಿ ಸಣ್ಣ ನಾಚಿಕೆಯ ಕಿರುನಗೆ ಬೀರಿ ಅಲ್ಲಿಂದ ಹೊರಟುಹೋದಳು. ಇದರ ಬಳಿಕ ಪ್ರತಿನಿತ್ಯವು ಆಕೆಯ ಕೈಯಿಂದ ಕಾಫಿ ತರಿಸಿಕೊಂಡು ಅದಕ್ಕೆ ಐದು ಚಮಚ ಸಕ್ಕರೆ ಹಾಕಿ ಕುಡಿಯುತ್ತಿದ್ದ.
ಈ ಕಥೆಯು ಸಂತೋಷದ ಅಂತ್ಯ ಕಂಡಿದೆ ಎಂದು ನಿಮಗನಿಸುತ್ತಿದ್ದರೆ ಖಂಡಿತವಾಗಿಯೂ ಇದು ತಪ್ಪು. ಇದೇ ಪೋಸ್ಟ್ ನಲ್ಲಿ ಆ ವ್ಯಕ್ತಿ ಹೀಗೆ ಬರೆದಿದ್ದಾನೆ. ನನಗೆ ಎರಡು ವರ್ಷಗಳ ಬಳಿಕ ಮಧುಮೇಹ ಬಂದಿತ್ತು. ಆ ವ್ಯಕ್ತಿಗೆ ಮಧುಮೇಹ ಬಂದಿರುವುದನ್ನು ಕಂಡು ನೆಟ್ಟಿಗರಿಗೆ ತುಂಬಾ ಆಘಾತವಾಗಿದೆ. ಈ ಪರಿಸ್ಥಿತಿಯನ್ನು ವಿವರಿಸಿದ ಬಗ್ಗೆ ಕೆಲವು ಮಂದಿ ಆತನ ಬಗ್ಗೆ ಸಿಟ್ಟು ವ್ಯಕ್ತಪಡಿಸಿದ್ದಾರೆ. ಆದರೆ ಆತನಿಗೆ ಹುಡುಗಿ ಸಿಕ್ಕಿದ್ದಾಳೆಯಾ ಇಲ್ಲವಾ ಎಂದು ಹೇಳಿಲ್ಲ. ನಿಮ್ಮ ಕನಸಿನ ಹುಡುಗಿಯನ್ನು ಪಡೆಯಲು ಯಾವ ಹಂತಕ್ಕೆ ಹೋಗಬಲ್ಲೀರಿ ಎಂದು ನಮಗೆ ಕಮೆಂಟ್ ಬಾಕ್ಸ್ ನಲ್ಲಿ ಬರೆಯಲು ಮರೆಯಬೇಡಿ.



Click it and Unblock the Notifications











