Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಈತ ಕ್ಷೌರದಂಗಡಿಯಲ್ಲಿ ಕುತ್ತಿಗೆ ಮಸಾಜ್ ಮಾಡಿಸಿಕೊಂಡು ಆಸ್ಪತ್ರೆ ಸೇರಿದ! ಅಷ್ಟಕ್ಕೂ ಏನಾಯಿತು ಗೊತ್ತೇ?
ತುಂಬಾ ಬಳಲಿರುವಂತಹ ದೇಹಕ್ಕೆ ಸಂಪೂರ್ಣವಾಗಿ ಎಣ್ಣೆ ಹಚ್ಚಿಕೊಂಡು ಮಸಾಜ್ ಮಾಡಿಸಿಕೊಂಡರೆ ಆಗ ಸಿಗುವಂತಹ ಸುಖವೇ ಬೇರೆ. ಅದೇ ರೀತಿ ನಾವು ಸೆಲೂನ್ ಗೆ ಹೋದರೆ ಅಲ್ಲಿ ಕ್ಷೌರ ಮಾಡಿಸಿಕೊಂಡ ಬಳಿಕ ಕೆಲವು ಮಂದಿ ನಮ್ಮ ಬೆನ್ನು ಹಾಗೂ ಕುತ್ತಿಗೆಗೆ ಮಸಾಜ್ ಮಾಡುವರು. ಇದು ತುಂಬಾ ಆರಾಮದಾಯಕ ಎಂದು ಅನಿಸುವುದು. ಆದರೆ ಇಂತಹ ಮಸಾಜ್ ಮಾಡುವವರು ತುಂಬಾ ಅನುಭವಿಗಳು ಆಗಿರಬೇಕು.

ಇಲ್ಲವಾದಲ್ಲಿ ದೊಡ್ಡ ಸಮಸ್ಯೆಯು ಬರಬಹುದು. ಯಾಕೆಂದರೆ ಸರಿಯಾಗಿ ಮಸಾಜ್ ಮಾಡದೆ ಇದ್ದರೆ ನರಗಳ ಮೇಲೆ ಪರಿಣಾವಾಗಿ ಬೇರೆ ಸಮಸ್ಯೆಯು ಕಾಣಿಸಿಕೊಳ್ಳಬಹುದು. ಇದಕ್ಕಾಗಿ ನೀವು ಕ್ಷೌರದ ಅಂಗಡಿಯಲ್ಲಿ ಮಸಾಜ್ ಮಾಡಿಸಿಕೊಳ್ಳುವ ವೇಳೆ ತುಂಬಾ ಎಚ್ಚರಿಕೆ ವಹಿಸಿ. ಇಲ್ಲೊಬ್ಬ ವ್ಯಕ್ತಿಯು ಕ್ಷೌರದಂಗಡಿಯಲ್ಲಿ ಕುತ್ತಿಗೆ ಮಸಾಜ್ ಮಾಡಿಸಿಕೊಳ್ಳಲು ಹೋಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆಯು ನಡೆದಿದೆ. ಈ ಬಗ್ಗೆ ನೀವು ವಿವರವಾಗಿ ಮತ್ತಷ್ಟು ಮಾಹಿತಿ ತಿಳಿಯಿರಿ.

ಆ ವ್ಯಕ್ತಿ ಕ್ಷೌರದಂಗಡಿಗೆ ತೆರಳಿದ
ನಮ್ಮದೇ ದೇಶದ ಈ ವ್ಯಕ್ತಿ ಯಾವಾಗಲೂ ಕ್ಷೌರದಂಗಡಿಗೆ ಹೋಗಿ ಅಲ್ಲಿ ಕೂದಲು ಕತ್ತರಿಸಿಕೊಂಡ ಬಳಿಕ ಸ್ವಲ್ಪ ಮಸಾಜ್ ಮಾಡಿಸುವುದು ಹವ್ಯಾಸ ಮಾಡಿಕೊಂಡಿದ್ದ. ಕ್ಷೌರದಂಗಡಿಯಿಂದ ಹೊರಬಂದ ಕೆಲವೇ ನಿಮಿಷಗಳಲ್ಲಿ ಆತನಿಗೆ ಉಸಿರಾಟದ ಸಮಸ್ಯೆಯು ಕಾಣಿಸಿಕೊಂಡಿತು.

ವೈದ್ಯರು ಆತನ ಪರೀಕ್ಷೆ ಮಾಡಿದರು
ವೈದ್ಯರು ಆ ವ್ಯಕ್ತಿಯ ಎಂಆರ್ ಐ ಸ್ಕ್ಯಾನ್ ಮಾಡಿದರು. ಈ ವೇಳೆ ಅವರಿಗೆ ಕುತ್ತಿಗೆಯಲ್ಲಿ ಗಂಭೀರವಾದ ಗಾಯಗಳು ಕಾಣಿಸಿಕೊಂಡವು. ಕುತ್ತಿಗೆಗೆ ಮಸಾಜ್ ಮಾಡಿಕೊಂಡ ವೇಳೆ ಕಾಣಿಸಿಕೊಂಡ ಗಾಯಗಳು ಇದಾಗಿದ್ದವು.

ಆತನ ನರಗಳಿಗೆ ಹಾನಿಯಾಗಿತ್ತು
ವೈದ್ಯರು ಹೇಳುವ ಪ್ರಕಾರ ಫರೆನಿಕ್ ನರಕ್ಕೆ ಹಾನಿ ಉಂಟಾಗಿತ್ತು. ಈ ನರವು ಧ್ವನಿಫಲಕವನ್ನು ನಿಯಂತ್ರಿಸುವುದು. ಇದು ಉಸಿರಾಟದ ಪ್ರಮುಖ ಸ್ನಾಯುವಾಗಿದೆ.

ಆತ ಈಗ ಆಸ್ಪತ್ರೆಯಲ್ಲಿದ್ದಾನೆ
ಈ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಮತ್ತು ಆತನಿಗೆ ಕೃತಕ ಉಸಿರಾಟದ ವ್ಯವಸ್ಥೆ ಮಾಡಲಾಗಿದೆ. ಆ ವ್ಯಕ್ತಿಯ ಡಯಾಫರ್ಮ್ ಸಂಪೂರ್ಣವಾಗಿ ಹಾನಿಯಾಗಿದೆ ಮತ್ತು ಇದರಿಂದ ಆತನಿಗೆ ಜೀವಮಾನವಿಡಿ ಸಮಸ್ಯೆನ್ನು ಎದುರಿಸಬೇಕಾಗುತ್ತದೆ. ಯಾಕೆಂದರೆ ಇಂತಹ ನರಗಳು ಪುನರ್ ಜೀವನ ಪಡೆಯುವುದು ತುಂಬಾ ಅಪರೂಪವಾಗಿದೆ.
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಏನು? ನಿಮ್ಮ ಅಭಿಪ್ರಾಯ ಕಮೆಂಟ್ ಬಾಕ್ಸ್ ಗೆ ಹಾಕಿ.



Click it and Unblock the Notifications