Latest Updates
-
ಮಳೆ ರಜೆ ದಿನ ಮನೆಯಲ್ಲೇ ಫಿಟ್ ಆಗಿರಲು 12 ನಿಮಿಷದ ಈ ವರ್ಕೌಟ್ ಟ್ರೈ ಮಾಡಿ! -
ವಿಶ್ವ ಐವಿಎಫ್ ದಿನ: ಪೋಷಕರಾಗುವ ಕನಸಿಗೆ ದಂಪತಿಗಳು ಮಾಡಬೇಕಾದ ಸಿದ್ಧತೆಗಳೇನು? -
ಮುಂಬೈ-ಥಾಣೆ ಮಳೆ ಅಲರ್ಟ್: ನಿಮ್ಮ ಮನೆಗೆ ನೀರು ನುಗ್ಗದಂತೆ ತಡೆಯಲು ಈ 20 ನಿಮಿಷದ ಟಿಪ್ಸ್ ಫಾಲೋ ಮಾಡಿ -
ಮಕ್ಕಳ ಟಿಫಿನ್ ಬಾಕ್ಸ್ನಲ್ಲಿ ಅಡಗಿದೆ ಅಪಾಯ? ಪೋಷಕರು ಮರೆಯದೆ ಪಾಲಿಸಬೇಕಾದ ಸುರಕ್ಷತಾ ಸೂತ್ರಗಳು -
ರಾಮಾಯಣದಲ್ಲಿ ರಾವಣನಾಗಿ ಯಶ್: ಸ್ಯಾನ್ ಡಿಯಾಗೋ ಕಾಮಿಕ್-ಕಾನ್ನಲ್ಲಿ ಅಬ್ಬರಿಸಲು ಸಜ್ಜಾದ ರಾಕಿಂಗ್ ಸ್ಟಾರ್! -
ಅಂತರಾಷ್ಟ್ರೀಯ ಸ್ವಯಂ ಆರೈಕೆ ದಿನ: ಕೆಲಸದ ಒತ್ತಡ ಕಡಿಮೆ ಮಾಡಲು 12 ನಿಮಿಷದ ಈ ಸಿಂಪಲ್ ರೂಟೀನ್ ಫಾಲೋ ಮಾಡಿ! -
ಮಳೆಗಾಲದ WFH: ದಂಪತಿಗಳ ನಡುವಿನ ಕಿರಿಕಿರಿ ತಪ್ಪಿಸಿ, ಮನೆಯಲ್ಲಿ ನೆಮ್ಮದಿ ಕಾಪಾಡಿಕೊಳ್ಳಲು ಈ ಸರಳ ಸೂತ್ರಗಳು! -
ದೆಹಲಿ ಐಕಿಯಾ ಸ್ಟೋರ್: ಸಾಕೇತ್ನಲ್ಲಿ ಹೊಸ ಶಾಖೆ ಆರಂಭ, ಸಣ್ಣ ಮನೆಗಳಿಗೆ ಬೆಸ್ಟ್ ಐಡಿಯಾಸ್! -
IMD ರೆಡ್ ಅಲರ್ಟ್: ಮಳೆಗಾಲದಲ್ಲಿ ಹೊಟ್ಟೆಯ ಆರೋಗ್ಯ ಹಾಳಾಗದಂತೆ ತಡೆಯುವುದು ಹೇಗೆ? -
ನೈನಿತಾಲ್ನಲ್ಲಿ ಭಾರಿ ಮಳೆ: ಶಾಲೆಗಳಿಗೆ ರಜೆ ಘೋಷಣೆ, ಪ್ರವಾಸಿಗರಿಗೆ ಹೈ ಅಲರ್ಟ್!
ಈತ ಕ್ಷೌರದಂಗಡಿಯಲ್ಲಿ ಕುತ್ತಿಗೆ ಮಸಾಜ್ ಮಾಡಿಸಿಕೊಂಡು ಆಸ್ಪತ್ರೆ ಸೇರಿದ! ಅಷ್ಟಕ್ಕೂ ಏನಾಯಿತು ಗೊತ್ತೇ?
ತುಂಬಾ ಬಳಲಿರುವಂತಹ ದೇಹಕ್ಕೆ ಸಂಪೂರ್ಣವಾಗಿ ಎಣ್ಣೆ ಹಚ್ಚಿಕೊಂಡು ಮಸಾಜ್ ಮಾಡಿಸಿಕೊಂಡರೆ ಆಗ ಸಿಗುವಂತಹ ಸುಖವೇ ಬೇರೆ. ಅದೇ ರೀತಿ ನಾವು ಸೆಲೂನ್ ಗೆ ಹೋದರೆ ಅಲ್ಲಿ ಕ್ಷೌರ ಮಾಡಿಸಿಕೊಂಡ ಬಳಿಕ ಕೆಲವು ಮಂದಿ ನಮ್ಮ ಬೆನ್ನು ಹಾಗೂ ಕುತ್ತಿಗೆಗೆ ಮಸಾಜ್ ಮಾಡುವರು. ಇದು ತುಂಬಾ ಆರಾಮದಾಯಕ ಎಂದು ಅನಿಸುವುದು. ಆದರೆ ಇಂತಹ ಮಸಾಜ್ ಮಾಡುವವರು ತುಂಬಾ ಅನುಭವಿಗಳು ಆಗಿರಬೇಕು.

ಇಲ್ಲವಾದಲ್ಲಿ ದೊಡ್ಡ ಸಮಸ್ಯೆಯು ಬರಬಹುದು. ಯಾಕೆಂದರೆ ಸರಿಯಾಗಿ ಮಸಾಜ್ ಮಾಡದೆ ಇದ್ದರೆ ನರಗಳ ಮೇಲೆ ಪರಿಣಾವಾಗಿ ಬೇರೆ ಸಮಸ್ಯೆಯು ಕಾಣಿಸಿಕೊಳ್ಳಬಹುದು. ಇದಕ್ಕಾಗಿ ನೀವು ಕ್ಷೌರದ ಅಂಗಡಿಯಲ್ಲಿ ಮಸಾಜ್ ಮಾಡಿಸಿಕೊಳ್ಳುವ ವೇಳೆ ತುಂಬಾ ಎಚ್ಚರಿಕೆ ವಹಿಸಿ. ಇಲ್ಲೊಬ್ಬ ವ್ಯಕ್ತಿಯು ಕ್ಷೌರದಂಗಡಿಯಲ್ಲಿ ಕುತ್ತಿಗೆ ಮಸಾಜ್ ಮಾಡಿಸಿಕೊಳ್ಳಲು ಹೋಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆಯು ನಡೆದಿದೆ. ಈ ಬಗ್ಗೆ ನೀವು ವಿವರವಾಗಿ ಮತ್ತಷ್ಟು ಮಾಹಿತಿ ತಿಳಿಯಿರಿ.

ಆ ವ್ಯಕ್ತಿ ಕ್ಷೌರದಂಗಡಿಗೆ ತೆರಳಿದ
ನಮ್ಮದೇ ದೇಶದ ಈ ವ್ಯಕ್ತಿ ಯಾವಾಗಲೂ ಕ್ಷೌರದಂಗಡಿಗೆ ಹೋಗಿ ಅಲ್ಲಿ ಕೂದಲು ಕತ್ತರಿಸಿಕೊಂಡ ಬಳಿಕ ಸ್ವಲ್ಪ ಮಸಾಜ್ ಮಾಡಿಸುವುದು ಹವ್ಯಾಸ ಮಾಡಿಕೊಂಡಿದ್ದ. ಕ್ಷೌರದಂಗಡಿಯಿಂದ ಹೊರಬಂದ ಕೆಲವೇ ನಿಮಿಷಗಳಲ್ಲಿ ಆತನಿಗೆ ಉಸಿರಾಟದ ಸಮಸ್ಯೆಯು ಕಾಣಿಸಿಕೊಂಡಿತು.

ವೈದ್ಯರು ಆತನ ಪರೀಕ್ಷೆ ಮಾಡಿದರು
ವೈದ್ಯರು ಆ ವ್ಯಕ್ತಿಯ ಎಂಆರ್ ಐ ಸ್ಕ್ಯಾನ್ ಮಾಡಿದರು. ಈ ವೇಳೆ ಅವರಿಗೆ ಕುತ್ತಿಗೆಯಲ್ಲಿ ಗಂಭೀರವಾದ ಗಾಯಗಳು ಕಾಣಿಸಿಕೊಂಡವು. ಕುತ್ತಿಗೆಗೆ ಮಸಾಜ್ ಮಾಡಿಕೊಂಡ ವೇಳೆ ಕಾಣಿಸಿಕೊಂಡ ಗಾಯಗಳು ಇದಾಗಿದ್ದವು.

ಆತನ ನರಗಳಿಗೆ ಹಾನಿಯಾಗಿತ್ತು
ವೈದ್ಯರು ಹೇಳುವ ಪ್ರಕಾರ ಫರೆನಿಕ್ ನರಕ್ಕೆ ಹಾನಿ ಉಂಟಾಗಿತ್ತು. ಈ ನರವು ಧ್ವನಿಫಲಕವನ್ನು ನಿಯಂತ್ರಿಸುವುದು. ಇದು ಉಸಿರಾಟದ ಪ್ರಮುಖ ಸ್ನಾಯುವಾಗಿದೆ.

ಆತ ಈಗ ಆಸ್ಪತ್ರೆಯಲ್ಲಿದ್ದಾನೆ
ಈ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಮತ್ತು ಆತನಿಗೆ ಕೃತಕ ಉಸಿರಾಟದ ವ್ಯವಸ್ಥೆ ಮಾಡಲಾಗಿದೆ. ಆ ವ್ಯಕ್ತಿಯ ಡಯಾಫರ್ಮ್ ಸಂಪೂರ್ಣವಾಗಿ ಹಾನಿಯಾಗಿದೆ ಮತ್ತು ಇದರಿಂದ ಆತನಿಗೆ ಜೀವಮಾನವಿಡಿ ಸಮಸ್ಯೆನ್ನು ಎದುರಿಸಬೇಕಾಗುತ್ತದೆ. ಯಾಕೆಂದರೆ ಇಂತಹ ನರಗಳು ಪುನರ್ ಜೀವನ ಪಡೆಯುವುದು ತುಂಬಾ ಅಪರೂಪವಾಗಿದೆ.
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಏನು? ನಿಮ್ಮ ಅಭಿಪ್ರಾಯ ಕಮೆಂಟ್ ಬಾಕ್ಸ್ ಗೆ ಹಾಕಿ.



Click it and Unblock the Notifications