Just In
- 2 hrs ago ಗುಡ್ಫ್ರೈಡೆ ಆಚರಣೆ ಹುಟ್ಟಿದ್ದು ಹೇಗೆ? ಇದರ ಮಹತ್ವವೇನು ಗೊತ್ತಾ?
- 11 hrs ago ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- 12 hrs ago ಮೀನ ರಾಶಿಯಲ್ಲಿ ಬುಧ ವಕ್ರೀಯ ಚಲನೆ ಮಾಡುವಾಗ ಈ 5 ರಾಶಿಯವರು ವೃತ್ತಿ ಜೀವನದ ಬಗ್ಗೆ ಜಾಗ್ರತೆ
- 12 hrs ago ದಿನ ಭವಿಷ್ಯ ಮಾರ್ಚ್ 29: ಶುಕ್ರವಾರದ ಈ ದಿನ ದ್ವಾದಶ ರಾಶಿಗಳಿಗೆ ಹೇಗಿರಲಿದೆ?
Don't Miss
- News Karnataka Lok Sabha: 28 ಕ್ಷೇತ್ರಗಳ ಜಾತಿವಾರು ಅಭ್ಯರ್ಥಿಗಳ ಯಾರು? ಮಾಹಿತಿ ಇಲ್ಲಿದೆ
- Automobiles ಎಲೆಕ್ಟ್ರಿಕ್ ಲೋಕಕ್ಕೆ ಎಸ್ಯುವಿ ದೈತ್ಯನ ಎಂಟ್ರಿ: ಇನ್ನು ಉಳಿದ ಕಾರುಗಳನ್ನು ದೇವರೇ ಕಾಪಾಡಬೇಕು!
- Sports IPL 2024: ವಿರಾಟ್ ಕೊಹ್ಲಿ ಕೆಕೆಆರ್ ಡಗೌಟ್ ನೋಡಿದ್ರೆ ಉರಿದು ಬೀಳ್ತಾರೆ; ಆರ್ಸಿಬಿ ಮಾಜಿ ಕ್ರಿಕೆಟಿಗ
- Finance ಬೆಂಗಳೂರು-ತುಮಕೂರು ನಮ್ಮ ಮೆಟ್ರೋ ಯೋಜನೆ: ಬರಲಿವೆ 19 ಎತ್ತರದ ನಿಲ್ದಾಣಗಳು
- Technology iPhone: ಆಪಲ್ ಅಂತಿಮವಾಗಿ ಐಫೋನ್ 12 ಬಳಕೆದಾರರಿಗೆ ಗುಡ್ ನ್ಯೂಸ್ ನೀಡಿಯೇ ಬಿಟ್ಟಿತು! ಏನದು?
- Movies "ಇವರು ಆಡೋ ಮಾತುಗಳಿಂದ ನಮ್ಮ ತಾಯಿ ಊಟ ಮಾಡ್ತಿಲ್ಲ"; ಕಣ್ಣೀರಿಟ್ಟ ವರ್ತೂರು ಸಂತೋಷ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಈ ಊರಿನಲ್ಲಿ ವಿವಾಹವಾಗದೆ ಹುಡುಗ-ಹುಡುಗಿ, ಒಂದೇ ಮನೆಯಲ್ಲಿ ಒಟ್ಟಿಗಿರಬಹುದು!
ನಮ್ಮ ದೇಶ ಸಂಸ್ಕೃತಿ ಹಾಗೂ ಸಂಪ್ರದಾಯದ ವಿಚಾರದಲ್ಲಿ ಬಹಳ ಶ್ರೀಮಂತವಾದ ಸ್ಥಾನವನ್ನು ಪಡೆದುಕೊಂಡಿದೆ. ಕೆಲವು ಸಂಪ್ರದಾಯಗಳು ವಿಚಿತ್ರ ಹಾಗೂ ಅಸಮಾನ್ಯವಾದದ್ದು ಎನಿಸಬಹುದು. ಇನ್ನೂ ಕೆಲವು ಪವಿತ್ರತೆಯ ಪ್ರತೀಕವಾಗಿರುವುದು. ವಿವಿಧ ಜಾತಿ, ಜನಾಂಗದವರನ್ನು ಹೊಂದಿರುವ ನಮ್ಮ ರಾಷ್ಟ್ರದಲ್ಲಿ ಕಂಡು ಕೇಳರಿಯದಂತಹ ಸಂಪ್ರದಾಯಗಳು ಮತ್ತು ಪದ್ಧತಿಗಳಿವೆ.
ವಿವಾಹ ಎನ್ನುವುದು ಸಾಮಾನ್ಯವಾಗಿ ಎಲ್ಲಾ ಜಾತಿ ಧರ್ಮದಲ್ಲೂ ಒಂದು ಪವಿತ್ರವಾದ ಬಂಧನ. ಮಗ/ಮಗಳು ವಯಸ್ಸಿಗೆ ಬಂದಾಗ ಮನೆ ಮಂದಿಯವರೆಲ್ಲಾ ಒಟ್ಟಿಗೆ ಸೇರಿ ಅವರಿಗೆ ವಿವಾಹ ಮಾಡಿಸುವುದು ಒಂದು ಸಂಪ್ರದಾಯ. ಆದರೆ ಇಲ್ಲೊಂದು ಜನಾಂಗದವರ ವಿವಾಹ ಪದ್ಧತಿ ಅತ್ಯಂತ ವಿಚಿತ್ರವಾಗಿದೆ...
ಇದು 1000 ವರ್ಷಗಳಿಂದಲೂ ನಡೆದುಕೊಂಡು ಬಂದ ಪದ್ಧತಿ
ಹೌದು, ರಾಜಸ್ಥಾನದ ವಾಯುವ್ಯ ರಾಜ್ಯದ ಗಾರಸ್ಯ ಬುಡಕಟ್ಟು ಜನಾಂಗದವರು ವಿವಾಹವಾಗದೆ ಸಂಬಂಧದಲ್ಲಿ ಇರುತ್ತಾರೆ. ಇದರ ಕುರಿತು ಅಥವಾ ಅವರ ಸಂಬಂಧಗಳ ಕುರಿತು ಯಾರೂ ಯಾರನ್ನೂ ಪ್ರಶ್ನಿಸುವುದಿಲ್ಲ ಎಂದು ಹೇಳಲಾಗುತ್ತದೆ. ಈ ಬುಡಕಟ್ಟು ಜನಾಂಗದವರ ಪದ್ಧತಿಯು 1000 ವರ್ಷಗಳಿಂದಲೂ ನಡೆದುಕೊಂಡು ಬಂದ ಪದ್ಧತಿ ಎನ್ನುತ್ತಾರೆ.
ಮದುವೆ ಆಗುವ ಮುಂಚೆಯೇ ಒಟ್ಟಿಗೆ ವಾಸಿಸುತ್ತಾರೆ
ಗ್ಯಾರಸ್ಯ ಬುಡಕಟ್ಟಿನ ದಂಪತಿಗಳು ಒಟ್ಟಿಗೆ ವಾಸಿಸುತ್ತಾರೆ. ಪುರುಷರು ತಾವು ಉತ್ತಮ ಸಂಪಾದನೆಯನ್ನು ಹೊಂದಿ, ಕೈಯಲ್ಲಿ ಒಂದಿಷ್ಟು ಹಣದ ಸಂಪಾದನೆ ಆದ ನಂತರ ತಮ್ಮ ಪಾಲುದಾರರನ್ನು ಅಥವಾ ಸಂಗಾತಿಯನ್ನು ವಿವಾಹವಾಗುತ್ತಾರೆ. ಇದಕ್ಕೆ ಸಾಕ್ಷಿ ಎನ್ನುವಂತೆ 70 ವರ್ಷದ ನಾನಿಯಾ ಗಾರಸ್ಯ ಎನ್ನುವವನು ತನ್ನೊಂದಿಗೆ ಇಷ್ಟು ದಿನ ಇದ್ದ 60 ವರ್ಷದ ಕಾಲಿ ಎನ್ನುವವರನ್ನು ವಿವಾಹವಾದರು. ಇವರಿಗೆ ವಿವಾಹವಾಗದೆಯೇ ಮಕ್ಕಳು ಹುಟ್ಟಿದ್ದಾರೆ.
ಹುಡುಗಿಯ ಪಾಲಕರಿಗೆ ಹುಡುಗರು ಒಂದಿಷ್ಟು ಹಣವನ್ನು ನೀಡಬೇಕು!
ಹದಿ ಹರೆಯದ ಮಕ್ಕಳು ಗುಜರಾತ್ ಮತ್ತು ರಾಜಸ್ಥಾನದ ಭಾಗದಲ್ಲಿ ನಡೆವ "ಎರಡು ದಿನಗಳ ಕಾಲ್ಪನಿಕ ನ್ಯಾಯಯೋಜಿತ" ಸಂಪ್ರದಾಯದ ಮೂಲಕ ತಮ್ಮ ಆಯ್ಕೆಯ ಪಾಲುದಾರರೊಂದಿಗೆ ಸ್ನೇಹ ಬೆಳೆಸುವ ಸಂಪ್ರದಾಯವನ್ನು ಹೊಂದಿದೆ. ನಂತರ ಅವರು ವಿವಾಹವಾಗದೆಯೇ ಒಟ್ಟಿಗೆ ಬಾಳಬಹುದು. ಇವರು ಹಿಂದಿರುಗುವಾಗ ಅಂದರೆ ಒಟ್ಟಿಗೆ ಬಾಳುವ ಮುನ್ನ ಹುಡುಗಿಯ ಪಾಲಕರಿಗೆ ಹುಡುಗರು ಒಂದಿಷ್ಟು ಹಣವನ್ನು ನೀಡಬೇಕು.
ಹುಡುಗನ ಮನೆಯವರೇ ಎಲ್ಲಾ ಖರ್ಚುಗಳನ್ನು ನೀಡಬೇಕು
ಇದಲ್ಲದೆ ಈ ಬುಡಕಟ್ಟಿನ ವಿವಾಹದಲ್ಲಿ ಹುಡುಗಿ ಮನೆಯವರ ಖರ್ಚು ಏನೂ ಇರುವುದಿಲ್ಲ. ಹುಡುಗನ ಮನೆಯವರೇ ಎಲ್ಲಾ ಸಂಪ್ರದಾಯಗಳ ಖರ್ಚುಗಳನ್ನು ನಿರ್ವಹಿಸಬೇಕು. ಅಲ್ಲದೆ ವಿವಾಹ ಸಮಾರಂಭವು ಹುಡುಗನ ಮನೆಯಲ್ಲಿಯೇ ನಡೆಸಲಾಗುವುದು.
ಈ ಊರು ವರದಕ್ಷಿಣೆ, ಸಾವು ಮತ್ತು ಅತ್ಯಾಚಾರಗಳಿಂದ ಮುಕ್ತ
ಗಾರಸ್ಯ ಬುಡಕಟ್ಟಿನ ಜನರ ಈ ಅಭ್ಯಾಸ ಅಸಮಾನ್ಯ ಎಂದು ತೋರುತ್ತದೆಯಾದರೂ ಇವರ ಈ ಸಂಪ್ರದಾಯದಿಂದ ತಮ್ಮ ಸಮುದಾಯದಲ್ಲಿ ವರದಕ್ಷಿಣೆ, ಸಾವು ಮತ್ತು ಅತ್ಯಾಚಾರಗಳಿಂದ ದೂರ ಉಳಿದಿದೆ ಎಂದರೆ ನಿಮಗೆ ಆಶ್ಚರ್ಯ ಆಗಬಹುದು.
ಜ್ಞಾನಿ ರಾಜೀವ್ ಗುಪ್ತ ಅವರ ಪ್ರಕಾರ
ಸಾಮಾಜಿಕ ವಿಜ್ಞಾನಿ ರಾಜೀವ್ ಗುಪ್ತ ಅವರ ಪ್ರಕಾರ "ಬುಡಕಟ್ಟು ಜನರ ಈ ಸಂಪ್ರದಾಯದಿಂದ ತಮ್ಮ ಹಕ್ಕುಗಳ ಆಯ್ಕೆ ಹಾಗೂ ತಿರಸ್ಕಾರವು ನಡೆಯುತ್ತದೆ. ಅವರು ಆಧುನಿಕ ಸಮಾಜದಲ್ಲಿ ನಡೆಯುವ ವಿವಾಹ ಪದ್ಧತಿಯು ಯೋಗ್ಯವಾದದ್ದು ಎಂದು ಭಾವಿಸಿಲ್ಲ. ಏಕೆಂದರೆ ಈ ವಿವಾಹ ಪದ್ಧತಿಯಲ್ಲಿ ಮಹಿಳೆಯರ ಮೇಲೆ ಅನೇಕ ನಿರ್ಬಂಧಗಳನ್ನು ಹೇರಲಾಗುತ್ತದೆ ಎಂದು ಭಾವಿಸುವರು.