Just In
- 45 min ago ಈರುಳ್ಳಿ ಹಾಕದೆ 3 ಪದಾರ್ಥ ಹಾಕಿ 5 ನಿಮಿಷದಲ್ಲಿ ಚಟ್ನಿ ಮಾಡಬಹುದು.! ಇಲ್ಲಿದೆ ರೆಸಿಪಿ
- 47 min ago ತಿಂಡಿ ಮಾಡಲು ಬಳಸಿದ ಎಣ್ಣೆಯನ್ನು ಮರು ಬಳಕೆ ಮಾಡುತ್ತೀರಾ? ಆರೋಗ್ಯಕ್ಕಾಗಿ ಈ ಟಿಪ್ಸ್ ಅನುಸರಿಸಿ
- 2 hrs ago ಕೊನೆಗೂ ಬೆಂಗಳೂರಿಗೆ ಮಳೆ ಭಾಗ್ಯ..! ಹವಾಮಾನ ಇಲಾಖೆ ಸೂಚಿಸಿದ ದಿನಾಂಕವಿದು..!
- 2 hrs ago ಮೂರು ಮಕ್ಕಳು ನನ್ನದ್ದಲ್ಲ ಎಂದು ಆತನಿಗೆ ತಿಳಿದಾಗ.... ಹೆಂಡತಿಯ ಮಹಾಮೋಸ
Don't Miss
- News ನಾನೊಬ್ಬ ಸ್ಟ್ರಾಂಗ್ ಸಿಎಂ, ನಿಮ್ಮ ಹಾಗೆ ವೀಕ್ ಪಿಎಂ ಅಲ್ಲ: ಸಿದ್ದರಾಮಯ್ಯ ಹೀಗೆ ಹೇಳಿದ್ಯಾಕೆ?
- Technology Airtel & Noise: ಇನ್ಮುಂದೆ ಏರ್ಟೆಲ್ ಪೇಮೆಂಟ್ ಬ್ಯಾಂಕ್ ಸ್ಮಾರ್ಟ್ವಾಚ್ನದ್ದೇ ಹವಾ! ಟ್ಯಾಪ್-ಟು-ಪೇ ಫೀಚರ್ಸ್..
- Finance ಬಾಬಾ ರಾಮ್ದೇವ್ಗೆ ಖುದ್ದು ಹಾಜರಾಗುವಂತೆ ಖಡಕ್ ಸೂಚನೆ ನೀಡಿದ ಸುಪ್ರೀಂ ಕೋರ್ಟ್
- Automobiles ಭರ್ಜರಿ ಮೈಲೇಜ್, ಬಹುಬೇಡಿಕೆಯ ಮಾರುತಿ ಕಾರಿನ ಮೇಲೆ ಭರ್ಜರಿ ಡಿಸ್ಕೌಂಟ್
- Sports ಜೆರ್ಸಿ ನಂ.18, ವಿರಾಟ್ ಕೊಹ್ಲಿ ಜೊತೆಗಿನ ಹೋಲಿಕೆ ಬಗ್ಗೆ ಸ್ಮೃತಿ ಮಂಧಾನ ಹೇಳಿದ್ದೇನು?
- Movies ಐಪಿಎಲ್ ಸೈಡ್ ಎಫೆಕ್ಟ್ ; ಅವತಾರ ಪುರುಷ 2 ಬಿಡುಗಡೆ ದಿನಾಂಕ ಮುಂದಕ್ಕೆ, ಛೂ ಮಂತರ್ ಕಥೆ ಏನು..?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ತರಬೇತುದಾರನ ಅಚಾತುರ್ಯದಿಂದ ಪ್ರಾಣ ಕಳೆದುಕೊಂಡ ಹುಡುಗಿ!
ಕಾಲೇಜು ದಿನಗಳಲ್ಲಿ ನಾವು ಡ್ರಿಲ್ ಮೊದಲಾದ ಕೌಶಲ್ಯ ತರಬೇತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಆಪತ್ತಿನಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಶಿಕ್ಷಣವನ್ನು ಪಡೆದುಕೊಂಡಿರುತ್ತೇವೆ. ಈ ಸಮಯದಲ್ಲಿ ನಾವು ಈ ತರಬೇತಿ ಕಾರ್ಯಕ್ರಮಗಳಲ್ಲಿ ಇರುವಂತಹ ಸರಿ ತಪ್ಪು, ಅಪಾಯಗಳ ಕಡೆಗೆ ಗಮನ ಹರಿಸುವುದಿಲ್ಲ. ಏನೋ ಒಂದು ಹುರುಪಿನಿಂದ ಇದಕ್ಕೆ ಮುಂದಡಿ ಇಡುತ್ತೇವೆ. ಹೀಗೆಯೇ ತರಬೇತಿ ನಡೆಯುತ್ತಿದ್ದ ಸಮಯದಲ್ಲಿ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಸೂಕ್ತ ಮುನ್ನೆಚ್ಚರಿಕೆಗಳು ಇಲ್ಲದೇ ಇದ್ದುದರಿಂದ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.
ಹಾರುವ ಸಮಯದಲ್ಲಿ ಈಕೆ ಕಂಗೆಟ್ಟಿದ್ದರು ಮತ್ತು ಕಾಲುಗಳು ತಣ್ಣಗಾಗಿದ್ದವು ಅಂತೆಯೇ ನಿರ್ದೇಶಕರ ಸೂಚನೆಗಳನ್ನು ಪಾಲಿಸುವ ಸಮಯದಲ್ಲಿ ಆಕೆ ಹೆದರಿದರು. ಆದ್ದರಿಂದಲೇ ಈ ಘಟನೆ ಸಂಭವಿಸಿದೆ. ಎರಡನೆಯ ಮಹಡಿಯಿಂದ ಜಿಗಿಯುವ ಸಮಯದಲ್ಲಿ ಆಕೆ ಹೆದರಿದ್ದೇ ಆಕೆಯ ಪ್ರಾಣಕಳೆದುಕೊಳ್ಳಲು ಕಾರಣವಾಯಿತು. ಆಕೆ ಧೈರ್ಯವಾಗಿದ್ದಾಳೆ ಎಂದು ತಿಳಿದ ತರಬೇತುದಾರ ಆಕೆಯನ್ನು ಕೆಳಕ್ಕೆ ನೂಕಿದ್ದರು, ಆದರೆ ಆದದ್ದೇ ಬೇರೆ. ಕೆಳಕ್ಕೆ ಬೀಳುವ ಸಮಯದಲ್ಲಿ ತಲೆ ನೆಲಕ್ಕೆ ಬಡಿದು ಆಕೆಯ ಪ್ರಾಣ ಪಕ್ಷಿ ಹಾರಿ ಹೋಯಿತು.
#Lokeshwari, 19yr old Girl dies while gng through disaster management training n college at #Coimbatore. She was forced & pushed by trainer to jump from 2nd floor rail as she hesitated. She sustained injuries n head & declared brought dead. Share Max until d Trainer shld b arrest pic.twitter.com/4IvblVzt7r
— #Thala (@iam_K_A) July 12, 2018
19 ರ ಹರೆಯದ ಲೋಕೇಶ್ವರಿ ಹೆಸರಿನ ಹೆಣ್ಣು ಮಗಳೇ ಮೃತಳಾದ ದುರ್ದೈವಿಯಾಗಿದ್ದಾರೆ. ಕೊಯಂಬತ್ತೂರು ಕಾಲೇಜಿನಲ್ಲಿ ರಕ್ಷಣಾ ತರಬೇತಿಯನ್ನು ನಡೆಸುವ ಸಮಯದಲ್ಲಿ ಈ ಅನಾಹುತ ನಡೆದಿದ್ದು ಯುವತಿ ಪ್ರಾಣವನ್ನು ಕಳೆದುಕೊಂಡಿದ್ದಾರೆ. ತರಬೇತಿ ಸಮಯದಲ್ಲಿ ತರಬೇತುದಾರ ಆಕೆಯನ್ನು ಎರಡನೇ ಮಹಡಿಯಿಂದ ತಳ್ಳಿದ್ದಾರೆ ಮತ್ತು ಭಯಭೀತಗೊಂಡ ಆಕೆ ಹೆದರಿ ಕೆಳಕ್ಕೆ ಜಿಗಿದಿದ್ದು ಪ್ರಾಣ ಕಳೆದುಕೊಂಡಿದ್ದಾರೆ. ಇದನ್ನು ಆದಷ್ಟು ಜಾಲತಾಣಗಳಲ್ಲಿ ಹಂಚಿಕೊಳ್ಳಿ ಇದರಿಂದ ಆ ತರಬೇತುದಾರನನ್ನು ಹಿಡಿಯುವಂತಾಗಲಿ.
ಆಕೆಯನ್ನು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ ಆಕೆ ಮೆದುಳು ಸಾವಿನಿಂದ ಮರಣವನ್ನು ಹೊಂದಿದ್ದಾರೆ. ಇನ್ನು ಮುಂದೆ ಇಂತಹ ಚಟುವಟಿಕೆಗಳಲ್ಲಿ ನೀವು ಸ್ವಯಂಸೇವಕರಾಗಿ ಪಾಲ್ಗೊಳ್ಳುತ್ತಿದ್ದೀರಿ ಎಂದಾದಲ್ಲಿ ಭದ್ರತಾ ವ್ಯವಸ್ಥೆಯನ್ನು ಚೆನ್ನಾಗಿ ಪರಿಶೀಲಿಸಿಕೊಳ್ಳಿ.