Latest Updates
-
ಬೇಸಿಗೆ ಮದುವೆ ಸಂಭ್ರಮ: ಬಿಸಿಲ ಬೇಗೆಯಿಂದ ಅತಿಥಿಗಳನ್ನು ರಕ್ಷಿಸಲು ಇಲ್ಲಿದೆ ಮಾಸ್ಟರ್ ಪ್ಲಾನ್ -
ಮೇ 2-3ರ ಬಿರುಗಾಳಿ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಗಿಡಗಳನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಭಾರತದಲ್ಲಿ ಸುಡುವ ಬಿಸಿಲು: ಹೀಟ್ ವೇವ್ನಿಂದ ಪಾರಾಗಲು ಇಲ್ಲಿವೆ ಬೆಸ್ಟ್ ಡಯಟ್ ಮತ್ತು ಹೈಡ್ರೇಶನ್ ಟಿಪ್ಸ್! -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಕರಣ್ ಜೋಹರ್ ಅಬ್ಬರ, ಭಾರತೀಯ ಫ್ಯಾಷನ್ ಲೋಕದ ಹೊಸ ಸಂಚಲನ! -
ಮೇ ತಿಂಗಳ ಬಿಸಿಲ ಧಗೆ: ನಿಮ್ಮ ಬೆಳಗಿನ ದಿನಚರಿಯಲ್ಲಿ ಈ ಬದಲಾವಣೆ ಮಾಡಿಕೊಳ್ಳದಿದ್ದರೆ ಕಷ್ಟ! -
ಎವೆಲಿನ್ ಶರ್ಮಾ ವಿಚ್ಛೇದನ: ಮಕ್ಕಳ ಭವಿಷ್ಯಕ್ಕಾಗಿ ಈ ಜೋಡಿ ಆರಿಸಿದ ಹೊಸ ದಾರಿ ಯಾವುದು? -
ಬಿಸಿಲ ಧಗೆಗೆ ತಂಪಾದ ಗುಡ್ ನ್ಯೂಸ್: ಮೇ 8 ರಿಂದ ಶುರುವಾಗಲಿದೆ ಗ್ರೇಟ್ ಸಮ್ಮರ್ ಸೇಲ್! -
ಬಿಸಿಲ ಬೇಗೆಗೆ ಸುಸ್ತಾಗಿದ್ದೀರಾ? ಈ ಸರಳ ಆಹಾರ ಪದ್ಧತಿಯಿಂದ ಇಡೀ ದಿನ ಇರಿ ಫ್ರೆಶ್! -
ಬಿಸಿಲ ಬೇಗೆಗೆ ಸುಸ್ತಾಗಿದ್ದೀರಾ? ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ ಕೂಲ್ ಆಗಿರಿ! -
ಬಿಸಿಗಾಳಿಯ ಅಬ್ಬರ: ನಿಮ್ಮ ಫಿಟ್ನೆಸ್ ದಿನಚರಿಯನ್ನು ಬದಲಾಯಿಸದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ!
ಅಚ್ಚರಿ ಆದರೂ ನಿಜ...ಈ ದೇವಸ್ಥಾನದ ವಿಗ್ರಹಗಳು ರಾತ್ರಿಯ ವೇಳೆ ಪರಸ್ಪರ ಮಾತನಾಡುತ್ತವೆ!!
ಭಾರತದ ದೇಶ ವಿವಿಧ ಜಾತಿ-ಧರ್ಮಗಳನ್ನು ಒಳಗೊಂಡ ದೇಶ. ಇಲ್ಲಿ ಅನೇಕ ಪವಿತ್ರ ದೇಗುಲಗಳಿವೆ. ಒಂದೊಂದು ಸಹ ವಿಶೇಷ ಪುರಾಣ ಹಿನ್ನೆಲೆಯನ್ನು ಒಳಗೊಂಡಿವೆ. ಅಲ್ಲದೆ ಕೆಲವು ದೇಗುಲವು ದೇವಾಲಯಗಳಲ್ಲಿ ಅದ್ಭುತ ಪವಾಡಗಳು ನಡೆಯುತ್ತವೆ. ಇವು ಭಕ್ತರ ಏಳಿಗೆಗಾಗಿ ಎಂದು ಸಹ ಹೇಳಲಾಗುವುದು. ಇಂತಹ ಒಂದು ವಿಶೇಷ ಹಿನ್ನೆಲೆ ಹಾಗೂ ಪವಾಡವನ್ನು ಒಳಗೊಂಡಿರುವ ದೇವಾಲಯಗಳಲ್ಲಿ ರಾಜೇಶ್ವರಿ ತ್ರಿಪುರ ಸುಂದರಿ ದೇಗುಲವು ಒಂದು! ಮುಂದೆ ಓದಿ..

ರಾಜರಾಜೇಶ್ವರಿ ತ್ರಿಪುರ ಸುಂದರಿ ದೇವಸ್ಥಾನ
ಬಿಹಾರದ ಬಸ್ಟರ್ ಎಂಬಲ್ಲಿರುವ ರಾಜರಾಜೇಶ್ವರಿ ತ್ರಿಪುರ ಸುಂದರಿ ದೇವಸ್ಥಾನವು ನಿತ್ಯವೂ ಸಾವಿರಾರು ಭಕ್ತರನ್ನು ಆಕರ್ಷಿಸುತ್ತದೆ. ಗುರ್ಗಾದೇವಿಗೆ ಸಮರ್ಪಿತವಾದ ಈ ದೇವಸ್ಥಾನದಲ್ಲಿ ವಿವಿಧ ಆಚಾರ ವಿಚಾರಗಳಿರುವುದು ವಿಶೇಷ. ತ್ರಿಗರಾ, ಧುಮಾವತಿ, ಬಾಗುಲುಖಿ, ತಾರಾ, ಕಾಳಿ, ಚಿನ್ ಮಸ್ತಾ, ಶೋಡಸಿ, ಮಾತಂಗಿ, ಕಮಲಾ, ಉಗ್ರಹ ತಾರಾ, ಭುವನೇಶ್ವರಿ ಸೇರಿದಂತೆ ರಾಜೇಶ್ವರಿ ದೇವಿಯ ವಿವಿಧ ಅವತಾರಗಳ ವಿಗ್ರಹಗಳು ಇಲ್ಲಿವೆ.

400 ವರ್ಷಗಳ ಇತಿಹಾಸ ಹೊಂದಿರುವ ಈ ದೇವಸ್ಥಾನ
400 ವರ್ಷಗಳ ಇತಿಹಾಸವನ್ನು ಹೊಂದಿರುವ ಈ ದೇಗುಲವನ್ನು ಭವಾನಿ ಮಿಶ್ರಾ ಎನ್ನುವವರು ಸ್ಥಾಪಿಸಿದ್ದರು ಎಂದು ಹೇಳಲಾಗುತ್ತದೆ. ಇಲ್ಲಿಯ ಒಂದು ಅದ್ಭುತ ವಿಚಾರವೆಂದರೆ ದೇವಾಲಯದ ರಾಜರಾಜೇಶ್ವರಿ ತ್ರಿಪುರ ಸುಂದರಿ ವಿಗ್ರಹವನ್ನು ಹೊರತುಪಡಿಸಿ ಉಳಿದ ವಿಗ್ರಹಗಳು ಪರಸ್ಪರ ಮಾತನಾಡುತ್ತವೆ ಎಂದು ಹೇಳಲಾಗುವುದು. ಅದರಲ್ಲಿ ವಿಶೇಷವಾಗಿ ಬಾತುಕುಬಿಹಿ, ತಾರಗಳ ವಿಗ್ರಹಗಳು, ಬತುಕ್ ಭೈರವ, ದತ್ತಾತ್ರೇಯ ಭೈರವ, ಅನ್ನಪೂರ್ಣ ಭೈರವ, ಕಲಾ ಭೈರವ ಮತ್ತು ಮುಂಗಾಡಿ ಭೈರವ ವಿಗ್ರಹಗಳು ರಾತ್ರಿಯ ಸಮಯದಲ್ಲಿ ಮಾತನಾಡುತ್ತವೆ ಎಂದು ಹೇಳಲಾಗುವುದು.

ವಿಜ್ಞಾನಿಗಳಿಗೂ ಸೋತು ಬಿಟ್ಟರು!
ಈ ವಿಚಾರವನ್ನು ಪರಿಶೀಲಿಸಲು ವಿಜ್ಞಾನಿಗಳ ತಂಡವೊಂದು ಈ ಸ್ಥಳಕ್ಕೆ ಭೇಟಿ ನೀಡಿತ್ತು. ಇವರ ಸಂಶೋಧನೆಯ ಪ್ರಕಾರವೂ ವಿಗ್ರಹಗಳು ರಾತ್ರಿಹೊತ್ತು ಮಾತನಾಡುತ್ತವೆ ಎನ್ನುವುದನ್ನು ದೃಢಪಡಿಸಿದ್ದರು ಎನ್ನಲಾಗುತ್ತದೆ. ಯಾವುದೇ ಮನುಷ್ಯರ ಸಂಚಾರ ಇಲ್ಲದೆ ಇರುವಾಗ ವಿಗ್ರಹಗಳ ಪರಸ್ಪರ ಮಾತುಗಳನ್ನು ಕೇಳಬಹುದು ಎಂದು ಹೇಳಲಾಗುತ್ತದೆ. ದೇವಸ್ಥಾನದ ಒಳಗೆ ಏಕೆ ಮಾತುಗಳು ಕೇಳಿ ಬರುತ್ತವೆ ಎನ್ನುವುದು ವಿಜ್ಞಾನಿಗಳಿಗೂ ಸೂಕ್ತ ಮಾಹಿತಿ ದೊರೆಯಲಿಲ್ಲ ಎಂದು ಹೇಳಲಾಗುವುದು.

ಇಂದಿಗೂ ಇದು ಬಗೆಯರಿಯದ ವಿಚಾರ
ಈ ವಿಚಾರವನ್ನು ನೀವು ನಂಬಬಹುದು ಅಥವಾ ಬಿಡಬಹುದು. ಈ ಅತೀಂದ್ರಿಯ ವಿದ್ಯಮಾನವು ಏಕೆ ನಡೆಯುತ್ತದೆ ಎನ್ನುವುದು ಇಂದಿಗೂ ಬಗೆಹರಿಯದ ವಿಚಾರವಾಗಿಯೇ ಉಳಿದಿದೆ. ಈ ಮಾತುಗಳು ಏಕೆ ಇಂದಿಗೂ ಮನುಷ್ಯನಿಗೆ ಕೇಳುತ್ತಿಲ್ಲ ಎನ್ನುವುದು ತಿಳಿದಿಲ್ಲ. ಬಹುಶಃ ಇದು ದೇವತೆಗಳು ಮನುಷ್ಯ ಕುಲಕ್ಕೆ ಹೇಳುವ ಯಾವುದೋ ವಿಶೇಷ ವಿಚಾರವಾಗಿರಬಹುದು. ಅದು ಮನುಷ್ಯನಿಗೆ ಈ ವರೆಗೆ ತಿಳಿಯದೆ ಇರುವ ಸಂಗತಿಯಾಗಿರಬಹುದು. ಒಟ್ಟಿನಲ್ಲಿ ಈ ದೇಗುಲದ ದೈವಭಕ್ತಿ ಜನರಲ್ಲಿ ತುಂಬಿದೆ.



Click it and Unblock the Notifications