Just In
- 2 hrs ago ಬಾಯಲ್ಲಿ ನೀರು ತರಿಸುವ ಮಸಾಲೆ ಮೊಟ್ಟೆ ಬುರ್ಜಿ ಮಾಡೋದು ಹೇಗೆ.? ತುಂಬಾ ಸಿಂಪಲ್ ರೆಸಿಪಿ
- 15 hrs ago ಪೂರ್ವಜನರಿಗೆ ಗ್ರಹಣಗಳು ಹೇಗೆ ತಿಳಿಯುತ್ತಿತ್ತು..? ಅವರು ಏನೆಲ್ಲಾ ಕಥೆ ನಂಬಿದ್ದರು ಗೊತ್ತೆ.?
- 16 hrs ago ಇವುಗಳಿಂದ ತೊಂದರೆಯಿಲ್ಲ ಅಂದ್ಕೊಳ್ಳುತ್ತೇವೆ, ಆದರೆ ಸಂಸಾರ ಹಾಳುಮಾಡುವ 6 ಸಂಗತಿಗಳಿವು
- 17 hrs ago ನಾರಾಯಣ ಮೂರ್ತಿ 4 ತಿಂಗಳ ಮೊಮ್ಮಗ ಈಗ ₹240 ಕೋಟಿ ಆಸ್ತಿ ಒಡೆಯ..! ಹೇಗೆ ಸಾಧ್ಯ..?
Don't Miss
- Movies 'ಹಿಟ್ಲರ್ ಕಲ್ಯಾಣ' ಅಂತ್ಯ; ಧಾರಾವಾಹಿ ಬಿಟ್ಟು ಸಿನಿಮಾದಲ್ಲಿ ಬ್ಯುಸಿಯಾಗ್ತಾರಾ 'ಉಪಾಧ್ಯಕ್ಷ'ನ ಬೆಡಗಿ?
- News ಕನಕಪುರಕ್ಕೆ ಕಾಲಿಡಲು ಭಯ; ಕೋರ್ಟ್ಗೆ ಯತ್ನಾಳ್ ಹೇಳಿಕೆ!
- Finance ತನ್ನ 4 ವರ್ಷದ ಮೊಮ್ಮಗನಿಗೆ 240 ಕೋಟಿ ಮೌಲ್ಯದ ಇನ್ಫೋಸಿಸ್ ಷೇರುಗಳನ್ನು ಉಡುಗೊರೆಯಾಗಿ ನೀಡಿದ ನಾರಾಯಣ ಮೂರ್ತಿ
- Technology ಇಂದು ಮಾರುಕಟ್ಟೆಗೆ ಬರಲಿದೆ ಗೆಸ್ಚರ್ ಮೂಲಕ ಕೆಲಸ ಮಾಡುವ ಸ್ಮಾರ್ಟ್ಫೋನ್!
- Automobiles Tata Nexon: ಮುಂಬರಲಿರುವ ಟಾಟಾ ನೆಕ್ಸಾನ್ ಸಿಎನ್ಜಿ ಕಾರಿನ ವಿಶೇಷತೆಗಳಿವು.. ಹೆಚ್ಚು ಮೈಲೇಜ್!
- Sports IPL 2024: ಐಪಿಎಲ್ ಆರಂಭಕ್ಕೂ ಮುನ್ನವೇ 'ಸೂಪರ್' ಭವಿಷ್ಯ; ಆರ್ಸಿಬಿ ಈ ಬಾರಿ ಕಪ್ ಗೆಲ್ಲುತ್ತದಾ? ಇಲ್ಲಿದೆ ಉತ್ತರ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಣ್ಣೀರು ತರಿಸುವ ಸ್ಟೋರಿ: ಈಕೆ ಮಗುವಿಗೆ ಜನ್ಮ ನೀಡಿ ಸಾವನ್ನಪ್ಪಿದರೂ 50 ಜನರ ಪ್ರಾಣ ಉಳಿಸಿದಳು!
ಜೀವನ ನಶ್ವರ ಎನ್ನುವುದು ತಿಳಿದಿದ್ದರೂ ಮನುಷ್ಯ ಮಾತ್ರ ದುರಾಸೆ ಹಾಗೂ ತನ್ನ ಕ್ರೌರ್ಯದಿಂದ ಮರೆಯುತ್ತಲೇ ಇರುತ್ತಾನೆ. ಇಂತಹ ಜನರ ಮಧ್ಯೆಯು ಹಲವಾರು ಮಂದಿ ಒಳ್ಳೆಯ ಜನರು ಇರುತ್ತಾರೆ. ಕೆಲವು ಮಂದಿ ಇದರಲ್ಲಿ ಗುರುತಿಸಲ್ಪಟ್ಟರೆ ಇನ್ನು ಕೆಲವು ಮಂದಿ ಹಾಗೆ ಉಳಿದುಬಿಡುವರು. ನಾವು ನೇತ್ರದಾನ ಮಾಡಿದರೆ ಅದರಿಂದ ಇಬ್ಬರಿಗೆ ದೃಷ್ಟಿ ಸಿಗುವುದು ಎನ್ನುವ ಮಾತಿದೆ. ಅದೇ ರೀತಿಯಲ್ಲಿ ನಮಗೆ ಸಾವು ಸಂಭವಿಸಿದಾಗ ದೇಹದ ವಿಭಿನ್ನ ಅಂಗಾಂಗಗಳನ್ನು ದಾನ ಮಾಡಿದರೆ ಅದರಿಂದ ಹಲವಾರು ಜನರ ಪ್ರಾಣ ಉಳಿಯುವುದು.
ಕೆಲವೊಂದು ಸಲ ಹೃದಯ, ಲಿವರ್ ಇತ್ಯಾದಿಗಳನ್ನು ದಾನ ಮಾಡಿ ಪ್ರಾಣ ಕಾಪಾಡಿದವರ ಬಗ್ಗೆ ನಾವು ಕೇಳಿದ್ದೇವೆ. ಆದರೆ ಈ ಲೇಖನದಲ್ಲಿ ನಾವು ನಿಮಗೆ ಹೇಳಲು ಹೊರಟಿರುವುದು ಮಗುವಿನ ಜನ್ಮ ನೀಡಿದ ಕೆಲವೇ ಗಂಟೆಗಳಲ್ಲಿ ಕೊನೆಯುಸಿರೆಳೆದ ಮಹಿಳೆಯರು ಸುಮಾರು 50 ಮಂದಿಯ ಪ್ರಾಣ ಕಾಪಾಡಿದ್ದಾರೆ. ಇಂತಹ ಜನರು ಇರುವ ಕಾರಣದಿಂದಾಗಿ ಹಲವಾರು ಮಂದಿಗೆ ಪುನರ್ಜನ್ಮ ಸಿಕ್ಕಿದೆ. ಇದರ ಬಗ್ಗೆ ನೀವು ಇನ್ನಷ್ಟು ತಿಳಿಯಲು ಮುಂದೆ ಓದುತ್ತಾ ಸಾಗಿ... ಮೆಗಾನ ಮೊಸ್ ಜಾನ್ಸನ್ ಎಂಬ ಮಹಿಳೆಯೇ ಮಗುವಿಗೆ ಜನ್ಮ ನೀಡಿದ ಬಳಿಕ ಪ್ರಾಣ ಬಿಟ್ಟಿರುವವರು. ಆದರೆ ಆಕೆಯ ಸಾವಿನಿಂದ 50 ಜನರ ಪ್ರಾಣ ಉಳಿದಿದೆ.
ಬಾಲ್ಯದಲ್ಲೇ ಆಕೆಗೆ ಸಮಸ್ಯೆಯಿತ್ತು
ಮೆಗಾನ ಮೊಸ್ ಜಾನ್ಸನ್ ಗೆ ಬಾಲ್ಯದಲ್ಲಿ ಅನಾರೋಗ್ಯದ ಸಮಸ್ಯೆಯಿತ್ತು. 15 ವರ್ಷದ ಹರೆಯದಲ್ಲಿ ಆಕೆಗೆ ಮಯೋಕಾರ್ಡಿಟಿಸ್ ಎನ್ನುವ ಹೃದಯದ ಉರಿಯೂತದ ಸಮಸ್ಯೆಯಿತ್ತು. ಆದರೆ ಆಕೆಗೆ ಒಬ್ಬ ದಾನಿ ಸಿಕ್ಕಿದ ಕಾರಣದಿಂದ ಆಕೆ ಪುನರ್ಜನ್ಮ ಪಡೆದುಕೊಂಡಳು.
ಇದರ ಬಳಿಕ ಆಕೆ ಕೂಡ ಅಂಗಾಂಗ ದಾನ ಮಾಡಲು ನಿರ್ಧರಿಸಿದಳು
ಮೆಗಾನ ಮೊಸ್ ಜಾನ್ಸನ್ ದಾನಿಯಿಂದಾಗಿ ಪುನರ್ಜನ್ಮ ಪಡೆದ ಬಳಿಕ ಆಕೆ ಕೂಡ ತನ್ನ ದೇಹದ ಅಂಗಾಂಗಳನ್ನು ದಾನ ಮಾಡಬೇಕೆಂದು ನಿರ್ಧರಿಸಿದಳು. ತನ್ನ ಅಂಗಾಂಗಳನ್ನು ದಾನ ಮಾಡಿ ಹಲವಾರು ಮಂದಿಗೆ ಜೀವದಾನ ಮಾಡಬೇಕೆಂದು ಆಕೆ ನಿರ್ಧರಿಸಿದಳು.
Most
Read:
ಗರ್ಭಪಾತ
ಮಾಡಿಸದೆ
ಕುರೂಪಿ
ಮಗುವಿಗೆ
ಜನ್ಮ
ನೀಡಿದ
ತಾಯಿ!
ಆಕೆಯ ಜೀವನ ಸುಂದರವಾಗಿತ್ತು
ಮೆಗಾನ ಮೊಸ್ ಸುಂದರ ಜೀವನ ಸಾಗಿಸುತ್ತಿದ್ದರು. ಆಕೆ ಸಂಗೀತಗಾರ ನಥನ್ ಜಾನ್ಸನ್ ಎಂಬವರನ್ನು ಮದುವೆಯಾಗಿದ್ದರು. ಆಕೆಯ ವೈವಾಹಿಕ ಜೀವನವು ಸುಂದರವಾಗಿತ್ತು. ಇದರ ಬಳಿಕ ಆಕೆ ಆರೋಗ್ಯಕರವಾಗಿ ಗರ್ಭಿಣಿಯಾದರು.
ಮಗುವಿಗೆ ಜನ್ಮ ನೀಡಿದ ಬಳಿಕ ಎಲ್ಲವೂ ಬದಲಾಯಿತು
ತಮ್ಮ ಮೊದಲ ಮಗು ಈಲಿ ಕೇಟ್ ಗೆ ಜನ್ಮ ನೀಡಿದ ಬಳಿಕ ಈ ದಂಪತಿಯು ತುಂಬಾ ಸಂತೋಷವಾಗಿತ್ತು. ಆದರೆ ದುರಾದೃಷ್ಟದಿಂದ ಈ ಸಂತೋಷ ಮಾತ್ರ ಹೆಚ್ಚು ಸಮಯ ಉಳಿಯಲಿಲ್ಲ. ಮೆಗಾನ ಮಗುವಿಗೆ ಜನ್ಮ ನೀಡಿದ ಎಂಟು ಗಂಟೆ ಬಳಿಕ ಪ್ರಾಣ ಕಳೆದುಕೊಂಡಳು. ಸಾವಿಗೆ ಕಾರಣವೇನೆಂದು ಇದುವರೆಗೆ ಸ್ಪಷ್ಟವಾಗಿ ತಿಳಿದಿಲ್ಲ. ಆದರೆ ವರದಿಗಳು ಹೇಳುವಂತೆ ಆಕೆ ಕೋಮಾವಸ್ಥೆ ತಲುಪಿದ್ದಳು ಮತ್ತು ಮತ್ತೆ ಎದ್ದೇಳಲೇ ಇಲ್ಲ.
Most
Read:
ಆಘಾತಕಾರಿ!
ಹೇರ್
ಡೈ
ಬಳಸಿ
ತಲೆ
ಊದಿಸಿಕೊಂಡ
ಮಹಿಳೆ
ಆಕೆ ಅಂಗಾಂಗಳನ್ನು ದಾನ ಮಾಡಲಾಯಿತು
ಮೆಗಾನ ಅಧಿಕೃತವಾಗಿ ಅಂಗಾಂಗ ದಾನಿಯಾಗಿದ್ದ ಕಾರಣದಿಂದಾಗಿ ಆಕೆಯ ಎರಡು ಕಣ್ಣುಗಳು ಇಬ್ಬರು ಜನರಿಗೆ ದೃಷ್ಟಿ ನೀಡಿತು ಮತ್ತು ಇತರ ಅಂಗಾಂಗಗಳಿಂದ ಸುಮಾರು 50 ಮಂದಿಯ ಪ್ರಾಣ ಉಳಿಯಿತು. ಆಕೆ ತುಂಬಾ ಕಡಿಮೆ ವರ್ಷ ಬದುಕಿದರೂ ಸಾವಿನಲ್ಲೂ ಆಕೆ ಬೇರೆಯವರಿಗೆ ಮಾದರಿಯಾಗಿದ್ದಾರೆ. ಈ ಬಗ್ಗೆ ನಿಮ್ಮ ಅನಿಸಿಕೆಗಳು ಏನು ಎಂದು ನಮಗೆ ಕಮೆಂಟ್ ಬಾಕ್ಸ್ ನಲ್ಲಿ ಬರೆಯಲು ಮರೆಯಬೇಡಿ.