Latest Updates
-
ಬಿಸಿಲಿನ ತಾಪಕ್ಕೆ ದಂಪತಿಗಳ ನಡುವೆ ಜಗಳವೇ? ಸಂಬಂಧ ಗಟ್ಟಿಯಾಗಿರಲು ಇಲ್ಲಿವೆ ನೋಡಿ ಸರಳ ಉಪಾಯಗಳು -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ವಿದ್ಯುತ್ ಬಿಲ್ ಇಲ್ಲದೆ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲ ಬೇಗೆಗೆ ರೆಡ್ ಅಲರ್ಟ್: ಹೀಟ್ ಸ್ಟ್ರೋಕ್ನಿಂದ ಪಾರಾಗಲು ಈ ಮನೆಮದ್ದುಗಳನ್ನು ಇಂದೇ ಟ್ರೈ ಮಾಡಿ! -
ಮಳೆಗಾಲದಲ್ಲಿ ಸ್ಟೈಲಿಶ್ ಆಗಿ ಕಾಣಬೇಕಾ? ಈ ಸಿಂಪಲ್ ಟಿಪ್ಸ್ ನಿಮ್ಮನ್ನು ಮಳೆಗಾಲದ ಫ್ಯಾಷನ್ ಐಕಾನ್ ಮಾಡೋದು ಗ್ಯಾರಂಟಿ! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಆರೋಗ್ಯಕ್ಕೆ ಕುತ್ತು ತಪ್ಪಿದ್ದಲ್ಲ! -
ಸೋಷಿಯಲ್ ಮೀಡಿಯಾದಲ್ಲಿ ಪ್ರೀತಿಯನ್ನು ತೋರಿಸುವ ಹೊಸ ಟ್ರೆಂಡ್: 'ಸಾಫ್ಟ್ ಲಾಂಚ್' ಮೂಲಕ ನಿಮ್ಮ ಸಂಬಂಧವನ್ನು ಭದ್ರಪಡಿಸಿಕೊಳ್ಳಿ! -
ಹೀಟ್ವೇವ್ ಎಚ್ಚರಿಕೆ: ಸುಡುವ ಬಿಸಿಲಲ್ಲೂ ನಿಮ್ಮ ಮನೆಯನ್ನು ತಂಪಾಗಿಡಲು ಮತ್ತು ಗಿಡಗಳನ್ನು ಉಳಿಸಲು ಈ ಟಿಪ್ಸ್ ಸಾಕು! -
ಬಿಸಿಲ ಬೇಗೆಗೆ ಸುಸ್ತಾಗಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಆಹಾರ ಕ್ರಮಗಳನ್ನು ಮರೆಯದೆ ಪಾಲಿಸಿ! -
ಮುಟ್ಟಿನ ನೈರ್ಮಲ್ಯ ದಿನ: ಕೇವಲ 200 ರೂಪಾಯಿಗೂ ಕಡಿಮೆ ಬೆಲೆಯಲ್ಲಿ ಸಿಗುತ್ತಿವೆ ಈ ಅಗತ್ಯ ಉತ್ಪನ್ನಗಳು, ಮಿಸ್ ಮಾಡ್ಬೇಡಿ! -
ಬಿಸಿಲಿನಲ್ಲಿ ಮದುವೆ ಮಾಡ್ತಿದ್ದೀರಾ? ಅತಿಥಿಗಳ ಆರೋಗ್ಯಕ್ಕಾಗಿ ಈ 5 ಬದಲಾವಣೆಗಳನ್ನು ಮರೆಯಬೇಡಿ!
ರಿಯಲ್ ಲೈಫ್ ಸ್ಟೋರಿ: ಬೆಂಗಳೂರಿನ ಕೆರೆಯನ್ನು ಸ್ವಚ್ಛಗೊಳಿಸುವ ಸೀನಪ್ಪ

ಒಂದು ಕಾಲದಲ್ಲಿ ಕೆರೆಗಳಿಂದ ತುಂಬಿ ತುಳುಕಾಡುತ್ತಿದ್ದ ಬೆಂಗಳೂರಿನಲ್ಲಿ ಇಂದು ಬೆರಳೆಣಿಕೆಯ ಕೆರೆಗಳು ಮಾತ್ರ ಕಾಣಸಿಗುತ್ತಿವೆ. ಇದರಲ್ಲಿ ಕೆಲವು ಕೆರೆಗಳು ಹೂಳು ತುಂಬಿಕೊಂಡು ಜೌಗು ಪ್ರದೇಶವಾಗಿದೆ. ಇದನ್ನು ಸ್ವಚ್ಛ ಮಾಡುವಂತಹ ಕೆಲಸವು ನಮ್ಮ ಆಡಳಿತ ವರ್ಗದಿಂದ ಆಗುತ್ತಲೇ ಇಲ್ಲ. ಆದರೆ ಇಲ್ಲೊಬ್ಬರು ಏಕಾಂಗಿಯಾಗಿಯೇ ಕೆರೆಯೊಂದನ್ನು ಸ್ವಚ್ಛಗೊಳಿಸಿ ನಮಗೆಲ್ಲರಿಗೂ ಮಾದರಿಯಾಗಿದ್ದಾರೆ.
ಈ ಮಹಾನ್ ವ್ಯಕ್ತಿ ಸೀನಪ್ಪ ಎಂಬವರು. ತುಂಬು ಕುಟುಂಬದಲ್ಲಿ ಹುಟ್ಟಿದ ಸೀನಪ್ಪ ಶ್ರೀನಿವಾಸ್ ಬೆಂಗಳೂರಿನ ಸಾಮಾನ್ಯ ವ್ಯಕ್ತಿ. ಹಿರಿಯ ಮಗನವಾಗಿದ್ದರೂ ಸಮಯಕ್ಕೆ ಅನುಗುಣವಾಗಿ ತಾನು ಪತ್ನಿಯ ಜತೆಗೆ ಬಾಡಿಗೆ ಮನೆಯಲ್ಲಿ ವಾಸ. ಕಳೆದ 18 ವರ್ಷಗಳಿಂದ ರಬ್ಬರ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿರುವ ಸೀನಪ್ಪ ಅವರಿಗೆ ಸಿಗುತ್ತಿರುವುದು ಕೇವಲ ಮೂರು ಸಾವಿರ ರೂ. ಮಾತ್ರ!

ತನ್ನ ಉದ್ಯೋಗದಿಂದ ಸ್ವಲ್ಪ ತೃಪ್ತಿಯಿಲ್ಲದೆ ಇದ್ದರೂ ಕುಟುಂಬ ನಿರ್ವಹಣೆಗಾಗಿ ಇದನ್ನು ಮಾಡುವುದು ಅವರಿಗೆ ಅನಿರ್ವಾಯವಾಗಿತ್ತು. ಆದರೆ ಕೆಲವು ದಿನಗಳ ಬಳಿಕ ಅವರನ್ನು ಜೌಗು ಪ್ರದೇಶ(ಅಂಬಲಿಪುರ ಕೆರೆ) ಸ್ವಚ್ಛಗೊಳಿಸುವ ಕೆಲಸಕ್ಕೆ ಕರೆಯಲಾಯಿತು. ಅಪಾರ್ಟ್ ಮೆಂಟ್ ನಿಂದ ಸುತ್ತಿಕೊಂಡಿರುವ ಇದರ ಸ್ವಚ್ಛತೆಗಾಗಿ ಇತರ ಮೂವರು ಕಾರ್ಮಿಕರು ಕೂಡ ಬಂದಿದ್ದರು. ಆದರೆ ಕೆಸರು ಮತ್ತು ವಿಷಕಾರಿ ಹಾವುಗಳನ್ನು ನೋಡಿದ ಬೇರೆ ಕಾರ್ಮಿಕರು ಅರ್ಧದಲ್ಲೇ ಬಿಟ್ಟು ಹೋದರು.
ಆದರೆ ಪ್ರಕೃತಿ ಕಡೆ ಪ್ರೀತಿ ಬೆಳೆಸಿಕೊಂಡಿದ್ದ ಸೀನಪ್ಪ ಅವರು ಈ ಕೆಸರುಮಯ ಪ್ರದೇಶವನ್ನು ಸುಂದರ ಕೆರೆಯಾಗಿ ಪರಿವರ್ತಿಸಲು ಬಯಸಿದರು. ಕೆಸರು ತೆಗೆದು, ಗಿಡಗಳಿಗೆ ನೀರು ಹಾಕಿ, ಆ ಪ್ರದೇಶವನ್ನು ಸಂಪೂರ್ಣವಾಗಿ ಸ್ವಚ್ಛ ಮಾಡಿದರು ಮತ್ತು ಜನರಿಗೆ ನಡೆದಾಡಲು ದಾರಿ ಮಾಡಿದರು. ವರ್ಷಗಳ ಕಾಲ ಇಲ್ಲಿ ಕೆಲಸ ಮಾಡಿದ ಸೀನಪ್ಪ ಅವರು ಕೆಸರುಮಯ ಜಾಗವನ್ನು ಸುಂದರ ಕೆರೆಯನ್ನಾಗಿಸಿದರು.
ಸವಾಲಾಗಿ ಸ್ವೀಕರಿಸಿ ಕೆಲಸ ಮಾಡಿದ ಸೀನಪ್ಪ ಅವರು ತುಂಬಾ ಪ್ರಾಮಾಣಿಕತೆ ಹಾಗೂ ಬದ್ಧತೆಯಿಂದ ಕೆಲಸ ಮಾಡಿದರು. ದೇವರು ಕೂಡ ಅವರಿಗೆ ನೆರವು ನೀಡಿ ವಿಷಕಾರಿ ಜೀವಜಂತುಗಳಿಂದ ಅವರನ್ನು ರಕ್ಷಿಸಿದ. ಸರ್ಜಾಪುರದಲ್ಲಿರುವ ಅಂಬಲಿಪುರ ಕೆರೆ ಸ್ವಚ್ಛಗೊಳಿಸಲು ಅವರಿಗೆ 14 ಸಾವಿರ ರೂ. ಸಂಬಳ ನೀಡಲಾಗುತ್ತಿತ್ತು. ಇದರಲ್ಲಿ 12 ಸಾವಿರ ರೂ. ಮನೆ ಬಾಡಿಗೆ ಮತ್ತು ಉಳಿದ ಎರಡು ಸಾವಿರ ರೂ.ಯಿಂದ ಜೀವನ ನಿರ್ವಹಣೆ.
ಇಂದು ಈ ಕೆರೆ ಮತ್ತು ಅದರ ಸುತ್ತಲಿನ ಪ್ರದೇಶ ನೋಡಲು ಎಲ್ಲಾ ವಯೋವರ್ಗದವರು ಬಂದು ಸಮಯ ಕಳೆಯುತ್ತಾರೆ. ಕೆಸರುಮಯವಾಗಿದ್ದ ಪ್ರದೇಶವನ್ನು ನಾನು ಏಕಾಂಗಿಯಾಗಿ ಕೆರೆ ಮಾಡಿದ್ದೇನೆ ಮತ್ತು ಜನರು ಇದನ್ನು ನೋಡಿ ಖುಷಿಪಡುತ್ತಿರುವುದು ನನಗೆ ತುಂಬಾ ಸಂತೋಷವನ್ನುಂಟು ಮಾಡಿದೆ'ಎಂದು ಅವರು ಹೇಳುತ್ತಾರೆ. ಈ ಕಥೆಯು ಬೇರೆ ಕಾರ್ಮಿಕರಿಗೆ ಕೂಡ ಪ್ರೇರಣೆ. ಕಠಿಣ ಪರಿಶ್ರಮ ಮತ್ತು ಬದ್ಧತೆಯು ಜೀವನವನ್ನು ಹೇಗೆ ಬದಲಾಯಿಸುತ್ತದೆ ಎನ್ನುವುದಕ್ಕೆ ಉದಾಹರಣೆಯಾಗಿದೆ. ಕಮಲ ಅರಳುವುದು ಕೆಸರಿನಲ್ಲೇ ಎನ್ನುವುದಕ್ಕೆ ಈ ಕಥೆಯೇ ಸಾಕ್ಷಿ...



Click it and Unblock the Notifications
