Latest Updates
-
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು -
ಉದ್ದಿನ ಬೇಳೆ ಇದ್ರೆ ಸಾಕು! ಈ 4 ಹೊಸ ಬಗೆಯ ತಿಂಡಿ ಮಾಡಿ ನೋಡಿ.. ಎಲ್ಲರೂ ಇಷ್ಟಪಟ್ಟು ತಿಂತಾರೆ -
ಹಳೇ ಅನ್ನ ಎಸೆಯಬೇಡಿ! 10 ನಿಮಿಷದಲ್ಲಿ ಮಾಡಿ ಈ ಸ್ವಾದಿಷ್ಟ ದೋಸೆ.. ಉಳಿದ ಅನ್ನದ ಮ್ಯಾಜಿಕ್ ರೆಸಿಪಿ -
March 20 Horoscope: ಸ್ನೇಹ ಸಂಬಂಧಗಳಲ್ಲಿ ಶುಭಫಲ! -
ಅವಿವಾಹಿತರಿಗೆ ಇಂದು ಬಹಳ ಶುಭ ದಿನ! ಲವ್ಗೆ ಕುಟುಂಬದ ಬೆಂಬಲ -
ಜೀವನದಲ್ಲಿ ನೆಮ್ಮದಿ ಬೇಕಾ..? ಈ 5 ಕೆಲಸಗಳನ್ನು ಮಾಡುವಾಗ ಅತಿ ಹೆಚ್ಚು ತಾಳ್ಮೆ ಇರಲಿ! ಸಕ್ಸಸ್ ಮಂತ್ರ ಇಲ್ಲಿದೆ -
ಹೊರಗಿನ ಜ್ಯೂಸ್ ಬಿಡಿ..!! ಬಿಸಿಲಿಗೆ ಕಿಕ್ ಕೊಡೋ ಸ್ಪೆಷಲ್ ಶರಬತ್ತುಗಳಿವು! ಮನೆಯಲ್ಲಿ ಸಿಂಪಲ್ ಆಗಿ ಮಾಡಿ -
Dum Idli: ಇದು ಬ್ರೇಕ್ ಫಾಸ್ಟ್ನ ರಾಜ! ಉಳಿದ ಇಡ್ಲಿಗಳಿಂದ ಸ್ಪೈಸಿ ದಮ್ ಇಡ್ಲಿ.. ಹೋಟೆಲ್ ಶೈಲಿಯಲ್ಲಿ ಮಾಡೋದು ಹೇಗೆ?
ರಿಯಲ್ ಲೈಫ್ ಸ್ಟೋರಿ: ಬೆಂಗಳೂರಿನ ಕೆರೆಯನ್ನು ಸ್ವಚ್ಛಗೊಳಿಸುವ ಸೀನಪ್ಪ

ಒಂದು ಕಾಲದಲ್ಲಿ ಕೆರೆಗಳಿಂದ ತುಂಬಿ ತುಳುಕಾಡುತ್ತಿದ್ದ ಬೆಂಗಳೂರಿನಲ್ಲಿ ಇಂದು ಬೆರಳೆಣಿಕೆಯ ಕೆರೆಗಳು ಮಾತ್ರ ಕಾಣಸಿಗುತ್ತಿವೆ. ಇದರಲ್ಲಿ ಕೆಲವು ಕೆರೆಗಳು ಹೂಳು ತುಂಬಿಕೊಂಡು ಜೌಗು ಪ್ರದೇಶವಾಗಿದೆ. ಇದನ್ನು ಸ್ವಚ್ಛ ಮಾಡುವಂತಹ ಕೆಲಸವು ನಮ್ಮ ಆಡಳಿತ ವರ್ಗದಿಂದ ಆಗುತ್ತಲೇ ಇಲ್ಲ. ಆದರೆ ಇಲ್ಲೊಬ್ಬರು ಏಕಾಂಗಿಯಾಗಿಯೇ ಕೆರೆಯೊಂದನ್ನು ಸ್ವಚ್ಛಗೊಳಿಸಿ ನಮಗೆಲ್ಲರಿಗೂ ಮಾದರಿಯಾಗಿದ್ದಾರೆ.
ಈ ಮಹಾನ್ ವ್ಯಕ್ತಿ ಸೀನಪ್ಪ ಎಂಬವರು. ತುಂಬು ಕುಟುಂಬದಲ್ಲಿ ಹುಟ್ಟಿದ ಸೀನಪ್ಪ ಶ್ರೀನಿವಾಸ್ ಬೆಂಗಳೂರಿನ ಸಾಮಾನ್ಯ ವ್ಯಕ್ತಿ. ಹಿರಿಯ ಮಗನವಾಗಿದ್ದರೂ ಸಮಯಕ್ಕೆ ಅನುಗುಣವಾಗಿ ತಾನು ಪತ್ನಿಯ ಜತೆಗೆ ಬಾಡಿಗೆ ಮನೆಯಲ್ಲಿ ವಾಸ. ಕಳೆದ 18 ವರ್ಷಗಳಿಂದ ರಬ್ಬರ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿರುವ ಸೀನಪ್ಪ ಅವರಿಗೆ ಸಿಗುತ್ತಿರುವುದು ಕೇವಲ ಮೂರು ಸಾವಿರ ರೂ. ಮಾತ್ರ!

ತನ್ನ ಉದ್ಯೋಗದಿಂದ ಸ್ವಲ್ಪ ತೃಪ್ತಿಯಿಲ್ಲದೆ ಇದ್ದರೂ ಕುಟುಂಬ ನಿರ್ವಹಣೆಗಾಗಿ ಇದನ್ನು ಮಾಡುವುದು ಅವರಿಗೆ ಅನಿರ್ವಾಯವಾಗಿತ್ತು. ಆದರೆ ಕೆಲವು ದಿನಗಳ ಬಳಿಕ ಅವರನ್ನು ಜೌಗು ಪ್ರದೇಶ(ಅಂಬಲಿಪುರ ಕೆರೆ) ಸ್ವಚ್ಛಗೊಳಿಸುವ ಕೆಲಸಕ್ಕೆ ಕರೆಯಲಾಯಿತು. ಅಪಾರ್ಟ್ ಮೆಂಟ್ ನಿಂದ ಸುತ್ತಿಕೊಂಡಿರುವ ಇದರ ಸ್ವಚ್ಛತೆಗಾಗಿ ಇತರ ಮೂವರು ಕಾರ್ಮಿಕರು ಕೂಡ ಬಂದಿದ್ದರು. ಆದರೆ ಕೆಸರು ಮತ್ತು ವಿಷಕಾರಿ ಹಾವುಗಳನ್ನು ನೋಡಿದ ಬೇರೆ ಕಾರ್ಮಿಕರು ಅರ್ಧದಲ್ಲೇ ಬಿಟ್ಟು ಹೋದರು.
ಆದರೆ ಪ್ರಕೃತಿ ಕಡೆ ಪ್ರೀತಿ ಬೆಳೆಸಿಕೊಂಡಿದ್ದ ಸೀನಪ್ಪ ಅವರು ಈ ಕೆಸರುಮಯ ಪ್ರದೇಶವನ್ನು ಸುಂದರ ಕೆರೆಯಾಗಿ ಪರಿವರ್ತಿಸಲು ಬಯಸಿದರು. ಕೆಸರು ತೆಗೆದು, ಗಿಡಗಳಿಗೆ ನೀರು ಹಾಕಿ, ಆ ಪ್ರದೇಶವನ್ನು ಸಂಪೂರ್ಣವಾಗಿ ಸ್ವಚ್ಛ ಮಾಡಿದರು ಮತ್ತು ಜನರಿಗೆ ನಡೆದಾಡಲು ದಾರಿ ಮಾಡಿದರು. ವರ್ಷಗಳ ಕಾಲ ಇಲ್ಲಿ ಕೆಲಸ ಮಾಡಿದ ಸೀನಪ್ಪ ಅವರು ಕೆಸರುಮಯ ಜಾಗವನ್ನು ಸುಂದರ ಕೆರೆಯನ್ನಾಗಿಸಿದರು.
ಸವಾಲಾಗಿ ಸ್ವೀಕರಿಸಿ ಕೆಲಸ ಮಾಡಿದ ಸೀನಪ್ಪ ಅವರು ತುಂಬಾ ಪ್ರಾಮಾಣಿಕತೆ ಹಾಗೂ ಬದ್ಧತೆಯಿಂದ ಕೆಲಸ ಮಾಡಿದರು. ದೇವರು ಕೂಡ ಅವರಿಗೆ ನೆರವು ನೀಡಿ ವಿಷಕಾರಿ ಜೀವಜಂತುಗಳಿಂದ ಅವರನ್ನು ರಕ್ಷಿಸಿದ. ಸರ್ಜಾಪುರದಲ್ಲಿರುವ ಅಂಬಲಿಪುರ ಕೆರೆ ಸ್ವಚ್ಛಗೊಳಿಸಲು ಅವರಿಗೆ 14 ಸಾವಿರ ರೂ. ಸಂಬಳ ನೀಡಲಾಗುತ್ತಿತ್ತು. ಇದರಲ್ಲಿ 12 ಸಾವಿರ ರೂ. ಮನೆ ಬಾಡಿಗೆ ಮತ್ತು ಉಳಿದ ಎರಡು ಸಾವಿರ ರೂ.ಯಿಂದ ಜೀವನ ನಿರ್ವಹಣೆ.
ಇಂದು ಈ ಕೆರೆ ಮತ್ತು ಅದರ ಸುತ್ತಲಿನ ಪ್ರದೇಶ ನೋಡಲು ಎಲ್ಲಾ ವಯೋವರ್ಗದವರು ಬಂದು ಸಮಯ ಕಳೆಯುತ್ತಾರೆ. ಕೆಸರುಮಯವಾಗಿದ್ದ ಪ್ರದೇಶವನ್ನು ನಾನು ಏಕಾಂಗಿಯಾಗಿ ಕೆರೆ ಮಾಡಿದ್ದೇನೆ ಮತ್ತು ಜನರು ಇದನ್ನು ನೋಡಿ ಖುಷಿಪಡುತ್ತಿರುವುದು ನನಗೆ ತುಂಬಾ ಸಂತೋಷವನ್ನುಂಟು ಮಾಡಿದೆ'ಎಂದು ಅವರು ಹೇಳುತ್ತಾರೆ. ಈ ಕಥೆಯು ಬೇರೆ ಕಾರ್ಮಿಕರಿಗೆ ಕೂಡ ಪ್ರೇರಣೆ. ಕಠಿಣ ಪರಿಶ್ರಮ ಮತ್ತು ಬದ್ಧತೆಯು ಜೀವನವನ್ನು ಹೇಗೆ ಬದಲಾಯಿಸುತ್ತದೆ ಎನ್ನುವುದಕ್ಕೆ ಉದಾಹರಣೆಯಾಗಿದೆ. ಕಮಲ ಅರಳುವುದು ಕೆಸರಿನಲ್ಲೇ ಎನ್ನುವುದಕ್ಕೆ ಈ ಕಥೆಯೇ ಸಾಕ್ಷಿ...



Click it and Unblock the Notifications












