Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ರಿಯಲ್ ಲೈಫ್ ಸ್ಟೋರಿ: ಬೆಂಗಳೂರಿನ ಕೆರೆಯನ್ನು ಸ್ವಚ್ಛಗೊಳಿಸುವ ಸೀನಪ್ಪ

ಒಂದು ಕಾಲದಲ್ಲಿ ಕೆರೆಗಳಿಂದ ತುಂಬಿ ತುಳುಕಾಡುತ್ತಿದ್ದ ಬೆಂಗಳೂರಿನಲ್ಲಿ ಇಂದು ಬೆರಳೆಣಿಕೆಯ ಕೆರೆಗಳು ಮಾತ್ರ ಕಾಣಸಿಗುತ್ತಿವೆ. ಇದರಲ್ಲಿ ಕೆಲವು ಕೆರೆಗಳು ಹೂಳು ತುಂಬಿಕೊಂಡು ಜೌಗು ಪ್ರದೇಶವಾಗಿದೆ. ಇದನ್ನು ಸ್ವಚ್ಛ ಮಾಡುವಂತಹ ಕೆಲಸವು ನಮ್ಮ ಆಡಳಿತ ವರ್ಗದಿಂದ ಆಗುತ್ತಲೇ ಇಲ್ಲ. ಆದರೆ ಇಲ್ಲೊಬ್ಬರು ಏಕಾಂಗಿಯಾಗಿಯೇ ಕೆರೆಯೊಂದನ್ನು ಸ್ವಚ್ಛಗೊಳಿಸಿ ನಮಗೆಲ್ಲರಿಗೂ ಮಾದರಿಯಾಗಿದ್ದಾರೆ.
ಈ ಮಹಾನ್ ವ್ಯಕ್ತಿ ಸೀನಪ್ಪ ಎಂಬವರು. ತುಂಬು ಕುಟುಂಬದಲ್ಲಿ ಹುಟ್ಟಿದ ಸೀನಪ್ಪ ಶ್ರೀನಿವಾಸ್ ಬೆಂಗಳೂರಿನ ಸಾಮಾನ್ಯ ವ್ಯಕ್ತಿ. ಹಿರಿಯ ಮಗನವಾಗಿದ್ದರೂ ಸಮಯಕ್ಕೆ ಅನುಗುಣವಾಗಿ ತಾನು ಪತ್ನಿಯ ಜತೆಗೆ ಬಾಡಿಗೆ ಮನೆಯಲ್ಲಿ ವಾಸ. ಕಳೆದ 18 ವರ್ಷಗಳಿಂದ ರಬ್ಬರ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿರುವ ಸೀನಪ್ಪ ಅವರಿಗೆ ಸಿಗುತ್ತಿರುವುದು ಕೇವಲ ಮೂರು ಸಾವಿರ ರೂ. ಮಾತ್ರ!

ತನ್ನ ಉದ್ಯೋಗದಿಂದ ಸ್ವಲ್ಪ ತೃಪ್ತಿಯಿಲ್ಲದೆ ಇದ್ದರೂ ಕುಟುಂಬ ನಿರ್ವಹಣೆಗಾಗಿ ಇದನ್ನು ಮಾಡುವುದು ಅವರಿಗೆ ಅನಿರ್ವಾಯವಾಗಿತ್ತು. ಆದರೆ ಕೆಲವು ದಿನಗಳ ಬಳಿಕ ಅವರನ್ನು ಜೌಗು ಪ್ರದೇಶ(ಅಂಬಲಿಪುರ ಕೆರೆ) ಸ್ವಚ್ಛಗೊಳಿಸುವ ಕೆಲಸಕ್ಕೆ ಕರೆಯಲಾಯಿತು. ಅಪಾರ್ಟ್ ಮೆಂಟ್ ನಿಂದ ಸುತ್ತಿಕೊಂಡಿರುವ ಇದರ ಸ್ವಚ್ಛತೆಗಾಗಿ ಇತರ ಮೂವರು ಕಾರ್ಮಿಕರು ಕೂಡ ಬಂದಿದ್ದರು. ಆದರೆ ಕೆಸರು ಮತ್ತು ವಿಷಕಾರಿ ಹಾವುಗಳನ್ನು ನೋಡಿದ ಬೇರೆ ಕಾರ್ಮಿಕರು ಅರ್ಧದಲ್ಲೇ ಬಿಟ್ಟು ಹೋದರು.
ಆದರೆ ಪ್ರಕೃತಿ ಕಡೆ ಪ್ರೀತಿ ಬೆಳೆಸಿಕೊಂಡಿದ್ದ ಸೀನಪ್ಪ ಅವರು ಈ ಕೆಸರುಮಯ ಪ್ರದೇಶವನ್ನು ಸುಂದರ ಕೆರೆಯಾಗಿ ಪರಿವರ್ತಿಸಲು ಬಯಸಿದರು. ಕೆಸರು ತೆಗೆದು, ಗಿಡಗಳಿಗೆ ನೀರು ಹಾಕಿ, ಆ ಪ್ರದೇಶವನ್ನು ಸಂಪೂರ್ಣವಾಗಿ ಸ್ವಚ್ಛ ಮಾಡಿದರು ಮತ್ತು ಜನರಿಗೆ ನಡೆದಾಡಲು ದಾರಿ ಮಾಡಿದರು. ವರ್ಷಗಳ ಕಾಲ ಇಲ್ಲಿ ಕೆಲಸ ಮಾಡಿದ ಸೀನಪ್ಪ ಅವರು ಕೆಸರುಮಯ ಜಾಗವನ್ನು ಸುಂದರ ಕೆರೆಯನ್ನಾಗಿಸಿದರು.
ಸವಾಲಾಗಿ ಸ್ವೀಕರಿಸಿ ಕೆಲಸ ಮಾಡಿದ ಸೀನಪ್ಪ ಅವರು ತುಂಬಾ ಪ್ರಾಮಾಣಿಕತೆ ಹಾಗೂ ಬದ್ಧತೆಯಿಂದ ಕೆಲಸ ಮಾಡಿದರು. ದೇವರು ಕೂಡ ಅವರಿಗೆ ನೆರವು ನೀಡಿ ವಿಷಕಾರಿ ಜೀವಜಂತುಗಳಿಂದ ಅವರನ್ನು ರಕ್ಷಿಸಿದ. ಸರ್ಜಾಪುರದಲ್ಲಿರುವ ಅಂಬಲಿಪುರ ಕೆರೆ ಸ್ವಚ್ಛಗೊಳಿಸಲು ಅವರಿಗೆ 14 ಸಾವಿರ ರೂ. ಸಂಬಳ ನೀಡಲಾಗುತ್ತಿತ್ತು. ಇದರಲ್ಲಿ 12 ಸಾವಿರ ರೂ. ಮನೆ ಬಾಡಿಗೆ ಮತ್ತು ಉಳಿದ ಎರಡು ಸಾವಿರ ರೂ.ಯಿಂದ ಜೀವನ ನಿರ್ವಹಣೆ.
ಇಂದು ಈ ಕೆರೆ ಮತ್ತು ಅದರ ಸುತ್ತಲಿನ ಪ್ರದೇಶ ನೋಡಲು ಎಲ್ಲಾ ವಯೋವರ್ಗದವರು ಬಂದು ಸಮಯ ಕಳೆಯುತ್ತಾರೆ. ಕೆಸರುಮಯವಾಗಿದ್ದ ಪ್ರದೇಶವನ್ನು ನಾನು ಏಕಾಂಗಿಯಾಗಿ ಕೆರೆ ಮಾಡಿದ್ದೇನೆ ಮತ್ತು ಜನರು ಇದನ್ನು ನೋಡಿ ಖುಷಿಪಡುತ್ತಿರುವುದು ನನಗೆ ತುಂಬಾ ಸಂತೋಷವನ್ನುಂಟು ಮಾಡಿದೆ'ಎಂದು ಅವರು ಹೇಳುತ್ತಾರೆ. ಈ ಕಥೆಯು ಬೇರೆ ಕಾರ್ಮಿಕರಿಗೆ ಕೂಡ ಪ್ರೇರಣೆ. ಕಠಿಣ ಪರಿಶ್ರಮ ಮತ್ತು ಬದ್ಧತೆಯು ಜೀವನವನ್ನು ಹೇಗೆ ಬದಲಾಯಿಸುತ್ತದೆ ಎನ್ನುವುದಕ್ಕೆ ಉದಾಹರಣೆಯಾಗಿದೆ. ಕಮಲ ಅರಳುವುದು ಕೆಸರಿನಲ್ಲೇ ಎನ್ನುವುದಕ್ಕೆ ಈ ಕಥೆಯೇ ಸಾಕ್ಷಿ...



Click it and Unblock the Notifications
