Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಈ ವ್ಯಕ್ತಿ ಮೊಸಳೆಯನ್ನು ಸಾಕಿದ್ದಾನೆ... ಅದೀಗ ಅವನ ಮನೆಯ ಒಬ್ಬ ಸದಸ್ಯ...
ಪ್ರಾಣಿಗಳು ಮನುಷ್ಯನಂತೆ ಮಾತನಾಡಲು ಬರದ ಜೀವಿಗಳು. ಆದರೆ ಅವರ ವರ್ತನೆಗಳು ಬಹಳ ಭಯಂಕರವಾಗಿರುತ್ತದೆ. ಈ ಹಿನ್ನೆಲೆಯಲ್ಲಿಯೇ ವನ್ಯ ಜೀವಿಗಳಿಂದ ಆದಷ್ಟು ದೂರ ಇರುತ್ತೇವೆ. ಅವುಗಳಲ್ಲಿ ಸಭ್ಯ ಹಾಗೂ ಮಾನವನ ಜೊತೆ ಹೊಂದಿಕೊಂಡು ಇರುತ್ತವೆ ಎನ್ನುವಂತಹ ಪ್ರಾಣಿಗಳನ್ನು ಮಾತ್ರ ಸಾಕು ಪ್ರಾಣಿಯನ್ನಾಗಿ ಸ್ವೀಕರಿಸಿದ್ದೇವೆ. ಇನ್ನು ಉಳಿದ ಪ್ರಾಣಿಗಳನ್ನು ವನ್ಯ ಜೀವಿಗಳು ಎಂದು ವಿಂಗಡಿಸಲಾಗಿದೆ.
ಇತ್ತೀಚೆಗೆ ಪ್ರಾಣಿಯನ್ನು ಸಾಕುವುದು ಹಾಗೂ ಅದರ ಆರೈಕೆ ಮಾಡುವುದು ಎಂದರೆ ಒಂದು ಬಗೆಯ ಪ್ರತಿಷ್ಠೆಯ ವಿಚಾರ ಎನ್ನುವಂತೆ ಪರಿಗಣಿಸಲಾಗುತ್ತದೆ. ಹಾಗಾಗಿ ಕೆಲವರು ವಿವಿಧ ಜಾತಿಯ ನಾಯಿ, ಬೆಕ್ಕು, ಹಸುಗಳನ್ನು ಸಾಕುತ್ತಾರೆ. ಇನ್ನೂ ಕೆಲವರು ಆಶ್ಚರ್ಯಕರ ಮತ್ತು ಅಸಮಾನ್ಯ ಎನ್ನುವಂತೆ ಕಾಡು ಪ್ರಾಣಿಗಳನ್ನು ತಂದು ಸಾಕುತ್ತಾರೆ. ಅದಕ್ಕೆ ಸಾಕ್ಷಿ ಎಂಬಂತೆ ಹುಲಿ, ಸಿಂಹ, ಹಾವುಗಳಂತಹ ಕ್ರೂರ ಪ್ರಾಣಿಗಳನ್ನು ಸಾಕಿರುವುದನ್ನು ನೋಡಿದ್ದೇವೆ.

ಆದರೆ ಇಲ್ಲೊಬ್ಬ ವ್ಯಕ್ತಿ ಆಶ್ಚರ್ಯ ಎನ್ನುವಂತೆ ಕ್ರೂರ ಪ್ರಾಣಿಯಲ್ಲಿ ಒಂದಾದ ಮೊಸಳೆಯನ್ನು ಮನೆಗೆ ತಂದು ಸಾಕಿದ್ದಾನೆ. ಇದೊಂದು ವಿಲಕ್ಷಣ ರೀತಿಯ ಪ್ರೀತಿ ಅಥವಾ ಬಂಡ ಧೈರ್ಯ ಎನಿಸುತ್ತದೆಯಾದರೂ ಇದನ್ನು ಪ್ರಾಣಿ ಪ್ರೀತಿಯ ಒಂದು ಬಗೆ ಎನ್ನಬಹುದು. ಈ ಪ್ರಾಣಿಯೊಂದಿಗೆ ಸಲುಗೆ ಹಾಗೂ ಪ್ರೀತಿಯನ್ನು ಬೆಳೆಸಲು ಹಾಗೂ ಮನುಷ್ಯರ ನಡುವೆ ಸಭ್ಯ ವತನೆಯನ್ನು ತೋರುವಂತೆ ಮಾಡಲು 20 ವರ್ಷಗಳು ಬೇಕಾಗಿದೆ ಎಂದು ಹೇಳಲಾಗಿದೆ.
ಈ ಮೊಸಳೆಯು ಮನೆಯ ಆವರಣದಲ್ಲಿಯೇ ಒಂದು ಚಿಕ್ಕ ನೀರಿನ ತೊಟ್ಟಿಯಲ್ಲಿ ಇರುತ್ತದೆ. ಇದೊಂದು ರೋಚಕ ವಿಚಾರ ಎನ್ನಬಹುದು. ನಿಮಗೂ ಈ ಒಂದು ವಿಚಿತ್ರ ಕಥೆಯನ್ನು ಇನ್ನಷ್ಟು ತಿಳಿದುಕೊಳ್ಳಬೇಕು ಎನ್ನುವ ಕುತೂಹಲ ಇದ್ದರೆ ಮುಂದೆ ಓದಿ...
ಇರ್ವಾನ್ ಎನ್ನುವ ವ್ಯಕ್ತಿ ಮೊಸಳೆಯೊಂದನ್ನು ಸಾಕುವುದಾಗಿ ಮನೆಗೆ ತಂದಿದ್ದಾರೆ. ಅದಕ್ಕಾಗಿಯೇ ಮನೆಯಲ್ಲಿ ಒಂದು ನೀರಿನ ತೊಟ್ಟಿಯನ್ನು ನಿರ್ಮಿಸಿದ್ದಾರೆ. ಆ ಮೊಸಳೆ ದಿನದ ಬಹುತೇಕ ಸಮಯವನ್ನು ಅಲ್ಲಿಯೇ ಕಳೆಯುತ್ತದೆ. ಈ ಮೊಸಳೆಯ ಮುಂದೆಯೇ ಮನೆಯಲ್ಲಿರುವ ಮೂರು ಮಕ್ಕಳು ಆಟವಾಡುತ್ತಾರೆ. ಮನೆಯವರು ಓಡಾಡುತ್ತಾರೆ. ಆದರೆ ಅವರಿಗೆ ಯಾವುದೇ ಹಾನಿಯನ್ನುಂಟುಮಾಡುವುದಿಲ್ಲ.
ಕುಟುಂಬದ ಸದಸ್ಯರ ನಡುವೆ ಒಬ್ಬ ಸದಸ್ಯರಂತೆ ಮೊಸಳೆಯನ್ನು ಇವರು ಪರಿಗಣಿಸುತ್ತಾರೆ. ಮೊಸಳೆಯು ಸಹ ಎಂತಹ ಸ್ಥಿತಿಯಲ್ಲೂ ಮನೆ ಮಂದಿಗೆ ಯಾವುದೇ ಅಹಿತಕರ ಗಾಯ ಅಥವಾ ವರ್ತನೆಯನ್ನು ತೋರುವುದಿಲ್ಲ. ಪ್ರಾಣಿಯನ್ನು ಸಾಕಲು ತರಬೇತಿಯನ್ನು ಹೊಂದಿರಬಹುದು. ಆದರೆ ಕ್ರೂರ ಸ್ವಭಾವ ಇರುವ ಪ್ರಾಣಿಯೊಂದು ಜೊತೆಯಲ್ಲಿಯೇ ಕುಳಿತಿರುತ್ತದೆ ಎಂದರೆ ಒಮ್ಮೆ ಮೈ ಜುಮ್ಮೆನಿಸುವುದರಲ್ಲಿ ಯಾವುದೇ ಸಂದೇಹವಿಲ್ಲ. ಅದರಲ್ಲೂ ಮೊಸಳೆಗೆ ಒಬ್ಬ ಮಾನವ ಎಂದರೆ ಅದಕ್ಕೊಂದು ಹೊತ್ತಿನ ಊಟ ಆಗಬಹುದು. ಹೀಗಿರುವಾಗ ಅದನ್ನು ಮನೆಗೆ ತರುವುದು, ಸಾಕುವುದು ಎಂದರೆ ಆಶ್ಚರ್ಯಕರವಾದ ಸಂಗತಿ.
ಈ ಮೊಸಳೆಯೊಂದಿಗೆ ಇರ್ವನ್ ಹಾಗೂ ಅವರ ಮನೆಯವರು ಬಹು ಸಲಿಗೆಯಿಂದಲೇ ವರ್ತಿಸುತ್ತಾರೆ. ಇರ್ವಾನ್ ಮೊಸಳೆಯ ಮೈ ಸವರುವುದು, ಆಹಾರ ನೀಡುವುದು, ಮೈ ತೊಳೆಸುವುದು ಹಾಗೂ ಅದರ ಮೇಲೆ ಕುಳಿತುಕೊಳ್ಳುವುದು ಎಲ್ಲವನ್ನೂ ಮಾಡುತ್ತಾರೆ. ತನ್ನ ಮೈ ಮೇಲೆ ಮಾಲೀಕ ಕುಳಿತುಕೊಂಡಾಗಲೂ ನಿಧಾನವಾಗಿ ಮೊಸಳೆ ಮುಂದೆ ಚಲಿಸುವುದು. ಒಟ್ಟಿನಲ್ಲಿ ಈ ಕಥೆಯಿಂದ ತಿಳಿದುಕೊಳ್ಳುವ ವಿಚಾರ ವೆಂದರೆ ಎಂತಹ ಕ್ರೂರ ಮನಸ್ಸಿನ ಪ್ರಾಣಿಯನ್ನಾದರೂ ಪ್ರೀತಿ ವಿಶ್ವಾಸದಿಂದ ಸಾಕಿದರೆ ಅದೂ ನಮಗೆ ಋಣಿಯಾಗಿ ಬದುಕುವುದು.



Click it and Unblock the Notifications