Just In
- 19 min ago 5 ನಿಮಿಷದಲ್ಲಿ ಪಾತ್ರೆಯನ್ನು ಹೊಳೆಯುವಂತೆ ಮಾಡಿ..! ಸುಲಭದ ಟಿಪ್ಸ್ ಇಲ್ಲಿದೆ
- 1 hr ago ಮಸಾಲ ಭರಿತ ಬಿಸಿ ಬಿಸಿ ಪೊಂಗಲ್ ಮಾಡೋದು ಹೇಗೆ..? ಏನಿದರ ರೆಸಿಪಿ?
- 2 hrs ago ವೃಷಭ ರಾಶಿಗೆ ಗುರು ಸಂಚಾರ: 11ನೇ ಮನೆಯಲ್ಲಿ ಗುರು ಕರ್ಕ ರಾಶಿಯವರಿಗೆ ಅದೃಷ್ಟವೋ ಅದೃಷ್ಟ
- 4 hrs ago ವೃಷಭ ರಾಶಿಗೆ ಗುರು ಸಂಚಾರ: 12ನೇ ಮನೆಯಲ್ಲಿ ಗುರು ಮಿಥುನ ರಾಶಿಯ ಮೇಲೆ ಬೀರುವ ಪ್ರಭಾವ ಹೇಗಿರಲಿದೆ?
Don't Miss
- News EPFO: ಪಿಎಫ್ ನಿಯಮದಲ್ಲಿ ಭಾರೀ ಬದಲಾವಣೆ, 1 ಲಕ್ಷದವರೆಗೂ ಹಣ ಬಿಡಿಸಿಕೊಳ್ಳಬಹುದು!
- Movies ತಾರಕ್ ಪೊನ್ನಪ್ಪ 'ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ' ಧಾರಾವಾಹಿಯಿಂದ ಹೊರಬಂದಿದ್ದೇಕೆ?
- Automobiles ರೈತರ ವಿಶ್ವಾಸದೊಂದಿಗೆ 40 ಲಕ್ಷ ಟ್ರ್ಯಾಕ್ಟರ್ ಮಾರಾಟ ಮೈಲಿಗಲ್ಲು ಸಾಧಿಸಿದ ಮಹೀಂದ್ರಾ
- Technology oneplus: ಒನ್ಪ್ಲಸ್ನಿಂದ ಫ್ಲ್ಯಾಗ್ಶಿಪ್ ಕ್ಯಾಮೆರಾ ಸೌಲಭ್ಯದೊಂದಿಗೆ ಫ್ಲಿಪ್ ಫೋನ್!
- Sports LSG vs CSK IPL 2024: ಲಕ್ನೋ vs ಚೆನ್ನೈ ಪಂದ್ಯದ ವರದಿ, ಫ್ಯಾಂಟಸಿ ಡ್ರೀಮ್ ಟೀಂ, ಸಂಭಾವ್ಯ ಆಡುವ 11ರ ಬಳಗ
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಈ 6 ರಾಶಿಯವರು, ಚಿಂತನೆ ನಡೆಸದೆಯೇ ಮಾತನಾಡಿ-ಇತರರಿಗೆ ನೋವು ಮಾಡಿಬಿಡುತ್ತಾರೆ!
ನೀವು ಹಠಾತ್ ವರ್ತನೆಯನ್ನು ತೋರುವ ಪ್ರವೃತ್ತಿಯವರೇ? ನೀವು ಮಾಡುವ ಕೆಲಸಗಳ ಬಗ್ಗೆ ಮುಂಚಿತವಾಗಿ ಯೋಚಿಸುವುದಿಲ್ಲ, ಬದಲಿಗೆ ಮನಸ್ಸಿಗೆ ತೋಚಿದ್ದನ್ನು ಮೊದಲು ಮಾಡಿಬಿಡುತ್ತೀರಾ? ಹಾಗಾಗಿಯೇ ಕೆಲವೊಂದು ಸಂದರ್ಭದಲ್ಲಿ ಇರಿಸು-ಮುರಿಸು ಉಂಟಾಗುತ್ತದೆ ಎನ್ನುವುದಾದರೆ ಅದು ನಿಮ್ಮ ಸಮಸ್ಯೆಯಲ್ಲ. ಬದಲಿಗೆ ನಿಮ್ಮ ರಾಶಿಚಕ್ರದ ಪ್ರಭಾವ ಎನ್ನಬಹುದು.
ಪ್ರಚೋದಕ ಜನರು ವೇಗವಾಗಿ ಕೆಲಸ ನಿರ್ವಹಿಸುತ್ತಾರೆ. ಅವರು ತ್ವರಿತ ನಿರ್ಧಾರಗಳನ್ನು ಕೈಗೊಳ್ಳುತ್ತಾರೆ. ಜೊತೆಗೆ ತ್ವರಿತವಾಗಿ ಕಾರ್ಯನಿರ್ವಹಿಸುತ್ತಾರೆ. ಅಲ್ಲದೆ ತಮ್ಮ ಸಮಯದಲ್ಲಿ ವಿರಳತೆಯಿಂದ ಕೂಡಿರುವ ಕೆಲಸವನ್ನು ಕೈಗೊಳ್ಳುವರು. ಅವರು ಹೇಳುವ ಮಾತುಗಳಿಗೂ ಕೆಲಸಕ್ಕೂ ಸಂಬಂಧ ಇರದೆ ಹೋಗಬಹುದು. ಏಕೆಂದರೆ ಅವರು ಏನು ಯೋಚಿಸಿ ಮಾತನಾಡುತ್ತಾರೋ ಅದು ಮುಂದಿನ ಕಾರ್ಯಕ್ಕೆ ಸಂಬಂಧಿಸದೆ ಇರಬಹುದು.
ಮಾತು ಎನ್ನುವುದು ಒಂದು ಹರಳು ಇದ್ದಂತೆ. ಅದು ಒಡೆದರೆ ಪುನಃ ಮೊದಲಿನ ರೂಪಕ್ಕೆ ತರುವುದು ಕಷ್ಟ. ಹಾಗೆಯೇ ಮಾತುಗಳು ಸಹ. ಒಮ್ಮೆ ನಾವು ಆಡುವ ಮಾತುಗಳಿಂದ ಉಂಟಾದ ನೋವುಗಳನ್ನು ಯಾರು ಮರೆಯುವುದಿಲ್ಲ. ಹಾಗಾಗಿ ನಾವು ಆಡುವ ಮಾತಿನ ಬಗ್ಗೆ ಸಾಕಷ್ಟು ಎಚ್ಚರಿಕೆ ಇರಬೇಕು. ಮಾತಿನಲ್ಲಿ ಹಿಡಿತ ಅಥವಾ ಹುರುಳಿಲ್ಲದೆ ಹೋದರೆ ಅನರ್ಥ ಆಗುವುದು. ಕೆಲವು ರಾಶಿಚಕ್ರದವರಲ್ಲಿ ಈ ಸಮಸ್ಯೆ ಹೆಚ್ಚಾಗಿರುತ್ತದೆ. ಬಹುತೇಕ ಸಂದರ್ಭದಲ್ಲಿ ಅವರಿಗೆ ತಾವು ಏನು ಹೇಳುತ್ತಿದ್ದೇವೆ ಎನ್ನುವ ಪರಿವೇ ಇರುವುದಿಲ್ಲ. ತಾವು ಹೇಳುವ ಮಾತಿನಿಂದ ಮುಂದೆ ಯಾವ ಪರಿಣಾಮ ಬೀರುವುದು ಎನ್ನುವುದರ ಕುರಿತು ಚಿಂತಿಸದೆ ಮಾತನಾಡಿಬಿಡುತ್ತಾರೆ.
ಹಾಗಾದರೆ ಆ ರಾಶಿಚಕ್ರಗಳು ಯಾವವು? ಅವುಗಳ ವರ್ತನೆ ಹಾಗೂ ವಿಚಾರಗಳು ಏನು? ಎನ್ನುವುದನ್ನು ನೀವು ತಿಳಿದುಕೊಳ್ಳಬೇಕು ಎನ್ನುವ ಕುತೂಹಲ ಹೊಂದಿದ್ದರೆ ಈ ಮುಂದೆ ಬೋಲ್ಡ್ ಸ್ಕೈ ವಿವರಿಸಿರುವ ವಿವರಣೆಯನ್ನು ಪರಿಶೀಲಿಸಿ....
ಮೇಷ
ಈ ರಾಶಿಯ ವ್ಯಕ್ತಿಗಳು ಬಹು ಬೇಗ ತಮ್ಮ ಮಾತು ಹಾಗೂ ವರ್ತನೆಯನ್ನು ತೋರುತ್ತಾರೆ. ಇದರಿಂದ ಇತರರಿಗೆ ಮನನೋಯುವುದು. ನಂತರ ಆ ವಿಚಾರದ ಕುರಿತು ಸಾಕಷ್ಟು ವಿಷಾದವನ್ನು ವ್ಯಕ್ತಪಡಿಸುವರು. ವಿಷಯಗಳನ್ನು ಎಚ್ಚರಿಕೆಯಿಂದ ಸ್ವೀಕರಿಸುವುದಾಗಲೀ ಅಥವಾ ಅರ್ಥೈಸಿಕೊಳ್ಳುವ ಗೋಜಿಗೆ ಹೋಗುವುದಿಲ್ಲ. ಮನಸ್ಸಿಗೆ ಬಂದಂತೆ ತಕ್ಷಣಕ್ಕೆ ವರ್ತಿಸಿಬಿಡುತ್ತಾರೆ.
ಮೇಷ
ಸಾಹಸಮಯವಾದ, ಕೆಚ್ಚೆದೆಯ ಗುಣವನ್ನು ಹೊಂದಿದ ವರಾಗಿದ್ದು, ಪೂರ್ಣ ಜೀವನವನ್ನು ಅನುಭವಿಸುವರು ಎಂದು ಹೇಳಲಾಗುವುದು. ಇವರ ಮನಸ್ಸಿನಲ್ಲಿ ಕೆಟ್ಟ ಭಾವನೆ ಗಳಿರುವುದಿಲ್ಲ. ಒಮ್ಮೆ ಸಿಟ್ಟು ಅಥವಾ ಉದ್ವೇಗ ಉಂಟಾದರೆ ಅದು ಕ್ಷಣಕ್ಕೆ ಮಾತ್ರ ಸೀಮಿತವಾಗಿರುತ್ತದೆ ಎಂದು ಹೆಳಲಾಗುವುದು. ನಕಾರಾತ್ಮಕವಾಗಿ ಚಿಂತಿಸುವುದನ್ನು ಬಿಟ್ಟರೆ ಪ್ರಶ್ನಾರ್ಥಕವಾದ ವರ್ತನೆ ಅಥವಾ ಚಟುವಟಿಕೆಯಿಂದ ದೂರವಾಗಬಹುದು.
ಮಿಥುನ
ಎರಡು ವ್ಯಕ್ತಿತ್ವ ಹೊಂದಿರುವ ವ್ಯಕ್ತಿಗಳು ಎಂದು ಹೇಳಲಾಗುತ್ತದೆ ಇವರನ್ನು. ಬಹುತೇಕ ಸಂದರ್ಭದಲ್ಲಿ ಇವರು ಹೆಚ್ಚು ಜಾಗರೂಕರಾಗಿಯೇ ಇರುತ್ತಾರೆ. ಅಲ್ಲದೆ ಕೆಲವು ವಿಷಯಗಳಿಗೆ ಹೆಚ್ಚು ನಿರ್ಬಂಧಿತರಾಗಿರುತ್ತಾರೆ. ಕೆಲವು ಸಮಯದಲ್ಲಿ ಮೂರ್ಖ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಪರಿಸ್ಥಿತಿಯ ಬಾಧಕಗಳನ್ನು ಪರಿಗಣಿಸದೆ ಏನೂ ಆಗದವರಂತೆ ಇರುತ್ತಾರೆ. ಇವರು ಸುಲಭವಾಗಿ ಬೇಸರಕ್ಕೆ ಒಳಗಾಗುತ್ತಾರೆ.
Most Read:ನಿಮ್ಮ ಮೈ ಮೇಲೆ ಹಲ್ಲಿ ಬಿದ್ದರೆ ಅಪಶಕುನವೇ? ಅದೃಷ್ಟವೇ?ಮಿಥುನ
ಒಂದೇ ವಿಚಾರದ ಬಗ್ಗೆ ಕೇಂದ್ರೀಕರಿಸಲು ಕಷ್ಟವಾಗುವುದು. ಆದ್ದರಿಂದ ಪ್ರಚೋದಕವಾಗಿ ಕಾರ್ಯನಿರ್ವಹಿಸಲು ಒಲವು ತೋರುತ್ತಾರೆ. ಇವರು ಮಾಡುವ ಸಣ್ಣ-ಪುಟ್ಟ ತಪ್ಪುಗಳು ದೊಡ್ಡ ಪರಿಣಾಮವಾಗಿ ಹೊರಹೊಮ್ಮುವ ಸಾಧ್ಯತೆಗಳಿರುತ್ತವೆ.
ಧನು
ಇವರು ತಮ್ಮ ಸುತ್ತಲೂ ಒಂದು ಬಗೆಯ ಗೋಡೆ ಮುಚ್ಚಿಕೊಂಡಿದೆ ಎನ್ನುವ ರೀತಿಯಲ್ಲಿ ಭಾವಿಸುತ್ತಾರೆ. ಇವರು ಅವಸರದಲ್ಲಿ ಕೆಟ್ಟ ಸಲಹೆ ನೀಡುತ್ತಾರೆ. ಇವರು ಇತರರಿಂದ ನಿರ್ಬಂಧ ಹೊಂದಲು ಬಯಸುವುದಿಲ್ಲ. ತಮ್ಮ ಪ್ರಚೋದನೆಯನ್ನು ಅನುಸರಿಸುತ್ತಾ ಹೊಸ ಸ್ಥಾನಕ್ಕೆ ಹೋಗುತ್ತಾರೆ. ಧನು ರಾಶಿಯ ವ್ಯಕ್ತಿಗಳು ಮೇಲ್ನೋಟಕ್ಕೆ ಗಡಿಬಿಡಿಯ ವ್ಯಕ್ತಿಗಳಾಗಿದ್ದರೂ ತಾಳ್ಮೆಯನ್ನು ಹೊಂದಿರುತ್ತಾರೆ.
ಧನು
ತಮ್ಮ ತಿಳಿವಳಿಕೆ ಇಲ್ಲದ ಕೆಲಸವನ್ನು ಮಾಡುವುದರ ಮೂಲಕ ಋಣಾತ್ಮಕ ಪರಿಣಾಮವನ್ನು ಉಂಟುಮಾಡಬಹುದು. ಅನೇಕ ಸಂದರ್ಭದಲ್ಲಿ ಯಾವುದೇ ಕಾಳಜಿ ಇಲ್ಲದವರಂತೆ ವರ್ತಿಸುತ್ತಾರೆ. ಇವರು ನಿಸ್ವಾರ್ಥದವರು ಹಾಗೂ ಚಿಂತನಾಶೀಲರು ಎಂದು ಹೇಳಲಾಗುವುದು.
ಕುಂಭ
ಈ ರಾಶಿಯ ವ್ಯಕ್ತಿಗಳು ಅತ್ಯಂತ ಸ್ವತಂತ್ರ ಪ್ರಿಯರು. ಇವರು ಬೇರೆಯವರ ಹಾದಿಯಲ್ಲಿ ಹೋಗಲು ಇಷ್ಟಪಡುವುದಿಲ್ಲ. ಇವರು ಬಹುಬೇಗದ ವರ್ತನೆ ಹಾಗೂ ಕಠಿಣವಾದ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸುವರು. ಇವರು ವಿಚಾರಗಳನ್ನು ಮಸ್ಸಿನಲ್ಲಿ ಇಟ್ಟುಕೊಂಡಿರುತ್ತಾರೆ. ಅಂತೆಯೇ ವರ್ತನೆಯೂ ಅಷ್ಟೇ ವೇಗದಲ್ಲಿ ನೀಡುತ್ತಾರೆ. ಸಮಸ್ಯೆಯನ್ನು ಪರಿಹರಿಸಲು ತ್ವರಿತವಾದ ಒಲವನ್ನು ತೋರುತ್ತಾರೆ. ಸಂಭಾವ್ಯ ಸಮಸ್ಯೆಗಳ ಬಗ್ಗೆ ಚಿಂತನೆ ನಡೆಸದೆಯೇ ಯೋಜನೆಯನ್ನು ಕೈಗೊಳ್ಳುತ್ತಾರೆ. ಇದರಿಂದಾಗಿ ಒತ್ತಡಕ್ಕೆ ಒಳಗಾದಾಗ ತಲೆಬಿಸಿಮಾಡಿಕೊಳ್ಳುತ್ತಾರೆ. ಜೊತೆಗೆ ತಮ್ಮ ದುರ್ಬಲ ಸ್ಥಿತಿಯ ಬಗ್ಗೆ ಚಿಂತನೆ ನಡೆಸುತ್ತಾರೆ. ಈ ಹಿನ್ನೆಲೆಯಲ್ಲಿಯೇ ಮನಸ್ಸಿಗೆ ಬಂದಂತೆ ವರ್ತಿಸುವ ಸಾಧ್ಯತೆಗಳು ಇರುತ್ತವೆ.
ಮೀನ
ಇವರು ವಿಷಯವನ್ನು ಸೂಕ್ತ ರೀತಿಯಲ್ಲಿ ಪರಿಗಣಿಸುವುದಿಲ್ಲ. ಅರ್ಥವಿಲ್ಲದ ರೀತಿಯಲ್ಲಿ ಅಥವಾ ತಮಾಷೆಯ ರೂಪದಲ್ಲಿ ನಿರ್ಣಯವನ್ನು ಕೈಗೊಳ್ಳುವರು. ನಿರ್ಧಾರ ತೆಗೆದುಕೊಳ್ಳುವುದರ ಬಗ್ಗೆ ದ್ವೇಷವನ್ನು ವ್ಯಕ್ತಪಡಿಸುತ್ತಾರೆ. ಅಗತ್ಯಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳುವ ಪ್ರಕ್ರಿಯೆಯನ್ನು ಹಾಗೂ ಚಿಂತನೆಗಳನ್ನು ಹೊಂದಿರಬಾರದು ಎಂದು ಇವರು ಭಾವಿಸುತ್ತಾರೆ. ಇವರು ಬಹುತೇಕ ಸಂದರ್ಭದಲ್ಲಿ ಮೂರ್ಖ ನಿರ್ಧಾರಗಳನ್ನು ಕೈಗೊಳ್ಳುತ್ತಾರೆ. ಇವರು ನಿರಾಶೆ ಹೊಂದುವುದನ್ನು ಇಷ್ಟಪಡುವುದಿಲ್ಲ. ಮೀನವು ಯಾರನ್ನಾದರು ನಿರಾಶೆಗೊಳಿಸುವ ಗೋಜಿಗೆ ಹೋಗುವುದಿಲ್ಲ. ಆದರೆ ಅವರು ಕೈಗೊಳ್ಳುವ ತೀರ್ಮಾನ ಹಾಗೂ ವರ್ತನೆ ಇತರರಿಗೆ ನೋವುಂಟುಮಾಡುವುದು.
Most Read:ಕಡ್ಲೆಹಿಟ್ಟು ಬೋಂಡಾ ಮಾಡುವುದಕ್ಕೆ ಮಾತ್ರವಲ್ಲ-ಆರೋಗ್ಯಕ್ಕೂ ಬಲು ಉಪಕಾರಿ!
ತುಲಾ
ಇವರು ಬಹಳಷ್ಟು ಉದ್ವೇಗದ ಕೆಲಸವನ್ನು ಮಾಡುತ್ತಾರೆ. ಇವರು ಯಾವುದಾದರೂ ಒಂದು ವಿಚಾರಕ್ಕೆ ಅಂಗಡಿಗೆ ಹೋದರೂ ಬರುವಾಗ ಹಲವಾರು ವಸ್ತುಗಳನ್ನು ಕೊಂಡು ತರಬೇಕು ಎಂದು ಬಯಸುತ್ತಾರೆ. ಇವರು ಯಾವುದೇ ವಿಚಾರದಲ್ಲೂ ತಕ್ಷಣದ ತೃಪ್ತಿಯನ್ನು ಇಷ್ಟಪಡುತ್ತಾರೆ. ಕಟ್ಟು ನಿಟ್ಟಿನ ನಿರ್ಣಯ ತೆಗೆದುಕೊಳ್ಳುವ ಇವರು. ಚಿಂತನೆಗೆ ಹೆಚ್ಚಿನ ಸಮಯ ತೆಗೆದುಕೊಳ್ಳದೆ ನಿರ್ಧಾರ ವ್ಯಕ್ತ ಪಡಿಸುತ್ತಾರೆ.
ತುಲಾ
ಇದು ಕೆಲವರಿಗೆ ನೋವುಂಟಾಗುವ ಸಾಧ್ಯತೆಗಳಿವೆ. ಇವರು ಜನರಿಗೆ ಉಡುಗೊರೆ ಹಾಗೂ ಸಂತೋಷ ನೀಡಲು ಇಷ್ಟಪಡುತ್ತಾರೆ ಈ ನಿಟ್ಟಿನಲ್ಲಿ ತಮ್ಮ ಸಾಮಥ್ರ್ಯವನ್ನು ಪರಿಗಣಿಸದೆಯೇ ಅತಿರೇಕಕ್ಕೆ ಹೋಗುವರು. ಇದರಿಂದಲೂ ಎದುರಿಗಿರುವ ವ್ಯಕ್ತಿಗೆ ಇವರ ಬಗ್ಗೆ ಗೊಂದಲ ಉಂಟಾಗಬಹುದು.