Latest Updates
-
ಬಿಸಿಲ ಝಳದಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಸಣ್ಣ ಬದಲಾವಣೆ ಸಾಕು! -
ತಾಯಂದಿರ ದಿನದ ಗೊಂದಲವೇ? ಅಮ್ಮ ಮತ್ತು ಅತ್ತೆ ಇಬ್ಬರನ್ನೂ ಖುಷಿಪಡಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಅಮೆಜಾನ್ ಸೇಲ್ ಶುರು: ನಿಮ್ಮ ಬಾಲ್ಕನಿಯನ್ನು ಸುಂದರ ತೋಟವನ್ನಾಗಿಸಲು ಮಿಸ್ ಮಾಡ್ಬೇಡಿ ಈ ಬೆಸ್ಟ್ ಡೀಲ್ಸ್! -
ಬಿಸಿಲ ಧಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಪಾನೀಯಗಳೇ ಮದ್ದು! -
ಅಮ್ಮನಿಗೆ ಕೊನೆಯ ನಿಮಿಷದಲ್ಲಿ ಗಿಫ್ಟ್ ಕೊಡಬೇಕಾ? ಈ ಟ್ರಿಕ್ಸ್ ಫಾಲೋ ಮಾಡಿ, ಅಮ್ಮನ ಮುಖದಲ್ಲಿ ನಗು ಮೂಡಿಸಿ! -
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು! -
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ! -
ಮದರ್ಸ್ ಡೇ 2026: ಅಮ್ಮನಿಗೆ ಸರ್ಪ್ರೈಸ್ ನೀಡಲು ಈ ವೈರಲ್ ಟ್ರೆಂಡ್ಸ್ ಫಾಲೋ ಮಾಡಿ, ಮಿಸ್ ಮಾಡ್ಬೇಡಿ!
ವೈದ್ಯರ ಪಿತ್ತಕೋಶದಲ್ಲಿತ್ತು ಹತ್ತುಸಾವಿರ ಕಲ್ಲುಗಳು...!
ಮಹಾತ್ಮ ಗಾಂಧೀಜಿಯವರು ಯಾರಿಗಾದರೂ ಉಪದೇಶ ಮಾಡುವ ಮೊದಲು ಅದನ್ನು ತಾನೇ ಪಾಲಿಸಿಕೊಂಡು ತನ್ನಿಂದ ಸಾಧ್ಯವಾದರೆ ಮಾತ್ರ ಬೇರೆಯವರಿಗೆ ಉಪದೇಶ ಮಾಡಲು ಹೋಗುತ್ತಲಿದ್ದರು. ಉಪದೇಶ ಮಾಡುವ ಮೊದಲು ಅದನ್ನು ಪಾಲಿಸಬೇಕು ಎಂದು ಹಿಂದಿನವರು ಕೂಡ ಹೇಳಿರುತ್ತಾರೆ. ನಾವು ಯಾವುದೇ ಕಾಯಿಲೆ ಬಂದರೂ ವೈದ್ಯರಲ್ಲಿಗೆ ಓಡಿಕೊಂಡು ಹೋಗುತ್ತೇವೆ.
ಅವರಿಂದ ಚಿಕಿತ್ಸೆ ಪಡೆದು ಸಂಪೂರ್ಣವಾಗಿ ಚೇತರಿಸಿಕೊಂಡ ಬಳಿಕ ಅವರಿಗೆ ಮನಸ್ಸಿನಲ್ಲೇ ಧನ್ಯವಾದ ಹೇಳುತ್ತೇವೆ. ಆದರೆ ವೈದ್ಯರು ಕೂಡ ಮನುಷ್ಯ, ಅವರಿಗೆ ಕೂಡ ಕೆಲವೊಂದು ಸಲ ಕಾಯಿಲೆಗಳು ಬರಬಹುದು. ಕಾಯಿಲೆ ಬಂದಾಗ ಅವರು ತಮ್ಮ ಆರೋಗ್ಯದ ಕಾಳಜಿ ವಹಿಸಬೇಕು.
ಈ ಲೇಖನದಲ್ಲಿ ತುಂಬಾ ಅಪರೂಪದ ಸಮಸ್ಯೆಯಿಂದ ಬಳಲುತ್ತಿರುವ ವೃತ್ತಿಯಲ್ಲಿ ಪೋಷಕಾಂಶ ತಜ್ಞರಾಗಿರುವ ವೈದ್ಯರೊಬ್ಬರ ಬಗ್ಗೆ ನಿಮಗೆ ಹೇಳಲಿದ್ದೇವೆ. ಇವರ ಪಿತ್ತಕೋಶದಲ್ಲಿ ಸುಮಾರು ಹತ್ತು ಸಾವಿರದಷ್ಟು ಕಲ್ಲುಗಳಿದ್ದವು. ಮುಂದಕ್ಕೆ ಓದಿ...

ಅವರಿಗೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿತು
ಒಂದುವರೆ ತಿಂಗಳಿಂದ ಕೊಲ್ಕತ್ತಾದ ಚೌಧರಿ ಎಂಬ ವೈದ್ಯರಿಗೆ ತೀವ್ರವಾದ ಹೊಟ್ಟೆನೋವು ಕಾಣಿಸಿಕೊಂಡಿತು. ಮೊದಲಿಗೆ ಅವರು ಇದನ್ನು ಕಡೆಗಣಿಸಿದರು. ಆದರೆ ಅಂತಿಮವಾಗಿ ನೋವು ತೀವ್ರ ಸ್ವರೂಪ ಪಡೆದಾಗ ಆಸ್ಪತ್ರೆಗೆ ದಾಖಲಾಗಬೇಕಾಯಿತು. ಯುಎಸ್ ಜಿಯ ಪ್ರಕಾರ ವೈದ್ಯರ ಪಿತ್ತಕೋಶದಲ್ಲಿ ಕಲ್ಲುಗಳಿರುವುದು ಕಾಣಿಸಿಕೊಂಡಿತು.

ಎಷ್ಟು ಕಲ್ಲುಗಳಿದೆ ಎಂದು ವೈದ್ಯರಿಗೆ ತಿಳಿದಿರಲಿಲ್ಲ…
ಪೋಷಕಾಂಶ ತಜ್ಞರನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸಿದ ವೈದ್ಯರು ಒಂದು ಕ್ಷಣ ಅವಕ್ಕಾದರು. ಯಾಕೆಂದರೆ ಅವರಿಗೆ ಎಷ್ಟು ಪ್ರಮಾಣದಲ್ಲಿ ಕಲ್ಲುಗಳು ಇರಬಹುದು ಎಂದು ಊಹೆಯೇ ಇರಲಿಲ್ಲ. ಕಲ್ಲುಗಳನ್ನು ಲೆಕ್ಕ ಹಾಕಿದಾಗ ಸುಮಾರು 10.356 ಕಲ್ಲುಗಳು ಸಿಕ್ಕಿವೆ. ಶಸ್ತ್ರಚಿಕಿತ್ಸೆಗೆ ಕೇವಲ 40 ನಿಮಿಷ ಬೇಕಾಯಿತು. ಆದರೆ ಕಲ್ಲುಗಳನ್ನು ಲೆಕ್ಕ ಹಾಕಲು ಇದಕ್ಕಿಂತ ಹೆಚ್ಚಿನ ಸಮಯ ಬೇಕಾಯಿತಂತೆ!

ಇದು ಮೊದಲ ಪ್ರಕರಣವಲ್ಲ…
ಕೊಲ್ಕತ್ತಾದಲ್ಲಿ ಇದು ಕಾಣಿಸಿಕೊಂಡಿರುವಂತಹ ಎರಡನೇ ಪ್ರಕರಣವಾಗಿದೆ. ಮೊದಲ ಪ್ರಕರಣದಲ್ಲಿ ಡಾ. ಮಖನ್ ಲಾಲ್ ಸಾಹಾ ಎಂಬವರು ವ್ಯಕ್ತಿಯೊಬ್ಬನ ಶಸ್ತ್ರಚಿಕಿತ್ಸೆ ಮಾಡಿದಾಗ ಅವರಿಗೆ ಸುಮಾರು 12 ಸಾವಿರ ಕಲ್ಲುಗಳು ಸಿಕ್ಕಿದ್ದವು.

ಪಿತ್ತಕೋಶದ ಕಲ್ಲುಗಳಿಗೆ ಕಾರಣಗಳು
ಅಧಿಕ ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್ ಇರುವಂತಹ ವ್ಯಕ್ತಿಗಳಲ್ಲಿ ಪಿತ್ತಕೋಶದ ಕಲ್ಲುಗಳು ಹೆಚ್ಚಾಗಿ ಕಂಡುಬರುವುದು. ಕೊಲೆಸ್ಟ್ರಾಲ್ ಜಮೆಯಾಗುವ ಕಾರಣದಿಂದಾಗಿ ಕಲ್ಲುಗಳು ನಿರ್ಮಾಣವಾಗುವುದು ಎನ್ನಲಾಗಿದೆ. ಅನುವಂಶೀಯ ಮತ್ತು ಜಡ ಜೀವನಶೈಲಿಯು ಪಿತ್ತಕೋಶದಲ್ಲಿ ಕಲ್ಲುಗಳ ನಿರ್ಮಾಣಕ್ಕೆ ಕಾರಣವಾಗಿದೆ.



Click it and Unblock the Notifications