Latest Updates
-
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ!
ಭಕ್ತರ ತಲೆಗೆ ತೆಂಗಿನಕಾಯಿ ಒಡೆಯುವ ಅರ್ಚಕ! ವಿಡಿಯೋ ನೋಡಿ
ಭಾರತದಲ್ಲಿರುವ ಧರ್ಮ, ಜಾತಿ, ಸಂಪ್ರದಾಯ ಮತ್ತು ಆಚರಣೆಗಳು ಬೇರೆ ಯಾವುದೇ ದೇಶದಲ್ಲೂ ಸಿಗಲಿಕ್ಕಿಲ್ಲ. ಇಲ್ಲಿರುವ ಕೆಲವು ಸಂಪ್ರದಾಯ ಮತ್ತು ನಂಬಿಕೆಗಳು ಬೆಚ್ಚಿಬೀಳಿಸುತ್ತದೆ. ಕೆಲವೊಂದು ಸಲ ದೈಹಿಕವಾಗಿ ನೋವುಂಟು ಮಾಡುವ ಮುಳ್ಳುಗಳಿಗೆ ಮಕ್ಕಳ ಎಸೆಯುವುದು, ಸೂಜಿ ಚುಚ್ಚಿಕೊಳ್ಳುವುದು, ಚರ್ಮಕ್ಕೆ ಕೊಕ್ಕೆ ಹಾಕಿ ಎಳೆಯುವುದು ಇತ್ಯಾದಿ ಆಚರಣೆಗಳು ಕೂಡ ಚಾಲ್ತಿಯಲ್ಲಿದೆ.
ದೇವರ ಶಾಪಕ್ಕೆ ಒಳಗಾಗಬಾರದು ಎನ್ನುವ ಕಾರಣಕ್ಕಾಗಿ ಹೆಚ್ಚಿನವರು ಇದನ್ನು ಅನುಸರಿಸಿಕೊಂಡು ಹೋಗುವರು. ತಮಿಳುನಾಡಿನ ದೇವಸ್ಥಾನವೊಂದರಲ್ಲಿ ತುಂಬಾ ವಿಚಿತ್ರ ಸಂಪ್ರದಾಯವಿದ್ದು, ಇಲ್ಲಿ ಭಕ್ತರ ತಲೆಗೆ ತೆಂಗಿನಕಾಯಿ ಒಡೆಯಲಾಗುವುದು!
ಜಾತ್ರೆಯ ಸಮಯದಲ್ಲಿ ಭಕ್ತರ ತಲೆಗೆ ತೆಂಗಿನಕಾಯಿ ಒಡೆಯಲಾಗುತ್ತದೆ ಮತ್ತು ತಮ್ಮ ತಲೆಗೆ ತೆಂಗಿನಕಾಯಿ ಒಡೆಸಿಕೊಳ್ಳಲು ಇಲ್ಲಿ ಭಕ್ತರು ಸಾಲುಗಟ್ಟಿ ನಿಲ್ಲುವರು.

ತಮಿಳುನಾಡಿನ ಮೆಟ್ಟು ಮಹಾದನಪುರಂನಲ್ಲಿ
ತಮಿಳುನಾಡಿನ ಮೆಟ್ಟು ಮಹಾದನಪುರಂನಲ್ಲಿರುವ ದೇವಾಲಯದಲ್ಲಿ ವಾರ್ಷಿಕ ಜಾತ್ರೆ ಸಂದರ್ಭದಲ್ಲಿ ಇದನ್ನು ಆಚರಿಸಲಾಗುವುದು. `ಆದಿ ಪೆರುಕ್ಕು' ಜಾತ್ರೆಯಲ್ಲಿ ನಡೆಯುವ ದೈಹಿಕವಾಗಿ ನೋವುಂಟು ಮಾಡುವ ಈ ಆಚರಣೆಯಲ್ಲಿ ಹಿಂದೂ-ತಮಿಳು ಭಕ್ತರು ಭಾಗಹಿಸುವರು.

ಸಾವಿರಕ್ಕೂ ಹೆಚ್ಚು ಭಕ್ತರು ಜಾತ್ರೆಯಲ್ಲಿ ಭಾಗಿಯಾಗುತ್ತಾರೆ
ಜೀವನೀಡುವ ಗುಣ ಹೊಂದಿರುವ ನೀರನ್ನು ಪೂಜಿಸುವ ಶ್ರೀ ಮಹಾಲಕ್ಷ್ಮಿ ದೇವಾಲಯದಲ್ಲಿ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಭಕ್ತರು ಜಾತ್ರೆಯಲ್ಲಿ ಭಾಗಿಯಾಗುತ್ತಾರೆ ಎಂದು ವರದಿಗಳು ಹೇಳಿವೆ.

ಗಾಯವಾದರೆ ವಿಭೂತಿ ಮತ್ತು ಅರಿಶಿನ ಹಚ್ಚುತ್ತಾರೆ
ತೆಂಗಿನಕಾಯಿ ಒಡೆಯುವ ವೇಳೆ ಭಕ್ತರಿಗೆ ಗಾಯವಾದರೆ ಆಗ ವಿಭೂತಿ(ಭಸ್ಮ) ಮತ್ತು ಅರಿಶಿನ ಮಿಶ್ರಣವನ್ನು ಗಾಯಕ್ಕೆ ಹಚ್ಚಲಾಗುವುದು.

ಮಾನವ ಹಕ್ಕು ಸಂಘಟನೆಗಳು ಇದಕ್ಕೆ ತುಂಬಾ ವಿರೋಧ ವ್ಯಕ್ತಪಡಿಸುತ್ತಾರೆ
ಗಾಯಾಳುಗಳಾಗುವ ಭಕ್ತರ ಸಂಖ್ಯೆಯು ಮಿತಿಮೀರುತ್ತಿರುವ ಕಾರಣದಿಂದಾಗಿ ರಾಜ್ಯ ಮಾನವ ಹಕ್ಕು ಸಂಘಟನೆಗಳು ಇದಕ್ಕೆ ತುಂಬಾ ವಿರೋಧ ವ್ಯಕ್ತಪಡಿಸಿದೆ. ಆದರೆ ಜನರು ಮಾತ್ರ ಈ ಆಚರಣೆ ಪಾಲಿಸಿಕೊಂಡು ಹೋಗುತ್ತಿದ್ದಾರೆ.



Click it and Unblock the Notifications