Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಭಕ್ತರ ತಲೆಗೆ ತೆಂಗಿನಕಾಯಿ ಒಡೆಯುವ ಅರ್ಚಕ! ವಿಡಿಯೋ ನೋಡಿ
ಭಾರತದಲ್ಲಿರುವ ಧರ್ಮ, ಜಾತಿ, ಸಂಪ್ರದಾಯ ಮತ್ತು ಆಚರಣೆಗಳು ಬೇರೆ ಯಾವುದೇ ದೇಶದಲ್ಲೂ ಸಿಗಲಿಕ್ಕಿಲ್ಲ. ಇಲ್ಲಿರುವ ಕೆಲವು ಸಂಪ್ರದಾಯ ಮತ್ತು ನಂಬಿಕೆಗಳು ಬೆಚ್ಚಿಬೀಳಿಸುತ್ತದೆ. ಕೆಲವೊಂದು ಸಲ ದೈಹಿಕವಾಗಿ ನೋವುಂಟು ಮಾಡುವ ಮುಳ್ಳುಗಳಿಗೆ ಮಕ್ಕಳ ಎಸೆಯುವುದು, ಸೂಜಿ ಚುಚ್ಚಿಕೊಳ್ಳುವುದು, ಚರ್ಮಕ್ಕೆ ಕೊಕ್ಕೆ ಹಾಕಿ ಎಳೆಯುವುದು ಇತ್ಯಾದಿ ಆಚರಣೆಗಳು ಕೂಡ ಚಾಲ್ತಿಯಲ್ಲಿದೆ.
ದೇವರ ಶಾಪಕ್ಕೆ ಒಳಗಾಗಬಾರದು ಎನ್ನುವ ಕಾರಣಕ್ಕಾಗಿ ಹೆಚ್ಚಿನವರು ಇದನ್ನು ಅನುಸರಿಸಿಕೊಂಡು ಹೋಗುವರು. ತಮಿಳುನಾಡಿನ ದೇವಸ್ಥಾನವೊಂದರಲ್ಲಿ ತುಂಬಾ ವಿಚಿತ್ರ ಸಂಪ್ರದಾಯವಿದ್ದು, ಇಲ್ಲಿ ಭಕ್ತರ ತಲೆಗೆ ತೆಂಗಿನಕಾಯಿ ಒಡೆಯಲಾಗುವುದು!
ಜಾತ್ರೆಯ ಸಮಯದಲ್ಲಿ ಭಕ್ತರ ತಲೆಗೆ ತೆಂಗಿನಕಾಯಿ ಒಡೆಯಲಾಗುತ್ತದೆ ಮತ್ತು ತಮ್ಮ ತಲೆಗೆ ತೆಂಗಿನಕಾಯಿ ಒಡೆಸಿಕೊಳ್ಳಲು ಇಲ್ಲಿ ಭಕ್ತರು ಸಾಲುಗಟ್ಟಿ ನಿಲ್ಲುವರು.

ತಮಿಳುನಾಡಿನ ಮೆಟ್ಟು ಮಹಾದನಪುರಂನಲ್ಲಿ
ತಮಿಳುನಾಡಿನ ಮೆಟ್ಟು ಮಹಾದನಪುರಂನಲ್ಲಿರುವ ದೇವಾಲಯದಲ್ಲಿ ವಾರ್ಷಿಕ ಜಾತ್ರೆ ಸಂದರ್ಭದಲ್ಲಿ ಇದನ್ನು ಆಚರಿಸಲಾಗುವುದು. `ಆದಿ ಪೆರುಕ್ಕು' ಜಾತ್ರೆಯಲ್ಲಿ ನಡೆಯುವ ದೈಹಿಕವಾಗಿ ನೋವುಂಟು ಮಾಡುವ ಈ ಆಚರಣೆಯಲ್ಲಿ ಹಿಂದೂ-ತಮಿಳು ಭಕ್ತರು ಭಾಗಹಿಸುವರು.

ಸಾವಿರಕ್ಕೂ ಹೆಚ್ಚು ಭಕ್ತರು ಜಾತ್ರೆಯಲ್ಲಿ ಭಾಗಿಯಾಗುತ್ತಾರೆ
ಜೀವನೀಡುವ ಗುಣ ಹೊಂದಿರುವ ನೀರನ್ನು ಪೂಜಿಸುವ ಶ್ರೀ ಮಹಾಲಕ್ಷ್ಮಿ ದೇವಾಲಯದಲ್ಲಿ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಭಕ್ತರು ಜಾತ್ರೆಯಲ್ಲಿ ಭಾಗಿಯಾಗುತ್ತಾರೆ ಎಂದು ವರದಿಗಳು ಹೇಳಿವೆ.

ಗಾಯವಾದರೆ ವಿಭೂತಿ ಮತ್ತು ಅರಿಶಿನ ಹಚ್ಚುತ್ತಾರೆ
ತೆಂಗಿನಕಾಯಿ ಒಡೆಯುವ ವೇಳೆ ಭಕ್ತರಿಗೆ ಗಾಯವಾದರೆ ಆಗ ವಿಭೂತಿ(ಭಸ್ಮ) ಮತ್ತು ಅರಿಶಿನ ಮಿಶ್ರಣವನ್ನು ಗಾಯಕ್ಕೆ ಹಚ್ಚಲಾಗುವುದು.

ಮಾನವ ಹಕ್ಕು ಸಂಘಟನೆಗಳು ಇದಕ್ಕೆ ತುಂಬಾ ವಿರೋಧ ವ್ಯಕ್ತಪಡಿಸುತ್ತಾರೆ
ಗಾಯಾಳುಗಳಾಗುವ ಭಕ್ತರ ಸಂಖ್ಯೆಯು ಮಿತಿಮೀರುತ್ತಿರುವ ಕಾರಣದಿಂದಾಗಿ ರಾಜ್ಯ ಮಾನವ ಹಕ್ಕು ಸಂಘಟನೆಗಳು ಇದಕ್ಕೆ ತುಂಬಾ ವಿರೋಧ ವ್ಯಕ್ತಪಡಿಸಿದೆ. ಆದರೆ ಜನರು ಮಾತ್ರ ಈ ಆಚರಣೆ ಪಾಲಿಸಿಕೊಂಡು ಹೋಗುತ್ತಿದ್ದಾರೆ.



Click it and Unblock the Notifications
