Latest Updates
-
ಬೇಸಿಗೆ ಮದುವೆ ಸಂಭ್ರಮ: ಬಿಸಿಲ ಬೇಗೆಯಿಂದ ಅತಿಥಿಗಳನ್ನು ರಕ್ಷಿಸಲು ಇಲ್ಲಿದೆ ಮಾಸ್ಟರ್ ಪ್ಲಾನ್ -
ಮೇ 2-3ರ ಬಿರುಗಾಳಿ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಗಿಡಗಳನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಭಾರತದಲ್ಲಿ ಸುಡುವ ಬಿಸಿಲು: ಹೀಟ್ ವೇವ್ನಿಂದ ಪಾರಾಗಲು ಇಲ್ಲಿವೆ ಬೆಸ್ಟ್ ಡಯಟ್ ಮತ್ತು ಹೈಡ್ರೇಶನ್ ಟಿಪ್ಸ್! -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಕರಣ್ ಜೋಹರ್ ಅಬ್ಬರ, ಭಾರತೀಯ ಫ್ಯಾಷನ್ ಲೋಕದ ಹೊಸ ಸಂಚಲನ! -
ಮೇ ತಿಂಗಳ ಬಿಸಿಲ ಧಗೆ: ನಿಮ್ಮ ಬೆಳಗಿನ ದಿನಚರಿಯಲ್ಲಿ ಈ ಬದಲಾವಣೆ ಮಾಡಿಕೊಳ್ಳದಿದ್ದರೆ ಕಷ್ಟ! -
ಎವೆಲಿನ್ ಶರ್ಮಾ ವಿಚ್ಛೇದನ: ಮಕ್ಕಳ ಭವಿಷ್ಯಕ್ಕಾಗಿ ಈ ಜೋಡಿ ಆರಿಸಿದ ಹೊಸ ದಾರಿ ಯಾವುದು? -
ಬಿಸಿಲ ಧಗೆಗೆ ತಂಪಾದ ಗುಡ್ ನ್ಯೂಸ್: ಮೇ 8 ರಿಂದ ಶುರುವಾಗಲಿದೆ ಗ್ರೇಟ್ ಸಮ್ಮರ್ ಸೇಲ್! -
ಬಿಸಿಲ ಬೇಗೆಗೆ ಸುಸ್ತಾಗಿದ್ದೀರಾ? ಈ ಸರಳ ಆಹಾರ ಪದ್ಧತಿಯಿಂದ ಇಡೀ ದಿನ ಇರಿ ಫ್ರೆಶ್! -
ಬಿಸಿಲ ಬೇಗೆಗೆ ಸುಸ್ತಾಗಿದ್ದೀರಾ? ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ ಕೂಲ್ ಆಗಿರಿ! -
ಬಿಸಿಗಾಳಿಯ ಅಬ್ಬರ: ನಿಮ್ಮ ಫಿಟ್ನೆಸ್ ದಿನಚರಿಯನ್ನು ಬದಲಾಯಿಸದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ!
ಭಕ್ತರ ತಲೆಗೆ ತೆಂಗಿನಕಾಯಿ ಒಡೆಯುವ ಅರ್ಚಕ! ವಿಡಿಯೋ ನೋಡಿ
ಭಾರತದಲ್ಲಿರುವ ಧರ್ಮ, ಜಾತಿ, ಸಂಪ್ರದಾಯ ಮತ್ತು ಆಚರಣೆಗಳು ಬೇರೆ ಯಾವುದೇ ದೇಶದಲ್ಲೂ ಸಿಗಲಿಕ್ಕಿಲ್ಲ. ಇಲ್ಲಿರುವ ಕೆಲವು ಸಂಪ್ರದಾಯ ಮತ್ತು ನಂಬಿಕೆಗಳು ಬೆಚ್ಚಿಬೀಳಿಸುತ್ತದೆ. ಕೆಲವೊಂದು ಸಲ ದೈಹಿಕವಾಗಿ ನೋವುಂಟು ಮಾಡುವ ಮುಳ್ಳುಗಳಿಗೆ ಮಕ್ಕಳ ಎಸೆಯುವುದು, ಸೂಜಿ ಚುಚ್ಚಿಕೊಳ್ಳುವುದು, ಚರ್ಮಕ್ಕೆ ಕೊಕ್ಕೆ ಹಾಕಿ ಎಳೆಯುವುದು ಇತ್ಯಾದಿ ಆಚರಣೆಗಳು ಕೂಡ ಚಾಲ್ತಿಯಲ್ಲಿದೆ.
ದೇವರ ಶಾಪಕ್ಕೆ ಒಳಗಾಗಬಾರದು ಎನ್ನುವ ಕಾರಣಕ್ಕಾಗಿ ಹೆಚ್ಚಿನವರು ಇದನ್ನು ಅನುಸರಿಸಿಕೊಂಡು ಹೋಗುವರು. ತಮಿಳುನಾಡಿನ ದೇವಸ್ಥಾನವೊಂದರಲ್ಲಿ ತುಂಬಾ ವಿಚಿತ್ರ ಸಂಪ್ರದಾಯವಿದ್ದು, ಇಲ್ಲಿ ಭಕ್ತರ ತಲೆಗೆ ತೆಂಗಿನಕಾಯಿ ಒಡೆಯಲಾಗುವುದು!
ಜಾತ್ರೆಯ ಸಮಯದಲ್ಲಿ ಭಕ್ತರ ತಲೆಗೆ ತೆಂಗಿನಕಾಯಿ ಒಡೆಯಲಾಗುತ್ತದೆ ಮತ್ತು ತಮ್ಮ ತಲೆಗೆ ತೆಂಗಿನಕಾಯಿ ಒಡೆಸಿಕೊಳ್ಳಲು ಇಲ್ಲಿ ಭಕ್ತರು ಸಾಲುಗಟ್ಟಿ ನಿಲ್ಲುವರು.

ತಮಿಳುನಾಡಿನ ಮೆಟ್ಟು ಮಹಾದನಪುರಂನಲ್ಲಿ
ತಮಿಳುನಾಡಿನ ಮೆಟ್ಟು ಮಹಾದನಪುರಂನಲ್ಲಿರುವ ದೇವಾಲಯದಲ್ಲಿ ವಾರ್ಷಿಕ ಜಾತ್ರೆ ಸಂದರ್ಭದಲ್ಲಿ ಇದನ್ನು ಆಚರಿಸಲಾಗುವುದು. `ಆದಿ ಪೆರುಕ್ಕು' ಜಾತ್ರೆಯಲ್ಲಿ ನಡೆಯುವ ದೈಹಿಕವಾಗಿ ನೋವುಂಟು ಮಾಡುವ ಈ ಆಚರಣೆಯಲ್ಲಿ ಹಿಂದೂ-ತಮಿಳು ಭಕ್ತರು ಭಾಗಹಿಸುವರು.

ಸಾವಿರಕ್ಕೂ ಹೆಚ್ಚು ಭಕ್ತರು ಜಾತ್ರೆಯಲ್ಲಿ ಭಾಗಿಯಾಗುತ್ತಾರೆ
ಜೀವನೀಡುವ ಗುಣ ಹೊಂದಿರುವ ನೀರನ್ನು ಪೂಜಿಸುವ ಶ್ರೀ ಮಹಾಲಕ್ಷ್ಮಿ ದೇವಾಲಯದಲ್ಲಿ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಭಕ್ತರು ಜಾತ್ರೆಯಲ್ಲಿ ಭಾಗಿಯಾಗುತ್ತಾರೆ ಎಂದು ವರದಿಗಳು ಹೇಳಿವೆ.

ಗಾಯವಾದರೆ ವಿಭೂತಿ ಮತ್ತು ಅರಿಶಿನ ಹಚ್ಚುತ್ತಾರೆ
ತೆಂಗಿನಕಾಯಿ ಒಡೆಯುವ ವೇಳೆ ಭಕ್ತರಿಗೆ ಗಾಯವಾದರೆ ಆಗ ವಿಭೂತಿ(ಭಸ್ಮ) ಮತ್ತು ಅರಿಶಿನ ಮಿಶ್ರಣವನ್ನು ಗಾಯಕ್ಕೆ ಹಚ್ಚಲಾಗುವುದು.

ಮಾನವ ಹಕ್ಕು ಸಂಘಟನೆಗಳು ಇದಕ್ಕೆ ತುಂಬಾ ವಿರೋಧ ವ್ಯಕ್ತಪಡಿಸುತ್ತಾರೆ
ಗಾಯಾಳುಗಳಾಗುವ ಭಕ್ತರ ಸಂಖ್ಯೆಯು ಮಿತಿಮೀರುತ್ತಿರುವ ಕಾರಣದಿಂದಾಗಿ ರಾಜ್ಯ ಮಾನವ ಹಕ್ಕು ಸಂಘಟನೆಗಳು ಇದಕ್ಕೆ ತುಂಬಾ ವಿರೋಧ ವ್ಯಕ್ತಪಡಿಸಿದೆ. ಆದರೆ ಜನರು ಮಾತ್ರ ಈ ಆಚರಣೆ ಪಾಲಿಸಿಕೊಂಡು ಹೋಗುತ್ತಿದ್ದಾರೆ.



Click it and Unblock the Notifications