Latest Updates
-
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು -
ವರಮಹಾಲಕ್ಷ್ಮೀ ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆಯ ಬಿಸಿ: ಕೆ.ಆರ್. ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಹೂವು-ಹಣ್ಣುಗಳ ದರ -
BWF ವಿಶ್ವ ಚಾಂಪಿಯನ್ಷಿಪ್: ದೆಹಲಿಯಲ್ಲಿ ಭಾರತೀಯ ಆಟಗಾರರ ಅಬ್ಬರ, ಅಭಿಮಾನಿಗಳಿಗೆ ಇಲ್ಲಿದೆ ವಿಶೇಷ ಗೇಮ್ ಪ್ಲಾನ್! -
ವರಮಹಾಲಕ್ಷ್ಮಿ ಹಬ್ಬದ ದಿನಾಂಕದ ಗೊಂದಲ: ಆಗಸ್ಟ್ 21 ಅಥವಾ 28? ಇಲ್ಲಿದೆ ಸ್ಪಷ್ಟ ಮಾಹಿತಿ!
'ಮುಸ್ಲಿಂ ಮಹಿಳೆ'ಯ ಮನೆಯಲ್ಲಿ ಅರಳುವ ಶಿವಲಿಂಗದ ಕಥೆ ಇದು!
ಜೀವನದಲ್ಲಿ ಅದೆಷ್ಟೇ ಕಷ್ಟಗಳು ಎದುರಾದರೂ ಸರಿ, ದೇವರ ಸ್ಮರಣೆ ಹಾಗೂ ಕೃಪೆಯಿದ್ದರೆ ಎಲ್ಲವನ್ನೂ ಸಹಿಸಿಕೊಂಡು, ಧೈರ್ಯದಿಂದ ಮುನ್ನಡೆಯಬಹುದು. ಯಾವುದೇ ಕೆಲಸವು ಸುಗಮವಾಗಿ ಹೋಗಬೇಕೆಂದರೆ ದೇವರೆನ್ನುವ ವಿಶೇಷ ಶಕ್ತಿಯ ಚಮತ್ಕಾರ ಆಗಲೇ ಬೇಕು. ಹಲವರು ಧರ್ಮ, ಜಾತಿಯಿದ್ದರೂ ಎಲ್ಲರಿಗೂ ದೇವನೊಬ್ಬನೇ. ಅವರವರ ಭಾವಕ್ಕೆ ಅನುಗುಣವಾಗಿ ದೇವರನ್ನು ಕಾಣುವ ಪರಿ ಬೇರೆಯಷ್ಟೇ. ದೇವರಿಗೆ ಆ ಧರ್ಮದ ವ್ಯಕ್ತಿ, ಈ ಧರ್ಮದ ವ್ಯಕ್ತಿ ಎನ್ನುವ ಭೇದವಿಲ್ಲ. ಆತನಿಗೆ ಎಲ್ಲರೂ ಮಕ್ಕಳೆ...
ಇಂತಹ ನಿರ್ಮಲವಾದ ವಿಚಾರಕ್ಕೆ ಸಾಕ್ಷಿಯಾಗಿ ನಿಲ್ಲುತ್ತಾರೆ ವಾರಣಾಸಿಯ ನಂಹಿ ಬೇಗಮ್. ಇವರು ಮುಸ್ಲಿಂ ಧರ್ಮದವರಾದರೂ ಹಿಂದೂ ದೇವರಾದ ಶಿವಲಿಂಗವನ್ನು ತಯಾರಿಸುತ್ತಾರೆ. ಹೇಳಿಕೇಳಿ ವಾರಣಾಸಿ ಹಿಂದೂಗಳ ಪವಿತ್ರ ಕ್ಷೇತ್ರದಲ್ಲೊಂದು. ಇಲ್ಲಿ ಇವರು ತಮ್ಮ ಜೀವನೋಪಾಯಕ್ಕಾಗಿ ಹಿಂದೂ ದೇವರ ತಯಾರಿಯನ್ನು ಮಾಡುತ್ತಿರುವುದು ಒಂದು ವಿಶೇಷ. ಬದುಕಿಗೆ ದೇವನೊಬ್ಬನೆ. ನಾಮ ಹಲವು ಎನ್ನುವುದನ್ನು ಇನ್ನೊಮ್ಮೆ ತೋರಿಸಿಕೊಟ್ಟಿದ್ದಾರೆ....

ಬೇಗಮ್ ಜೀವನ
ವಾರಣಾಸಿಯ ಮೂಲದವರಾದ ನಂಹಿ ಬೇಗಮ್ ತನ್ನ ಜೀವನೋಪಾಯಕ್ಕೆ ಕಂಡುಕೊಂಡ ದಾರಿ ಶಿವಲಿಂಗವನ್ನು ತಯಾರಿಸುವುದು. ಗಂಡನಿಂದ ಕಲಿತ ಕೆಲಸ ಇದೀಗ ಅವರ ಜೀವನ ದೋಣಿಯನ್ನು ದೂಡುತ್ತಿದೆ.

ಗಂಡನಿಂದ ವ್ಯಾಪಾರ ಪ್ರಾರಂಭವಾಯಿತು
57 ವರ್ಷದ ಬೇಗಮ್ 20 ವರ್ಷಗಳಿಂದ ಈ ವ್ಯಾಪಾರವನ್ನು ಮಾಡಿಕೊಂಡು ಬರುತ್ತಿದ್ದಾರೆ. ಪತಿಯ ಜೊತೆಯಲ್ಲಿಯೇ ಕಲಿತ ವ್ಯಾಪಾರ, ಇಂದು ಪತಿಯನ್ನು ಕಳೆದುಕೊಂಡು 12 ವರ್ಷವಾದರೂ ಮುಂದುವರಿಸಿಕೊಂಡು ಬರುತ್ತಿದ್ದಾರೆ.

ಮಕ್ಕಳ ಸಹಾಯವೂ ಇದೆ
ಮಕ್ಕಳಾದ ನಿಶಿ(26) ಮತ್ತು ಫರಾಹ್ (23) ಇವರು ತಮ್ಮ ತಾಯಿಗೆ ಸಹಾಯ ಮಾಡುತ್ತಿದ್ದಾರೆ. ಪಾದರಸದಿಂದ ತಯಾರಿಸಲ್ಪಡುವ ಈ ಶಿವಲಿಂಗಕ್ಕೆ ಹೊಳಪನ್ನು ಕೊಡುವ ಕೆಲಸವನ್ನು ನಿರ್ವಹಿಸುತ್ತಾರೆ. ದಿನಕ್ಕೆ ಸುಮಾರು 50 ಶಿವಲಿಂಗಕ್ಕೆ ಮೆರಗು ನೀಡುತ್ತಾರೆ ಎನ್ನುತ್ತಾರೆ.

ಇವರ ಕೆಲಸದ ವಿಧಾನ
ಹೆಚ್ಚಿನ ತಾಪಮಾನದಲ್ಲಿ ಪಾದರಸವನ್ನು ಕರಗಿಸಿಕೊಂಡು, ಶಿವಲಿಂಗದ ಅಚ್ಚಿನಲ್ಲಿ ಸುರಿಯಲಾಗುತ್ತದೆ. ಗಟ್ಟಿಯಾದ ನಂತರ ಶಿವಲಿಂಗವನ್ನು ತೆಗೆದು ಹೊಳಪು ನೀಡುವ ಕೆಲಸ ಮಾಡಲಾಗುತ್ತದೆ.

ಕೊನೆಯಲ್ಲಿ ತುಪ್ಪ ಮತ್ತು ಹಾಲಿನಲ್ಲಿ ಶುದ್ಧಗೊಳಿಸಲಾಗುತ್ತದೆ
ಇದರ ಹೊಳಪಿನ ಕೆಲಸದ ನಂತರ ಸ್ವಚ್ಛತೆಯ ಕೆಲಸ ನಡೆಯುತ್ತದೆ. ಕೊನೆಯಲ್ಲಿ ತುಪ್ಪ ಮತ್ತು ಹಾಲಿನಲ್ಲಿ ಶುದ್ಧಗೊಳಿಸಲಾಗುತ್ತದೆ. ಈ ಎಲ್ಲಾ ಕೆಲಸದ ನಂತರ ಶಿವಲಿಂಗ ಪೂಜೆಗೆ ಸಿದ್ಧವಾಗುತ್ತದೆ ಎನ್ನುತ್ತಾರೆ.

ಇವರ ಲಾಭ ನಷ್ಟ
ಶಿವಲಿಂಗ ಮಾಡಲು ಸುಮಾರು 60-70 ರೂಪಾಯಿ ವೆಚ್ಚಮಾಡಬೇಕಾಗುವುದು. ಚಿಲ್ಲರೆ ವ್ಯಾಪಾರಿಗಳಿಗೆ 100 ರೂಪಾಯಿಗೆ ಮಾರಲಾಗುವುದು.

120 ರೂಪಾಯಿಗೆ ಶಿವಲಿಂಗ ಮಾರುತ್ತಾರೆ....
ವ್ಯಾಪಾರಿಗಳು ಅದನ್ನು 120 ರೂಪಾಯಿಗೆ ಮಾರುತ್ತಾರೆ ಎನ್ನುತ್ತಾರೆ. ಇತ್ತೀಚೆಗೆ ರಾಸಾಯನಿಕ ಮತ್ತು ಪಾದರಸದ ಬೆಲೆ ಹಚ್ಚಿರುವುದರಿಂದ ದಿನದ ಅಂತ್ಯದಲ್ಲಿ ಲಾಭ ಸಿಗುವುದಿಲ್ಲ ಎನ್ನುವ ಬೇಸರ ವ್ಯಕ್ತ ಪಡಿಸುತ್ತಾರೆ ನಿಶಿ.



Click it and Unblock the Notifications