Latest Updates
-
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು!
'ಮುಸ್ಲಿಂ ಮಹಿಳೆ'ಯ ಮನೆಯಲ್ಲಿ ಅರಳುವ ಶಿವಲಿಂಗದ ಕಥೆ ಇದು!
ಜೀವನದಲ್ಲಿ ಅದೆಷ್ಟೇ ಕಷ್ಟಗಳು ಎದುರಾದರೂ ಸರಿ, ದೇವರ ಸ್ಮರಣೆ ಹಾಗೂ ಕೃಪೆಯಿದ್ದರೆ ಎಲ್ಲವನ್ನೂ ಸಹಿಸಿಕೊಂಡು, ಧೈರ್ಯದಿಂದ ಮುನ್ನಡೆಯಬಹುದು. ಯಾವುದೇ ಕೆಲಸವು ಸುಗಮವಾಗಿ ಹೋಗಬೇಕೆಂದರೆ ದೇವರೆನ್ನುವ ವಿಶೇಷ ಶಕ್ತಿಯ ಚಮತ್ಕಾರ ಆಗಲೇ ಬೇಕು. ಹಲವರು ಧರ್ಮ, ಜಾತಿಯಿದ್ದರೂ ಎಲ್ಲರಿಗೂ ದೇವನೊಬ್ಬನೇ. ಅವರವರ ಭಾವಕ್ಕೆ ಅನುಗುಣವಾಗಿ ದೇವರನ್ನು ಕಾಣುವ ಪರಿ ಬೇರೆಯಷ್ಟೇ. ದೇವರಿಗೆ ಆ ಧರ್ಮದ ವ್ಯಕ್ತಿ, ಈ ಧರ್ಮದ ವ್ಯಕ್ತಿ ಎನ್ನುವ ಭೇದವಿಲ್ಲ. ಆತನಿಗೆ ಎಲ್ಲರೂ ಮಕ್ಕಳೆ...
ಇಂತಹ ನಿರ್ಮಲವಾದ ವಿಚಾರಕ್ಕೆ ಸಾಕ್ಷಿಯಾಗಿ ನಿಲ್ಲುತ್ತಾರೆ ವಾರಣಾಸಿಯ ನಂಹಿ ಬೇಗಮ್. ಇವರು ಮುಸ್ಲಿಂ ಧರ್ಮದವರಾದರೂ ಹಿಂದೂ ದೇವರಾದ ಶಿವಲಿಂಗವನ್ನು ತಯಾರಿಸುತ್ತಾರೆ. ಹೇಳಿಕೇಳಿ ವಾರಣಾಸಿ ಹಿಂದೂಗಳ ಪವಿತ್ರ ಕ್ಷೇತ್ರದಲ್ಲೊಂದು. ಇಲ್ಲಿ ಇವರು ತಮ್ಮ ಜೀವನೋಪಾಯಕ್ಕಾಗಿ ಹಿಂದೂ ದೇವರ ತಯಾರಿಯನ್ನು ಮಾಡುತ್ತಿರುವುದು ಒಂದು ವಿಶೇಷ. ಬದುಕಿಗೆ ದೇವನೊಬ್ಬನೆ. ನಾಮ ಹಲವು ಎನ್ನುವುದನ್ನು ಇನ್ನೊಮ್ಮೆ ತೋರಿಸಿಕೊಟ್ಟಿದ್ದಾರೆ....

ಬೇಗಮ್ ಜೀವನ
ವಾರಣಾಸಿಯ ಮೂಲದವರಾದ ನಂಹಿ ಬೇಗಮ್ ತನ್ನ ಜೀವನೋಪಾಯಕ್ಕೆ ಕಂಡುಕೊಂಡ ದಾರಿ ಶಿವಲಿಂಗವನ್ನು ತಯಾರಿಸುವುದು. ಗಂಡನಿಂದ ಕಲಿತ ಕೆಲಸ ಇದೀಗ ಅವರ ಜೀವನ ದೋಣಿಯನ್ನು ದೂಡುತ್ತಿದೆ.

ಗಂಡನಿಂದ ವ್ಯಾಪಾರ ಪ್ರಾರಂಭವಾಯಿತು
57 ವರ್ಷದ ಬೇಗಮ್ 20 ವರ್ಷಗಳಿಂದ ಈ ವ್ಯಾಪಾರವನ್ನು ಮಾಡಿಕೊಂಡು ಬರುತ್ತಿದ್ದಾರೆ. ಪತಿಯ ಜೊತೆಯಲ್ಲಿಯೇ ಕಲಿತ ವ್ಯಾಪಾರ, ಇಂದು ಪತಿಯನ್ನು ಕಳೆದುಕೊಂಡು 12 ವರ್ಷವಾದರೂ ಮುಂದುವರಿಸಿಕೊಂಡು ಬರುತ್ತಿದ್ದಾರೆ.

ಮಕ್ಕಳ ಸಹಾಯವೂ ಇದೆ
ಮಕ್ಕಳಾದ ನಿಶಿ(26) ಮತ್ತು ಫರಾಹ್ (23) ಇವರು ತಮ್ಮ ತಾಯಿಗೆ ಸಹಾಯ ಮಾಡುತ್ತಿದ್ದಾರೆ. ಪಾದರಸದಿಂದ ತಯಾರಿಸಲ್ಪಡುವ ಈ ಶಿವಲಿಂಗಕ್ಕೆ ಹೊಳಪನ್ನು ಕೊಡುವ ಕೆಲಸವನ್ನು ನಿರ್ವಹಿಸುತ್ತಾರೆ. ದಿನಕ್ಕೆ ಸುಮಾರು 50 ಶಿವಲಿಂಗಕ್ಕೆ ಮೆರಗು ನೀಡುತ್ತಾರೆ ಎನ್ನುತ್ತಾರೆ.

ಇವರ ಕೆಲಸದ ವಿಧಾನ
ಹೆಚ್ಚಿನ ತಾಪಮಾನದಲ್ಲಿ ಪಾದರಸವನ್ನು ಕರಗಿಸಿಕೊಂಡು, ಶಿವಲಿಂಗದ ಅಚ್ಚಿನಲ್ಲಿ ಸುರಿಯಲಾಗುತ್ತದೆ. ಗಟ್ಟಿಯಾದ ನಂತರ ಶಿವಲಿಂಗವನ್ನು ತೆಗೆದು ಹೊಳಪು ನೀಡುವ ಕೆಲಸ ಮಾಡಲಾಗುತ್ತದೆ.

ಕೊನೆಯಲ್ಲಿ ತುಪ್ಪ ಮತ್ತು ಹಾಲಿನಲ್ಲಿ ಶುದ್ಧಗೊಳಿಸಲಾಗುತ್ತದೆ
ಇದರ ಹೊಳಪಿನ ಕೆಲಸದ ನಂತರ ಸ್ವಚ್ಛತೆಯ ಕೆಲಸ ನಡೆಯುತ್ತದೆ. ಕೊನೆಯಲ್ಲಿ ತುಪ್ಪ ಮತ್ತು ಹಾಲಿನಲ್ಲಿ ಶುದ್ಧಗೊಳಿಸಲಾಗುತ್ತದೆ. ಈ ಎಲ್ಲಾ ಕೆಲಸದ ನಂತರ ಶಿವಲಿಂಗ ಪೂಜೆಗೆ ಸಿದ್ಧವಾಗುತ್ತದೆ ಎನ್ನುತ್ತಾರೆ.

ಇವರ ಲಾಭ ನಷ್ಟ
ಶಿವಲಿಂಗ ಮಾಡಲು ಸುಮಾರು 60-70 ರೂಪಾಯಿ ವೆಚ್ಚಮಾಡಬೇಕಾಗುವುದು. ಚಿಲ್ಲರೆ ವ್ಯಾಪಾರಿಗಳಿಗೆ 100 ರೂಪಾಯಿಗೆ ಮಾರಲಾಗುವುದು.

120 ರೂಪಾಯಿಗೆ ಶಿವಲಿಂಗ ಮಾರುತ್ತಾರೆ....
ವ್ಯಾಪಾರಿಗಳು ಅದನ್ನು 120 ರೂಪಾಯಿಗೆ ಮಾರುತ್ತಾರೆ ಎನ್ನುತ್ತಾರೆ. ಇತ್ತೀಚೆಗೆ ರಾಸಾಯನಿಕ ಮತ್ತು ಪಾದರಸದ ಬೆಲೆ ಹಚ್ಚಿರುವುದರಿಂದ ದಿನದ ಅಂತ್ಯದಲ್ಲಿ ಲಾಭ ಸಿಗುವುದಿಲ್ಲ ಎನ್ನುವ ಬೇಸರ ವ್ಯಕ್ತ ಪಡಿಸುತ್ತಾರೆ ನಿಶಿ.



Click it and Unblock the Notifications
