Latest Updates
-
ಬಿಸಿಲ ಬೇಗೆಯಿಂದ ಪಾರಾಗಲು ಮುಂಜಾನೆಯೇ ವ್ಯಾಯಾಮ: ನಿಮ್ಮ ದಿನಚರಿಯಲ್ಲಿ ಈ ಬದಲಾವಣೆ ಮಾಡಿಕೊಳ್ಳಿ -
ಬೇಸಿಗೆ ಮದುವೆ ಸಂಭ್ರಮ: ಬಿಸಿಲ ಬೇಗೆಯಿಂದ ಅತಿಥಿಗಳನ್ನು ರಕ್ಷಿಸಲು ಇಲ್ಲಿದೆ ಮಾಸ್ಟರ್ ಪ್ಲಾನ್ -
ಮೇ 2-3ರ ಬಿರುಗಾಳಿ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಗಿಡಗಳನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಭಾರತದಲ್ಲಿ ಸುಡುವ ಬಿಸಿಲು: ಹೀಟ್ ವೇವ್ನಿಂದ ಪಾರಾಗಲು ಇಲ್ಲಿವೆ ಬೆಸ್ಟ್ ಡಯಟ್ ಮತ್ತು ಹೈಡ್ರೇಶನ್ ಟಿಪ್ಸ್! -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಕರಣ್ ಜೋಹರ್ ಅಬ್ಬರ, ಭಾರತೀಯ ಫ್ಯಾಷನ್ ಲೋಕದ ಹೊಸ ಸಂಚಲನ! -
ಮೇ ತಿಂಗಳ ಬಿಸಿಲ ಧಗೆ: ನಿಮ್ಮ ಬೆಳಗಿನ ದಿನಚರಿಯಲ್ಲಿ ಈ ಬದಲಾವಣೆ ಮಾಡಿಕೊಳ್ಳದಿದ್ದರೆ ಕಷ್ಟ! -
ಎವೆಲಿನ್ ಶರ್ಮಾ ವಿಚ್ಛೇದನ: ಮಕ್ಕಳ ಭವಿಷ್ಯಕ್ಕಾಗಿ ಈ ಜೋಡಿ ಆರಿಸಿದ ಹೊಸ ದಾರಿ ಯಾವುದು? -
ಬಿಸಿಲ ಧಗೆಗೆ ತಂಪಾದ ಗುಡ್ ನ್ಯೂಸ್: ಮೇ 8 ರಿಂದ ಶುರುವಾಗಲಿದೆ ಗ್ರೇಟ್ ಸಮ್ಮರ್ ಸೇಲ್! -
ಬಿಸಿಲ ಬೇಗೆಗೆ ಸುಸ್ತಾಗಿದ್ದೀರಾ? ಈ ಸರಳ ಆಹಾರ ಪದ್ಧತಿಯಿಂದ ಇಡೀ ದಿನ ಇರಿ ಫ್ರೆಶ್! -
ಬಿಸಿಲ ಬೇಗೆಗೆ ಸುಸ್ತಾಗಿದ್ದೀರಾ? ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ ಕೂಲ್ ಆಗಿರಿ!
'ಮುಸ್ಲಿಂ ಮಹಿಳೆ'ಯ ಮನೆಯಲ್ಲಿ ಅರಳುವ ಶಿವಲಿಂಗದ ಕಥೆ ಇದು!
ಜೀವನದಲ್ಲಿ ಅದೆಷ್ಟೇ ಕಷ್ಟಗಳು ಎದುರಾದರೂ ಸರಿ, ದೇವರ ಸ್ಮರಣೆ ಹಾಗೂ ಕೃಪೆಯಿದ್ದರೆ ಎಲ್ಲವನ್ನೂ ಸಹಿಸಿಕೊಂಡು, ಧೈರ್ಯದಿಂದ ಮುನ್ನಡೆಯಬಹುದು. ಯಾವುದೇ ಕೆಲಸವು ಸುಗಮವಾಗಿ ಹೋಗಬೇಕೆಂದರೆ ದೇವರೆನ್ನುವ ವಿಶೇಷ ಶಕ್ತಿಯ ಚಮತ್ಕಾರ ಆಗಲೇ ಬೇಕು. ಹಲವರು ಧರ್ಮ, ಜಾತಿಯಿದ್ದರೂ ಎಲ್ಲರಿಗೂ ದೇವನೊಬ್ಬನೇ. ಅವರವರ ಭಾವಕ್ಕೆ ಅನುಗುಣವಾಗಿ ದೇವರನ್ನು ಕಾಣುವ ಪರಿ ಬೇರೆಯಷ್ಟೇ. ದೇವರಿಗೆ ಆ ಧರ್ಮದ ವ್ಯಕ್ತಿ, ಈ ಧರ್ಮದ ವ್ಯಕ್ತಿ ಎನ್ನುವ ಭೇದವಿಲ್ಲ. ಆತನಿಗೆ ಎಲ್ಲರೂ ಮಕ್ಕಳೆ...
ಇಂತಹ ನಿರ್ಮಲವಾದ ವಿಚಾರಕ್ಕೆ ಸಾಕ್ಷಿಯಾಗಿ ನಿಲ್ಲುತ್ತಾರೆ ವಾರಣಾಸಿಯ ನಂಹಿ ಬೇಗಮ್. ಇವರು ಮುಸ್ಲಿಂ ಧರ್ಮದವರಾದರೂ ಹಿಂದೂ ದೇವರಾದ ಶಿವಲಿಂಗವನ್ನು ತಯಾರಿಸುತ್ತಾರೆ. ಹೇಳಿಕೇಳಿ ವಾರಣಾಸಿ ಹಿಂದೂಗಳ ಪವಿತ್ರ ಕ್ಷೇತ್ರದಲ್ಲೊಂದು. ಇಲ್ಲಿ ಇವರು ತಮ್ಮ ಜೀವನೋಪಾಯಕ್ಕಾಗಿ ಹಿಂದೂ ದೇವರ ತಯಾರಿಯನ್ನು ಮಾಡುತ್ತಿರುವುದು ಒಂದು ವಿಶೇಷ. ಬದುಕಿಗೆ ದೇವನೊಬ್ಬನೆ. ನಾಮ ಹಲವು ಎನ್ನುವುದನ್ನು ಇನ್ನೊಮ್ಮೆ ತೋರಿಸಿಕೊಟ್ಟಿದ್ದಾರೆ....

ಬೇಗಮ್ ಜೀವನ
ವಾರಣಾಸಿಯ ಮೂಲದವರಾದ ನಂಹಿ ಬೇಗಮ್ ತನ್ನ ಜೀವನೋಪಾಯಕ್ಕೆ ಕಂಡುಕೊಂಡ ದಾರಿ ಶಿವಲಿಂಗವನ್ನು ತಯಾರಿಸುವುದು. ಗಂಡನಿಂದ ಕಲಿತ ಕೆಲಸ ಇದೀಗ ಅವರ ಜೀವನ ದೋಣಿಯನ್ನು ದೂಡುತ್ತಿದೆ.

ಗಂಡನಿಂದ ವ್ಯಾಪಾರ ಪ್ರಾರಂಭವಾಯಿತು
57 ವರ್ಷದ ಬೇಗಮ್ 20 ವರ್ಷಗಳಿಂದ ಈ ವ್ಯಾಪಾರವನ್ನು ಮಾಡಿಕೊಂಡು ಬರುತ್ತಿದ್ದಾರೆ. ಪತಿಯ ಜೊತೆಯಲ್ಲಿಯೇ ಕಲಿತ ವ್ಯಾಪಾರ, ಇಂದು ಪತಿಯನ್ನು ಕಳೆದುಕೊಂಡು 12 ವರ್ಷವಾದರೂ ಮುಂದುವರಿಸಿಕೊಂಡು ಬರುತ್ತಿದ್ದಾರೆ.

ಮಕ್ಕಳ ಸಹಾಯವೂ ಇದೆ
ಮಕ್ಕಳಾದ ನಿಶಿ(26) ಮತ್ತು ಫರಾಹ್ (23) ಇವರು ತಮ್ಮ ತಾಯಿಗೆ ಸಹಾಯ ಮಾಡುತ್ತಿದ್ದಾರೆ. ಪಾದರಸದಿಂದ ತಯಾರಿಸಲ್ಪಡುವ ಈ ಶಿವಲಿಂಗಕ್ಕೆ ಹೊಳಪನ್ನು ಕೊಡುವ ಕೆಲಸವನ್ನು ನಿರ್ವಹಿಸುತ್ತಾರೆ. ದಿನಕ್ಕೆ ಸುಮಾರು 50 ಶಿವಲಿಂಗಕ್ಕೆ ಮೆರಗು ನೀಡುತ್ತಾರೆ ಎನ್ನುತ್ತಾರೆ.

ಇವರ ಕೆಲಸದ ವಿಧಾನ
ಹೆಚ್ಚಿನ ತಾಪಮಾನದಲ್ಲಿ ಪಾದರಸವನ್ನು ಕರಗಿಸಿಕೊಂಡು, ಶಿವಲಿಂಗದ ಅಚ್ಚಿನಲ್ಲಿ ಸುರಿಯಲಾಗುತ್ತದೆ. ಗಟ್ಟಿಯಾದ ನಂತರ ಶಿವಲಿಂಗವನ್ನು ತೆಗೆದು ಹೊಳಪು ನೀಡುವ ಕೆಲಸ ಮಾಡಲಾಗುತ್ತದೆ.

ಕೊನೆಯಲ್ಲಿ ತುಪ್ಪ ಮತ್ತು ಹಾಲಿನಲ್ಲಿ ಶುದ್ಧಗೊಳಿಸಲಾಗುತ್ತದೆ
ಇದರ ಹೊಳಪಿನ ಕೆಲಸದ ನಂತರ ಸ್ವಚ್ಛತೆಯ ಕೆಲಸ ನಡೆಯುತ್ತದೆ. ಕೊನೆಯಲ್ಲಿ ತುಪ್ಪ ಮತ್ತು ಹಾಲಿನಲ್ಲಿ ಶುದ್ಧಗೊಳಿಸಲಾಗುತ್ತದೆ. ಈ ಎಲ್ಲಾ ಕೆಲಸದ ನಂತರ ಶಿವಲಿಂಗ ಪೂಜೆಗೆ ಸಿದ್ಧವಾಗುತ್ತದೆ ಎನ್ನುತ್ತಾರೆ.

ಇವರ ಲಾಭ ನಷ್ಟ
ಶಿವಲಿಂಗ ಮಾಡಲು ಸುಮಾರು 60-70 ರೂಪಾಯಿ ವೆಚ್ಚಮಾಡಬೇಕಾಗುವುದು. ಚಿಲ್ಲರೆ ವ್ಯಾಪಾರಿಗಳಿಗೆ 100 ರೂಪಾಯಿಗೆ ಮಾರಲಾಗುವುದು.

120 ರೂಪಾಯಿಗೆ ಶಿವಲಿಂಗ ಮಾರುತ್ತಾರೆ....
ವ್ಯಾಪಾರಿಗಳು ಅದನ್ನು 120 ರೂಪಾಯಿಗೆ ಮಾರುತ್ತಾರೆ ಎನ್ನುತ್ತಾರೆ. ಇತ್ತೀಚೆಗೆ ರಾಸಾಯನಿಕ ಮತ್ತು ಪಾದರಸದ ಬೆಲೆ ಹಚ್ಚಿರುವುದರಿಂದ ದಿನದ ಅಂತ್ಯದಲ್ಲಿ ಲಾಭ ಸಿಗುವುದಿಲ್ಲ ಎನ್ನುವ ಬೇಸರ ವ್ಯಕ್ತ ಪಡಿಸುತ್ತಾರೆ ನಿಶಿ.



Click it and Unblock the Notifications