Latest Updates
-
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ!
ಸಿಯಾಚಿನ್ನಲ್ಲಿ ಸದಾ ಯೋಧರ ರಕ್ಷಣೆಗೆ ನಿಲ್ಲುವ "ಒಪಿ ಬಾಬಾ''ನ ಆತ್ಮ!
ಸಿಯಾಚಿನ್ ಅತಿ ಹೆಚ್ಚು ಚಳಿಯನ್ನು ಹೊಂದಿರುವ ಭಾರತದ ಗಡಿ ಪ್ರದೇಶ. ದೇಶದ ರಕ್ಷಣೆಗಾಗಿ ನಿಲ್ಲುವ ಅದೆಷ್ಟೋ ಯೋಧರು ಇಲ್ಲಿ ಪ್ರಾಣ ಬಿಟ್ಟಿದ್ದಾರೆ. ಹಿಮ ಮಳೆ, ಹಿಮದ ಕುಸಿತ, ತಡೆಯಲಾರದಷ್ಟು ಚಳಿಯ ಕೊರೆತ ಹಾಗೂ ಪಾಕಿಸ್ತಾನದ ನಡುವೆ ಇರುವ ವೈಷಮ್ಯದ ಹೋರಾಟದಲ್ಲಿ ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ಅಂತಹವರಲ್ಲಿ ಸೈನಿಕ ಓಂ ಪ್ರಕಾಶವರು ಒಬ್ಬರು.
ದೇಶದ ರಕ್ಷಣೆಗಾಗಿ ತನ್ನ ಜೀವವನ್ನೇ ಮುಡಿಪಾಗಿಟ್ಟ ಓಂ ಪ್ರಕಾಶ್ ಅವರು ಗಡಿಯಲ್ಲಿರುವ ಯೋಧರನ್ನು ರಕ್ಷಿಸುತ್ತಿದ್ದಾರೆ. ಭಾರತದ ಸೈನಿಕರು ಸಹ ಇವರನ್ನು 'ಒಪಿ ಬಾಬಾ' ಎಂದು ಆರಾಧಿಸುತ್ತಾರೆ. ಅರೇ! ಇದೆಂತಹ ಕಥೆ ಎನ್ನುವ ಕುತೂಹಲ ಮನಸ್ಸಿಗೆ ಬಂದರೆ, ಲೇಖನವನ್ನು ಮುಂದೆ ಓದಿ....

ಕಥೆ
ಓಂ ಪ್ರಕಾಶ್ ಎಂಬ ಯೋಧನು 1980ರಲ್ಲಿ ಸಿಯಾಚಿನ್ ಮಾಲುನ್ಅಲ್ಲಿ ಗಡಿ ರಕ್ಷಣೆಯ ಕಾರ್ಯವನ್ನು ನಿರ್ವಹಿಸುತ್ತಿದ್ದನು. ಒಮ್ಮೆ ಇತರ ಸೈನಿಕರು ತಾತ್ಕಾಲಿಕವಾಗಿ ಕೇಂದ್ರಕಾರ್ಯಾಲಯಕ್ಕೆ ಬಂದಿದ್ದ. ನಂತರ ಯೋಧ ಏನಾದ ಎನ್ನುವ ಸಮಾಚಾರ ಯಾರಿಗೂ ತಿಳಿದಿಲ್ಲ. ಹಿಮದ ಕೊರೆತದಿಂದ ಹಿಮದಲ್ಲಿ ಹುದುಗಿ ಹೋಗಿರಬಹುದು ಎನ್ನುವುದು ಕೆಲವರ ಊಹೆ.
ದೇಶದ ರಕ್ಷಣೆಗಾಗಿ ಪ್ರೇತವಾಗಿ ಕಾಯುತ್ತಿರುವ ಹುತಾತ್ಮ ಯೋಧನ ಕಥೆ!

ಆಶ್ಚರ್ಯ!
ಅಂದಿನಿಂದ ಇಂದಿನ ವರೆಗೂ ಸಿಯಾಚಿನ್ನಲ್ಲಿ ಗಡಿ ರಕ್ಷಣೆಗೆ ನಿಲ್ಲುವ ಯೋಧರು ಅನೇಕ ತೊಂದರೆಗಳಿಗೆ ಈಡಾಗುತ್ತಿದ್ದಾರೆ. ಇವರುಗಳ ರಕ್ಷಣೆಗೆ ಓಂ ಪ್ರಕಾಶರ ಆತ್ಮವು ನಿಲ್ಲುತ್ತದೆ ಎಂದು ನಂಬುತ್ತಿದ್ದಾರೆ.

ರಕ್ಷಣೆ
ಶತ್ರುಗಳ ದಾಳಿ ಮತ್ತು ಅಪಾಯಕಾರಿ ಹಿಮದ ಕೊರೆತವಿದ್ದರೆ, ಈ ಆತ್ಮವು ಸಿಯಾಚಿನ್ನಲ್ಲಿ ಕೆಲಸ ನಿರ್ವಹಿಸುವ ಯೋಧರ ಕನಸಿನಲ್ಲಿ ಬಂದು ಎಚ್ಚರಿಕೆ ನೀಡುತ್ತದೆ. ಜೊತೆಗೆ ಅವರ ರಕ್ಷಣೆಗೆ ಮುಂದಾಗುತ್ತದೆ ಎನ್ನುವ ನಂಬಿಕೆ ಇದೆ.

ನಂಬಿಕೆ...
ಈ ಆತ್ಮಕ್ಕೆ ಒಪಿ ಬಾಬಾ ಎಂದು ಹೆಸರಿಸಿ, ಒಂದು ಮಂದಿರವನ್ನು ನಿರ್ಮಿಸಲಾಗಿದೆ. ಇಲ್ಲಿ ಸೈನ್ಯದ ಕಮಾಂಡಿಂಗ್ ಆಫೀಸರ್ ದೇವಾಲಯಕ್ಕೆ ವರದಿಯನ್ನು ಸಲ್ಲಿಸುತ್ತಾರೆ. ಅಲ್ಲದೆ ಸೈನಿಕರ ಮೇಲೆ ಉಂಟಾಗುವ ದಾಳಿಯ ಬಗ್ಗೆ ಮಾಹಿತಿಯನ್ನು ಬಾಬಾ ಸೂಚಿಸುತ್ತಾರೆ ಎನ್ನುವ ಪ್ರತೀತಿ ಇದೆ.
Image Courtesy

ದೇವರಂತೆ ಪೂಜಿಸುತ್ತಾರೆ...
ಎಲ್ಲಾ ಸೈನಿಕರು ಕರ್ತವ್ಯ ನಿರ್ವಹಿಸಲು ಹೋಗುವ ಮುನ್ನ ಬಾಬಾ ಮಂದಿರಕ್ಕೆ ಬರುತ್ತಾರೆ. ಬಾಬನಿಗೆ ನಮಸ್ಕರಿಸಿ ಕೆಲಸಕ್ಕೆ ಯಶಸ್ಸು ಸಿಗಲಿ ಎಂದು ಕೇಳಿಕೊಳ್ಳುತ್ತಾರೆ.
Image courtesy

ಪೂಜ್ಯ ಭಾವ
2003ರಲ್ಲಿ ಬಾಬಾ ಮಂದಿರವು ಬಹಳ ಶಕ್ತಿಯನ್ನು ಹೊಂದಿರುವ ದೇವಾಲಯ ಎಂದು ಪರಿಗಣಿಸಲಾಯಿತು. ಅಲ್ಲದೆ ಇಂದಿಗೂ ಸೈನಿಕರು ಮೊದಲು ಬಾಬನಿಗೆ ಔಪಚಾರಿಕ ವರದಿಯನ್ನು ಇಟ್ಟು, ಎಲ್ಲಾ ದೇವತೆಗಳಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ.

ಇಂದಿಗೂ ನಮ್ಮ ಯೋಧರ ರಕ್ಷಣೆಗೆ ನಿಲ್ಲುವ ಬಾಬಾ...
1984ರ ಬೇಸಿಗೆಯಿಂದ ಇಂದಿಗೂ ಸಿಯಾಚಿನ್ನಲ್ಲಿ ಕಾರ್ಯ ನಿರ್ವಹಿಸುವ ಯೋಧರ ಪಾಲನೆಯನ್ನು ಈ ಆತ್ಮ ಮಾಡುತ್ತದೆ ಎನ್ನುವ ನಂಬಿಕೆ ಇದೆ.

ತರಬೇತಿ
ಸಿಯಾಚಿನ್ ಬೇಸ್ ಕ್ಯಾಂಪ್ಗಳಲ್ಲಿ ಸೈನಿಕರಿಗೆ ಮೂರುತಿಂಗಳ ಕಾಲ ತರಬೇತಿ ನೀಡಲಾಗುತ್ತದೆ.



Click it and Unblock the Notifications
