Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಡೋಂಗಿ ಗುರೂಜಿಗಳ ಕರಾಳ ಮುಖ-ಇವರು ಜನರಿಗೆ ಟೋಪಿ ಹಾಕಿದ್ದೇ ಜಾಸ್ತಿ!
ಯಾವುದೇ ವಸ್ತುವಿನ ಮಾರಾಟದಲ್ಲಿ ಉತ್ಪನ್ನವನ್ನು ಗ್ರಾಹಕರು ನೋಡಲು ಸಾಧ್ಯವಾಗುವಂತಿರುವುದು ಅತ್ಯಂತ ಅಗತ್ಯ. ಏಕೆಂದರೆ ನಾವೆಲ್ಲರೂ ಹೊರಗಿನ ಥಳುಕಿಗೆ ಹೆಚ್ಚು ಮನಸೋಲುತ್ತೇವೆ ಹಾಗೂ ಒಳಗಿನ ಹುಳುಕನ್ನು ನೋಡುವ ತಾಳ್ಮೆ ತೋರುವುದಿಲ್ಲ. ಇದೇ ಅವಗಣನೆಯನ್ನು ಕೆಲವು ವ್ಯಕ್ತಿಗಳು ತಮ್ಮ ಅನುಕೂಲಕ್ಕಾಗಿ ಬಳಸಿಕೊಳ್ಳುತ್ತಾರೆ.
ಇವರು ತಮ್ಮನ್ನು ತಾವು ದೇವಾಂಶ ಸಂಭೂತರೆಂದು ಕರೆದುಕೊಂಡು ಜನರ ವಿಶ್ವಾಸ ಮತ್ತು ತನ್ಮೂಲಕ ಹಣವನ್ನು ಗಳಿಸುತ್ತಾರೆ. ಯಾವಾಗಲಾದರೊಮ್ಮೆ ಇವರ ಮಾತುಗಳು ಅಥವಾ ಕ್ರಿಯೆಗಳು ಸಮಾಜದ ಎದುರು ಪ್ರಕಟಗೊಂಡು ನ್ಯಾಯಾಲಯದವರೆಗೂ ಸಾಗಿರುವುದಿದೆ.
ಇಂದಿನ ಲೇಖನದಲ್ಲಿ ಇಂತಹ ಕೆಲವು ಗುರೂಜಿಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲಾಗಿದ್ದು ಕೆಲವು ಪ್ರಸಂಗಗಳಲ್ಲಿ ದೇವರ ಪ್ರತಿನಿಧಿಗಳಾಗಿದ್ದವರನ್ನು ನ್ಯಾಯಾಲಯ ಸಾಮಾನ್ಯ ಮನುಷ್ಯರಂತೆ ಪರಿಗಣಿಸಿ ಶಿಕ್ಷೆಯನ್ನೂ ವಿಧಿಸಿದೆ. ಬನ್ನಿ, ತನ್ನ ವಿವಾದಗಳ ಮೂಲಕ ಕುಖ್ಯಾತರಾದ ಇಂತಹ ಕೆಲವು ಗುರೂಜಿಗಳ ಬಗ್ಗೆ ಅರಿಯೋಣ....

ಆಸಾರಾಂ ಬಾಪು
ಇವರಿಗೆ ವಿಶ್ವದಾದ್ಯಂತ 425ಕ್ಕೂ ಹೆಚ್ಚು ಆಶ್ರಮಗಳು ಮತ್ತು ಐವತ್ತಕ್ಕೂ ಹೆಚ್ಚು ಗುರುಕುಲಗಳಿವೆ. ಇವರನ್ನು ಹಿಂಬಾಲಿಸುವವರ ಸಂಖ್ಯೆ ಬಹಳ ದೊಡ್ಡದಿದ್ದು ಭಾರತದಷ್ಟೇ ವಿದೇಶಗಳಲ್ಲಿಯೂ ಹಿಂಬಾಲಕರಿದ್ದಾರೆ. ಆದರೆ ಕೆಲವು ಸಮಯ ಹಿಂದಷ್ಟೇ ಇವರು ತಮ್ಮ ಮಗನೊಂದಿಗೆ ಏಳುನೂರು ಎಕರೆ ಜಾಗವನ್ನು ಅಕ್ರಮವಾಗಿ ಕಬಳಿಸಿದ ಆರೋಪವನ್ನು ಕಾರ್ಪೋರೇಟ್ ವ್ಯವಹಾರಗಳ ಸಚಿವಾಲಯ ಹೊರಿಸಿತ್ತು. ಈ ಬಗ್ಗೆ ತನಿಖೆ ನಡೆಸುತ್ತಿದ್ದಂತೆಯೇ ಈ ಗುರೂಜಿಯವರು ಹಿಂದಿನ ದಿನಗಳಲ್ಲಿ ಅಕ್ರಮವಾಗಿ ಹಣ ಸಂಪಾದಿಸಿದ ಹಲವು ಪ್ರಕರಣಗಳೆಲ್ಲಾ ಎಳೆ ಎಳೆಯಾಗಿ ಹೊರಬರತೊಡಗಿದವು.

ಆಸಾರಾಂ ಬಾಪು
ಅಷ್ಟೇ ಅಲ್ಲ, ಜೋಧಪುರದ ಆಶ್ರಮದಲ್ಲಿ ಹದಿನಾರು ವರ್ಷದ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ ಆರೋಪವೂ ಇವರ ಮೇಲಿದೆ. ಈ ಗುರೂಜಿಯವರ ಪೂರ್ಣ ಅಕ್ರಮಗಳ ವಿವರಗಳು ಹೊರಬರಬೇಕಾಗಿರುವುದು ಇನ್ನೂ ಬಹಳಷ್ಟಿದ್ದು ಪೂರ್ಣ ವಿಚಾರಣೆ ಮುಗಿಯಲು ವರ್ಷಗಳೇ ಬೇಕಾಗಬಹುದು.

ಚಂದ್ರಸ್ವಾಮಿ
ತಮ್ಮನ್ನು ಭಗವಂತನೆಂದೇ ಬಿಂಬಿಸಿಕೊಂಡ ಚಂದ್ರಸ್ವಾಮಿಯನ್ನು ವಿಚಾರಣೆಗೊಳಪಡಿಸಿದ ಬಳಿಕ ಕೋಟ್ಯಾಂತರ ರೂಪಾಯಿ ಅವ್ಯವಹಾರ ನಡೆಸಿರುವುದು ಕಂಡುಬಂದಿದೆ. ಹಲವು ವಿದೇಶೀ ವಿನಿಮಯ ವ್ಯವಹಾರ ನಿರ್ವಹಣೆಯ ಅಕ್ರಮಗಳ ಒಟ್ಟು ಹದಿಮೂರು ಪ್ರಕರಣಗಳ ಬಗ್ಗೆ ಈ ವ್ಯಕ್ತಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟು ಒಟ್ಟು ಒಂಭತ್ತು ಕೋಟಿ ರೂಪಾಯಿಗಳನ್ನು ದಂಡ ಕಟ್ಟಲು ನಿರ್ದೇಶಿಸಿದೆ.

ಜಯೇಂದ್ರ ಸರಸ್ವತಿ
ಕಾಂಚಿಪುರಂನಲ್ಲಿರುವ ವರದರಾಜೇಂದ್ರಪೆರುಮಾಳ್ ದೇವಸ್ಥಾನದಲ್ಲಿ ಮ್ಯಾನೇಜರ್ ಆಗಿದ್ದ ಸಂಕರರಾಮನ್ ಎಂಬುವರನ್ನು 2004ರ ಸೆಪ್ಟೆಂಬರ್ 3 ರಂದು ಕೊಲೆ ಮಾಡಿದ ಆರೋಪದ ಮೇಲೆ ಕಾಂಚಿ ಕ್ಷೇತ್ರದ ಸ್ವಾಮಿ ಜಯೇಂದ್ರ ಸರಸ್ವತಿ ಹಾಗೂ ಇವರ ಶಿಷ್ಯ ವಿಜಯೇಂದ್ರರನ್ನು ಬಂದಿಸಲಾಗಿತ್ತು.

ರಾಧೇ ಮಾ
ತಮ್ಮನ್ನು ತಾವು ಭಗವಂತನ ಅವತಾರವೆಂದು ಕರೆದುಕೊಂಡ ಈ ಮಹಿಳೆ ಪ್ರಥಮ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ ಬಳಿಕ ಕ್ಷಿಪ್ರ ಸಮಯದಲ್ಲಿ ಖ್ಯಾತಿ ಗಳಿಸಿದ್ದರು. ತಮ್ಮ ದಿಟ್ಟತನದಿಂದ ಓರ್ವ ಧಾರ್ಮಿಕ ವ್ಯಕ್ತಿ ಹೇಗಿರಬೇಕು ಎಂಬುದನ್ನು ತೋರಿಸಿದರು.

ರಾಧೇ ಮಾ
ಈ ವ್ಯಕ್ತಿತ್ವನ್ನು ನಂಬಿದ ಸಾವಿರಾರು ಜನರು ಅವರ ಭಕ್ತರಾಗಿ ಹೋದರು. ಆದರೆ ಅವರು ತಮ್ಮ ಖಾಸಗಿ ಸಮಯದಲ್ಲಿ ಹೇಗಿರುತ್ತಾರೆ ಎಂಬುದನ್ನು ತೋರಿಸಿದ ಕೆಲವು ಚಿತ್ರಗಳು ಅಂತರ್ಜಾಲದಲ್ಲಿ ಯಾವಾಗ ಪ್ರಕಟಗೊಂಡವೋ ಜನರಿಗೆ ಇವರ ಭಗವಂತನ ಅವತಾರದ ಮೇಲೆ ನಂಬಿಕೆ ಹೊರಟುಹೋಗಿದೆ. ಇವರು ಚಿಕ್ಕ ಕೆಂಪು ಉಡುಗೆ ತೊಟ್ಟು ಅಸಹ್ಯವಾಗಿ ಕಾಣುತ್ತಿರುವ ಚಿತ್ರಗಳು ಅವರ ಭಕ್ತರ ನಂಬಿಕೆ ಉಡುಗಿಸಲಿಕ್ಕೆ ಸಾಕಾಗಿದೆ.

ನಿರ್ಮಲ್ ಬಾಬಾ
ಓರ್ವ ವ್ಯಾಪಾರಿಯಾಗಿದ್ದ ನಿರ್ಮಲ್ ಯಾವಾಗ ತಮ್ಮನ್ನು ತಾವು ದೇವಾಂಶ ಸಂಭೂತರೆಂದು ಕರೆಯಲುತೊಡಗಿದರೋ, ಆಗ ಅವರ ವಾಣಿಜ್ಯ ವಹಿವಾಟುಗಳೂ ಗಗನಕ್ಕೇರತೊಡಗಿದವು. ಆದರೆ ಇವರ ಆಶ್ರಮದಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ ಎಂಬ ದೂರು ಬಂದ ಬಳಿಕ ನಡೆಸಿದ ತನಿಖೆಯಲ್ಲಿ ಭಕ್ತರಿಂದ ಅವರ ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಡಲೆಂದು ಸಂಗ್ರಹಿಸಿದ್ಧ ಅಪಾರ ಧನರಾಶಿ ಕಂಡುಬಂದಿತ್ತು. ಈಗ ಈ ಹಣ ಹೇಗೆ ಬಂತು ಎಂಬುದನ್ನು ಇವರು ವಿವರಿಸಲು ವಿಫಲರಾಗಿದ್ದು ನ್ಯಾಯಾಂಗ ವಿಚಾರಣೆ ಎದುರಿಸುತ್ತಿದ್ದಾರೆ.



Click it and Unblock the Notifications